ವಿದ್ಯಾ ಅವ್ರಿಗೆ ಅನಾರೋಗ್ಯ ಸಮಸ್ಯೆ ಇದ್ರೂ ಕೈ ಬಿಡದ ಶ್ರೀಮುರುಳಿ! ಗಂಭೀರ ಅರೋಗ್ಯ ಸಮಸ್ಯೆ ಇದ್ರೂ ಮದ್ವೆಯಾದ ಮುರುಳಿ

ಸ್ಯಾಂಡಲ್ವುಡ್ ನಾ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವ್ರ ಲವ್ ಸ್ಟ್ರೋರಿ ಯಾವ ಸಿನಿಮಾಗೂ ಕಡಿಮೆ ಇಲ್ಲ. 10ವರ್ಷಗಳ ಕಾಲ ಪ್ರೀತಿಸಿ, ಪ್ರೀತಿಸಿದ ಹುಡುಗೀ ಗಂಭೀರ ಕಾಯಿಲೆ ಇರೋ ವಿಚಾರ ಗೊತ್ತಿದ್ರು, ಮದುವೆ ವಿಚಾರದಿಂದ ಹಿಂದೆ ಸರಿಯಲಿಲ್ಲ. ಪತ್ನಿಯ ಕಾಯಿಲೆ ಹುಟ್ಟೋ ಮಕ್ಕಗೂ ಬರುತ್ತೆ ಅನ್ನೋದು ಸ್ಪಷ್ಟವಾಗಿ ಗೊತ್ತಿದ್ರು, ವಿದ್ಯಾ ಮೇಲಿನ ಪ್ರೀತಿಸಿ ಮುರುಳಿ ಅವ್ರಿಗೆ ಒಂದಿಷ್ಟು ಕಡಿಮೆ ಆಗಲಿಲ್ಲ. ಹೌದು ಕೊನೆಗೆ ಪ್ರೀತಿಸಿದಾಕೆಯನ್ನ ಹಠ ಬಿಡದೆ ಪಟ್ಟು ಹಿಡಿದು ಮದುವೆಯಾಗಿ ಮುದ್ದಾದ 2ಮಕ್ಕಳ ಪೋಷಕರಾಗಿರುವ ಇವ್ರ ಲವ್ ಸ್ಟೋರಿ ಗ್ರೇಟ್ ಅಂತಲೇ ಹೇಳಬೇಕು. ಹೌದು ಶ್ರೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮೊದಲನೇ ದಿನ ಶ್ರೀಮುರಳಿ, ವಿದ್ಯಾ ಮೆಟ್ಟಿಲು ಇಳಿದು ಬರುವುದನ್ನು ಕಂಡು ಅಲ್ಲೇ ಲವ್‌ ಅಟ್ ಫರ್ಸ್ಟ್‌ ಸೈಟ್‌ ಆಯ್ತಂತೆ! ವಿದ್ಯಾ ನೋಡಿದಾಕ್ಷಣ ‘ಮದುವೆ ಆದ್ರೆ ಇವಳನ್ನೇ ಆಗಬೇಕು’ ಎಂದು ಸ್ನೇಹಿತರಿಗೆ ಶ್ರೀ ಮುರುಳಿ ಹೇಳಿದರಂತೆ.

WhatsApp Group Join Now
Telegram Group Join Now

ಅಲ್ದೆ ವಿದ್ಯಾ ಅವ್ರನ್ನು ಜಸ್ಟ್ ಮಾತನಾಡಿಸಲು ಮುರುಳಿ ಮೂರು ತಿಂಗಳು ತೆಗೆದುಕೊಂಡರಂತೆ. ಕೊನೆಗೆ 1999 ಡಿಸೆಂಬರ್ 30 ರಂದು ‘ನಾನು ನಿನ್ನ ಲವ್ ಮಾಡ್ತಿದೀನಿ. ನಿನ್ನ ಮದ್ವೆ ಮಾಡಿಕೊಳ್ಳುತ್ತೇನೆ. ಹೊಸ ವರ್ಷ ಶುರುವಾಗೋಕೆ ಇನ್ನೂ ಸಮಯ ಇದೆ. ನಾನು ಮನೆಗೆ ಹೋಗಿ ಕಾಲ್ ಮಾಡ್ತೀನಿ ನೀನು ಪಿಕ್ ಮಾಡಿದ್ರೆ ನಿನ್ನ ಒಪ್ಪಿಗೆ ಇದೆ’ ಎಂದು ಹೇಳಿ ಅಲ್ಲಿಂದ ಶ್ರೀ ಮುರುಳಿ ಹೊರಟರಂತೆ. ಇನ್ನು ವಿದ್ಯಾ ಶ್ರೀಮುರಳಿಗಿಂತ ಒಂದು ವರ್ಷ ಜೂನಿಯರ್ ಹೀಗಾಗಿ ವಿದ್ಯಾ ಬಹಳಷ್ಟು ಯೋಚಿಸಿ ಕೊನೆಗೆ ಶ್ರೀ ಮುರುಳಿ ಲವ್ ಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ. ಕೊನೆಗೆ 2008 ರಲ್ಲಿ ದಾಂಪತ್ಯ ಜೀವನಕ್ಕೆ ಕೂಡ ಈ ಜೋಡಿ ಕಾಲಿಟ್ಟರು.

ಇದನ್ನೂ ಓದಿ: ಸ್ಪಂದನಾ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್..

ಪ್ರೀತಿಸಿದಾಕೆಯನ್ನೇ ಕೈ ಹಿಡಿದ ನಟ ಶ್ರೀ ಮುರುಳಿ

ಇನ್ನು ವಿದ್ಯಾ ಅವ್ರ ತಂದೆ ಬೆಂಗಳೂರಿನ ಪ್ರತಿಷ್ಠಿತ ಹೈಲ್ಯಾಂಡ್ ಹೋಟೆಲ್ ಮಾಲೀಕರು. ಆದ್ರೂ ಕೂಡ ಸ್ಟೇಟಸ್ ನಲ್ಲಿ ಅವರಿಗಿಂತ ಕಡಿಮೆ ಇದ್ರೂ ಶ್ರೀ ಮುರುಳಿ ಅವರು ಪ್ರೀತಿಗೆ ವಿದ್ಯಾ ಕ್ಲಿನ್ ಬೋರ್ಡ್ ಆಗ್ತಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಈ ಜೋಡಿ ಮೊದಲ ಭೇಟಿ, ನಂತರ ಪ್ರೀತಿಯಾಗಿ ಹತ್ತು ವರ್ಷಗಳ ಕಾಲ ಆ ಪ್ರೀತಿಯನ್ನ ಉಳಿಸಿ ಬೆಳೆಸಿಕೊಂಡು ಬರುತ್ತಾರೆ. ಪ್ರೀತಿ ವಿಚಾರ ಮದುವೆ ಹಂತಕ್ಕೆ ಬಂದಾಗ ಶ್ರೀ ಮುರುಳಿ ಸಿನಿಮಾ ರಂಗದಲ್ಲಿ ಅಷ್ಟು ಗುರುತಿಸಿಕೊಂಡಿರೋಲ್ಲ. ಮಾಡಿದ ಸಿನಿಮಾಗಳಲ್ಲಿ ಯಶಸ್ಸು ಕೂಡ ಸಿಕ್ಕೊದಿಲ್ಲಾ. ಆಗ ವಿದ್ಯಾ ಹಾಗೂ ಶ್ರೀ ಮುರುಳಿ ಮದುವೆ ವಿಚಾರವಾಗಿ ವಿದ್ಯಾ ಅವ್ರ ತಂದೆ ಶ್ರೀ ಮುರುಳಿ ಅವ್ರ ತಂದೆ ಬಳಿ ಮಾತನಾಡಲು ಬಂದಾಗ ಮೊದಲಿದೆ ಶ್ರೀ ಮುರುಳಿ ಅವ್ರ ತಂದೆ ಬೇಡ ಅಂತಲೇ ಹೇಳ್ತಾರೇ.

ನನ್ನ ಮಗನ ಸಿನಿಮಾಗಳು ಪ್ಲಾಪ್ ಆಗ್ತಿವೆ ನೀವು ಮಗಳನ್ನ ಅಷ್ಟು ಮುದ್ದಾಗಿ ಸಾಕಿದ್ದೀರಾ ಸುಮ್ನೆ ಯಾಕೆ ಆ ಹುಡುಗಿ ಜೀವನ ಹಾಳು ಮಾಡೋದು ಅಂತ ಹೇಳ್ತಾರಂತೆ ಆದ್ರೆ ವಿದ್ಯಾ ಅವ್ರ ತಂದೆ ಇಲ್ಲ ಅವರಿಬ್ಬರು 10ವರ್ಷ ಪ್ರೀತಿ ಮಾಡಿದ್ದಾರೆ. ಇತರ ಕಾರಣ ಕೊಟ್ಟು ಅವ್ರ ಮನಸ್ಸಿಗೆ ನೋವು ಕೊಡೋದು ಬೇಡ ಆಗಿದ್ದಾಗಲಿ ಮದುವೆ ಮಾಡೋಣ ಅಂತ ಮುಂದುವರೆಯುತ್ತಾರೆ. ಎಲ್ಲರ ಒಪ್ಪಿಗೆ ಆಶೀರ್ವಾದ ಹಾಗೂ ಪ್ರೀತಿಯಿಂದಲೇ ಇಬ್ಬರ ಎಂಗೇಜ್ಮೆಂಟ್ ಕೂಡ ಆಗುತ್ತೆ. ಆದ್ರೆ ಎಂಗೇಜ್ಮೆಂಟ್ ಅದ ಕೆಲಸ ದಿನಗಳಿಗೆ ಹೊಸ ಸಮಸ್ಯೆ ಶುರುವಾಗಿದೆ ಬಿಡುತ್ತೆ.

ಪತ್ನಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಶ್ರೀಮುರಳಿ

ವಿದ್ಯಾ ಅವ್ರಿಗೆ ರಕ್ತ ಸಂಬಂದಿ ಕಾಯಿಲೆ ಇರೋದು ಗೊತ್ತಾಗುತ್ತೆ ವಿದ್ಯಾ ಕೂಡ ಅದನ್ನ ಮುಚ್ಚಿಡದೆ ಮುರುಳಿಗೆ ಹೇಳಿ ದೂರವಾಗೋ ಮಾತನಾಡ್ತಾರಂತೆ ಆದ್ರೆ ಶ್ರೀ ಮುರುಳಿ ಮಾತ್ರ ಅದ್ಯಾವುದಕ್ಕೂ ಒಪ್ಪಲ್ಲ. ಕೊನೆಗೆ ಮದುವೆ ಆಗ್ಲೇ ಬೇಕು ಅಂತ ಮದುವೆ ಕೂಡ ಆಗ್ತಾರೆ. ಮದುವೆ ಅದ ಒಂದು ವರ್ಷಕ್ಕೆ ಶ್ರೀ ಮುರುಳಿ ಅವ್ರ ಮನೆ ಮಾರಾಟ ಮಾಡಿ ಬಾಡಿಗೆ ಮನೆಗೆ ಬರ್ತಾರೆ. ಕೊನೆಗೆ ಶ್ರೀ ಮುರುಳಿಯ ಎಲ್ಲಾ ಚಿತ್ರಗಳು ಕೂಡ ಪ್ಲಾಪ್ ಆಗುತ್ತೆ ಆದ್ರೆ ಯಾವುತ್ತು ಕೂಡ ವಿದ್ಯಾ ಹೊರತಾಗಿ ನಡೆದುಕೊಂಡಿಲ್ಲ ಹೊರಟಾಗಿ ಮಾತನಾಡಿಲ್ಲ ಎಲ್ಲವನ್ನ ಅಷ್ಟೇ ಅದ್ಭುತವಾಗಿ ನಿಭಾಯಿಸಿದ್ದಾರೆ. ಸ್ಪಂದನ ಹಾಗೂ ವಿದ್ಯಾ ಇಬ್ಬರು ಕೂಡ ಅಕ್ಕ ತಂಗಿಯರ ಆಗೇ ಇದ್ದುಕೊಂಡು ಎಲ್ಲವನ್ನ ನಿಭಾಯಿಸುತ್ತಾರೆ.

ಒಂದು ಕಾರ್ಯಕ್ರಮದಲ್ಲಿ ಶ್ರೀ ಮುರುಳಿಯೇ ಹೇಳಿಕೊಂಡಿರುವ ಆಗೇ ವಿದ್ಯಾ ನನಗಿಂತ ರಾಯಲ್ ಅವ್ಳಿಗೆ ನನ್ ಜೊತೆ ಬಂದು ಅಂತ ಬದುಕು ಬದುಕುವಂತದ್ದು ಏನು ಇಲ್ಲ ಆದ್ರೆ ಪ್ರೀತಿ ಅವಳನ್ನ ಬಂಧಿಸಿ ನನ್ ಜೊತೆ ಕಷ್ಟ್ ಅನುಭವಿಸುವಂತೆ ಮಾಡ್ತು ಅಂತ ಹೇಳಿಕೊಂಡಿದ್ರು. ಇವತ್ತಿಗೂ ಕೂಡ ಇಬ್ಬರ ನಡುವೆ ಅದೇ ಪ್ರೀತಿ ಅಷ್ಟೇ ನಂಬಿಕೆ ಇದೆ ಈಗಲೂ ಇಬ್ಬರು ಒಬ್ಬರಿಗೊಬ್ಬರು ಕಂದ ಅಂತಲೇ ಕರೆದುಕೊಳ್ಳುತ್ತಾರೆ. ಆದ್ರೆ ವಿದ್ಯಾ ಅವ್ರ ಕಾಯಿಲೆ ಅವ್ರಿಗೆ ದೊಡ್ಡದು ಅಂತ ಯಾವತ್ತೂ ಅನ್ಸಿಲ್ಲ ಆಗೇ ಅನಿಸೋಕೆ ಮುರುಳಿ ಯಾವತ್ತಿಗೂ ಬಿಟ್ಟಿಲ್ಲ ವಿದ್ಯಾ ಅಂದ್ರೆ ಶ್ರೀ ಮುರುಳಿಗೆ ಅಷ್ಟು ಪೊಸಸೀವ್. ಬಹಳ ವಿರಳವಾಗಿ ಕಾಣಿಸಿಕೊಳ್ಳುವ ಈ ಕಾಯಿಲೆ ಅನುವಂಶಿಯವಾಗಿಯು ಬಂದು ಮುಂದುವರೆಯಬಹುದು. ಆದ್ರೆ ದೇವರ ದಯೆಯಿಂದ ಈ ದಂಪತಿಗೆ ಅತೀವಾ-ಪ್ರಿನ್ಸ್ ಅಗಸ್ತ್ಯ ಎಂಬ ಮುದ್ದಾದ ಮಕ್ಕಳಿದ್ದು ಅವರಿಬ್ಬರಿಗೂ ತಾಯಿ ವಿದ್ಯಾ ಕಾಯಿಲೆ ಬಂದಿಲ್ಲ. ಒಟ್ಟಿನಲ್ಲಿ ಈ ಜೋಡಿಗೆ ಯಾರ ಕೆಟ್ಟ ದೃಷ್ಟಿ ಬೀಳದಿದ್ರೆ ಅಷ್ಟೇ ಸಾಕು.

ಇದನ್ನೂ ಓದಿ: ವಿಜಯ್ ಅವರ ಸ್ವಂತ ಮನೆಯನ್ನು ಮಾರುವ ಪರಿಸ್ಥಿತಿ ಬಂದ್ರೂ ಜೊತೆಯಲ್ಲಿದ್ದ ಸ್ಪಂದನಾ; ಇಂತ ಸ್ಥಿತಿಯಲ್ಲೂ ಗಂಡನ ಕೈ ಬಿಟ್ಟಿರಲಿಲ್ಲ ಮಡದಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram