ತನ್ನ ಫ್ಯಾನ್ಸ್ ಗಾಗಿ ಒಂದು ಕೋಟಿ ದಾನ ಮಾಡಿದ ವಿಜಯ್ ದೇವರಕೊಂಡ; ಕಷ್ಟದಲ್ಲಿರುವ 100 ಅಭಿಮಾನಿಗಳನ್ನ ಹುಡುಕಲು ಶುರು

ಕೆಲವರು ತೆರೆ ಮೇಲೆ ಮಾತ್ರವಲ್ಲ ತೆರೆಯ ಹಿಂದೆಯೂ ಕೂಡ ಹೀರೋಗಳಾಗಿರ್ತಾರೆ. ತಮ್ಮಿಂದಯಾಗುವ ಸಹಾಯ ಮಾಡ್ತಾ ಸದಾ ಕಷ್ಟದಲ್ಲಿರುವ ಅಭಿಮಾನಿಗಳ ಸಂಕಷ್ಟಕ್ಕೆ ಮಿಡಿಯುತ್ತಿರುತ್ತಾರೆ. ಹೌದು ತೆರೆಯ ಮೇಲೆ ಅದ್ಭುತವಾಗಿ ನಟಿಸಿ ಪ್ರೇಕ್ಷಕರನ್ನು ಮೋಡಿ ಮಾಡುವ ವಿಜಯ್ ದೇವರಕೊಂಡ ರೀಲ್ ಮಾತ್ರವಲ್ಲ, ರಿಯಲ್ ಜೀವನದಲ್ಲಿಯೂ ಹೀರೋ ಎಂದು ಸಾಬಿತು ಮಾಡಿದ್ದಾರೆ. ತಮ್ಮ ನಟನೆಯ ಖುಷಿ ಸಿನಿಮಾದಿಂದ ಸಿಗುವ 1 ಕೋಟಿ ರೂ. ಹಣವನ್ನು ಬಡವರಿಗೆ ನೀಡುವುದಾಗಿ ಘೋಷಿಸಿದ್ದಾರೆ. ಹೌದು ವಿಜಯ್ ದೇವರಕೊಂಡ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಖುಷಿ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಸಕ್ಸಸ್​​ನ ಸಂಭ್ರಮಾಚರಣೆಗೆ ಚಿತ್ರ ತಂಡ ಕಾರ್ಯಕ್ರಮ ಆಯೋಜಿಸಿತ್ತು. ಈ ಸಮಯದಲ್ಲಿ “ಖುಷಿ ಸಿನಿಮಾದಲ್ಲಿ ಗಳಿಸಿರುವ ಹಣವನ್ನು ದೇವರ ಕುಟುಂಬಗಳಿಗೆ ಸಣ್ಣ ಆರ್ಥಿಕ ಸಹಾಯ ನೀಡಲು ಬಳಸುವುದು ನಿಜವಾದ ಯಶಸ್ಸು ಅಂತ ನಟ ವಿಜಯ್ ಹೇಳಿದ್ದಾರೆ.

WhatsApp Group Join Now
Telegram Group Join Now

ಇನ್ನು ಖುಷಿ ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ ಬರೋಬ್ಬರಿ 50 ಕೋಟಿ ರೂ. ಗಳಿಸಿದೆ. ಕಾಮಿಡಿ, ರೊಮ್ಯಾಂಟಿಕ್ ಕಥಾಹಂದರವನ್ನು ಹೊಂದಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶ ವಿದೇಶಗಳಲ್ಲಿಯೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಸಕ್ಸಸ್ ಖುಷಿಗಾಗಿ ಚಿತ್ರ ತಂಡ ವಿಶಾಖಪಟ್ಟಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾಯರ್ಕ್ರಮದಲ್ಲಿ ಮಾತನಾಡಿದ ವಿಜಯ್ ದೇವರ ಕೊಂಡ ‘ಖುಷಿ’ ಚಿತ್ರ ಗಳಿಕೆಯಲ್ಲಿ 1 ಕೋಟಿ ರೂಪಾಯಿ ಹಣವನ್ನು ಬಡ ಕುಟುಂಬಗಳಿಗೆ ಹಂಚಲಾಗುವುದು.

ಅರ್ಹ 100 ‘ದೇವರ ಕುಟುಂಬ’ಗಳಿಗೆ ತಲಾ 1 ಲಕ್ಷ ರೂ. ಹಣವನ್ನು ಚೆಕ್ ಮೂಲಕ ವಿತರಿಸಲಾಗುತ್ತದೆ ಅಂತ ಹೇಳಿದ್ದು, ಈಗಾಗ್ಲೇ ತಂಡ ಒಂದನ್ನ ರಚಿಸಿರುವ ವಿಜಯ್ ಕಷ್ಟದಲ್ಲಿರುವವರನ್ನ ಹುಡುಕುಟ್ಟುದ್ದಾರಂತೆ ಇನ್ನು ಈ ಸೋಶಿಯಲ್ ಮೀಡಿಯಾದಲ್ಲಿ ಅರ್ಜಿ ಹರಿ ಬಿಟ್ಟು, ಆಯ್ಕೆಯಾಗುವ ಅರ್ಹ ಕುಟುಂಬಗಳಿಗೆ ವಾರದೊಳಗೆ ಹಣ ವಿತರಿಸಲಾಗುವುದು ಎಂದಿದ್ದಾರೆ. ಹೀಗಾಗಿ ಇದನ್ನ ನೋಡಿದ ಪ್ರತಿಯೊಬ್ಬರೂ ಕೂಡ ಈ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಗೃಹ ಲಕ್ಷ್ಮೀ ಹಣ ಖಾತೆಗೆ ಬಂದಿಲ್ವ; ಯೋಚ್ನೆ ಮಾಡಬೇಡಿ, ಗೃಹಲಕ್ಷ್ಮಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ದೇವರಕೊಂಡ ಹೊಸ ಘೋಷಣೆ, ಫಿಧಾ ಆದ್ರ ಅಭಿಮಾನಿಗಳು

ಹೌದು, ಖುಷಿ ಸಿನಿಮಾದಿಂದ ತಮಗೆ ಸಿಕ್ಕಿರುವಂತಹ ಸಂಭಾವನೆಯಲ್ಲಿ ನಟ ವಿಜಯ್ ದೇವರಕೊಂಡ ಒಂದು ಕೋಟಿ ರೂಪಾಯಿಗಳ ಮೊತ್ತವನ್ನು ದಾನ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ, ಈ ಸುದ್ದಿ ಈಗ ವೈರಲ್ ಆಗಿದ್ದು ಸಾಕಷ್ಟು ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಸದ್ದು ಮಾಡಿದೆ. ವಿಜಯ ದೇವರಕೊಂಡ ಅವರು ಕಷ್ಟದಲ್ಲಿರುವ ತಮ್ಮ ಅಭಿಮಾನಿಗಳ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ಹಣದಲ್ಲಿ ಅಗತ್ಯವಿರುವವರಿಗೆ ಹಣವನ್ನು ಹಂಚಲಿದ್ದಾರೆ.

ಕಷ್ಟದಲ್ಲಿರುವ ನೂರು ಕುಟುಂಬಗಳನ್ನು ಆಯ್ಕೆ ಮಾಡುವುದಕ್ಕೆ ಒಂದು ತಂಡವನ್ನು ಸಿದ್ಧಪಡಿಸಲಾಗಿದೆ. ಆ ಮೂಲಕ ನೂರು ಫ್ಯಾಮಿಲಿಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳಂತೆ ನಟ ವಿಜಯ್ ದೇವರಕೊಂಡ ನೆರವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯ ವಿಜಯ್ ದೇವರ ಕೊಂಡ ಸಾಕಷ್ಟು ಸೋಲುಗಳ ನಂತರ ಖುಷಿ ಸಿನಿಮಾದ ಮೂಲಕ ತಮ್ಮ ಖುಷಿ ಹೆಚ್ಚಿಸಿಕೊಂಡಿದ್ದು ಇದೀಗ ಸಾಮಾಜಿಕ ಕಾರ್ಯಗಳನ್ನು ಮೂಲಕ ಮತ್ತಷ್ಟು ಖುಷಿ ಪಡ್ತಿದ್ದು, ಈ ಮೂಲಕ ತಮ್ಮ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಒಟ್ಟಿನಲ್ಲಿ ದೇವರು ಕೊಟ್ಟಿದರಲ್ಲಿ ಕಷ್ಟದಲ್ಲಿರೋರಿಗೆ ಕೊಡೊ ಮನಸ್ಸು ಎಲ್ಲರಿಗೂ ಬರಲ್ಲ ಆದ್ರೆ ವಿಜಯ್ ಅವ್ರ ಈ ನಿರ್ಧಾರ ಸಾಕಷ್ಟು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ಈ ತಾಲ್ಲೂಕಿನ ಜನರಿಗೆ ಉಚಿತ ಅಕ್ಕಿ ಹಣ ಸಿಗೋದಿಲ್ಲ; ಈ ತಿಂಗಳಿಂದಲೇ ಇದು ಜಾರಿ!ಕಾರಣ ಏನ್ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram