Swaraj Shetty: ತಂದೆಯಾದ ಸಂಭ್ರಮದಲ್ಲಿ ಕಾಂತಾರ ನಟ ಸ್ವರಾಜ್ ಶೆಟ್ಟಿ; ಮದುವೆಯಾದ 4ವರ್ಷದ ಬಳಿಕ ಗುಡ್ ನ್ಯೂಸ್ ಕೊಟ್ಟ ನಟ

Swaraj Shetty: ಸ್ವರಾಜ್ ಶೆಟ್ಟಿ ಇತ್ತೀಚ್ಚಿಗೆ ಬಹಳ ಫೇಮಸ್ ಆಗಿ ಮುನ್ನೆಲೆಗೆ ಬಂದವರಾದ್ರೂ, ಇದಕ್ಕೂ ಮೊದಲು ಸಾಕಷ್ಟು ನಾಟಕ ಹಾಗೂ ಧಾರವಾಹಿಗಳಲ್ಲಿ ನಟಸಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದ್ರೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ಶಿವನ ತಮ್ಮ ಗುರುವಾ ಪಾತ್ರದಲ್ಲಿ ಸ್ವರಾಜ್ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿನ ಅವರ ನಟನೆಗೆ ಪ್ರೇಕ್ಷಕ ಪ್ರಭುವಿನಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಹೌದು ಚಿತ್ರರಂಗದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡು ದೂರದೂರಿನಿಂದ ಅದೆಷ್ಟೋ ಪ್ರತಿಭೆಗಳು ಚಿತ್ರರಂಗಕ್ಕೆ ಆಗಮಿಸುತ್ತಾರೆ. ಎಷ್ಟೋ ಸಿನಿಮಾಗಳಲ್ಲಿ ನಟಿಸಿದರೂ ಕೆಲವರು ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಾರೆ. ಒಮ್ಮೆ ಅದೃಷ್ಟ ದೇವತೆ ಬಾಗಿಲು ತೆರೆದರೆ ರಾತ್ರೋ ರಾತ್ರಿ ಫೇಮಸ್‌ ಆಗುತ್ತಾರೆ ಅಂತಾರಲ್ಲ ಆ ಸಾಲಿಗೆ ಸ್ವರಾಜ್‌ ಶೆಟ್ಟಿ ನಿಲ್ಲುತ್ತಾರೆ.

WhatsApp Group Join Now
Telegram Group Join Now

ಹೌದು ರಂಗಭೂಮಿ ಕಲಾವಿದ, ಚಲನಚಿತ್ರ ನಟರಾಗಿರುವ ಸ್ವರಾಜ್ ಶೆಟ್ಟಿ ಅವರು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ಶಿವನ ತಮ್ಮನಾದ ಗುರುವ ಪಾತ್ರದಲ್ಲಿ ಕಾಣಿಸಿಕೊಂಡರು. ಹೌದು ಕಾಂತಾರ ಚಿತ್ರದಲ್ಲಿ ಸ್ವರಾಜ್‌ ಶೆಟ್ಟಿ ಅವರ ದೈವ ನರ್ತಕ ಗುರುವ ಪಾತ್ರವನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ. ಪಾತ್ರ ಚಿಕ್ಕದಾದರೂ ‘ಕಾಂತಾರ’ ಸಿನಿಮಾ ಸ್ವರಾಜ್‌ಗೆ ಒಂದೊಳ್ಳೆ ಬ್ರೇಕ್‌ ನೀಡಿತು. ಜನರು ಇವರನ್ನು ಗುರುತಿಸಲು ಸಹಾಯ ಮಾಡಿತು. ಸಿನಿಮಾ ಸಕ್ಸಸ್ ಜೊತೆಗೆ ವೈವಾಹಿಕ ಜೀವನದಲ್ಲಿ ನೆಮ್ಮದಿ ಕಾಣುತ್ತಿರುವ ನಟ ಸ್ವರಾಜ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಮೊದಲಿಗೆ ಚನ್ನೈನಲ್ಲಿ ಕೆಲಸ ಮಾಡುತ್ತಿದ್ದ ಸ್ವರಾಜ್ ನಂತರ ದಿನಗಳಲ್ಲಿ ಕೆಲಸ ಬಿಟ್ಟು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯಾಕಂದ್ರೆ ಸ್ವರಾಜ್ ಶೆಟ್ಟಿ ರಂಗಭೂಮಿ ಕಲಾವಿದರಾಗಿದ್ದು, ಇವರು ಈವರೆಗೂ 450ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಇವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಶಿವದೂತೆ ಗುಳಿಗೆ ನಾಟಕವೂ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಗಳಲ್ಲಿ ೧೦೦ಕ್ಕೂ ಹೆಚ್ಚು ಬಾರಿ ಯಶಸ್ವಿ ಪ್ರದರ್ಶನ ಕಂಡಿದೆ. ಈ ನಾಟಕದ ಮೂಲಕ ಸ್ವರಾಜ್ ಕರಾವಳಿಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸ್ವರಾಜ್ ಶೆಟ್ಟಿ ಅವರು ಟು & ಮಿ, ಜೈ ಮಾರುತಿ ಯುವಕ ಮಂಡಲ, ಬರ್ಕೆ, ಕಂಬಳ ಸೇರಿದಂತೆ ಹಲವು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಎಂಬ ವೆಬ್ ಸೀರೀಸ್ ನಲ್ಲೂ ನಟಿಸಿದ್ದಾರೆ. ಕನ್ನಡ ಸಿನಿಮಾದಲ್ಲೂ ಸ್ವರಾಜ್ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯ ಒಂದು ಮೊಟ್ಟೆಯ ಕಥೆ ಮತ್ತು ಹುಚ್ಚ 2 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಲ್ದೆ ಕನ್ನಡದ ಕೆಲ ಧಾರಾವಾಹಿಗಳಲ್ಲೂ ಸ್ವರಾಜ್ ನಟಿಸಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರಾವಾಹಿಯಲ್ಲಿ ಕೃಷ್ಣನಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಧಾರಾವಾಹಿಯಲ್ಲಿ ಇಂದ್ರ ಎಂಬ ಪಾತ್ರದಲ್ಲಿ ನಟಿಸಿದ್ದರು. ನಂತರದ ದಿನಗಳಲ್ಲಿ ಆ ಧಾರಾವಾಹಿಯಿಂದ ಹೊರಬಂದರು. ಅಲ್ದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕಲ್ಯಾಣ ಸೀರಿಯಲ್ ನಲ್ಲೂ ನಟಿಸಿದ್ದಾರೆ. ಇದೀಗ ತಮ್ಮದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೆಸರಿಡದ ಸಿನಿಮಾದಲ್ಲಿ ತಮ್ಮ ಆಸೆಯಂತೆ ಪೊಲೀಸ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಗಂಡು ಮಗುವಿಗೆ ಅಪ್ಪನಾದ ಖುಷಿಯಲ್ಲಿ ಸ್ವರಾಜ್ ಶೆಟ್ಟಿ

ಇನ್ನು ಸಾಧ್ಯ ಸ್ವರಾಜ್ ಶೆಟ್ಟಿ(Swaraj Shetty) ತಂದೆಯಾದ ಖುಷಿಯಲ್ಲಿದ್ದಾರೆ. ಹೌದು 2018ರಲ್ಲಿ ಆಸ್ನಿ ಶೆಟ್ಟಿ ಅವ್ರನ್ನ ಮದುವೆಯಾಗಿದ್ರು. ಬರೋಬ್ಬರಿ 4ವರ್ಷಗಳ ಬಳಿಕ ತಾವು ತಂದೆ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ರು. ಪತ್ನಿಗೆ ಸೀಮಂತ ಕಾರ್ಯವನ್ನ ಶಾಸ್ತ್ರವನ್ನ ಮಾಡಿ ಅದರ ಕೆಲವೊಂದಷ್ಟು ಫೋಟೋ ಹಾಗೂ ವಿಡಿಯೋವನ್ನ ಮೊನ್ನೆ ಮೊನ್ನೆಯಷ್ಟೇ ಶೇರ್ ಮಾಡಿಕೊಂಡು ದಂಪತಿಗಳಿಬ್ರು ಪೋಷಕರಗಿ ಬಡ್ತಿ ಪಡೆಯುತ್ತಿರುವ ವಿಚಾರವನ್ನ ಹಂಚಿಕೊಂಡಿದ್ರು. ಸಾಧ್ಯ ಇದೀಗ ಆಸ್ನಿ ಶೆಟ್ಟಿ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರು ಕೂಡ ಆರಾಮಾಗಿದ್ದಾರೆ.

ಸಾಧ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ಸ್ವರಾಜ್ ಶೆಟ್ಟಿಗೆ ನೆಟ್ಟಿಗರು ಹಾಗೂ ಅಭಿಮಾನಿಗಳು ಶುಭ ಆರೈಸಿ ತಾಯಿ ಮಗುವಿನ ಅರೋಗ್ಯವನ್ನ ವಿಚಾರಿಸಿ ತಾಯಿ ಮಗುವಿಗೆ ಒಳ್ಳೆಯದಾಗಲಿ ಅಂತ ಹರಸಿದ್ದಾರೆ. ಸಧ್ಯ ಹೆಸರಿಡದ ಸಿನಿಮಾ ತಯಾರಿಯಲ್ಲಿರುವ ನಟ ಸ್ವರಾಜ್ ಶೆಟ್ಟಿ ಇದೊಂದು ರೀತಿಯ ಧಮಾಕಾ ಅಂತಲೇ ಹೇಳಬಹುದು. ಹೌದು ಒಂದು ತಮ್ಮದೇ ಬ್ಯಾನರ್ ನಲ್ಲಿ ಚೊಚ್ಚಲ ಸಿನಿಮಾ ಮತ್ತೊಂದೆಡೆ ಮನೆಗೆ ಯುವ ರಾಜಕುಮಾರನ ಆಗಮನ ಈ ಎರಡು ಖುಷಿಯನ್ನ ಸಖತಾಗೆ ಸೇಲಾಬ್ರೇಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ವಿಜಯ್ ಅವರ ಸ್ವಂತ ಮನೆಯನ್ನು ಮಾರುವ ಪರಿಸ್ಥಿತಿ ಬಂದ್ರೂ ಜೊತೆಯಲ್ಲಿದ್ದ ಸ್ಪಂದನಾ; ಇಂತ ಸ್ಥಿತಿಯಲ್ಲೂ ಗಂಡನ ಕೈ ಬಿಟ್ಟಿರಲಿಲ್ಲ ಮಡದಿ

ಇದನ್ನೂ ಓದಿ: ಸ್ಪಂದನಾ ಮೃತದೇಹ ತರೋದಕ್ಕೆ ಯಾಕೆ ಇಷ್ಟು ಲೇಟಾಯ್ತು? ಇದಕ್ಕೆ ಇರೋ ರೂಲ್ಸ್ ಏನು? ಎಷ್ಟು ದುಡ್ಡು ಕೊಡಬೇಕು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram