ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಕೋಲಾಹಲ; ಡ್ರೋನ್ ಪ್ರತಾಪ್ ವಿರುದ್ಧ ಗರಂ ಆದ ಮನೆ ಮಂದಿ

ಡ್ರೋನ್ ಪ್ರತಾಪ್ ಕಾಗೆ ಹಾರಿಸೋದ್ರಾ ಮೂಲಕವೇ ಸಾಕಷ್ಟು ಫೇಮಸ್ ಆಗಿ ಟ್ರೋಲ್ ಗಳಿಗೆ ಗುರಿಯಾಗುವ ಮೂಲಕವೇ ಇದೀಗ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಹೌದು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧೆಯಾಗಿ ಅಸಲಿ ಆಟ ಶುರು ಮಾಡಿದ್ದಾರೆ. ಮೊದಲ ವಾರವೇ ಇದೀಗ ಬಿಗ್ ಬಿ ಮನೆಯಲ್ಲಿ ಡ್ರೋನ್ ವಿಚಾರವಾಗಿ ಕೋಲಾಹಲ ಸೃಷ್ಟಿ ಆಗಿ ಹೋಗಿದೆ. ಹೌದು ಕರ್ನಾಟಕದ ಯುವಕ ಡ್ರೋನ್‌ ಪ್ರತಾಪ್‌ ಹಿಂದೊಮ್ಮೆ ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ತುಂಬಾ ಫೇಮಸ್‌ ಆಗಿದ್ದರು. ಡ್ರೋನ್‌ ವಿಜ್ಞಾನಿ ಎಂದೇ ಗುರುತಿಸಿಕೊಂಡಿದ್ದರು.
ತಾನು ಜರ್ಮನಿಗೆ ಹೋದ ಕಥೆಯನ್ನು, ಜೀವನದ ಸಾಹಸವನ್ನು ತನ್ನದೇ ಬಣ್ಣದ ಮಾತಿನಲ್ಲಿ ಹೇಳುತ್ತಿದ್ದರೆ ಸಾಕಷ್ಟು ಜನರು ಸ್ಪೂರ್ತಿ ಹೊಂದಿದ್ದರು, ಅಬ್ಬಾ ಎಂಥ ಸಾಧನೆ ಈತನದು ಅಂತ ಪ್ರತಿಯೊಬ್ಬರೂ ಮಾತನಾಡಿಕೊಳ್ಳುತ್ತಿದ್ರು. ಅಲ್ದೇ 22 ವರ್ಷ ವಯಸ್ಸಿಗೆ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಇ-ತ್ಯಾಜ್ಯದಿಂದ ತಯಾರಿಸಿದ್ದೆ ಅಂತ ಬಿಲ್ಡಪ್ ತೆಗೆದುಕೊಂಡು ತನ್ನನ್ನ ತಾನು ಸಮರ್ಥಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ತನ್ನ ಸಾಧನೆಯ ಕುರಿತು ಯಾವುದೇ ದಾಖಲೆ ಒದಗಿಸಲು ಈತನಿಗೆ ಸಾಧ್ಯವಾಗಿರಲಿಲ್ಲ.

WhatsApp Group Join Now
Telegram Group Join Now

ಹೌದು ಈತನ ಸಾಧನೆ ಕುರಿತಾದ ವರದಿಗಳನ್ನು ನೋಡಿದ ಬಳಿಕ ಈತನನ್ನು ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಸೇರ್ಪಡೆ ಮಾಡಬೇಕು ಎಂಬ ಕೂಗು ಸಹ ಕೇಳಿಬಂದಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕಡೆಯಿಂದ ಈ ಆಫರ್‌ ಬಂದಿತ್ತು ಅನ್ನೊ ವಿಚಾರ ಕೂಡ ಹರಿದಾಡಿತ್ತು. ಈ ಮಧ್ಯೆ ಈತನ ಸಾಧನೆಯ ಕುರಿತು ಪ್ರಚಾರ ಹೆಚ್ಚಾದ ಸಮಯದಲ್ಲಿ ಈತನ ಸಾಧನೆಯ ಕುರಿತು ಮಾಧ್ಯಮಗಳಿಗೆ ಸಂದೇಹ ಬಂತು. ಈತನಲ್ಲಿ ದಾಖಲೆ ಕೇಳಲು ಆರಂಭಿಸಿದಾಗ ಈತನ ಸುಳ್ಳಿನ ಮುಖವಾಡ ಕಳಚಿಬಿತ್ತು. ಇದೀಗ ಇದೆ ವಿಚಾರ ಮತ್ತೆ ಬಿಗ್ ಬಾಸ್ ನಲ್ಲಿ ಪ್ರತಿಧ್ವನಿಸಿ ಮನೆ ಮಂದಿ ಡ್ರೋನ್ ಪ್ರತಾಪ್ ವಿರುದ್ಧ ತಿರುಗಿ ಬಿದಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅಸಲಿ ಆಟ ಈಗ ಶುರು ಅಂದ್ರು ವೀಕ್ಷಕರು

ಹೌದು ಡ್ರೋನ್ ಪ್ರತಾಪ್ ಅವರು ಸಾಕಷ್ಟು ಚರ್ಚೆಗೆ ಒಳಗಾದವರು. ಎಲ್ಲರಿಗೂ ಗೊತ್ತಿರುವಂತೆ ತಾವೇ ಡ್ರೋನ್ ತಯಾರಿಸಿದ್ದಾಗಿ ಹೇಳಿದ್ದರು. ಇದನ್ನು ಅನೇಕರು ನಂಬಿದ್ದರು. ಅವರಿಗೆ ಸಾಕಷ್ಟು ಪ್ರಚಾರ ನೀಡಲಾಯಿತು. ಜಗ್ಗೇಶ್ ಸೇರಿ ಅನೇಕರು ಡ್ರೋನ್ ಪ್ರತಾಪ್ ಅವರನ್ನು ಹೊಗಳಿದರು. ಯುವ ವಿಜ್ಞಾನಿ ಎಂದೆಲ್ಲ ಅವರನ್ನು ಕರೆಯಲಾಯಿತು. ಆದರೆ, ಅವರು ಹೇಳಿದ್ದು ಸುಳ್ಳು ಎಂಬುದು ಆ ಬಳಿಕ ಗೊತ್ತಾಯಿತು. ಈ ಟ್ರೋಲ್ ಗಳ ಮಧ್ಯಯೇ ಈಗ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಲ್ಲಿಯೂ ಅವರನ್ನು ಡೋಂಗಿ ಎಂದು ಕರೆಯಲಾಗಿದೆ.

ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಟ್ರೋಲ್​ಗೆ ಒಳಗಾಗುತ್ತಾರೆ. ಈಗ ಅವರು ತಮ್ಮದೇ ಆಫೀಸ್​ ಆರಂಭಿಸಿದ್ದಾರೆ. ಔಷಧ ಸಿಂಪಡನೆಗೆ ಡ್ರೋನ್​ನ ಅವರು ಬಾಡಿಗೆ ನೀಡುತ್ತಾರೆ. ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಬಂದಿದೆ. ತುಕಾಲಿ ಸಂತೋಷ್ ಅವರು ಪ್ರತಾಪ್​ನ ಕೆಣಕಿದ್ದಾರೆ. ಪ್ರತಾಪ್ ಅವರ ಡ್ರೋನ್ ವಿಚಾರ ಇಟ್ಟುಕೊಂಡು ಮನೆಯವರೆಲ್ಲ ಆಡಿಕೊಂಡಿದ್ದಾರೆ.

ಹೌದು ಡ್ರೋನ್​ನ ಇವರೇ ತಯಾರಿಸುವುದಲ್ಲ. ಬೇರೆ ಕಡೆಯಿಂದ ತಂದು ಇವರು ಬಾಡಿಗೆ ಕೊಡೋದು ಅಷ್ಟೇ ಎಂದು ಹೇಳಿಕೊಂಡು ತುಕಾಲಿ ಸಂತೋಷ್ ಕಾಲೇಳೆದಿದ್ದಾರೆ. ಇದನ್ನು ಕೇಳಿ ಪ್ರತಾಪ್​ಗೆ ಸಿಟ್ಟೇ ಬಂತು. ಬಿಸ್ನೆಸ್ ಬಗ್ಗೆ ಮಾತನಾಡೋದಾದರೆ ಕಚೇರಿಗೆ ಬನ್ನಿ, ಇಲ್ಲಿ ಆ ಬಗ್ಗೆ ಮಾತನಾಡಬೇಡಿ ಎಂದು ಸಿಟ್ಟಲ್ಲೇ ಹೇಳಿದರು. ಈ ಮಧ್ಯೆ ಸ್ನೇಹಿತ್ ಎಂಟ್ರಿ ಆಗಿದ್ದು ಇನ್ನಷ್ಟು ಚರ್ಚೆ ಜೋರಾಗಿದೆ. ಹೌದು ಇದು ಜೆನ್ಯೂನ್ ಕ್ವಶ್ಚನ್ ಆಗಿತ್ತು ಅಂತ ಸ್ಪಷ್ಟನೆ ನೀಡುವ ಕೆಲಸ ಮಾಡ್ತಾರೆ ಸ್ನೇಹಿತ್. ಆಗ ಪ್ರತಾಪ್ ಅವರು ಸಿಟ್ಟಿನಿಂದಲೇ ಉತ್ತರಿಸಿದರು. ಆಗ ಸ್ನೇಹಿತ್ ರೈತರಿಗೆ ಉಪಯೋಗ ಆಗ್ಲಿ ಅಂತ ನಾವು ಕೇಳಿದ್ದು, ಸೀರಿಯಸ್ ಅಗಿನೇ ಮಾತಾಡಿದ್ದು ಅಂತ ಸ್ನೇಹಿತ್ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ನೀನು ಡೋಂಗಿ ಅಂತ ಬಹಳ ಸಿಟ್ಟಿನಿಂದಲೇ ಹೇಳ್ತಾರೆ. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಜೋರಾಗಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದ್ದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೋ ನೋಡಬೇಕಿದೆ.

ಇದನ್ನೂ ಓದಿ: ನಾವು ನಮ್ಮ ಮಗನಿಗೆ ಹೆಣ್ಣು ನೋಡ್ತಿದ್ವಿ, 24ವರ್ಷದವನಿದ್ದಾಗ್ಲೇ ನಿಂತು ಆಗಿ ಬದಲಾದ; ನನ್ನ ಮಗಳ ಬಗ್ಗೆ ಹೆಮ್ಮೆಯಿದೆ ಅಂದ್ರು ಬಿಗ್ ಬಾಸ್ ಸ್ಪರ್ಧಿ ನೀತು ತಾಯಿ

ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬೇಕಾ ಹಾಗಾದರೆ ಈ ಕೃಷಿಯನ್ನು ಆರಂಭಿಸಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram