ತಂದೆ ತಾಯಿಯ ಸ್ಥಾನ ತುಂಬಿ ಮಗಳ ನಾಮಕರಣ ಕಿರುತೆರೆ ನಟಿ ದಿವ್ಯ ಶ್ರೀಧರ್; ಮಗಳಿಗೆ ಮುದ್ದಾದ ಹೆಸರಿಟ್ಟ ನಟಿ

ಕನ್ನಡ ಕಿರುತೆರೆಯಲ್ಲಿ ಆಕಾಶ ದೀಪ ಸೀರಿಯಲ್ ಮೂಲಕ ಮೋಡಿ ಮಾಡಿದ್ದ ನಟಿ ದಿವ್ಯ ಶ್ರೀಧರ್ ಕನ್ನಡಿಗರಿಗೆ ಬಹಳ ಚಿರಪರಿಚಿತರು ಇತ್ತೀಚಿಗೆ ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳಿಂದ ಬೇಸತ್ತು ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗುಸುತ್ತಿದ್ರು. ಕಳೆದ ಏಪ್ರಿಲ್ ನಲ್ಲಿ ಮುದ್ದಾದ ಹೆಣ್ಣು ಮಗುವಿಗೂ ಜನ್ಮ ನೀಡಿದ್ದು, ಖುಷಿಯ ವಿಚಾರವನ್ನ ಎಲ್ಲರೊಟ್ಟಿಗೂ ಹಂಚಿಕೊಂಡಿದ್ರು. ಸದ್ಯ ಅ ಮಗುವಿಗೆ ನಾಮಕರಣ ಮಾಡಿದ್ದು, ತಂದೆ ತಾಯಿ ಇಬ್ಬರು ತಾವೇ ಆಗಿ ಶಾಸ್ತ್ರ ನೆರವೇರಿಸಿದ್ದಾರೆ. ಹೌದು ಕನ್ನಡದಲ್ಲಿ ಆಕಾಶ ದೀಪ ಧಾರವಾಹಿ ನಂತರ ತಮಿಳು ಕಿರುತೆರೆಗೆ ಕಾಲಿಟ್ರು. ‘ಸೇವಂತಿ’ ಧಾರಾವಾಹಿ ಮೂಲಕ ತಮಿಳು ಕಿರುತೆರೆ ಪ್ರವೇಶಿಸಿದ ನಟಿ ದಿವ್ಯಾ ಶ್ರೀಧರ್ ಅಲ್ಲಿಯೂ ಕೂಡ ಮನೆ ಮಾತಾಗಿದ್ದರು.

WhatsApp Group Join Now
Telegram Group Join Now

ಇನ್ನು ನಟಿ ದಿವ್ಯಾ ಶ್ರೀಧರ್ ಇದಕ್ಕೂ ಮೊದ್ಲೇ ಮದುವೆ ಆಗಿದ್ರು. ಹೌದು ಈ ನಟಿಗೆ 2012ರಲ್ಲಿ ಮದುವೆಯಾಗಿ ಒಂದು ಮಗು ಕೂಡ ಇತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ದಂಪತಿ ವಿಚ್ಛೇದನ ಪಡೆದಿದ್ದರು. ನಂತರ ದಿವ್ಯಾ ಶ್ರೀಧರ್‌ ಹಾಗೂ ಅಮ್ಜಾದ್ ಖಾನ್ ಅಂದ್ರೆ ಆರ್ನವ್ 2015ರಲ್ಲಿ ‘ಕೆಳದಿ ಕಣ್ಮನಿ’ ತಮಿಳು ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಇನ್ನು ಧಾರಾವಾಹಿಗಳಲ್ಲಿ ನಟಿಸುವ ವೇಳೆ ಸಹ ನಟ ಅರ್ನವ್ ಅಮ್ಜದ್ ಜತೆ ದಿವ್ಯಾ ಪ್ರೀತಿಲಿ ಬಿದ್ದಿದ್ದರು. ಆತನಿಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಅಲ್ದೇ ಹೇಗೋ ಎಲ್ಲರ ಒಪ್ಪಿಗೆ ಮೆರೆಗೂ ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ ಕೂಡ ಆದ್ರೂ ಅನಂತರ ದಿವ್ಯಾ ಗರ್ಭಿಣಿ ಆಗಿದ್ದಾಗ ಆಕೆಗೆ ಈ ಹಿಂದೆ ಮದುವೆಯಾಗಿ ಮಗಳು ಇರುವುದು ಗೊತ್ತಾಗಿ ಮನೆಯಲ್ಲಿ ಗಲಾಟೆ ಶುರುವಾಗಿತ್ತು.

ಮತ್ತೊಂದು ಕಡೆ ಅರ್ನವ್ ಮತ್ತೊಬ್ಬಳ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದರು. ಅಲ್ದೇ ಕಳೆದ ವರ್ಷ ಪತಿ ಅರ್ನವ್ ಅಲಿಯಾಸ್ ಅಮ್ಜಾದ್ ಖಾನ್ ವಿರುದ್ಧ ದಿವ್ಯಾ ಶ್ರೀಧರ್ ಚೆನ್ನೈ ಪೊಲೀಸರ ಬಳಿ ಹಲ್ಲೆ ಹಾಗೂ ವಂಚನೆ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಅರ್ನವ್‌ನ ಬಂಧಿಸಿದ್ದರು. ಇದೆಲ್ಲದರ ಮಧ್ಯೆ ನಟಿ ದಿವ್ಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಅಲ್ದೇ ಅ ಮಗುವಿಗೆ ನಾಮಕರಣ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಭಾರವಾದ ಮನಸ್ಸಿನಿಂದಲೇ ಡಿಕೆಡಿ ಶೋ ಗೆ ಬರ್ತಾರಾ ವಿಜಯ್ ರಾಘವೇಂದ್ರ! ಈ ವಾರವೇ ಡಿಕೆಡಿ ವೇದಿಕೆಯಲ್ಲಿ ರಾಘು!?

ನಟಿಯ ಮುದ್ದು ಮಗಳ ಹೆಸರು ಏನ್ ಗೊತ್ತಾ? ಯಾರ್ ಯಾರ್ ಬಂದಿದ್ರು

ಹೌದು ಆಕಾಶದೀಪ, ಅಮ್ಮಾ, ಸೀರಿಯಲ್ ಸೇರಿದಂತೆ ‘ಸನಿಹ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ದಿವ್ಯಾ . ಬಳಿಕ ತಮಿಳು ಸೀರಿಯಲ್‌ನಲ್ಲಿ ಬ್ಯುಸಿಯಾದರು. ತಮಿಳು ನಟ ಅರ್ನವ್ ಜೊತೆಗಿನ ದಾಂಪತ್ಯದಲ್ಲಿ ಬಿರುಕಿನ ಬೆನ್ನಲ್ಲೇ ನಟಿ ಪೊಲೀಸ್ ಠಾಣೆ ಮಟ್ಟಿಲೇರಿ ಸುದ್ದಿಯಾದರು. ಅನಂತರ ಏಪ್ರಿಲ್ 7ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅದಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ, ಮೇ 21ರಿಂದಲೇ ಅವರು ಮತ್ತೆ ಕೆಲಸ ಶುರು ಮಾಡಿದ್ದರು. ಹಸುಗೂಸನ್ನು ಕೂಡ ಅವರು ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕೆಲಸ ಮಾಡುವ ಮಹಿಳೆ ಮಾಡದಿರುವ ಕೆಲಸ ಇಲ್ಲ, ಮರಳಿ ಕೆಲಸಕ್ಕೆ ಎಂದು ದಿವ್ಯಾ ಶ್ರೀಧರ್ ಅವರು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಶೂಟಿಂಗ್ ಸ್ಥಳಕ್ಕೆ ಬರುವ ವಿಡಿಯೋವನ್ನು ಹಂಚಿಕೊಂಡಿದ್ದರು.

ಇನ್ನು ಮಗು ಹುಟ್ಟಿದ ಒಂದೇ ತಿಂಗಳಿಗೆ ಹಸುಗೂಸನ್ನ ಶೂಟಿಂಗ್ ಕರೆದುಕೊಂಡು ಕೆಲಸ ಮಾಡುವ ಪರಿಸ್ಥಿತಿ ಎದುರಾದ್ರು ಸಹಿತ ದಿವ್ಯಾ ಹೆದರಲಿಲ್ಲ. ಈ ಕುರಿತು ಚಿತ್ರೀಕರಣ ಮತ್ತು ಮಗು ಪಾಲನೆ ಎರಡನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂದು ವರ್ಕಿಂಗ್ ವುಮೆನ್ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಇದೀಗ ಆ ಮಗುವಿಗೆ 5ತಿಂಗಳು ತುಂಬಿದ ಹಿನ್ನೆಲೆ ನಾಮಕರಣ ಶಾಸ್ತ್ರವನ್ನ ನೆರವೇರಿಸಿದ್ದಾರೆ. ಈಗ ತಾವೇ ಮಗುವಿಗೆ ತಂದೆ ಸ್ಥಾನದಲ್ಲೂ ನಿಂತು ಪ್ರಾಯುಷಿ ಅಂತ ಹೆಸರಿಟಿದ್ದಾರೆ. ಇನ್ನು ಈ ಒಂದು ಕಾರ್ಯಕ್ರಮದಲ್ಲಿ ದಿವ್ಯಾ ಶ್ರೀಧರ್ ಸ್ನೇಹಿತರು ಮತ್ತು ಕುಟುಂಬದವರು ಭಾಗಿಯಾಗಿ ನಟಿಗೆ ಸಾಥ್ ಕೊಟ್ಟಿದ್ದಾರೆ.

 

View this post on Instagram

 

A post shared by Srithika (@srithika_saneesh)

ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳ ಹಣ ಏಕೆ ಬಂದಿಲ್ಲ! ಯಾವಾಗ ಬರುತ್ತೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram