ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡ ಕಿರುತೆರೆ ಖ್ಯಾತ ನಟಿ! ಲೈವ್ ಬಂದು ಕಣ್ಣೀರಿಟ್ಟ ನಟಿ

ನಮ್ಮ ದೇಶದಲ್ಲಿ ಹೃದಯಾಘಾತ ಸಮಸ್ಯೆ ಬಹಳಷ್ಟು ಜನರ ಪ್ರಾಣವನ್ನೇ ನುಂಗಿದೆ. ಹೌದು ಇತ್ತೀಚೆಗೆ ಹೃದಯಘಾತ ಉಂಟಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಫಿಟ್ ಆಗಿರುವವರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ ಅನ್ನೋದು ಅಘಾತಕಾರಿ. ಇದೀಗ ಒಂದು ವರ್ಷದ ಹಿಂದಷ್ಟೇ ಖುಷಿ ಖುಷಿಯಾಗಿ ದಾಪಂತ್ಯ ಜೀವನಕ್ಕೆ ಕಾಲಿಟ್ಟ ದಂಪತಿಯ ಬಾಳಲ್ಲಿ ವಿಧಿ ಹೃದಯಾಘಾತದ ಸೋಗಿನಲ್ಲಿ ಘೋರ ಆಟವಾಡಿದೆ. ಹೌದು ಮದುವೆಯಾದ ಒಂದೇ ವರ್ಷಕ್ಕೆ ಖ್ಯಾತ ಕಿರುತೆರೆ ನಟಿ ಪತಿಯನ್ನು ಕಳೆದುಕೊಂಡಿದ್ದಾಳೆ. ತಮಿಳು ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯ ಅವರ ಪತಿ ಅರವಿಂದ್ ಶೇಖರ್ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಈ ಶಾಕಿಂಗ್ ಘಟನೆಯಿಂದ ಶ್ರುತಿ ಅವರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇನ್ನು ಅರವಿಂದ್ ಸಾವು ಅನೇಕರಿಗೆ ದುಃಖ ತಂದಿದೆ. ಈ ಶಾಕ್​ನಿಂದ ಶ್ರುತಿ ಹಾಗೂ ಅರವಿಂದ್ ಕುಟುಂಬ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

WhatsApp Group Join Now
Telegram Group Join Now

ಇನ್ನು ಶ್ರುತಿ ಹಾಗೂ ಅರವಿಂದ್ ಅವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಜೊತೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆ ಅದರು. ಶ್ರುತಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ಕಿರುತೆರೆಗೆ ಕಾಲಿಟ್ಟರು. ಹಲವು ಸೂಪರ್ ಹಿಟ್​ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ವಾಣಿ ರಾಣಿ ಸೇರಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಅವರು ಗಮನ ಸೆಳೆದಿದ್ದಾರೆ. ಈ ಮಧ್ಯೆ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೊನ್ನೆಯಸ್ಟೇ ವಿವಾಹ ವಾರ್ಷಿಕೋತ್ಸವವನ್ನ ಖುಷಿ ಖುಷಿಯಾಗಿ ಆಚರಿಸಿದ್ರು. ಆದ್ರೆ ಈ ಮಧ್ಯೆ ಇದೀಗ ಗಂಡನ ಸಾವಿನ ಸುದ್ದು ಒಮ್ಮೆಲೇ ಬರಲ್ಲ ಸಿಡಿಲು ಬಡಿದಂತಾಗಿದ್ದು, ಗಂಡನ ಸಾವಿನ ಬಳಿಕ ಲೈವ್ ಬಂದು ಮಾತನಾಡಿರುವ ಶೃತಿ ಬಹಳ ದುಃಖ ಪಟ್ಟಿದ್ದಾರೆ.

ಇದನ್ನೂ ಓದಿ: ಸೀತಾ ರಾಮ ಧಾರವಾಹಿಯ ಅಸಲಿ ಸ್ಟೋರಿ ಏನ್ ಗೊತ್ತಾ? ಸೀತಾ ನಿಜಕ್ಕೂ ಮದುವೆ ಆಗಿದಾಳ? ಸಿಹಿ ಯಾರು?

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನಟಿ!

ಸೋಜಿಗ ಅಂದ್ರೆ ಫಿಟ್‍ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದ ಅರವಿಂದ್ ಅವರು ದೇಹದ ತೂಕ ಇಳಿಸಿಕೊಳ್ಳಲು ತರಬೇತಿ ನೀಡುತ್ತಿದ್ದರು. 2022ರ ಮಿಸ್ಟರ್ ತಮಿಳುನಾಡು ಸಹ ಆಗಿದ್ದ ಅವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಕಳೆದ ವರ್ಷವಷ್ಟೇ ಶ್ರುತಿ ಷಣ್ಗುಗ ಪ್ರಿಯಾ ಮತ್ತು ಅರವಿಂದ್ ಖುಷಿ ಖುಷಿಯಿಂದ ಮದುವೆಯಾಗಿದ್ದರು. ಹೌದು ಶ್ರುತಿ ಶಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಅವರು ಟ್ರೇನಿಂಗ್ ನೀಡುತ ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತ ಆಕ್ಟಿವ್ ಆಗಿದ್ದ ಇವ್ರಿಗೆ ಮೊನ್ನೆ ಅಂದ್ರೆ ಆಗಸ್ಟ್ 2ರ ಸಂಜೆ ಅವರಿಗೆ ಹೃದಯಾಘಾತ ಆಗಿದೆ. ಹೀಗಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲಿಯೇ ಕೊನೆಯುಸಿರು ಎಳೆದಿದ್ದರೆ.

ಇನ್ನು ಅರವಿಂದ್ ಹಾಗೂ ಶ್ರುತಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲ್ಲೋರ್ಸ್ ಇದ್ದು, ಅಭಿಮಾನಿಗಳಿಗಾಗಿ ಇವರು ವಿಡಿಯೋ ಹಾಗೂ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ, ಅರವಿಂದ್ ಅವರ ನಿಧನ ಸುದ್ದಿ ಇದೀಗ ಅನೇಕರಿಗೆ ಶಾಕ್ ತಂದಿದೆ. ಇನ್ನು ವಿಚಿತ್ರ ಅಂದ್ರೆ ಒಂದು ತಿಂಗಳ ಹಿಂದೆಯಷ್ಟೇ ಈ ಜೋಡಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ರು. ಅಲ್ದೇ ಶ್ರುತಿ ಷಣ್ಗುಗ ಪ್ರಿಯಾ ಸೀರಿಯಲ್‍ಗಳಲ್ಲಿ ಬ್ಯುಸಿಯಾಗಿದ್ದರೆ, ಅರವಿಂದ್ ಫಿಟ್‍ನೆಸ್ ಕೋಚ್ ಆಗಿ ಖುಷಿಯಿಂದಲೇ ಜೀವನ ನಡೆಸುತ್ತಿದ್ದರು. ಆದರೆ ಹಠಾತ್ ಹೃದಯಾಘಾತಕ್ಕೆ ಒಳಗಾದ ಅರವಿಂದ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.ಇನ್ನು ಸಾವಿನ ಸುದ್ದಿ ಆಚೆ ಬರುತ್ತಿದ್ದಂತೆ ಸಾಕಷ್ಟು ಜನ ಬೇರೆ ಬೇರೆ ರೀತಿಯಲ್ಲಿ ಮಾತನಾಡಲು ಶುರು ಮಾಡುದ್ರು ಹೀಗಾಗಿ ನಟಿ ಶೃತಿ ಲೈವ್ ಬಂದು ಮಾತನಾಡಿದ್ದಾರೆ.

ಲೈವ್ ಬಂದು ಕಿರುತರೆ ನಟಿ ಹೇಳಿದ್ದೇನು ಗೊತ್ತಾ?

ಗಂಡನ ಸಾವಿನ ಬಗ್ಗೆ ತರೆವರಿ ಸುದ್ದಿಗಳು ಬಿತ್ತರವಾಗ್ತಿರೋದನ್ನ ಗಮನಿಸಿದ ನಟಿ ಅಂಥವರಿಗೆ ಕೈ ಮುಗಿದು ಬೇಡಿಕೊಂಡು ಈ ರೀತಿಯ ರೂಮರ್ಸ್ ನ್ನ ಇಲ್ಲಿಗೆ ನಿಲ್ಲಿಸಿಬಿಡಿ. ನನ್ನ ಗಂಡ ಬಾಡಿ ಬಿಲ್ಡರ್ ಪಿಟೀನೆಸ್ ಟ್ರೈನರ್ ಆಗಾಗಿಯೇ ಅವ್ರಿಗೆ ಹೃದಯಘಾತವಾಯ್ತು ಅಂತೆಲ್ಲಾ ಹೇಳ್ತಿದ್ದೀರಾ ಅದೆಲ್ಲ ಸುಳ್ಳು ನನ್ನ ಪತಿ ಸಿವಿಲ್ ಎಂಜಿನಿಯರ್ ಆಗಿದ್ದವರು. ಫ್ಯಾಷನ್ ಗೆ ಅಂತ ಬಾಡಿ ಬಿಲ್ಡಿಂಗ್ ಮತ್ತೆ ಪಿಟೀನೆಸ್ ಕೊಚ್ ಆಗಿದ್ರು ಅಷ್ಟೇ.. ಹೃದಯಘಾತ ಅದರಿಂದಾನೆ ಆಯ್ತು ಅಂತ ನೀವು ಮಾಡ್ತಿರೋ ಸುದ್ದಿಗಳನ್ನ ನಿಲ್ಲಿಸಿ ನೀವು ಪಡಿಯೋ ವಿವ್ಸ್ ಲೈಕ್ಸ್ ಅದ್ರಿಂದ ಸಂಪಾದನೆ ಮಾಡೋ ಹಣ ಹೆಚ್ಚು ದಿನ ಇರಲ್ಲ. ನಮ್ಮ ಮನೆಯಲ್ಲಿ ವಯಸ್ಸಾದವರು ಇದ್ದಾರೆ ಅವ್ರು ಇದನ್ನೆಲ್ಲಾ ನೋಡಿದರೆ ತಡೆಯಲ್ಲ. ದಯವಿಟ್ಟು ಈತರ ಸುದ್ದಿಗಳನ್ನ ನಿಲ್ಲಿಸಿ ಅಂದಿದ್ದು, ಜೊತೆಗೆ ನಮ್ಮ ಜೊತೆಯಲ್ಲಿ ನಿಂತು ಧೈರ್ಯ ತುಂಬಿ ಎಲ್ಲವನ್ನ ತಡೆದುಕೊಳ್ಳುವ ಶಕ್ತಿ ನೀಡುತ್ತಿರುವ ಪ್ರತಿಯೊಬ್ಬರಿಗೂ ನಾನು ಋಣಿಯಾಗಿರ್ತೀನೆ ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮಕ್ಕಳು ಯಾವ ದಿನ ಯಾವ ತಿಂಗಳು ಜನಿಸಿದ್ರೆ ಅದೃಷ್ಟ; ಯಾವ ದಿನ ಮಕ್ಕಳ ಜನನ ಆಗದಿದ್ರೆ ಒಳ್ಳೆಯದು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram