ಅಮೂಲ್ಯ ಮಕ್ಕಳನ್ನು ಮೊದಲ ಬಾರಿಗೆ ನೋಡಿ ದರ್ಶನ್ ಹೇಳಿದ್ದೇನು? ವಿಶೇಷ ಫೋಟೋಗಳನ್ನು ಹಂಚಿಕೊಂಡ ಅಮೂಲ್ಯ

ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಮೊದಲ ಬಾರಿಗೆ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಮೂಲ್ಯ ಅವರು ಮೊದಲ ಸಿನಿಮಾವೇ ಸೂಪರ್ ಹಿಟ್ ಆಯ್ತು ಬಳಿಕ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ಪರ್ವ ಸಿನಿಮಾ ಮೂಲಕ ಬಾಲ ನಟಿಯಾಗಿ ಎಂಟ್ರಿ ಕೊಟ್ಟ ಅಮೂಲ್ಯ ನಂತರ ಚಂದು, ಲಾಲಿ ಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ಅಮೂಲ್ಯ ಹಾಗೂ ಗಣೇಶ್ ಕಾಂಬಿನೇಷನ್ ನ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದಾವೆ 2008ರಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಎಂಟ್ರಿ ಕೊಟ್ಟ ಅಮೂಲ್ಯ 2017ರಲ್ಲಿ ಮಾಸ್ತಿಗುಡಿ ಸಿನಿಮಾ ನಂತರ ಯಾವ ಸಿನಿಮಾದಲ್ಲೂ ನಾಯಕಿ ಪಾತ್ರದಲ್ಲಿ ನಟಿಸಿಲ್ಲ. ಕೊನೆಯದಾಗಿ 2017ರಲ್ಲಿ ಬಿಡುಗಡೆಯಾದ ಮುಗುಳುನಗೆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಮೂಲ್ಯ ಅವರು ಕಾಣಿಸಿಕೊಂಡರು.

WhatsApp Group Join Now
Telegram Group Join Now

ಅಮೂಲ್ಯ 2017ರಲ್ಲಿ ಜಗದೀಶ್ ಚಂದ್ರ ರವರನ್ನು ಮದುವೆಯಾದರೂ, ಮದುವೆ ಬಳಿಕ ಚಿತ್ರರಂಗದಿಂದ ದೂರ ಉಳಿದ ಅಮೂಲ್ಯ ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆಗೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಕಳೆದ ವರ್ಷ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಇಬ್ಬರು ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧರ್ವ್ ಎಂದು ಮುದ್ದಾದ ಹೆಸರು ಇಟ್ಟಿದ್ದಾರೆ. ಅಮೂಲ್ಯ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಇಡೀ ಸ್ಯಾಂಡಲ್ವುಡ್ ನಟ ನಟಿಯರು ಆಗಮಿಸಿದ್ದರು.

ಇದನ್ನೂ ಓದಿ: ಅನುಪ್ರಭಾಕರ್ ಮಗಳು ನಂದನಾಗೆ ಹುಟ್ಟುಹಬ್ಬದ ಸಂಭ್ರಮ; 5ವರ್ಷ ಪೂರೈಸಿದ ನಂದನ, ವಿಶೇಷವಾಗು ವಿಶ್ ಮಾಡಿದ ಅನುಪ್ರಭಾಕರ್

ಅಮೂಲ್ಯ ಮಕ್ಕಳನ್ನು ನೋಡಿ ದರ್ಶನ್ ಹೇಳಿದ್ದೇನು?

ಅಮೂಲ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ. ಮಕ್ಕಳ ಫೋಟೋಗಳು ಹಾಗೂ ಟ್ರಿಪ್ ಗೆ ಹೋಗಿರುವ ಫೋಟೋಗಳನ್ನು ತಮ್ಮ instagram ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ‘ಡಿ ಬಾಸ್ ಏನಂದ್ರು ನಿಮ್ಮ ಮಕ್ಕಳನ್ನು ನೋಡಿ?’ ಅಂತ ಪ್ರಶ್ನೆ ಕೇಳಿದ್ದಾರೆ ಇದಕ್ಕೆ ದರ್ಶನವರು ಏನು ಹೇಳಿದ್ದಾರೆ ಅಂತ ಅಮೂಲ್ಯ ಅವರು ಬರೆದುಕೊಂಡಿದ್ದಾರೆ ‘ನೀನೇ ಒಂದು ಮಗು, ನಿನಗೆ ಇನ್ನಿಬ್ಬರ, ಬಿಡು ಎಲ್ಲ ಒಂದೇ ಸಲ ಮುಗೀತು’ ಅಂತ ಅಮೂಲ್ಯ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ 2ನೇ ದಿನವೂ ಇಳಿಕೆ; ಇಂದಿನ ಚಿನ್ನ, ಬೆಳ್ಳಿಯ ಬೆಲೆ ಹೇಗಿದೆ. ಸಂಪೂರ್ಣ ವಿವರ 

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram