ನಿರ್ಮಾಪಕ ರವೀಂದರ್ ಮತ್ತು ನಟಿ ಮಹಾಲಕ್ಷ್ಮೀ ಡೈವೋರ್ಸ್ ನಿಜಾನಾ! ಎಲ್ಲದಕ್ಕೂ ಫೋಟೋ ಮೂಲಕವೇ ಕ್ಲಾರಿಟಿ ಕೊಟ್ಟ ಮಹಾಲಕ್ಷ್ಮೀ.

ಕಳೆದ ವರ್ಷ ಕಾಲಿವುಡ್ ನಲ್ಲಿ ನಡೆದ ಮದುವೆಯೊಂದು ಬಹಳ ಸದ್ದು ಮಾಡಿತ್ತು. ಯಾರು ಕೂಡ ನಿರೀಕ್ಷೆ ಮಾಡದಂತೆ, ನಂಬಲು ಅಸಾಧ್ಯವೇ ಎಂಬಂತೆ ನಟಿ ಹಾಗೂ ನಿರ್ಮಾಪಕರೊಬ್ಬರ ಮದುವೆ ನಡೆದು ಹೋಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗ್ತಿದ್ದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್ಸ್ ಮಾಡಾತೊಡಗಿದ್ರು. ಆದ್ರೂ ಆ ಜೋಡಿ ತಲೆಕೆಡಿಸಿಕೊಳ್ಳದೆ ಆರಾಮಾಗಿಯೇ ಇದ್ರೂ, ಅದ್ರಿಗ ಈ ಜೋಡಿ ನಡುವೆ ವೈಮನಸ್ಸು ಮೂಡಿದೆ ಡೈವೋರ್ಸ್ ತೆಗೆದುಕೊಳ್ಳಲ್ಲೂ ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಈಗ ಕೆಲವೊಂದಷ್ಟು ಕಡೆ ವೈರಲ್ ಆಗ್ತಿದೆ. ಸ್ನೇಹಿತರೆ ಆ ಜೋಡಿ ಬೇರೆ ಯಾರು ಅಲ್ಲಾ ತಮಿಳು ಧಾರಾವಾಹಿ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್​. ಇನ್ನು ನಿರ್ಮಾಪಕ ರವೀಂದರ್ ಯಾರಿಗೆ ತಾನೇ ಗೊತ್ತಿಲ್ಲ. ಎಲ್ಲಿ ನೋಡಿದ್ರೂ ಅವರದ್ದೇ ಟಾಕ್​. ಈ ಜೋಡಿ ಏನೇ ಮಾಡ್ಲಿ, ಮಾಡದೇ ಇರಲಿ, ಅವರ ಬಗ್ಗೆಯಂತೂ ನಾನಾ ರೀತಿಯ ಸುದ್ದಿಯಾಗುತ್ತಲೇ ಇರುತ್ತದೆ. ಇನ್ನು ಈ ಜೋಡಿ ಮದುವೆಯಾದಗ ಸಾಕಷ್ಟು ಮಂದಿ ಮಹಾಲಕ್ಷ್ಮೀ ರವೀಂದರ್​ ಬಳಿ ಇರುವ ದುಡ್ಡು ನೋಡಿಯೇ ಮದುವೆಯಾಗಿದ್ದಾರೆ. ಅಷ್ಟು ದಪ್ಪ ಇರುವವರನ್ನು ಯಾರಾದರೂ ಮದುವೆಯಾಗ್ತಾರೆ ಅಂದ್ರೆ ಅದಕ್ಕೆ ಬಲವಾದ ಕಾರಣ ಇರಲೇ ಬೇಕು ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ಈ ಅಲ್ಲದೇ ಜೋಡಿ ತುಂಬಾ ದಿನ ಒಟ್ಟಿಗೆ ಇರೋದಿಲ್ಲ ಅಂತ ಆಡಿಕೊಂಡು ಮಾತನಾಡಿಕೊಂಡಿದ್ದು ಉಂಟು ಅದ್ರಿಗ ಅದು ಸತ್ಯವಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: ಜೂನ್ 1ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ. ಹೊಸ ಲಿಸ್ಟ್ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು!

ಡೈವೋರ್ಸ್ ಬಗ್ಗೆ ನಟಿ ಮಹಾಲಕ್ಷ್ಮೀ ಕೊಟ್ಟ ಸ್ಪಷ್ಟನೆ ಏನ್ ಗೊತ್ತಾ?

ಹೌದು ಕಳೆದ ಕೆಲವು ದಿನಗಳಿಂದ ಮಹಾಲಕ್ಷ್ಮೀ ಹಾಗೂ ರವೀಂದರ್​ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗಳು ಹರಿದಾಡುತ್ತಿದೆ. ಈ ಜೋಡಿ ಡಿವೋರ್ಸ್ ಮಾಡಿಕೊಳ್ಳಲಿದ್ದಾರೆ ಅನ್ನೋ ಟಾಕ್​ ಕೂಡ ಕಾಲಿವುಡ್​ನಲ್ಲಿ ಜೋರಾಗಿತ್ತು. ಸಾಕಷ್ಟು ಕಡೆ ಈ ಸುದ್ದಿಗಳು ವೈರಲ್ ಆಗಿದ್ದು ಇದೆ. ಇನ್ನು ಈ ಬಗ್ಗೆ ಮೊದಲು ಈ ದಂಪತಿಗಳು ಎಲ್ಲಿಯೂ ಕೂಡ ಏನನ್ನು ಹೇಳಿಕೊಂಡಿರಲಿಲ್ಲ. ಇದೀಗ ಮಹಾಲಕ್ಷ್ಮಿ ಅವ್ರು ಶೇರ್ ಮಾಡಿಕೊಂಡಿರುವ ಅದೊಂದು ಫೋಟೋ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಂತೆ ಕಾಣುತ್ತಿದೆ.ಅದಕ್ಕೆ ಪತಿ ರವೀಂದರ್ ಕೂಡ ರಿಪ್ಲ್ ಕೊಟ್ಟಿದ್ದಾರೆ. ಹೌದು ಈ ಬಗ್ಗೆ ಮಹಾಲಕ್ಷ್ಮೀ ಹಾಗೂ ರವೀಂದರ್​ ಚಂದ್ರಶೇಖರ್​ ಕೂಡ ಕ್ಲಾರಿಟಿ ಕೊಟ್ಟಿದ್ದಾರೆ. ಹೌದು ಈ ಹಿಂದೆ ಕೆಲ ಯೂಟ್ಯೂಬ್​ ಚಾನೆಲ್​ಗಳಲ್ಲಿ ಈ ಜೋಡಿ ಬೇರೆ ಬೇರೆಯಾಗುತ್ತಿದ್ದಾರೆ. ಇಬ್ಬರು ಡಿವೋರ್ಸ್​ ಪಡೆಯೋದಕ್ಕೆ ಒಪ್ಪಿಕೊಂಡಿದ್ದಾರೆ ಅಂತೆಲ್ಲಾ ಸುದ್ದಿಯಾಗುತ್ತಿತ್ತು. ಆದ್ರೆ ಇದಕ್ಕೆ ಈಗ ಮಹಾಲಕ್ಷ್ಮೀ ತಮ್ಮದೇ ಸ್ಟೈಲ್​ನಲ್ಲಿ ಉತ್ತರಿಸಿದ್ದಾರೆ.

ಕೆಲವೊಂದು ವಿಚಾರಗಳಿಗೆ ದೊಡ್ಡ ಮಟ್ಟದ ವಿವರಣೆ ಬೇಕಾಗಿರೋದಿಲ್ಲ ಅನ್ನೋದಕ್ಕೆ ಮಹಾಲಕ್ಷ್ಮಿ ಅವ್ರ ಈ ಚಿಕ್ಕ ಪೋಸ್ಟ್ ಉತ್ತರ ಕೊಡ್ತಿದೆ. ಇನ್ನು ಗಂಡ ರವೀಂದರ್​ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿರುವ ಮಹಾಲಕ್ಷ್ಮಿ ಅವ್ರು ಕೆಲ ಸಾಲುಗಳನ್ನು ಬರೆದಿದ್ದಾರೆ. ಹೌದು ಅದೇನೆಂದರೆ ನೀವು ನನ್ನ ಭುಜದ ಅಥವಾ ಹೆಗಲ ಮೇಲೆ ಕೈ ಹಾಕಿದಾಗ ನಾನು ಈ ಜಗತ್ತಿನಲ್ಲಿ ಏನೂ ಬೇಕಾದರೂ ಮಾಡಬಲ್ಲೆ ಎಂಬ ವಿಶ್ವಾಸ ನನಗಿದೆ. ನನ್ನ ಹೃದಯವು ನಿನ್ನಿಂದ ತುಂಬಿದೆ ಅಮ್ಮು ಐ ಲವ್​ ಯೂ ಅಂತ ನಟಿ ಮಹಾಲಕ್ಷ್ಮೀ ಬರೆದುಕೊಂಡಿದ್ದಾರೆ. ಅಲ್ಲದೇ ಈ ಪೋಸ್ಟ್​ಗೆ ರವೀಂದರ್​ ಕೂಡ ಐ ಲವ್​ ಯೂ ಟೂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ನೀವಿಬ್ಬರು ಬೇರೆ ಬೇರೆಯಾಗ್ತಿರಾ ಎಂಬ ಸುದ್ದಿ ಕೇಳಿ ಗಾಬರಿಯಾಗಿತ್ತು. ಈ ಫೋಟೋ ನೋಡಿ ಖುಷಿಯಾಯ್ತು ಅಂತ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ವಿವಾದದಿಂದಲೇ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು ಸಹ ಈ ಜೋಡಿಯ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾವುದಕ್ಕೂ ಇವರಿಬ್ಬರು ತಲೆಕೆಡಿಸಿಕೊಳ್ಳಲ್ಲ ಅನ್ನೋದು ಇದೀಗ ಮಹಾಲಕ್ಷ್ಮೀ ಅವ್ರ ಸಾಲುಗಳಿಂದಲೇ ಗೊತ್ತಾಗ್ತಿದೆ. ಹೀಗಾಗಿ ಡೈವೋರ್ಸ್ ವಿಚಾರ ಕೇವಲ ಗಾಳಿ ಸುದ್ದಿ ಅದರಲ್ಲಿ ಯಾವುದೇ ಸತ್ಯಂಶ ಇಲ್ಲ ಅನ್ನೋದು ಇದೀಗ ಅರ್ಥವಾಗುತ್ತಿರುವಂತಹ ವಿಷಯ.

ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಹಿಂದಕ್ಕಿ ನಂ1 ಸ್ಥಾನಕ್ಕೆ ಏರಿದ ಗಟ್ಟಿಮೇಳ; ಟಾಪ್ 10 ಧಾರಾವಾಹಿಗಳು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram