ಧೋನಿಗೆ ಧನಸಹಾಯ ನೀಡಿದ್ದ ಕಲಿಯುಗದ ಕರ್ಣ ಅಂಬರೀಶ್! ಹಳೆ ಫೋಟೋ ಹಂಚಿಕೊಂಡು ಸುಮಲತಾ ಹೇಳಿದ್ದೇನು?

ನಟ ದಿವಗಂತ ಅಂಬರೀಶ್ ಅವರು ಇಂದು ನಮ್ಮ ಕಣ್ಣ ಮುಂದೆ ಇಲ್ಲದಿರಬಹುದು ಆದ್ರೆ ಅವ್ರು ಕೆಲವೊಂದು ವಿಚಾರಗಳೊಂದಿಗೆ ಸದಾ ನಮ್ಮೊಂದಿಗೆ ಇರುತ್ತಾರೆ ಅನ್ನೋದು ಪದೇ ಪದೇ ಸಾಬೀತಾಗುತಿದೆ. ನಟನಾಗಿ ರಾಜಕಾರಣಿಯಾಗಿ ಸಾಕಷ್ಟು ಜನಪ್ರಿಯ ಆಗಿಯೇ ಹೆಸರು ಮಾಡಿದ್ದವರು. ಹೌದು ಮಂಡ್ಯದವರ ಗತ್ತೇನು ಅನ್ನೊದು ಇಡೀ ಇಂಡಿಯಾದವರಿಗೇ ಗೊತ್ತು ಅಂತಾರೆ ಅದು ನಿಜಕ್ಕೂ ಅಂಬಿ ವಿಚಾರದಲ್ಲಿ ನಿಜ ಯಾಕಂದ್ರೆ ಕಷ್ಟ ಎಂದು ಕೇಳಿಕೊಂಡವರಿಗೆ ಸದಾ ಸಹಾಯ ಮಾಡ್ತಿದ್ರು.. ಕಷ್ಟ ಇದೇ ಅಂತ ಗೊತ್ತಾಗುತ್ತಿದ್ದಂತೆ ಅಂಬಿಯ ಹೃದಯ ಕರಗಿ ಹೋಗುತ್ತಿತ್ತು. ಹೌದು ಇದಕ್ಕಾಗಿಯೇ ಕಲಿಯುಗ ಕರ್ಣ ಎಂದೇ ಬಿಂಬಿತರಾಗಿದ್ದರು ಅಂಬರೀಶ್. ಇವ್ರು ಎಷ್ಟೋ ಜನಕ್ಕೆ ಸಹಾಯ ಮಾಡಿದ್ದಾರೆ. ಅದ್ರಲ್ಲಿ ಕೆಲವು ಕಾಣಿಸಿದರೆ ಮತ್ತೆ ಒಂದಷ್ಟು ಕಣ್ಣಿಗೂ ಕಾಣದಷ್ಟು ನಿಗೂಢ.

WhatsApp Group Join Now
Telegram Group Join Now

ಇದಕ್ಕಾಗಿಯೇ ಕಷ್ಟ ಎಂದು ಬಂದವರಿಗೆ ಸದಾ ಸಹಾಯ ಹಸ್ತ ಚಾಚುತ್ತಿದ್ದ ಅಂಬರೀಶ್ ಅವರನ್ನು ಅಭಿಮಾನಿಗಳು ಕಲಿಯುಗದ ಕರ್ಣ ಎಂದೇ ಕರೆಯುತ್ತಿದ್ದರು. ಇನ್ನು ಸ್ಯಾಂಡಲ್‌ವುಡ್‌ನ ರೆಬೆಲ್‌ ಸ್ಟಾರ್‌ ಅಂಬರೀಶ್‌ ಧೋನಿಗೆ ಸಹಾಯ ಮಾಡಿದ್ದರಂತೆ ಎಂಬ ಸಂಗತಿ ಇದೀಗ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಅಂಬರೀಶ್‌ ಅವರ ಪತ್ನಿ ಸಂಸದೆ ಸುಮಲತಾ ಅವರೇ ಹೇಳಿಕೊಂಡಿದ್ದಾರೆ. ಕೂಲ್‌ ಕ್ಯಾಪ್ಟನ್‌ ಎಂದೇ ಖ್ಯಾತರಾದ ಕ್ರಿಕೆಟ್‌ ದಿಗ್ಗಜ ಎಂ.ಎಸ್‌ ಧೋನಿ ಬಗ್ಗೆ ಇಂಟರೆಸ್ಟಿಂಗ್‌ ವಿಚಾರವೊಂದು ಇದೀಗ ಎಲ್ಲ ಕಡೆ ವೈರಲ್ ಆಗ್ತಿದೆ. ಹೌದು ಸುಮಲತಾ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಂಬರೀಶ್ – ಧೋನಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ-ಪ್ರೇರಣಾ ದಂಪತಿ; ಧ್ರುವ ಸರ್ಜಾ 2ನೇ ಮಗು ಮುಂದಿನ ತಿಂಗಳಲ್ಲಿ

ಹಳೆ ಫೋಟೋ ಹಂಚಿಕೊಂಡು ಸಂಸದೆ ಹೇಳಿದ್ದೇನು ಗೊತ್ತಾ?

ಹೌದು ಫೋಟೋ ಹಂಚಿಕೊಂಡಿರೋ ಸುಮಲತಾ ಬೆಲೆ ಕಟ್ಟಲಾಗದ ಫೋಟೋ ಇಂದು ನನಗೆ ಸಿಕ್ಕಿದೆ ಎಂದು ಬರೆದಿದ್ದಾರೆ. ಹೀಗಿರುವಾಗಲೇ ಬೆಂಗಳೂರಿನಲ್ಲಿ ಧೋನಿ ಪಂದ್ಯ ಆಡಲು ಬಂದರು. ಆಗ ಅಂಬರೀಶ್ ಸಹಾಯ ಮಾಡಿದ್ದರು. ಆ ವೇಳೆ ಧೋನಿ ಜೊತೆ ಅಂಬರೀಶ್‌ ಅವರ ಫೋಟೋ ತೆಗೆಯಲಾಗಿತ್ತು. ನಾನು ಆ ಫೋಟೋವನ್ನು ಕಳೆದುಕೊಂಡಿದ್ದೆ. ಸಾಕಷ್ಟು ಹುಡುಕಾಡಿದ್ದೆವು. ಇಂದು ಆ ಫೋಟೋ ಸಿಕ್ಕಿದೆ. ಆದ ಕಾರಣ ಆ ಘಟನೆಯನ್ನು ಮತ್ತೆ ಸ್ಮರಿಸಲು ಸಾಧ್ಯವಾಯಿತು ಎಂದು ಸುಮಲತಾ ಹೇಳಿದ್ದಾರೆ. ಅಸಲಿಗೆ ಆ ಘಟನೆ ಏನಪ್ಪ ಅಂದ್ರೆ ಧೋನಿ ಮೊದಲು ಅಷ್ಟು ಫೇಮಸ್ ಆಗಿರಲಿಲ್ಲ ಆ ಸಂದರ್ಭದಲ್ಲಿ ಕಲಿಯುಗದ ಕರ್ಣ ಮಾಡಿದ ಸಹಾಯ ಈಗ ಸೌಂಡ್ ಮಾಡ್ತಿದೆ. ಹೌದು ಬೆಲೆಕಟ್ಟಲಾಗದ ಫೋಟೋ ಇವತ್ತು ಸಿಕ್ಕಿತು ಎಂದು ಸಂಭ್ರಮ ಹಂಚಿಕೊಂಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್.

2006 ರಲ್ಲಿ ಅಂಬರೀಶ್ ಅವರು ಬೆಂಗಳೂರಿನ ಕೆಎಸ್ ಸಿಎ ಸ್ಟೇಡಿಯಂನಲ್ಲಿ ಎಂ.ಎಸ್.ಧೋನಿಯವರಿಗೆ ವೈಯಕ್ತಿಕವಾಗಿ ಎರಡು ಲಕ್ಷ ರೂಪಾಯಿ ಚೆಕ್ ನೀಡಿ ಶುಭ ಹಾರೈಸಿದ ಫೋಟೋವನ್ನು ಸುಮಲತಾ ಅಂಬರೀಶ್ ಅವರು ಶೇರ್ ಮಾಡಿಕೊಂಡಿದ್ದಾರೆ. ಹೌದು ದೊಡ್ಡ ಕ್ರೀಡಾಪ್ರೇಮಿಯಾಗಿದ್ದ ಅಂಬರೀಶ್ ಅವರು ಕ್ರಿಕೆಟ್ ಆಟದ ಬಗ್ಗೆ ಉತ್ತಮ ಜ್ಞಾನವನ್ನು ಕೂಡ ಹೊಂದಿದ್ದರು. ಅಂಬರೀಶ್ ಅವರು ಅಂದು ಧೋನಿಯವರಿಗೆ ಚೆಕ್ ಕೊಟ್ಟು ಪ್ರೋತ್ಸಾಹಿಸಿದ ಫೋಟೋ ಕಳೆದುಹೋಗಿದ್ದು, ಬಹಳ ಕಾಲದ ನಂತರ ಸುಮಲತಾ ಅವರಿಗೆ ಸಿಕ್ಕಿದೆ. ಇದು ಆವತ್ತಿನ ದಿನಗಳನ್ನು ಅವರಿಗೆ ನೆನಪಿಸಿದೆ. ಈ ಫೋಟೋವನ್ನು ಅವರು ಧೋನಿಯವರಿಗೂ ಟ್ಯಾಗ್ ಮಾಡಿದ್ದು, “ಈ ಘಳಿಗೆ ನಿಮಗೆ ನೆನಪಿರಲಿಕ್ಕಿಲ್ಲ, ಆದರೆ ನಿಮ್ಮ ಸಾಧನೆ ನಿಜಕ್ಕೂ ದೇಶಕ್ಕೆ ಹೆಮ್ಮೆ ತರುವಂತದ್ದು” ಎಂದು ಬರೆದಿದ್ದಾರೆ.

ಅಂದು ಧೋನಿಯ ತಂದೆ ಹೇಳಿದ ಮಾತಿನಿಂದ ಭಾವುಕರಾಗಿದ್ದರಂತೆ ಅಂಬರೀಷ್

ಇನ್ನು ಸಹಾಯ ಮಾಡುವ ಮೊದಲು ಅಂಬರೀಶ್ ಅವರು ಧೋನಿ ಅವ್ರ ತಂದೆಯ ಮಾತುಗಳನ್ನ ಕೇಳಿದ್ರಂತೆ. ಹೌದು ಮೊದಲು ಒಮ್ಮೆ ಧೋನಿಯವರ ತಂದೆಯವರ ಸಂದರ್ಶವನ್ನು ಟಿವಿಯಲ್ಲಿ ನೋಡುತ್ತಿದ್ದರಂತೆ. ಆ ದಿನಗಳಲ್ಲಿ ಧೋನಿ ಇನ್ನು ಇಷ್ಟು ಪ್ರಸಿದ್ಧಿಗೆ ಬಂದಿರಲಿಲ್ಲ. ಉದಯೋನ್ಮುಖ ಆಟಗಾರರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದರು. ಆಗ ಅವರನ್ನು ನೋಡಲು ಮನೆಗೆ ಅತಿಥಿಗಳು ಬರುತ್ತಿದ್ದರು. ಆದರೆ ಬಂದವರಿಗೆ ಕುಳಿತುಕೊಳ್ಳಲು ಸರಿಯಾಗಿ ಆಸನದ ವ್ಯವಸ್ಥೆ ಇರಲಿಲ್ಲ. ಅಂದ್ರೆ ಕುಳಿತುಕೊಳ್ಳಲು ಸೋಫ ಚೇರ್ ಹೀಗೆ ಇತ್ಯಾದಿ ವ್ಯವಸ್ಥೆ ಇರಲಿಲ್ವಂತೆ. ಈ ಮಾತನ್ನು ಧೋನಿಯವರ ತಂದೆಯವರು ಹೇಳಿದ್ದನ್ನು ಕೇಳಿ ಅಂಬರೀಶ್ ಭಾವುಕರಾಗಿದ್ದರಂತೆ.

ಆಗ ತೀರ್ಮಾನ ಮಾಡಿದ ಅಪ್ಪಟ ಕ್ರೀಡಾಭೀಮಾನಿ ಕಲಿಯುಗದ ಕರ್ಣ ಅಂಬರೀಶ್ ಧೋನಿಯವರಿಗೆ ಸಹಾಯ ಮಾಡುವ ಮನಸ್ಥಿತಿಗೆ ಬರುತ್ತಾರೆ. ಅದಕ್ಕೆ ಉತ್ತೇಜನ ನೀಡುವಂತೆ ಬೆಂಗಳೂರಿನಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ನೋಡಲು ಅಂಬಿ ಕೂಡ ಹೋಗಿರುತ್ತಾರೆ ಈ ವೇಳೆ ಧೋನಿ ಅವ್ರನ್ನ ಭೇಟಿ ಮಾಡಿ ಪ್ರೋತ್ಸಾಹಿಸಿ 2ಲಕ್ಷ ರೂಪಾಯಿಯ ಚೆಕ್ ನೀಡಿ ಹುರುಪು ತುಂಬಿದ್ದ ಅಂದಿನ ಫೋಟೊ ಇದೀಗ ಸಂಸದೆ ಸುಮಲತಾ ಅವ್ರ ಕೈಗೆ ಸಿಕ್ಕಿದ್ದು ಇದೀಗ ಆ ಫೋಟೊ ಹಂಚಿಕೊಂಡು ಹಳೆ ವಿಚಾರ ನೆನಪಿಸಿಕೊಂಡು ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಭಾವುಕಾರಾಗಿದ್ದು ಧೋನಿಯವರಿಗೂ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ. 

ಇದನ್ನೂ ಓದಿ: ನಮ್ಮ ಸ್ಯಾಂಡಲ್ ವುಡ್ ನಟ ನಟಿಯರ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೇಗಿತ್ತು ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram