Abhinaya: ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ವಾಪಸ್.!!

Abhinaya: ಅನುಭವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಭಿನಯ ಸಾಕಷ್ಟು ಹಿರಿಯ ಕಲಾವಿದರ ಒಟ್ಟಿಗೆ ನಟನೆ ಮಾಡಿದ್ದಾರೆ ಮೊದಲ ಸಿನಿಮಾ ದಲ್ಲಿ ಕಾಶಿನಾಥ್ ಅವರ ಒಟ್ಟಿಗೆ ನಟಿಸಿದ ನಟಿ ಬಳಿಕ ಸಾಕಷ್ಟು ಸಿನಿಮಾಗಳ ಅವಕಾಶಗಳು ಸಿಕ್ಕಿ ಆ ಕಾಲ ದಲ್ಲಿ ಜನಪ್ರಿಯ ನಟಿಯಾಗಿ ಅಭಿನಯ ಅವರು ಗುರುತಿಸಿಕೊಂಡಿದ್ದರು ಅನುಭವ ಸಿನಿಮಾ ಬಳಿಕ ಅಭಿನಯ ಅವರು ಸಾಕಷ್ಟು ಸಿನಿಮಾ ಗಳಲ್ಲಿ ಕಾಣಿಸಿಕೊಂಡರು ‘ಕಿಂದರಿ ಜೋಗಿ’, ‘ಗಜಪತಿ ಗರ್ವಭಂಗ’, ‘ಹತ್ಯಾಕಾಂಡ’, ‘ಕೊಲ್ಲೂರು ಕಲಾ’, ‘ಊರ್ವಶಿ ಕಲ್ಯಾಣ’ ಸೇರಿದಂತೆ ಹಲವಾರು ಸಿನಿಮಾ ಗಳಲ್ಲಿ ಅಭಿನಯ ಅವರು ನಟಿಸಿದ್ದಾರೆ. ಬಳಿಕ ಬೆಲ್ಲಿಚುಕ್ಕಿ, ವಠಾರ, ದೇವಿ ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತದರು.

WhatsApp Group Join Now
Telegram Group Join Now

Abhinaya ಅವರು ಬಾಲ ಕಲಾವಿದೆಯಾಗಿ ಕೂಡ ನಟಿಸಿದ್ದಾರೆ ಭಾಗ್ಯವಂತ, ದೇವತಾ ಮನುಷ್ಯ, ಮತ್ತು ಬೆಂಕಿಯ ಬಲೆಯಲ್ಲಿ ನಟಿಸಿದ್ದಾರೆ. ಇವರಿಗೆ ಅನುಭವ ಸಿನಿಮಾಕ್ಕೆ 1983ರಲ್ಲಿ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಅತ್ಯುತ್ತಮ ನಟನೆಗಾಗಿ ಫಿಲಂ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಇಷ್ಟೆಲ್ಲಾ ಅವಾರ್ಡ್ಸ್ ಹಾಗೂ ಒಳ್ಳೆ ನಟಿಯಾಗಿದ್ದರೂ ಕೂಡ ಅಭಿನಯ ಅವರಿಗೆ ಹೀರೋಯಿನ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶಗಳು ಸಿಗಲಿಲ್ಲ ಹಾಗಾಗಿ ಅವರು ಪೋಷಕ ಪಾತ್ರಗಳಲ್ಲಷ್ಟೇ ಅವರು ತೃಪ್ತಿ ಪಡೆಯಬೇಕಾಯಿತು. ನಂತರ ಅಭಿನಯ ಕಿರುತರೆ ಲೋಕಕ್ಕೆ ಬಂದರು ನಂತರ ಇವರ ಅದೃಷ್ಟ ಬದಲಾಯಿತು ಕಿರುತೆರೆ ಲೋಕ ದಲ್ಲಿ ಹಲವು ಅವಕಾಶಗಳು ಸಿಕ್ಕಿ ಇನ್ನೂ ಜನಪ್ರಿಯತೆಯನ್ನು ಪಡೆದರು.

ಅಭಿನಯ ಅವರು 2009 ರಲ್ಲಿ ಧರ್ಮಸ್ಥಳ ದಲ್ಲಿ ಛಾಯಾಗ್ರಾಹಕ ಉಮಾ ಕಾಂತ್ ಅವರ ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮದುವೆಯಾದ ನಂತರ ಅಭಿನಯ ಅವರು ಸಿನಿಮಾ ಹಾಗೂ ಕಿರುತರೆ ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ ಅವರಿಗೆ ನಟಿಸ ಬೇಕು ಎಂಬ ಆಸೆ ಇದ್ದರೂ ಕೂಡ ಅಷ್ಟಾಗಿ ಅವರಿಗೆ ಯಾವುದೇ ಸಿನಿಮಾ ಗಳಲ್ಲಿ ಆಫರ್ ಬರಲಿಲ್ಲ ಹಾಗಾಗಿ ಅವರು ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ ಇದೀಗ ಅಭಿನಯ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ.

ಇದನ್ನು ಓದಿ: ಮಾಳವಿಕಾ-ಅವಿನಾಶ್ ಮನೆಯ ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ ಇಟ್ಟಿರುವುದು ಯಾಕೆ?

ಸುಮಾರು ಏಳು ವರ್ಷಗಳ ಬಳಿಕ ಅಭಿನಯ ಅವರು ಮತ್ತೆ ‘ಕ್ರಶ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮರಳಿ ಬಂದರು. ಅನಂತರ ಒಂದಷ್ಟು ಸಿನಿಮಾ ಗಳಲ್ಲಿ ನಟಿಸಿ ಮತ್ತೆ ಕಿರುತೆರೆ ಕಡೆಗೆ ಮುಖ ಮಾಡಿದರು. ಕಾವ್ಯಂಜಲಿ, ಹಿಟ್ಲರ್ ಕಲ್ಯಾಣ, ಕಥೆಯೊಂದು ಶುರುವಾಗಿದೆ ಇನ್ನು ಹಲವಾರು ಸೀರಿಯಲ್ ಗಳಲ್ಲಿ ಅಭಿನಯ ಅವರು ನಟಿಸಲು ಶುರು ಮಾಡಿದರು. ಹಿಟ್ಲರ್ ಕಲ್ಯಾಣ ಸೀರಿಯಲ್ ತುಂಬಾ ಜನಪ್ರಿಯತೆ ಪಡೆಯಿತು ಈ ಸೀರಿಯಲ್ ನಿಂದ ಅಭಿನಯ ಅವರಿಗೆ ಇನ್ನಷ್ಟು ಜನಪ್ರಿಯತೆ ತಂದು ಕೊಟ್ಟಿತು.

ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿಕ್ಷೆಯನ್ನು ನೀಡಿದ ಹೈಕೋರ್ಟ್!

1998 ರಲ್ಲಿ Abhinaya ಅವರ ಸಹೋದರ ಲಕ್ಷ್ಮೀದೇವಿ ಅವರನ್ನು ಮದುವೆಯಾಗಿದ್ದರು, ಲಕ್ಷ್ಮೀದೇವಿ ಅವರಿಗೆ ಅಭಿನಯ ಹಾಗೂ ಅಭಿನಯ ಕುಟುಂಬದವರು ವರದಕ್ಷಣೆ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿ ಲಕ್ಷ್ಮೀದೇವಿ ಅವರು ಕೋರ್ಟ್ ಮೆಟ್ಟಿಲೇರಿದ್ದರು ಪ್ರಕರಣ ವನ್ನು ವಿಚಾರಣೆ ಮಾಡಿದ ಹೈಕೋರ್ಟ್ ಏಕ ಸದಸ್ಯ ಪೀಠ ಇದೇ ವರ್ಷ ಫೆಬ್ರವರಿ ಯಲ್ಲಿ ತೀರ್ಪು ನೀಡಿತ್ತು ಅಭಿನಯಾಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ಅವರ ತಾಯಿಗೆ ಐದು ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ಆದೇಶಿಸಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಭಿನಯ “ಇದು 20 ವರ್ಷದ ಹಿಂದಿನ ಕೇಸ್ ಕಳೆದ ಬಾರಿ ನಾವು ಗೆದ್ದಿದ್ವಿ ಈ ಬಾರಿ ತೀರ್ಪು ನಮ್ಮ ವಿರುದ್ಧವಾಗಿ ಬಂದಿದೆ ನಾವು ಕಾನೂನು ಸಮರ ಮಾಡ್ತೀವಿ ಕಾನೂನು ಹೋರಾಟ ಮುಂದುವರಿಸುತ್ತೇವೆ” ಎಂದು ಅಭಿನಯ ಹೇಳಿದರು ಈ ಕಾರಣಗಳಿಂದ ಅವರು ಸೀರಿಯಲ್ ಗಳಿಂದ ಹೋರ ನಡೆದಿದ್ದಾರೆ ಎನ್ನಲಾಗಿತ್ತು.

ಕಿರುತರೆಗೆ ಕಂಬ್ಯಾಕ್ ಮಾಡುತ್ತಾರ ಅಭಿನಯ

ಇಷ್ಟೆಲ್ಲ ಘಟನೆಗಳದ ಬಳಿಕ ಕಿರುತೆರೆ ಯಿಂದ ದೂರವಾಗಿದ್ದ Abhinaya ಇದೀಗ ಮತ್ತೆ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ ಹೌದು ಕಳೆದ ವಾರ ಅಭಿನಯ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಸೀರಿಯಲ್ ಕಾಸ್ಟ್ಯೂಮ್ ನಲ್ಲಿ ಎರಡು ರಿಲ್ಸ್ ಗಳನ್ನು ಅಪ್ಲೋಡ್ ಮಾಡಿದ್ದಾರೆ ಇದನ್ನು ನೋಡಿದ ಅಭಿಮಾನಿಗಳು ಅಭಿನಯ ಪುನಃ ಕಿರುತರೆಗೆ ಮರಳಿ ಬರಲಿ ಎಂದು ಹೇಳುತ್ತಿದ್ದಾರೆ.

ಇದನ್ನು ಓದಿ: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ