Amruthadhaare Serial: ಅಮೃತಧಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

Amruthadhaare Serial: ತನ್ನ ವಿಭಿನ್ನ ರೀತಿಯ ಶೋ ಮತ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ 2018 ರಿಂದ ಇಲ್ಲಿಯವರೆಗೂ ಕರ್ನಾಟಕದ ನಂಬರ್ ಒನ್ ಟಿ ಆರ್ ಪಿ ಬರುವ ವಾಹಿನಿ ಆಗಿದೆ. ಇದೀಗ ಇದೇ ವಾಹಿನಿಯಲ್ಲಿ ವಿನೂತನ ಕಥೆಯೊಂದಿಗೆ ಬರುತ್ತಿರುವ ಹೊಸ ಸೀರಿಯಲ್ ಎಂದರೆ ಅದು ‘ಅಮೃತಧಾರೆ’ ಹೌದು ಕಳೆದ ತಿಂಗಳು ‘ಅಮೃತಧಾರೆ’ ದಾರಾವಾಹಿ ಮೊದಲ ಪ್ರೋಮೋವನ್ನು ವಾಹಿನಿ ಲಾಂಚ್ ಮಾಡಿತ್ತು. ಪ್ರೋಮೋ ನೋಡಿದ ಕೂಡಲೇ. ಸಾಕಷ್ಟು ಜನರು ಇದು ಜೊತೆ ಜೊತೆಯಲಿ ಸೀರಿಯಲ್ ತರ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಈ ಸೀರಿಯಲ್ ಕಥೆನೇ ಬೇರೆ ಇದೆ ಎಂದು ಪ್ರೊಮೋ ನೋಡಿ ಗೊತ್ತಾಗುತ್ತಿದೆ. ಇದೀಗ ವಾಹಿನಿ ‘ಅಮೃತಧಾರೆ’ ಸೀರಿಯಲ್ ಎರಡನೇ ಪ್ರೊಮೋ ಬಿಟ್ಟಿದ್ದಾರೆ ಹಾಗಾದರೆ ಯಾವಾಗ ಈ ಧಾರಾವಾಹಿ ಬರುತ್ತೆ ಯಾರೆಲ್ಲ ಈ ಧಾರಾವಾಹಿಯಲ್ಲಿ ಇರುತ್ತಾರೆ ನೋಡೋಣ ಬನ್ನಿ. ಮುಂದೆ ಓದಿ..

WhatsApp Group Join Now
Telegram Group Join Now
Image Credit: Zee Kannada

ಧಾರಾವಾಹಿ ಯಾವಾಗ ಬರುತ್ತೆ? ಕಥೆ ಏನು?

ಹುಡುಗ ಹುಡುಗಿ ಹೊಂದಿಕೊಂಡಿದ್ದಾರೆ ಅದೊಂದು ಚೆಂದದ ಕಥೆ ಅವರಿಬ್ಬರೂ ಕಿತ್ತಾಡಿಕೊಂಡರೆ ಅದು ಬೇರೇನೇ ಕಥೆ ಬರುತ್ತಾ ಇದೆ ಒಂದು ಬೊಂಬಾಟ್ ಕಥೆ ಅಮೃತಧಾರೆ(Amruthadhaare Serial) ಮೇ 29 ರಿಂದ ಅಂತ ಹೊಸ ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ಧಾರಾವಾಹಿ ಯಾವ ರೀತಿ ಮೂಡಿ ಬರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ ಅವರು ಉದ್ಯಮಿಯಾಗಿ ಕಾಣಿಸಿಕೊಂಡರೆ, ಛಾಯಾಸಿಂಗ್ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ, ಈ ಧಾರಾವಾಹಿ ಬಡೇ ಅಛೇ ಲಗ್ತೇ ಹೈಂ(Bada achhe lagte hain) ಹೆಸರಿನ ಹಿಂದಿ ಧಾರಾವಾಹಿ ರಿಮೇಕ್ ಎನ್ನಲಾಗಿದೆ. ಅಮೃತಧಾರೆ ಪ್ರೋಮೋ ನೋಡಿದವರಿಗೆ ಜೊತೆ ಜೊತೆಯಲಿ ಧಾರಾವಾಹಿ ನೆನಪಾಗಿದೆ ವಯಸ್ಸಿನ ಅಂತರ ಇರುವ ಹುಡುಗ ಹುಡುಗಿಯ ಪ್ರೇಮ ಕಹಾನಿ ಈ ದಾರಾವಾಹಿಯಲ್ಲಿತ್ತು. ಅಮೃತಧಾರೆ ಕೂಡ ಇದೆ ಈ ರೀತಿ ಇರಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.

ಛಾಯಸಿಂಗ್ ಅವರು 2000 ಇಸವಿಯಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು ಮುನ್ನುಡಿ(Munnudi) ಅವರ ಮೊದಲ ಸಿನಿಮಾ ಹಲವು ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸದ್ಯ ಅವರು ತೆಲುಗು ಸೀರಿಯಲ್ ಒಂದನ್ನು ನಟಿಸುತ್ತಿದ್ದಾರೆ. ರಾಜೇಶ್ ನಟರಂಗ ಕೂಡ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಛಾಯಾಸಿಂಗ್ ಹಾಗೂ ರಾಜೇಶ್ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಈ ಧಾರಾವಾಹಿ ಪ್ರಸಾರವಾಗಲಿ ಅಂತ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಧಾರಾವಾಹಿಗಳಲ್ಲಿ ನಟಿಸೊಲ್ಲ ಕನ್ನಡದಲ್ಲಿ ಅಂತ ಹೇಳುತ್ತಿದ್ದ ಛಾಯಾ ಇದ್ದಕ್ಕಿದ ಹಾಗೆ ಈ ಧಾರಾವಾಹಿ ಒಪ್ಪಿಕೊಂಡಿದ್ದು ಯಾಕೆ ಎಂದು ಅನೇಕರ ಪ್ರಶ್ನೆಯಾಗಿದೆ ಅದರ ಜೊತೆಗೆ ಸಿನಿಮಾದಲ್ಲಿ ಬೇಡಿಕೆ ಇರುವಾಗಲೇ ರಾಜೇಶ್ ಅವರು ಯಾಕೆ ದಾರವಾಹಿಗೆ ಬಂದ್ರು ಅನ್ನುವಂತದ್ದು ಕೂಡ ಅನೇಕರಿಗೆ ಇರುವಂತ ಪ್ರಶ್ನೆ. ಇನ್ನು ಈ ಧಾರಾವಾಹಿ ಹಿಂದಿ ರಿಮೇಕ್ ಎನ್ನುತ್ತಿದ್ದು ಧಾರಾವಾಹಿ ತಂಡ ಇದನ್ನು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಅನುಸಾರವಾಗಿ ಈ ಧಾರಾವಾಹಿಯನ್ನು ತೆಗೆಯುತ್ತಾರ ಎಂದು ನೋಡಬೇಕಿದೆ.

ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ನಟಿ ಅಭಿನಯ! ಮತ್ತೊಂದು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿರುವ ನಟಿ

ಇದನ್ನೂ ಓದಿ: “ಮೀಡಿಯಾಗಳು ನಾನು ದರ್ಶನ್ ಫ್ಯಾನ್ ಅಂತ ಸಫೋರ್ಟ್ ಮಾಡ್ಲಿಲ್ಲ” -ಚಂದನ್ ಗೌಡ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram