Prashanth Sambargi: ಶಿವಣ್ಣ ಸ್ಕ್ರಿಪ್ಟ್ ಕೇಳಲ್ಲ ಪೇಮೆಂಟ್ ಕೊಟ್ರೆ ಸಾಕು, ಶಿವಣ್ಣನ ಬಗ್ಗೆ ಹಗುರವಾಗಿ ಮಾತನಾಡಿದ ಪ್ರಶಾಂತ್ ಸಂಬರ್ಗಿ

Prashanth Sambargi: ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಂದ್ರೆ ಪ್ರಚಾರ, ಪ್ರಚಾರ ಅಂದ್ರೆ ರಾಜಕೀಯ ಅನ್ನುವಂತಾಗಿಬಿಟ್ಟಿದೆ. ದೊಡ್ಡ ದೊಡ್ಡ ಸ್ಟಾರ್ ಗಳು ಚುನಾವಣಾ ಕಣಕ್ಕಿಳಿಯೋದು, ಅಥವಾ ರಾಜಕೀಯ ನಾಯಕರ ಪರ ಅಬ್ಬರದ ಪ್ರಚಾರ ಮಾಡೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಹೌದು ಸ್ಟಾರ್ ನಟರನ್ನ ಕರೆಸಿದರೆ ಜನರು ಸುಲಭವಾಗಿ ತಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಅನ್ನೋದು ಕೆಲವೊಂದಿಷ್ಟು ಮಾತ್ರವಲ್ಲ ಬಹುತೇಕ ರಾಜಕಾರಣಿಗಳ ಲೆಕ್ಕಾಚಾರವಾಗಿಬಿಟ್ಟಿದೆ. ಈಗಾಗಿ ಸ್ಟಾರ್ ಪ್ರಚಾರಕ್ಕಂತಲೇ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯಾರನ್ನ ರಾಜಕೀಯ ನಾಯಕರು ಕರೆಸಿ ಅಬ್ಬರದ ಪ್ರಚಾರ ಮಾಡಿಸುತ್ತಾರೆ. ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ತಾರ ಅನುರಾಧ, ರಮ್ಯಾ, ಶ್ರುತಿ ಸೇರಿದಂತೆ ದೊಡ್ಡ ದೊಡ್ಡ ನಟ ನಟಿಯರು ಕೂಡ ಚುನಾವಣಾ ಕ್ಯಾಂಫೈನ್ ಮಾಡ್ತಾರೆ. ಅದರಂತೆ ಚಿತ್ರರಂಗದ ದೊಡ್ಮನೆ ಡಾ. ರಾಜ್ ಕುಟುಂಬದಿಂದ ಗೀತಾ ಶಿವರಾಜ್ ಕುಮಾರ್ ಈ ಬಾರಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈಗಿರುವ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಸಹ ಪತ್ನಿಯ ಜೊತೆಗೆ ಕಾಂಗ್ರೆಸ್ ಪರ ಮತಭೇಟೆ ಶುರು ಮಾಡಿದ್ರು. ಇದು ಈಗ ಹಿರಿಯ ಪತ್ರಕರ್ತ ಪ್ರಶಾಂತ್ ಸಂಬರ್ಗಿ ಕಣ್ಣಿಗೆ ಸಹಿಸಲಾಗುತ್ತಿಲ್ಲ ಅನ್ನಿಸುತ್ತಿದೆ ಹೀಗಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟು ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

WhatsApp Group Join Now
Telegram Group Join Now

ಹೌದು ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡ್ತಿರೋದು ಎಲ್ಲರಿಗೂ ಗೊತ್ತಿದೆ. ಎಲ್ಲರಂತೆ ನಟ ಶಿವರಾಜ್ ಕುಮಾರ್ ಸಹಿತ ಪತ್ನಿಯೊಟ್ಟಿಗೆ ಸೇರಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ರು. ಅದನ್ನ ನೋಡಿದ ಸಂಸದ ಪ್ರತಾಪ್ ಸಿಂಹ ತಮ್ಮದೇ ಆದ ರೀತಿಯಲ್ಲಿ ಟಾಂಗ್ ಕೊಟ್ಟಿದ್ದರು. ಆಗ ಅದು ಸಾಕಷ್ಟು ಚರ್ಚೆಗೆ ಕಾರಣವಯ್ತು,ನಂತರ ‘ನಾನು ಡಾ.ರಾಜ್ ಕುಟುಂಬ ಅಭಿಮಾನಿ’ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು. ಅದು ಒಂದು ಮಟ್ಟಕ್ಕೆ ಅಲ್ಲಿಗೆ ಸುಮ್ಮನಾಗಿತ್ತು ಇದೀಗ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಕೂಡ ಆಕ್ಷೇಪಾರ್ಹ ಪೋಸ್ಟ್ ಮಾಡುವ ಮೂಲಕ ಮತ್ತೆ ಶಿವರಾಜ್ ಕುಮಾರ್ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಹೌದು ಫೇಸ್ ಬುಕ್ ನಲ್ಲಿ ಶಿವರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿರುವ ಪ್ರಶಾಂತ್ ಸಂಬರ್ಗಿ, ‘ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ’ ಎಂದು ಬರೆದುಕೊಂಡು ಮೈಮೇಲೆ ವಿವಾದವನ್ನ ಎಳೆದುಕೊಳ್ಳುವ ಕೆಲಸ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಾಜಕೀಯ ನಾಯಕರು ಬಳಸುವ ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು? ಹೆಲಿಪ್ಯಾಡ್ ಬಾಡಿಗೆ ಹೇಗಿರುತ್ತೆ? ಪೈಲೇಟ್ ಗೆ ನೀಡಬೇಕಾದ ಸೌಲಭ್ಯ ಏನ್ ಗೊತ್ತಾ?

ಪ್ರಶಾಂತ್ ಸಂಬರ್ಗಿ ಮೇಲೆ ಗರಂ ಆದ ಶಿವಣ್ಣನ ಅಭಿಮಾನಿಗಳು

ಹೌದು ಪ್ರಶಾಂತ್ ಸಂಬರ್ಗಿ ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಶಿವಣ್ಣನ ಅಭಿಮಾನಿಗಳು ಗರಂ ಆಗಿದ್ದು, ಶಿವಣ್ಣನ ಬಳಿ ಕ್ಷಮೆ ಕೇಳಿ ಪೋಸ್ಟ್ ಡಿಲೀಟ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಕಷ್ಟು ಜನ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಅನೇಕರು ಪ್ರಶಾಂತ್ ಸಂಬರ್ಗಿ ವಿರುದ್ಧವೇ ಗರಂ ಆಗಿದ್ದಾರೆ. ಇದನ್ನೆಲ್ಲಾ ನೋಡಿದ ಪ್ರಶಾಂತ್ ಸಂಬರ್ಗಿ ತಮ್ಮ ವಿರುದ್ಧ ಕಾಮೆಂಟ್ ಮಾಡಿದವರನ್ನು ಡಿಲಿಟ್ ಮಾಡಿ, ಡಸ್ಟ್ ಬಿನ್ ಗೆ ಹಾಕಲಾಗುವುದು ಅಂತ ಮತ್ತೊಮ್ಮೆ ಕಾಮೆಂಟ್ ಮಾಡಿ ಮತ್ತೆ ಇನ್ನೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಒಟ್ಟಿನಲ್ಲಿ ಪ್ರಶಾಂತ್ ಸಂಬರ್ಗಿ ಗೆ ಇದು ಹೊಸದೇನು ಅಲ್ಲ, ಸಿನಿಮಾ ರಂಗದವರ ಮೇಲೆ ಅನೇಕ ಬಾರಿ ಇದೆ ರೀತಿ ಅವಹೇಳನಕಾರಿ ಹೇಳಿಕೆಗಳನ್ನ ಕೊಟ್ಟು ಎಲ್ಲರಿಂದಲೂ ಟೀಕೆಗೆ ಗುರಿಯಾಗಿದ್ರು. ಸಾಲದಕ್ಕೆ ಡಬ್ಬಿಂಗ್ ವಿಚಾರದಿಂದಲೂ ಕೂಡ ಬಹಳಷ್ಟು ಚರ್ಚೆಗೆ ಕಾರಣರಾದ ಪ್ರಶಾಂತ್ ಸಂಬರ್ಗಿ ಅನಂತರ ಡ್ರಗ್ಸ್ ವಿಚಾರದಲ್ಲಿಯು ಧ್ವನಿ ಎತ್ತಿದ್ದರು. ನಂತರ ಮೀಟೂ ಕೇಸ್ ನಲ್ಲೂ ಅವರು ನಟಿಯ ವಿರುದ್ಧ ಮಾತನಾಡಿ ಅಲ್ಲಿಯೂ ಕೂಡ ವಿವಾದಕ್ಕೆ ಗುರಿಯಾಗಿದ್ರು. ಇನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಪದೇ ಪದೇ ಎಲ್ಲರ ಟಿಕೆಗೆ ಒಳಗಾಗಿದ್ದ ಪ್ರಶಾಂತ್ ಸಂಬರ್ಗಿಗೆ ಎಲ್ಲಿಯೂ ಒಳ್ಳೆಯ ಹೆಸರಿಲ್ಲ ಅನ್ಸುತ್ತೆ. ಇದೀಗ ಡಾ.ರಾಜ್ ಕುಟುಂಬದ ವಿಚಾರಕ್ಕೆ ತಲೆ ಹಾಕಿರುವ ಇವ್ರಿಗೆ ಕರ್ನಾಟಕ ಜನತೆ ಸರಿಯಾಗಿ ಪಾಠ ಕಲ್ಲಿಸುತ್ತಾರೆ ಅಂತ ಕೆಲವರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: SSLC ಫಲಿತಾಂಶಕ್ಕೆ ಡೇಟ್ ಫಿಕ್ಸ್!? ಮೇ 8ಕ್ಕೆ ಫಲಿತಾಂಶ ಪ್ರಕಟವಾಗೋದು ಬಹುತೇಕ ಖಚಿತ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram