Abhinaya: ಮತ್ತೆ ಕಿರುತೆರೆಗೆ ಮರಳಿದ ನಟಿ ಅಭಿನಯ! ಮತ್ತೊಂದು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿರುವ ನಟಿ

Abhinaya: ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ವಿಲನ್ ಗೆ ವಿಲನ್ ಒಳ್ಳೆಯವರಿಗೆ ಒಳ್ಳೆಯವಳು ಅಂತಲೇ ಖಡಕ್ ಡೈಲಾಗ್ ಹೊಡೆಯುತ್ತಾ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಾ ಕಿರುತರೆಯಲ್ಲಿ ಮೋಡಿ ಮಾಡಿದ್ದ ನಟಿ ಅಭಿನಯ ಬಹುಬೇಡಿಕೆಯ ಪೋಷಕ ಪಾತ್ರಧಾರಿ. ಆದ್ರೆ ತನ್ನ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಭಿನಯಾಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಆಗ ಜೈಲು ಪಾಲಾಗುವ ಆತಂಕದಲ್ಲಿ ನಟಿಗೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ನಟಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಿಂದಲೂ ದೂರಾಗಿದ್ದರು. ಇದೀಗ ಮತ್ತೆ ನಟಿ ಅಭಿನಯ ಕಿರುತೆರೆಗೆ ಕಂಬ್ಯಾಕ್ ಆಗಿರುವ ಸುಳಿವು ಸಿಕ್ಕಿದೆ. ಹಾಗಾದ್ರೆ ಯಾವ ಧಾರವಾಹಿ, ಮತ್ತೆ ಯಾವ ರೀತಿ ಪಾತ್ರದಿಂದ ಕಿರುತೆರೆಗೆ ವಾಪಸ್ ಅಗಲಿದ್ದಾರೆ ನೋಡೋಣ ಬನ್ನಿ

WhatsApp Group Join Now
Telegram Group Join Now

ನಟಿ ಅಭಿನಯ(Abhinaya) ಚಂದನವನದಲ್ಲಿ ಕಾಶಿನಾಥ್ ಅವ್ರ ‘ಅನುಭವ’ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ನಂತರ ಅಭಿನಯ ಅವರು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಕಿಂದರಿ ಜೋಗಿ, ಗಜಪತಿ ಗರ್ವಭಂಗ, ಊರ್ವಶಿ ಕಲ್ಯಾಣ, ಅಪ್ಪ ನಂಜಪ್ಪ ಮಗ ಗುಂಜಪ್ಪ, ಕೊಲ್ಲೂರು ಕಾಳ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಕಿರುತೆರೆಗೆ ಕಾಲಿಟ್ಟ ನಟಿ ಅಭಿನಯ ವಠಾರ ಧಾರವಾಹಿ ಮೂಲಕ ಅಲ್ಲಿಯೂ ಸಾಕಷ್ಟು ಹೆಸರು ಮಾಡುದ್ರು. ಕಿರುತೆರೆಯಲ್ಲಿಯೂ ಹಲವು ಧಾರಾವಾಹಿಗಳಲ್ಲಿ ಮಿಂಚಿದರು. ಡ್ರೈವರ್ ಡುಮ್ಮಣ್ಣ, ಬದುಕು, ಕಂಡಕ್ಟರ್ ಕರಿಯಪ್ಪ, ಸೀರಿಯಲ್‌ಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಇತ್ತೀಚಿಗೆ ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿನ ಇವ್ರ ಪಾತ್ರ ಎಲ್ಲರಿಗೂ ಸಕತ್ ಇಷ್ಟವಾಗಿತ್ತು. ಆದ್ರೆ ವೈಯಕ್ತಿಕ ಕಾರಣದಿಂದ ನಟಿ ಅಭಿನಯ ಹಿಟ್ಲರ್ ಕಲ್ಯಾಣ ಧಾರಾವಾಹಿಯಿಂದಲೂ ಹೊರನಡುದ್ರು. ಆದರೆ ಇದೀಗ ಮತ್ತೆ ಕಿರುತರೆಗೆ ಕಂಬ್ಯಾಕ್ ಮಾಡಿದ್ದಾರೆ.

ಮದುವೆಯ ಬಳಿಕ ಅಭಿನಯ ಬಣ್ಣದ ಲೋಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅಭಿನಯ ಅವರಿಗೆ ನಟಿಸುವ ಆಸೆ ಇದ್ದರೂ ಕೂಡ ಆಫರ್ ಗಳು ಕಡಿಮೆಯಾದ್ವು. ಆದ್ರೆ ಏಳು ವರ್ಷಗಳ ಬಳಿಕ ಮತ್ತೆ ಅಭಿನಯ ಅವರು ಸಿನಿಮಾ ಒಂದರ ಮೂಲಕ ಕಮ್ ಬ್ಯಾಕ್ ಮಾಡಿದರು. ‘ಕ್ರಷ್’ ಚಿತ್ರದ ಮೂಲಕ ಅಭಿನಯ ಅವರು ರೀ ಎಂಟ್ರಿ ಕೊಟ್ರು. ಜೊತೆಗೆ ಅಭಿನಯ ಅವರು ಕಿರುತೆರೆಗೂ ಎಂಟ್ರಿ ಕೊಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ‘ಹಿಟ್ಲರ್ ಕಲ್ಯಾಣ’ ಎಂಬ ಧಾರಾವಾಹಿಯಲ್ಲಿ ಮಿಂಚಿದರು. ಈ ಧಾರಾವಾಹಿಯಲ್ಲಿ ಅಭಿನಯ ಅವರು ಕೌಸಲ್ಯ ಪಾತ್ರವನ್ನು ನಿರ್ವಹಿಸಿದರು. ಆದ್ರೆ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಬಂದ ಕಾರಣ ಇದ್ದಕ್ಕಿದ್ದ ಹಾಗೆಯೇ ಕಿರುತೆರೆಯಿಂದಲೂ ಮಾಯವಾದರು. ಅಲ್ಲದೇ ನಟಿ ಅಭಿನಯ ಅವರಿಗೆ ಎರಡು ವರ್ಷದ ಜೈಲು ಶಿಕ್ಷೆಯನ್ನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅಭಿನಯ ಮತ್ತು ಅವ್ರ ಕುಟುಂಬದವರು ಸೊಸೆ ಲಕ್ಷ್ಮಿದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತ್ತು. ಈ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರ ನಡೆದಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: “ಮೀಡಿಯಾಗಳು ನಾನು ದರ್ಶನ್ ಫ್ಯಾನ್ ಅಂತ ಸಫೋರ್ಟ್ ಮಾಡ್ಲಿಲ್ಲ” -ಚಂದನ್ ಗೌಡ

ಉದಯ ವಾಹಿನಿಯಲ್ಲಿ ಅಭಿನಯಿಸಲಿರುವ ನಟಿ ಅಭಿನಯ

ಹೌದು ಅಭಿನಯ(Abhinaya) ಅವರು ಪುನಃ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಹಾಗೂ ಇಂದು ಇನ್ ಸ್ಟಾಗ್ರಾಂ ಪೇಜ್‌ ನಲ್ಲಿ ಒಂದೊಂದು ರೀಲ್ಸ್‌ ಅನ್ನು ಅಪ್‌ ಲೋಡ್‌ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಭಿನಯ ಅವರು ಪುನಃ ‘ಹಿಟ್ಲರ್‌ ಕಲ್ಯಾಣ’ ಧಾರಾವಾಹಿಗೆ ಮರಳಿ ಬರಲಿ ಎಂದು ಬಯಸಿದ್ದಾರೆ. ಆದ್ರೆ ಇದೀಗ ಉದಯ ವಾಹಿನಿಯವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೀಗ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದು, ಆನಂದರಾಗ ಧಾರಾವಾಹಿಯಲ್ಲಿ ವಸುಂಧರಾ ಪಾತ್ರಕ್ಕೆ ಬಣ್ಣ ಹಚ್ಚಲ್ಲಿದ್ದಾರೆ, ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಅಂತ ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನ ನೋಡಿದ ಅಭಿನಯ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದು ನಿಮ್ಮ ಅಭಿನಯದ ಸಂಚಿಕೆಗಳಿಗಾಗಿ ಕಾಯುತ್ತಿದ್ದೇವೆ ಅಂತ ಕಾಮೆಂಟ್ಸ್ ಮಾಡ್ತಿದ್ದಾರೆ. ನೀವು ಸಹ ಇವ್ರಿಗೆ ಒಳ್ಳೆಯದಾಗ್ಲಿ ಅಂತ ವಿಶ್ ಮಾಡಿ.

ಇದನ್ನೂ ಓದಿ: ಅಪ್ಪನ ‌ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ಹಂಚಿಕೊಂಡು ವಿಶ್ ಮಾಡಿದ ಡಿಕೆಶಿ ಮಗಳು ಐಶ್ವರ್ಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram