Abhishek Ambareesh: ಅಂಬಿ ಮನೆಯಲ್ಲಿ ಅಭಿ ಮದುವೆ ಸಂಭ್ರಮ.., ಅರಿಶಿಣ ಶಾಸ್ತ್ರದಲ್ಲಿ ಅಂಬಿ ಪುತ್ರನ ಮಸ್ತ್ ಲುಕ್ ಹೇಗಿತ್ತು ಗೊತ್ತಾ?

Abhishek Ambareesh: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಖ್ಯಾತ ಫ್ಯಾಷನ್​ ಡಿಸೈನರ್​ ಪ್ರಸಾದ್​ ಬಿದ್ದಪ ಅವರ ಪುತ್ರಿ ಅವಿವ ಬಿದ್ದಪ ಮದುವೆ ಕಾರ್ಯಗಳು ಶುರುವಾಗಿವೆ ಹೌದು. ಕೆಲ ವರ್ಷಗಳಿಂದ ಅವಿವಾ ಹಾಗೂ ಅಭಿಷೇಕ್​ ಅಂಬರೀಷ್​ ನಡುವೆ ಪರಿಚಯ ಉಂಟಾಗಿತ್ತು, ಮುಂದೆ ಪರಿಚಯ ಪ್ರೀತಿಗೆ ತಿರುಗಿ ಕುಟುಂಬದ ಒಪ್ಪಿಗೆ ಪಡೆದು ಕಳೆದ ವರ್ಷ ಡಿಸೆಂಬರ್ 11ರಂದು ಬಹಳ ಅದ್ದೂರಿಯಾಗಿ ಅಷ್ಟೇ ಸೈಲೆಂಟಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗುತ್ತಿದ್ದು, ಮದುವೆಯ ಎಲ್ಲ ಶಾಸ್ತ್ರಗಳು ಕೂಡ ಇಂದಿನಿಂದ ಆರಂಭವಾಗಿವೆ. ಸುಮಲತಾ ಅಂಬರೀಷ್​ ಅವರ ಮನೆಯನ್ನು ಬೆಳಕಿನಿಂದ ಅಲಂಕಾರ ಮಾಡಲಾಗಿದೆ. ಈಗಾಗಲೇ ಮನೆಯಲ್ಲಿ ಮದುವೆಯ ಕಳೆ ತುಂಬಿಕೊಂಡಿದೆ. ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿದ್ದಪ ಜೂನ್ 5ರಂದು ಅದ್ದೂರಿಯಾಗಿ ಮದುವೆ ಆಗುತ್ತಿದ್ದಾರೆ. ಈ ಮದುವೆಗೆ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದ್ದು ಇಂದಿನಿಂದ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಹೌದು ವಿವಾಹಕ್ಕೂ ಮೊದಲು ನಡೆಯುವ ಅರಿಶಿಣ ಶಾಸ್ತ್ರದ ಕಾರ್ಯಗಳು ಆರಂಭ ಆಗಿವೆ. ಇದರಲ್ಲಿ ಅಭಿಷೇಕ್ ಕುಟುಂಬ ಭಾಗಿಯಾಗಿದ್ದು, ಅರಿಶಿಣ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು, ಅಭಿ ಅವ್ರ ಅದ್ದೂರಿ ಮದುವೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದುಕುಳಿತ್ತಿದ್ದಾರೆ. ಹೌದು ಇಂದು ಅಂಬಿ ಮನೆಯಲ್ಲಿ ಅರಿಶಿಣ ಶಾಸ್ತ್ರದ ಕಾರ್ಯಕ್ರಮಗಳು ಶುರುವಾಗಿದ್ದು, ಇದಕ್ಕಾಗಿ ಮನೆಯಲ್ಲಿ ಭರ್ಜರಿ ಸಿದ್ಧತೆಗಲಾಗುತ್ತಿದ್ದೂ, ಮನೆಯನ್ನ ಬಹಳ ಅದ್ದೂರಿಯಾಗಿ ಅಲಂಕಾರ ಮಾಡಿ ಅರಿಶಿಣ ಶಾಸ್ತ್ರ ವಿಭಿನ್ನವಾಗಿ ಡೇಕೋರೇಷನ್ ಮಾಡಲಾಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: ಬಾಡಿಗೆ ಮನೆಯಲ್ಲಿದ್ದೋರಿಗೆ ಸಿಗುತ್ತಾ ಫ್ರೀ ಕರೆಂಟ್- ಉಚಿತ 200ಯುನಿಟ್ ಪಡೆಯಲು ಏನ್ ಮಾಡಬೇಕು

ಶುದ್ಧ ಬಿಳಿ ಬಣ್ಣದ ಬಟ್ಟೆಯಲ್ಲಿ ಅಭಿಷೇಕ್ ಮಿಂಚಿಂಗ್

ಸದ್ಯ ವೈಟ್ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಅರಿಶಿನ ಶಾಸ್ತ್ರದಲ್ಲಿ ಮಿಂಚಿದ್ದಾರೆ. ಹೌದು ಗೌಡರ ಮನೆಯ ಮದುಮಗನಾಗಿ ಹಸೆಮಣೆ ಏರಲು ಸಜ್ಜಗಿದ್ದು ಮದುವೆಗೂ ಮುನ್ನ ಅರಿಶಿಣ ಶಾಸ್ತ್ರದಲ್ಲಿ ಮಾಡೋದು ವಾಡಿಕೆ. ಅದರಂತೆ ಸಂಪ್ರದಾಯದ ಪ್ರಕಾರ ಇದೀಗ ಅಭಿ ಅರಿಶಿಣ ಶಾಸ್ತ್ರ ನಡೀತಿದೆ. ಹೀಗಾಗಿ ಶುದ್ಧ ಬಿಳಿ ಬಣ್ಣದ ಪಂಚೆ ಹಾಗೂ ಶರ್ಟ್ ನಲ್ಲಿ ಅಭಿಷೇಕ್ ಮಿಂಚುತ್ತಿದ್ದೂ, ಭರ್ಜರಿಯಾಗಿಯೇ ಫೋಟೋಶೂಟ್ ಕೂಡ ಮಾಡಲಾಗ್ತಿದೆ. ಇದರ ವಿಡಿಯೋ ಎಲ್ಲ ಕಡೆ ವೈರೆಲ್ ಆಗ್ತಿದ್ದು ಅಭಿ ಖಡಕ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಈ ವಿಡಿಯೋ ಹಾಗೂ ಫೋಟೋ ನೋಡಿದ ಇವ್ರ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು. ಕೇವಲ ಕುಟುಂಬಸ್ಥರು ಮಾತ್ರ ಇವೊಂದು ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ.

ಇನ್ನು ಜೂನ್​ 4ರ ಭಾನುವಾರದಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಇನ್ನು ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಹೌದು ಸುಮಲತಾ ಅವರು ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡವರು. ಅಂಬರೀಷ್ ಕೂಡ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ಹೀಗಾಗಿ, ಎರಡೂ ಕ್ಷೇತ್ರದ ಗಣ್ಯರು ಆರತಕ್ಷತೆಗೆ ಬರಲಿದ್ದಾರೆ. ಆದ್ರೆ ಮದುವೆಗೆ ಆಪ್ತ ಬಳಗದವರು ಮಾತ್ರ ಬರಲಿದ್ದಾರೆ. ಇನ್ನು, ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದ್ದು, ಸುಮಾರು 1 ಲಕ್ಷ ಜನರು ಇದರಲ್ಲಿ ಭಾಗಿ ಆಗೋ ನಿರೀಕ್ಷೆ ಇದೆ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಮಂಡ್ಯ ಗೌಡರ ಮನೆಯಲ್ಲಿ ಇದೀಗ ಮದುವೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಬಹುಕಾಲದ ಪ್ರೀತಿಗೆ ಹಿರಿಯರು ಹಾಗೂ ಕುಟುಂಬದವರು ಸೇರಿ ಮದುವೆಯ ಮುದ್ರೆ ಒತ್ತಲಿದ್ದಾರೆ.

ಇದನ್ನೂ ಓದಿ: ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram