ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ; ವಿಜಯ್ ರಾಘವೇಂದ್ರ ಬಾಳಿನಲ್ಲಿ ಸ್ಪಂದನ ಎಂಟ್ರಿ ಹೇಗಾಯಿತು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಈ ಹೃದಯಾಘಾತ ಒಂದು ರೀತಿಯ ಪಿಡುಗು ಅಂತಲೇ ಹೇಳಬಹುದು. ಬಹಳ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಹೋಗ್ತಿದ್ದಾರೆ. ಈಗಂತೂ ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತಲೇ ಹೇಳೋಕಾಗೋದಿಲ್ಲ. ಇದೀಗ ಇಂತದ್ದೇ ಒಂದು ವಿಚಿತ್ರ ಘೋರ ಘಟನೆ ಇದೀಗ ನಟ ವಿಜಯ್ ರಾಘವೇಂದ್ರ ಮನೆಯಲ್ಲಿ ನಡೆದೇ ಹೋಗಿದೆ. ಮಡದಿ ಅಂದ್ರೆ ಪ್ರಾಣ ಬಿಡ್ತಿದ್ದ ಚಿನ್ನಾರಿ ಮುತ್ತಾ ಅವರ ಪತ್ನಿಯ ಪ್ರಾಣವನ್ನೇ ವಿಧಿ ಕಸಿದುಕೊಂಡು ಬಿಟ್ಟಿದೆ. ಹೌದು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಜಾಲಿ ಟ್ರಿಪ್ ಅಂತ ಹೋಗಿದ್ರು. ಆದ್ರೆ ವಿಧಿ ಅವರಿಗೆ ವಿರುದ್ಧವಾಗಿತ್ತು ಅನ್ಸುತ್ತೆ.

WhatsApp Group Join Now
Telegram Group Join Now

ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದ್ದಾರೆ. ಮಲಗಿದ್ದವರು ಮತ್ತೆ ಎದ್ದೇ ಇಲ್ಲ. ಅಮ್ಮ ಟ್ರಿಪ್ ಮುಗಿಸಿ, ಗಿಫ್ಟ್ ತರ್ತಾರೆ ಅಂತ ಕಾಯ್ತಿದ್ದ ಮಗನಿಗೆ ಅಮ್ಮ ಇನ್ನಿಲ್ಲ ಅನ್ನೋದನ್ನು ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹೌದು ಹೆಂಡತಿಯ ಜೊತೆಗೆ ಒಂದೆರಡು ದಿನ ಜಾಲಿ ಟ್ರಿಪ್ ಹೋಗೋಣಾ ಅಂತ ಹೋಗಿದ್ದ ವಿಜಯ್ ರಾಘವೇಂದ್ರ ಅವರಿಗೆ ಥೈಲ್ಯಾಂಡ್ ನಲ್ಲಿ ಏನು ಮಾಡಬೇಕು ಅಂತಲೇ ಗೊತ್ತಾಗದೆ ಪರದಾಡುತ್ತಿದ್ದಾರೆ. ನಗುಮುಖದ, ಸದಾ ಗಂಡ – ಮಗನ ಖುಷಿಗಾಗಿ ಸಮಯ ಮೀಸಲಿಟ್ಟಿದ್ದ ಹೆಂಡತಿ ಇಂದು ಮೌನವಾಗಿ ಮಲಗಿದ್ದಾರೆ. ಅದನ್ನ ವಿಜಯ್ ರಾಘವೇಂದ್ರ ನೋಡಿ ಅರಗಿಸಿಕೊಳ್ಳುವುದಾದರೂ ಹೇಗೆ ಅನ್ನಿಸ್ತಿದೆ. ನಿಜಕ್ಕೂ ಇದೀಗ ಚಿನ್ನಾರಿ ಮುತ್ತನಿಗೆ ಬರ ಸಿಡಿಲೇ ಬಡಿದಂತಾಗಿದೆ. ಆಕಾಶವೇ ಕುಸಿದುಬಿದ್ದಿದ್ದೆ.

ಇದನ್ನೂ ಓದಿ: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತು! ಮುಂದೆ ಇದೇ ದೊಡ್ಡ ಟ್ವಿಸ್ಟ್

ವಿಜಯ್ ರಾಘವೇಂದ್ರ- ಸ್ಪಂದನಾ ಲವ್ ಸ್ಟೋರಿ ಹೇಗೆ ಶುರುವಾಯಿತು

ಹೌದು ವಿಜಯ್ ರಾಘವೇಂದ್ರ ಅವ್ರಿಗೆ ಪತ್ನಿ ಸ್ಪಂದನಾ ಅಂದ್ರೆ ಪ್ರಾಣ. ಹೆಂಡತಿಗೆ ಒಂದು ಕ್ಷಣಕ್ಕೂ ತೊಂದರೆ ಅಥವಾ ನೋವು ಕೊಡದೆ ಬಹಳ ಅದ್ಭುತವಾಗಿ ನೋಡಿಕೊಳ್ಳುತ್ತಿದ್ದ ಒಳ್ಳೆ ಮನಸ್ಸಿನ ವ್ಯಕ್ತಿ ಸಿಕ್ಕಿದರೆ ಇಂತ ಪತಿ ಸಿಗಬೇಕು ಅಂತ ಬೇರೆಯವರು ಕೂಡ ಹೊಟ್ಟೆ ಉರಿದುಕೊಳ್ಳಬೇಕು ಆ ಮಟ್ಟಿಗೆ ಹೆಂಡತಿಯನ್ನ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಚಿನ್ನಾರಿ ಮುತ್ತನ ಲವ್ ಸ್ಟೋರಿ ಬಹಳ ವಿಶೇಷವಾಗಿತ್ತು. ಹೌದು 2007ರಲ್ಲಿ ಮದುವೆಯಾಗಿದ್ದ ಈ ಸ್ಯಾಂಡಲ್ವುಡ್ ನ ಕ್ಯೂಟ್ ಜೋಡಿ 15 ವರ್ಷದ ದಾಂಪತ್ಯ ಜೀವನ ಮುಗಿಸಿ, 16ನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಇಬ್ಬರದ್ದು ಲವ್ ಮ್ಯಾರೇಜ್ ಅಲ್ಲ, ಹಿರಿಯರು ನೋಡಿ ಮಾಡಿದ ಮದುವೆಯಾದ್ರು ಚಿನ್ನಾರಿ ಮುತ್ತನ ಒಂದು ಕಾಲದ ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ ಅಂಗೇ ಒಂದೇ ಲುಕ್ ಗೆ ಫಿಧಾ ಆಗಿ ಹೋಗಿದ್ರು. ಅದರಂತೆ ಇಷ್ಟ ಪಟ್ಟವರನ್ನೇ ಪಟ್ಟು ಹಿಡಿದು ಮದುವೆ ಆದ್ರೂ ಅದಾದ ನಂತರ ಬಹಳ ಅನ್ಯೋನ್ಯವಾಗಿದ್ದರು.

ಈ ಜೋಡಿಗೆ ಮುದ್ದಾದ ಮಗ ಕೂಡ ಇದ್ದಾನೆ. ಇನ್ನು ವಿಜಯ್ ಹಾಗೂ ಸ್ಪಂದನಾ ಇದ್ದಂತ ಅನ್ಯೋನ್ಯತೆಗೆ ನೋಡಿದವರೆಲ್ಲ ಇಬ್ಬರದ್ದು ಲವ್ ಮ್ಯಾರೇಜ್ ಇರಬೇಕು ಎಂದುಕೊಂಡಿದ್ದರು. ಆದ್ರೆ ವಿಜಯ್ ರಾಘವೇಂದ್ರ ಅವರಿಗೆ ಮ್ಯಾರೇಜ್ ಬಳಿಕದ ಜೀವನದ ಕನಸು ದೊಡ್ಡಮಟ್ಟದ್ದಾಗಿತ್ತು. ಹೌದು ಜಗಳವಾಡಬಾರದು, ಸಂತೋಷದಿಂದ ಇರಬೇಕು ಹೀಗೆ ಹಲವು ಆಸೆಗಳಿದ್ದವು. ಅದರಂತೆ ಸ್ಪಂದನಾ ಅವರನ್ನು ಮದುವೆಯಾದ ಮೇಲೆ ಆ ಆಸೆಗಳನ್ನು ಹೇಳಿದ್ದರಂತೆ. ಇನ್ನು ವಿಜಯ್ ರಾಘವೇಂದ್ರ ಹಲವು ಬಾರಿ ಕಾಫಿ ಡೇ ಗಳಲ್ಲಿ ಸ್ಪಂದನಾ ಅವರನ್ನು ನೋಡಿದ್ದರಂತೆ. ಹೀಗೆ ಮೂರನೇ ಬಾರಿ ಭೇಟಿಯಾದಾಗ ಮಾತನಾಡಿಸಿದ್ದರಂತೆ. ತಂದೆಯ ಬಳಿ ಸ್ಪಂದನಾ ಬಗ್ಗೆ ಹೇಳಿದಾಗ, ಚಿನ್ನೇಗೌಡ ಅವರು, ಬಿಕೆ ಶಿವರಾಂ ಬಳಿ ಮಾತನಾಡಿ, ಗುರುಹಿರಿಯರ ಆಶೀರ್ವಾದದೊಂದಿಗೆ ಮದುವೆ ಮಾಡಿಸಿದ್ದಾರೆ. ಆದರೆ ವಿಧಿ ಅವರ ಬದುಕಿನ ನೆಮ್ಮದಿಯನ್ನೇ ಇಂದು ಕಿತ್ತುಕೊಂಡಿದೆ.

ಗಂಡ, ಮಗ ಮತ್ತು ಅಪ್ಪನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ ಸ್ಪಂದನಾ

ಹೆಚ್ಚಿಗೆ ಮಾತನಾಡದ ಸ್ಪಂದನ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಿದ್ರು. ಪತಿಯ ಜೊತೆಗೂ ಕೂಡ ಹೆಚ್ಚಿಗೆ ಮಾತಾಡ್ತಿರಲಿಲ್ಲ. ಆದ್ರೆ ಪತಿಯ ಮೇಲೆ ಹುಚ್ಚು ಪ್ರೀತಿ ಇಟ್ಟುಕೊಂಡಿದ್ದ ಪತ್ನಿ ಸ್ಪಂದನ ಗಂಡ ಮಗ ಹಾಗೂ ಅಪ್ಪನ ಹೆಸರಿರುವಂತ ಟ್ಯಾಟೂ ಹಾಕಿಸಿಕೊಂಡಿದ್ರು. ಅಲ್ದೆ ಪತಿಯನ್ನ ಬಹಳ ಜೋಪಾನವಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ರು, ಬೇಕಾಗಿದ್ದನೆಲ್ಲ ಕೇಳೋಕೂ ಮೊದಲೇ ವಿಜಯ್ ಅವ್ರ ಮುಂದೆ ಇಡುತ್ತಿದ್ದ ಸ್ಪಂದನ ಎಂದಿಗೂ ಕೂಡ ವಿಜಯ್ ರಾಘವೇಂದ್ರ ಜೊತೆಗೆ ಏರು ಧ್ವನಿಯಲ್ಲಿ ಮಾತನಾಡಿಸಿದವರಲ್ಲ, ಜಗಳ ಆಡಿದವರಲ್ಲ. ಮನೆಯಲ್ಲಿ ಪ್ರತಿಯೊಬ್ಬರನು ಬಹಳ ಚೆನ್ನಾಗಿ ನೋಡಿಕೊಂಡು ಮನೆಯನ್ನ ಬಹಳ ಅದ್ಭುತವಾಗಿ ನಿಭಾಯಿಸಿಕೊಂಡು ಚಿನ್ನಾರಿ ಮುತ್ತನಿಗಾಗಿಯೇ ಬದುಕುತ್ತಿದ್ದವರು ಚಿತ್ರರಂಗದಲ್ಲಿ ಈಗಷ್ಟೇ ಒಂದು ಚಿಕ್ಕದಾದ ಹೆಸರು ಮಾಡಲು ಶುರು ಮಾಡಿದ್ದ ಸ್ಪಂದನ ಚಿತ್ರರಂಗಲ್ಲಿ ದೊಡ್ಡ ಹೆಸರು ಮಾಡಿ ಏನಾದ್ರು ಸಾಧಿಸಬೇಕು ಅಂದುಕೊಂಡಿದ್ರು ಅಷ್ಟ್ರಲ್ಲಿ ವಿಧಿ ಘೋರ ಆಟ ಆಡಿಬಿಟ್ಟಿದೆ.

ಯಾವುದೇ ರೀತಿಯ ಡಯಟ್ ವರ್ಕೌಟ್ ಇಲ್ಲದೆ ಆರಾಮವಾಗಿಯೇ ಇದಂತ ಸ್ಪಂದನ ಅವ್ರಿಗೆ ಅದೇನಾಯ್ತೋ ಏನೋ ಇಲ್ಲ ಚಿನ್ನಾರಿ ಮುತ್ತನ ಪ್ರೀತಿ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಅನ್ನೋ ಹಾಗೆ ಇದೀಗ ಪಾಪ ವಿಧಿಯಾಟಕ್ಕೆ ವಿಜಯ ರಾಘವೇಂದ್ರರ ಉಸಿರಿಗೆ ಉಸಿರಾಗಿದ್ದ ಸ್ಪಂದನ ಅವ್ರ ಉಸಿರೇ ನಿಂತು ಹೋಗಿದೆ. ಇದನ್ನ ಅರಗಿಸಿಕೊಳ್ಳಲು ಆಗದೆ ಅದನ್ನ ನಿಭಾಯಿಸಿಕೊಳ್ಳೋಕೆ ಆಗದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ನಿಜಕ್ಕೂ ಇದಕ್ಕೆ ಅಲ್ವಾ ಹೇಳೋದು ವಿಧಿ ತುಂಬಾ ಕ್ರೂರಿ ಅಂತ.

ಇದನ್ನೂ ಓದಿ: ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡ ಕಿರುತೆರೆ ನಟಿ! ಲೈವ್ ಬಂದು ಕಣ್ಣೀರಿಟ್ಟ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram