35ರ ಮಹಿಳೆ ಜೊತೆ 75ರ ವೃದ್ಧನ ಮದುವೆ; ಮಡದಿಯನ್ನ ಕಳೆದುಕೊಂಡಿದ್ದ ವೃದ್ಧನ ಕೈ ಹಿಡಿದ ಮಹಿಳೆ

ಪ್ರೀತಿಗೆ ಬರುವಾಗ ಕಾರಣ ಬೇಕಿಲ್ಲ. ಒಮ್ಮೆ ಬಂದು ಹೃದಯದ ಅರಮನೆ ಸೇರಿದ್ರೆ ಮತ್ತೆ ವಾಪಸ್​ ಹೋಗಲ್ಲ ಎನ್ನುವ ಮಾತಿದೆ ಅಲ್ದೇ ಯಾರ ಹಣೆಯಲ್ಲಿ ಯಾರ ಹೆಸರು ಬರೆದಿರುತ್ತೋ ಅವ್ರು ಒಂದಲ್ಲ ಒಂದು ದಿನ ಜೊತೆಯಾಗಲೇಬೇಕು ಅನ್ನೋದಕ್ಕೆ ಈ ಜೋಡಿನೇ ಸಾಕ್ಷಿ. ಹೌದು ನಾವು ಹೇಳ್ತಿರೋ ಸ್ಟೋರಿಯಲ್ಲಾಗಿದ್ದು ಅದೇ ಕತೆ ನೋಡಿ. ನಿಮಗೆಲ್ಲ ಗೊತ್ತಿರುವ ಆಗೇ ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಮನುಷ್ಯ ಹುಟ್ಟೋವಾಗಲೇ ಆತನ ಸಂಗಾತಿ ಯಾರೆಂದು ಬ್ರಹ್ಮ ಹಣೆಯ ಮೇಲೆ ಗೀಚಿರ್ತಾನಂತೆ. ಅದೇ ರೀತಿ ಇಲ್ಲೂ ಓರ್ವ ವೃದ್ಧನ ಪಾಲಿಗೆ 75 ವರ್ಷದ ಹರೆಯದಲ್ಲಿ ಒದಗಿ ಬಂದ ಕಂಕಣ ಸೌಭಾಗ್ಯ ಆತನಿಗೆ ಮರುಜನ್ಮ ನೀಡಿದೆ. ಏಕಾಂಗಿ ಜೀವನ ಹಾದಿ ಸವೆಸುತ್ತಿದ್ದ ವೃದ್ಧನ ಬಾಳಲ್ಲಿ ಪ್ರೇಮಗೀತೆ ಮೂಡಿ ಹೊಸ ಬೆಳಕು ಚೆಲ್ಲಿದೆ.

WhatsApp Group Join Now
Telegram Group Join Now

ಹೌದು ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಕಿವಿ, ಮೂಗು, ಬಾಯಿ ಯಾವುದೂ ಇಲ್ಲ ಅಂತಾರೆ. ನಾವು ಇವತ್ತು ಹೇಳೋಕೆ ಹೊರಟಿರೋ ಈ ಸ್ಟೋರಿ ಕೇಳಿದ್ರೆ ಪ್ರೀತಿ ಮುಂದೆ ವಯಸ್ಸು, ಸೌಂದರ್ಯ ಲೆಕ್ಕಕ್ಕೇ ಬರಲ್ಲ ಅಂತ ನಿಮಗೆ ಅನ್ನಿಸದೇ ಇರಲ್ಲ. ಯಾಕಂದ್ರೆ ಇದು 75 ವೃದ್ದರೊಬ್ರು 35 ಮಹಿಳೆಯ ಮನೆಗದ್ದು ಮನೆ ಅರಸಿ ಮಾಡಿಕೊಂಡ ಸೂಪರ್​ ಡೂಪರ್​ ಲವ್​ ಸ್ಟೋರಿ ನಿಜಕ್ಕೂ ಎಲ್ಲರು ಮೆಚ್ಚಲೇಬೇಕಾದದ್ದು.

75 ವರ್ಷದ ವೃದ್ದರೊಬ್ಬರ ಮನದಲ್ಲಿ ಚಿಗುರಿದ ಪ್ರೀತಿ, 35ರ ಮಹಿಳೆಯ ಹೃದಯವನ್ನ ಗೆದ್ದು, ಮದುವೆಯೆಂಬ ಬಂಧನದ ಜೊತೆ ಹೊಸ ಬಾಳಿನ ಹೊಸಿಲಿಗೆ ರಂಗೋಲಿ ಇಟ್ಟಿದೆ. ಹೌದು ಇವರು ಹೆಸರು ಈರಣ್ಣ ಅಂತ.. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದವರೂ. ಬಂಧು ಬಳಗ ಭಾರೀ ಪ್ರಮಾಣದಲ್ಲಿದ್ರು ಈ ಈರಣ್ಣನಿಗೆ ಜೊತೆ ಇದ್ದಿದ್ದು ಮಾತ್ರ ಏಕಾಂಗಿ ಅನ್ನೋ ಸಂಗಾತಿ ಮಾತ್ರ. ಕಳೆದ ಕೆಲ ವರ್ಷಗಳ ಹಿಂದೆ ಈ ಈರಣ್ಣ ಅವರ ಪತ್ನಿ ಇಹಲೋಕ ತ್ಯಜಿಸಿದ್ರು. ಆ ಮೇಲೆ ಮದುವೆಯಾದ ಹೆಣ್ಣು ಮಗಳು ಗಂಡನ ಮನೆ ಸೇರಿದ್ರೆ, ಮಗ ಅಪ್ಪನ ಬೇರೆಡೆ ಸೆಟ್ಟಲ್ ಆಗಿದ್ದ.

ಇನ್ನು ಈರಣ್ಣ ಮಾತ್ರ ಒಬ್ಬರೇ ಮನೆಯಲ್ಲಿ ಒಂಟಿಯಾಗಿ ವಾಸ ಮಾಡ್ತಿದ್ರು. ಒಂಟಿ ಜೀವನದಿಂದ ಬೇಸತ್ತಿದ್ದ ಈರಣ್ಣನ ಬಾಳಲ್ಲಿ ಅನುಶ್ರೀ ಅನ್ನೋ ಪ್ರೀತಿಯ ಪಲ್ಲವಿ ಜೊತೆಯಾಗಿದೆ. ಇನ್ನು ಅನುಶ್ರೀ ಮೂಲತಃ ಮಹಾರಾಷ್ಟ್ರದ ಸೋಲಾಪುರದವರು. ಆದ್ರೆ ಈಕೆಗೆ ಅಪ್ಪ-ಅಮ್ಮ ಬಂಧು ಬಳಗ ಯಾರೂ ಇಲ್ಲ. ನೀನೆ ಸರ್ವಸ್ವ ಅಂತ ನಂಬಿ ಬಂದಿದ್ದ ಪತಿಯೂ ಕಳೆದ ಕೆಲ ವರ್ಷಗಳ ಹಿಂದೆ ಕೈಕೊಟ್ಟು ಹೋಗಿದ್ದ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಗಂಡನಿಂದ ದೂರವಾಗಿದ್ದ ಮಹಿಳೆಗೆ ಬಾಳು ಕೊಟ್ಟ ವೃದ್ಧ

ಇನ್ನು 75 ವರ್ಷದ ಈರಣ್ಣನಿಗೆ ಹೃದಯ ಸಂಬಂಧಿ ಸಮಸ್ಯೆ, ಬಿಪಿ, ಶುಗರ್ ಇದೆ. ಇಷ್ಟಾದ್ರೂ ಹೆತ್ತ ಮಕ್ಕಳು ಮಾತ್ರ ಅಪ್ಪ ಬದುಕಿದ್ದೀಯ ಸತ್ತಿದ್ದೀಯ ಅಂತ ಕೇಳ್ತಿರ್ಲಿಲ್ಲ. ಇಂತಹ ಹೊತ್ತಲ್ಲೇ ಈರಣ್ಣನ ಬಾಳಿನಲ್ಲಿ ಹೊಸ ಪ್ರೀತಿಯ ಬೆಳಕು ಮೂಡಿಸಿದ ಅನುಶ್ರೀ, ಅವರ ಬಾಳಿಗೆ ತನ್ನ ಪ್ರೀತಿಯನ್ನ ಧಾರೆ ಎರೆದಿದ್ದಾಳೆ. ತನ್ನ ಆಸ್ತಿಯಲ್ಲಿ ಒಂದು ಭಾಗವನ್ನು ಅನುಶ್ರೀಗೆ ಮಾಡ್ತೀನಿ, ಆಕೆಯನ್ನು ಪ್ರಾಣದಂತೆ ಪ್ರೀತಸುತ್ತೇನೆ ಅಂತ ಈರಣ್ಣ ಹೇಳಿಕೊಂಡಿದ್ದಾರೆ. ಇನ್ನೂ ಈರಣ್ಣನ ಮಗಳು ಮಂಜುಳ ಸಹ ಅಪ್ಪನ ಪ್ರೀತಿಗೆ ಆಸರೆಯಾಗಿ ನಿಂತು ಮದುವೆ ಮಾಡಿಸಿದ್ದಾರೆ.

ಹೌದು ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಈರಣ್ಣನ ಜೊತೆ ಅನುಶ್ರೀ ಸಪ್ತಪದಿ ತುಳಿದಿದ್ದಾಳೆ. ಒಟ್ನಲ್ಲಿ ಆಸ್ತಿ, ಅಂತಸ್ತು ಎಷ್ಟಿದ್ರೆ ಏನು, ನಮ್ಮ ಕೊನೆಗಾಲದಲ್ಲಿ ನಮಗಾಗಿ ಮಿಡಿಯದ ಒಂದು ಮನಸ್ಸು ಇಲ್ಲ ಅಂದ್ರೆ ಆ ಜೀವನ ಪರಿಪೂರ್ಣ ಆಗಲು ಸಾಧ್ಯವಿಲ್ಲ. ಹೀಗೆ ಬದುಕಿನ ಕೊನೆಯಲ್ಲಿ ಏಕಾಂಗಿ ಜೀವನದಿಂದ ಬೇಸತಿದ್ದ ಈರಣ್ಣನ ಬದುಕಲ್ಲಿ ಹೊಸ ಪ್ರೇಮಗೀತೆ ಮೂಡಿದೆ. ತನ್ನವರು ಯಾರೂ ಇಲ್ಲ ಅಂತ ಮರುಗಿದ್ದ ಈರಣ್ಣನ ಬಾಳಲ್ಲಿ ಅನುಶ್ರೀಯ ಸರ್ವಸ್ವವು ಆಗಿ ಹೋಗಿದ್ದಾರೆ. ಇನ್ನು ಅನುಶ್ರೀಗೂ 6ವರ್ಷದ ಮಗನಿದ್ದು, ಅವನ ಭವಿಷ್ಯಕ್ಕಾಗಿ ಗಟ್ಟಿ ನಿರ್ಧಾರ ಮಾಡಿಟಡಿ ನಿಜಕ್ಕೂ ಮೆಚ್ಚುವಂತದ್ದು.

ಇದನ್ನೂ ಓದಿ: ಮದುವೆ ಬಗ್ಗೆ ಚುಚ್ಚು ಮಾತುಗಳು ಕಣ್ಣೀರಿಟ್ಟ ಸಂಜು ಬಸಯ್ಯ! ನಿಂದನೆಗಳ ಕೋಟೆಯನ್ನ ಮೆಟ್ಟಿ ಮದುವೆ ಆಗಿದ್ದು ಹೇಗೆ?

ಇದನ್ನೂ ಓದಿ: ಕಷ್ಟದಲ್ಲಿರುವವರಿಗೆ ಸದಾ ಮಿಡಿಯುತ್ತೆ ದಾಸನ ಹೃದಯ; ಕಿಡ್ನಿ ವೈಫಲ್ಯದಿಂದ ಬಳಳುತ್ತಿದ್ದ ಅಭಿಮಾನಿ ಕೈ ಹಿಡಿದ ಡಿ. ಬಾಸ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram