ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ತಮ್ಮನಿಗೆ ಮೊದಲ ವರ್ಷದ ಬರ್ತಡೇ; ವಿಶೇಷವಾಗಿ ಫೋಟೋಶೂಟ್ ಮಾಡಿಸಿದ ಅಮೃತ ನಾಯ್ಡು..

ನನ್ನಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಬಾಲ ನಟಿ ಸಮನ್ವಿ ರಸ್ತೆ ಅಪಘಾತದಲ್ಲಿ ನಿಧನಳಾಗಿದ್ದು ಒಂದು ರೀತಿ ಎಂಥ ಕಲ್ಲು ಹೃದಯವು ಕೂಡ ಮರುಕ ಪಡುವಂತೆ ಮಾಡಿಬಿಟ್ಟಿತ್ತು. ಹಾರುಳು ಹುರುದಾಗೆ ಮಾತನಾಡುತ್ತಾ ಎಲ್ಲರಿಗೂ ಬಹಳ ಇಷ್ಟವಾದ ಬಾಲ ಸ್ಪರ್ಧೆಯಾಗಿದ್ರು. ಆದ್ರೆ ರಸ್ತೆ ಅಪಘಾತದಲ್ಲಿ ಬಂದ ಯಮಸ್ವರೂಪಿ ಸಮನ್ವಯನ್ನ ಸಾವಿನೂರಿಗೆ ಕರೆದುಕೊಂಡು ಹೋಗಿಬಿಟ್ಟಿತ್ತು. ಆಗ ಅಮೃತ ಸಮಾನ್ವಿ ಇಬ್ರು ಕೂಡ ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಸ್ಪರ್ಧೆಗಳಾಗಿದ್ರು, ಅಲ್ದೇ ಅಮೃತ ನಾಯ್ಡು 5ತಿಂಗಳ ಗರ್ಭಿಣಿ ಕೂಡ. ಅಂತಹ ಸ್ಥಿತಿಯಲ್ಲಿ ಮಗಳನ್ನ ಕಳೆದುಕೊಂಡ ಅಮೃತ ಜೀವ ಉಳಿದದ್ದು ಹೊಟ್ಟೆಯಲ್ಲಿದ್ದ ಮತ್ತೊಂದು ಜೀವಕ್ಕಾಗಿ ಅಂತಲೇ ಹೇಳಬಹುದು. ಮಗನ ರೂಪದಲ್ಲಿ ಸಮನ್ವಿ ಬಂದು ಅಮೃತಾ ನಾಯ್ಡು ಮಡಿಲು ಸೇರಿ ಬದುಕಿನಲ್ಲಿ ಹೊಸ ಬೆಳಕು ಮೂಡಿತ್ತು. ಹೌದು ಪುತ್ರನ ಆಗಮನದಿಂದ ಅವರ ಮುಖದಲ್ಲಿ ಪುನಃ ನಗು ಅರಳಿಸಿತ್ತು. ಮಗ ಹುಟ್ಟಿದ ಮೇಲೆ ಅವನನ್ನ ನೋಡ್ತಾ ಅವ್ನ ಬೆಳವಣಿಗೆ ನೋಡಿಕೊಂಡು ಅಮೃತ ಸಾಕಷ್ಟು ನೋವನ್ನ ಮರೆತು ಬದುಕುತ್ತಿದ್ದಾರೆ. ಮಗನಲ್ಲಿ ಮಗಳನ್ನ ನೋಡುತ್ತಾ ಬಹಳ ಜೋಪಾನವಾಗಿ ಸಾಕುತ್ತಿದ್ದಾರೆ. ಇದೀಗ ಮಗನಿಗೆ ಒಂದು ವರ್ಷವಾದ ಹಿನ್ನಲೆ ಮೊದಲ ವರ್ಷದ ಫೋಟೋಶೂಟ್ ಮಾಡಿಸಿ ಮಗನ ಕುರಿತಂತೆ ಒಂದಷ್ಟು ಸಾಲುಗಳನ್ನ ಅಮೃತ ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೃಜನ್ ಅಕ್ಕ! ಇಷ್ಟು ವರ್ಷ ನಟನೆಯಿಂದ ದೂರ ಉಳಿಯಲು ಕಾರಣವೇನು?

ಮಗನ ಮೊದಲ ವರ್ಷದ ಬರ್ತಡೆಗೆ ಫೋಟೋಶೂಟ್ ಮಾಡಿಸಿದ ಅಮೃತ ನಾಯ್ಡು

ಮಗನ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಬಹಳ ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದು ಇದರ ಜೊತೆಗೆ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದವರ ಜೊತೆಗಿನ ಕೆಲವೊಂದು ಫೋಟೋ ಮಗನ ಜೊತೆಗೆ ಫೋಟೋ ಹಾಗೂ ವಿಡಿಯೋಗಳನ್ನ ಇದೀಗ ಅಮೃತ ನಾಯ್ಡು ಹಂಚಿಕೊಂಡಿದ್ದು, ಮಗನನ್ನೇ ಪ್ರಪಂಚ ಎಂದುಕೊಂಡಿದ್ದಾರೆ. ನನ್ನ ಉಳಿಯುವಿಕೆಗೆ ಕಾರಣ ನೀನು, ಹಣೆಬರಹ ಕೈ ಕೊಟ್ಟಾಗಲು ದೇವರ ಮೇಲಿನ ನಂಬಿಕೆ ಉಳಿದದ್ದು ನಿನ್ನಿಂದ, ನನ್ನ ಜೀವನದ ಪ್ರತಿಯೊಂದು ಕ್ಷಣ ದಿನ ಎಲ್ಲವನ್ನ ಲೆಕ್ಕ ಹಾಕಿದ್ದೀನಿ ಅದು ನಿನಗಾಗಿ ಲವ್ ಯು ಮೈ ಬೇಬಿ ಅಂತ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ದೇವರು ಒಂದನ್ನ ಕಿತ್ತುಕೊಂಡು ಮತ್ತೊಂದನ್ನ ಕೊಟ್ಟಂತೆ ಮಾಡಿದ್ದಾನೆ. ಅಮೃತ ನಾಯ್ಡು ಕೂಡ ಮಗಳ ಸಾವಿನಿಂದ ಸ್ವಲ್ಪ ಸ್ವಲ್ಪವೇ ಆಚೆ ಬರುತ್ತಿದ್ದು ಸದ್ಯ ಎರಡನೇ ಮಗನ ಲಾಲನೆ ಪಾಲನೆ ಅವ್ರನ್ನ ಮತ್ತಷ್ಟು ಬ್ಯುಸಿ ಆಗಿರುವಂತೆ ಮಾಡಿದೆ.

ಸಮನ್ವಿ ಕಳೆದುಕೊಂಡು ದುಃಖದಿಂದ ಅಮೃತ ನಾಯ್ಡು ಹಾಗೂ ಕುಟುಂಬ ಬೇಗ ಸಂಪೂರ್ಣವಾಗಿ ಹೊರಬಂದು ಮತ್ತೊಂದು ಕಂದನ ಮುಖ ನೋಡಿಕೊಂಡು ನೆಮ್ಮದಿಯುತ ಜೀವನ ಸಾಗಿಸಲಿ ಅನ್ನೋದು ಸಮನ್ವಿ ಹಾಗೂ ಅಮೃತಾನಾಯ್ಡು ಅವ್ರ ಕೋರಿಕೆ ಪ್ರಾರ್ಥನೆ ಕೂಡ.. ಹಾಗೆಯೇ ನೋವು ಮರೆತು ಅಮೃತ ನಾಯ್ಡು ಮತ್ತೆ ನತ್ತೆನೆಗೆ ಕಂಬ್ಯಾಕ್ ಮಾಡಲಿ ಅನ್ನೋದು ಮತ್ತು ಕೆಲವರ ಆಸೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಮೃತ ಅವ್ರ ನಡೆ ಹೇಗಿರಲಿದೆ ಯಾವುದನ್ನ ಆಯ್ಕೆ ಮಾಡಿಕೊಳ್ತಾರೋ ಕಾದು ನೋಡಬೇಕು. ಇಲ್ಲ ಮತ್ತಷ್ಟು ದಿನ ಮಗನ ಆರೈಕೆಯಲ್ಲಿ ಕಳೆದು ಆ ನಂತರ ನಟನೆಗೆ ಮರಳಿ ಸಂಪೂರ್ಣ ಬದಲಾವಣೆಯನ್ನು ತಂದುಕೊಳ್ತಾರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram