Vaisshnavi gowda: ಮುರಿದು ಬಿದ್ದ ಮದುವೆ ಬಗ್ಗೆ ನಟಿ ವೈಷ್ಣವಿ ಹೇಳಿದ್ದೇನು ಗೊತ್ತಾ? ಹಿಂದೆ ನಡೆದ ಘಟನೆ ನೆನೆದು ಪಾಸಿಟಿವ್ ರಿಯಾಕ್ಷನ್ ಕೊಟ್ಟ ನಟಿ

Vaisshnavi gowda: ಕನ್ನಡ ಕಿರುತೆರೆದಲ್ಲಿ ಗೂಳಿ ಕೆನ್ನೆ ಮೂಲಕವೇ ಹೆಚ್ಚು ಗುರುತಿಸಿಕೊಂಡ ನಟಿ, ಹಾಗೂ ಅಗ್ನಿಸಾಕ್ಷಿ ಸನ್ನಿಧಿ ಅಂತಲೇ ಈಗಲೂ ಖ್ಯಾತಿ ಗಳಿಸಿರುವ ವೈಷ್ಣವಿ, ಸಿಕ್ಕಾಪಟ್ಟೆ ಫೇಮಸ್. ಹೌದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು ವೈಷ್ಣವಿ ಗೌಡ. ಈ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ನಂತರ ಧಾರಾವಾಹಿ ಬಳಿಕ ವೈಷ್ಣವಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಿ ಮನೆಯಲ್ಲಿ ಅದ್ಭುತ ಆಟವಾಡುವ ಮೂಲಕ ಎಲ್ಲರಿಗೂ ಇಷ್ಟವಾಗಿದ್ದರು. ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ವೈಷ್ಣವಿ ಗೌಡ ಮಿಂಚಿದ್ದಾರೆ. ಕಿರುತೆರೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ವೈಷ್ಣವಿ ಗೌಡ ಆಗಾಗ ಸಿಹಿ ಕಹಿ ಎರಡು ಸುದ್ದಿಗಳನ್ನ ಹಂಚಿಕೊಳ್ಳುತ್ತಿದ್ರು ಆದ್ರೆ ಅದೊಂದು ದಿನ ಕುಟುಂಬಸ್ಥರ ಸಮ್ಮುಖದಲ್ಲಿ ಹುಡುಗನೊಬ್ಬನ ಜೊತೆ ಹಾರ ಬದಲಿಸಿಕೊಂಡ ವಿಚಾರ ವೈಷ್ಣವಿ ಗೌಡ ಹೇಳುವ ಮೊದಲೇ ಎಲ್ಲ ಕಡೆ ಸಿಕ್ಕಾಪಟ್ಟೆ ವೈರಲ್ ಆಗಿ ಹೋಗಿತ್ತು.

WhatsApp Group Join Now
Telegram Group Join Now

ಹೌದು ವೈಷ್ಣವಿ ಗೌಡ ವಿದ್ಯಾ ಭರಣ್ ಎನ್ನುವರ ಜೊತೆ ಹಸೆಮಣೆ ಏರುಲು ನಿರ್ಧರಿಸಿ ವಿದ್ಯಾ ಭರಣ್ ಮತ್ತು ವೈಷ್ಣವಿ ಇಬ್ಬರೂ ಮಾಲೆ ಹಾಕಿಕೊಂಡು ನಿಂತಿರುವ ಫೋಟೋ ಎಲ್ಲಾ ಕಡೆ ಕ್ಷಣ ಮಾತ್ರದಲ್ಲಿ ವೈರಲ್ ಆಯ್ತು ಅಲ್ಲದೇ ವೈಷ್ಣವಿ ಮತ್ತು ವಿದ್ಯಾ ಭರಣ್ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲಿಸಿದ್ರು. ಬಹಳ ವಿಶೇಷ ಏನಪ್ಪಾ ಅಂದ್ರೆ ವೈರಲ್ ಆಗಿದ್ದ ವೈಷ್ಣವಿ ಎಂಗೇಜ್ಮೆಂಟ್ ಫೋಟೋದಲ್ಲಿ ಶಂಕರ್ ಬಿದಿರಿ ಕೂಡ ಇದ್ದರು, ಹೀಗಾಗಿ ಇದು ಪಕ್ಕ ಸುದ್ದಿ ಅಂತ ಎಲ್ಲರು ಮಾತನಾಡಿಕೊಂಡಿದ್ರು. ಆದರೆ ಅಷ್ಟೇ ಬೇಗ ಈ ಮದುವೆ ಎಂಗೇಜ್ಮೆಂಟ್ ಸುದ್ದಿಗಳು ಮುರಿದು ಬಿದ್ದವು. ಹೌದು ವಿದ್ಯಾಭರಣ್ ಹುಡುಗಿಯೊಬ್ಬರಿಗೆ ಮೋಸ ಮಾಡಿದ್ದಾರೆ ಅನ್ನೋ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ವೈಷ್ಣವಿ ಗೌಡ ಈ ವಿಷಯದಿಂದ ಅಂತರ ಕಾಯ್ದುಕೊಂಡು ಮದುವೆಯ ಮಾತಿನಿಂದ ದೂರ ಉಳಿದುಕೊಂಡರು. ಆಗ ಇದರ ಬಗ್ಗೆ ಒಂದು ಮಾತನ್ನು ಕೂಡ ವೈಷ್ಣವಿ ಆಡಿರಲಿಲ್ಲ. ಬಹಳ ಮೌನವಾಗಿಯೇ ಎಲ್ಲವನ್ನ ನಿಭಾಯಿಸಿದ್ರೂ ಇದೀಗ ಮುರಿದುಬಿದ್ದ ಮದುವೆಯ ಬಗ್ಗೆ, ಮುಂದಿನ ಜೀವನದ ಬಗ್ಗೆ ವೈಷ್ಣವಿ ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಮತ್ತೊಮ್ಮೆ ಮದುವೆಯಾದ ಚಂದ್ರಪ್ರಭಾ ಹಾಗೂ ಭಾರತಿ ಪ್ರಿಯಾ – ಕಣ್ಣೀರೀಟ್ಟ ಜೋಡಿ

ಆಗೋದೆಲ್ಲ ಒಳ್ಳೆದಕ್ಕೆ, ನಾನು ಮುಂದೆ ಚೆನ್ನಾಗಿರುತ್ತೇನೆ

ಅಗ್ನಿಸಾಕ್ಷಿ, ಬಿಗ್ ಬಾಸ್ ನಲ್ಲೂ ಮೋಡಿ ಮಾಡಿದ್ದ ವೈಷ್ಣವಿ ಗೌಡ(Vaisshnavi gowda) ಸದ್ಯ ಕಿರುತೆರೆಯ ಹೆಸರಾಂತ ನಟಿ ವೈಷ್ಣವಿ ಸದ್ಯ ಸೀತಾರಾಮ ಸೀರಿಯಲ್‌ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದು ಹೋದ ಕ್ಷಣಗಳಿಂದ, ಕೆಲವೊಂದು ಆಘಾತದಿಂದ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡೂರಿ ಚೇತರಿಕೊಂಡಂತೆ ಕಾಣುತ್ತಿದ್ದೂ ಈ ನಡುವೆ ಮುರಿದು ಬಿದ್ದ ಮದುವೆ ಸಂಬಂಧದ ಬಗ್ಗೆ ವೈಷವಿ ಕೂಡ ಮೌನ ಮುರಿದಿದ್ದಾರೆ. ಹೌದು ಇದೀಗ ಅರ್ಧಕ್ಕೆ ನಿಂತು ಹೋದ ಮದುವೆ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಖಾಸಗಿ ಜೀವನದ ಬಗ್ಗೆ ರಿಯಾಕ್ಟ್ ಮಾಡಿರುವ ವೈಷ್ಣವಿ, ಕಳೆದ ವರ್ಷ ನವೆಂಬರ್‌ನಲ್ಲಿ ವಿದ್ಯಾಶಂಕರ್ ಜೊತೆ ಕುಟುಂಬದ ಮುಂದೆ ವೈಷ್ಣವಿ ಹಾರ ಬದಲಿಸಿಕೊಂಡಿದ್ದರು. ಈ ಕುರಿತ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಘಟನೆ ನಡೆದು 8 ತಿಂಗಳ ಬಳಿಕ ನಟಿ ವೈಷ್ಣವಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಆದರೆ ಆ ಮೇಲೆ ನಡೆದಿದ್ದೆಲ್ಲ ನಾವು ನಿರೀಕ್ಷೆಯೇ ಮಾಡಿರಲಿಲ್ಲ. ಕೆಲ ದಿನಗಳ ಕಾಲ ಕ್ಯಾಮೆರಾಗಳು ನಮ್ಮ ಮನೆ ಮುಂದೆ ಇರುತ್ತಿದ್ದದ್ದು ಇಂದು ಕೂಡ ನನಗೆ ನೆನಪಿದೆ. ಅಂದಿನ ಆ ಸಮಯ ಕುಟುಂಬಕ್ಕೆ ತುಂಬ ಕಷ್ಟವಾಗಿತ್ತು,ನಾನು ಸಾರ್ವಜನಿಕ ಜೀವನದಲ್ಲಿ ಬದುಕುತ್ತಿದ್ದೇನೆ. ಎಲ್ಲರ ಕಣ್ಣು ನನ್ನ ಮೇಲಿರುತ್ತದೆ. ಇದನ್ನು ನನ್ನ ಕುಟುಂಬ ಎದುರಿಸಬೇಕಿತ್ತು. ಆ ಸಮಯದಲ್ಲಿ ನಾನು ನಿಸ್ಸಹಾಯಕಳಾಗಿದ್ದೆ. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಅನ್ನೋದನ್ನ ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ ಅಂತ ತುಂಬಾ ಪಾಸಿಟಿವ್ ಆಗಿ ನಟಿ ವೈಷ್ಣವಿ ಮಾತನಾಡಿದ್ದಾರೆ.

ಒಟ್ಟಿನಲ್ಲಿ ಆಗೋದೆಲ್ಲ ಒಳ್ಳೇದಕ್ಕೆ, ಜೀವನದಲ್ಲಿ ಬಂದಿದ್ದೆಲ್ಲವನ್ನ ಸ್ವೀಕರಿಸಲೇಬೇಕು ಅದು ಯಾರಾದ್ರೂ ಸರೀ ಅನ್ನೋದು ವೈಷ್ಣವಿ ಅವ್ರ ಮಾತಾಗಿದೆ. ಏನಾಯ್ತೋ ಅದೆಲ್ಲವೂ ಅನಿರೀಕ್ಷಿತಾ ನಾವು ಏನು ಅಂದುಕೊಂಡಿರಲಿಲ್ಲ ಎಲ್ಲ ಅದಾಗಿಯೇ ಆಗಿ ಹೋಗಿದೆ. ಆಗಂತ ನಾನು ನನ್ನ ನಂಬಿಕೆಯನ್ನ ಕಳೆದುಕೊಂಡಿಲ್ಲ, ನನ್ನ ನಂಬಿಕೆಯನ್ನ ಯಾವ ಘಟನೆಯು ಮುರಿಯಲು ಸಾಧ್ಯವಿಲ್ಲ ಅಂತ ಬಹಳ ಸ್ಟ್ರಾಂಗ್ ಆಗಿಯೇ ವೈಷ್ಣವಿ ಗೌಡ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ವೈಷ್ಣವಿ ಗೌಡ ಅವ್ರ ಜೀವನ ಅವರು ಅಂದುಕೊಂಡಂತೆ ಸುಂದರವಾಗಿರಲಿ ಅನ್ನೋದು ಅಭಿಮಾನಿಗಳ ಆಶಯ.

ಇದನ್ನೂ ಓದಿ: ಚಂದನವನಕ್ಕೆ ಗುಡ್ ಬೈ ಹೇಳಿದ್ರ ಜೆ.ಕೆ, ಇಂಡಸ್ಟ್ರಿ ಸಹವಾಸ ಸಾಕು ಅಂತ ಹೇಳಿದ್ದೇಕೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram