ನನ್ನ ಸ್ವಂತದವರೇ ನನ್ನ ಮಧ್ಯರಾತ್ರಿ ಒಂದು ಹೆಣ್ಣುಮಗಳು ಅಂತ ನೋಡದೆ ಆಚೆ ಹಾಕಿದ್ರು ಕಹಿ ಅನುಭವ ಹಂಚಿಕೊಂಡ ನಟಿ ತನ್ವಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಅಂತರಪಟ ಧಾರವಾಹಿ ಸದ್ಯಕ್ಕೆ ಸಾಕಷ್ಟು ಜನರ ಮೆಚ್ಚಿನ ಧಾರವಾಹಿಗಳಲ್ಲಿ ಮೊದಲಿಗೆ ನಿಲ್ಲುತ್ತೆ ಹೌದು ಕೆಲವು ಧಾರಾವಾಹಿಗಳು ಆರಂಭದ ದಿನದಿಂದಲೇ, ಮೊದಲ ಎಪಿಸೋಡ್‌ ನಿಂದ ಪ್ರೇಕ್ಷಕರ ಮನಸ್ಸು ಗೆದ್ದು ಮುಂದೆ ಸಾಗುತ್ತವೆ. ಇದೆ ಸಾಲಿನಲ್ಲಿ ಮೊದಲ ಎಪಿಸೋಡ್ ನಲ್ಲೇ ಅಂತರಪಟ ಧಾರವಾಹಿ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೌದು ಈಗ ಆ ಸಾಲಿಗೆ ಹೊಸ ಧಾರಾವಾಹಿ ಅಂತರಪಟ ಸೇರಿಕೊಂಡಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಏಪ್ರಿಲ್ 24ರಿಂದ ಪ್ರಾರಂಭವಾಗಿರುವ ಈ ಧಾರಾವಾಹಿ ಈಗ ಹೊಸ ಕಥಾಹಂದರದ ಮೂಲಕ ಮೆಚ್ಚುಗೆ ಗಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ರೆಗ್ಯುಲರ್‌ ಕಥಾಹಂದರ ಬಿಟ್ಟು ಪ್ರಸಾರವಾಗುತ್ತಿರುವುದೇ ಈ ಜನಪ್ರಿಯತೆಗೆ ಕಾರಣವಾಗಿದ್ದು ಮಲ ತಂದೆಯ ಕಾಟ ಎದುರಿಸುತ್ತಾ ಮನೆಯ ಜವಾಬ್ದಾರಿಯನ್ನೂ ಹೊತ್ತಿರುವ ಆರಾಧನಾಳಿಗೆ ಒಂದು ದೊಡ್ಡ ವೆಡ್ಡಿಂಗ್‌ ಪ್ಲಾನಿಂಗ್‌ ಕಂಪೆನಿ ಕಟ್ಟುವ ಕನಸು.

WhatsApp Group Join Now
Telegram Group Join Now

ನೂರಾರು ಅಡ್ಡಿಗಳನ್ನು ಎದುರಿಸಿ ಆಕೆ ತನ್ನ ಕನಸನ್ನು ನನಸು ಮಾಡುತ್ತಾಳಾ ಎಂಬ ಕುತೂಹಲವೇ ಆರಾಧನಾಳನ್ನ ವೀಕ್ಷಕರ ಮನಸಿಗೆ ಹತ್ತಿರವಾಗಿಸಿದೆ. ನಿರ್ದೇಶಕಿ ಸ್ವಪ್ನಾಕೃಷ್ಣ ಅವರ ಕಲ್ಪನೆಯಲ್ಲಿ ಅರಳುತ್ತಿರುವ ಆರಾಧನಾಳ ಕತೆಯಲ್ಲಿ ಸುಶಾಂತ್‌ ಎಂಬ ಆಗರ್ಭ ಶ್ರೀಮಂತ ಹುಡುಗನೂ ಇದ್ದಾನೆ. ಕನಸಿದ್ದು ಕಾಸಿಲ್ಲದ ಹುಡುಗಿ ಆರಾಧನಾ ಆದರೆ, ಕಾಸಿದ್ದು ಕನಸೇ ಇಲ್ಲದ ಹುಡುಗ ಸುಶಾಂತ್‌ ಅಂಥ ಎರಡು ವಿರುದ್ಧ ಧ್ರುವಗಳು ಮುಖಾಮುಖಿಯಾದಾಗ ಬದುಕು ಪಡೆದುಕೊಳ್ಳುವ ಹೊಸ ವಿನ್ಯಾಸವೇ ಇಲ್ಲಿನ ಕತೆಯಾಗಿದೆ. ಸದ್ಯ ಧಾರವಾಹಿಯಲ್ಲಿ ಮಾಧ್ಯಮ ವರ್ಗದವಳಾಗಿ ಮನೆ ಕಷ್ಟ ಮಲತಂದೆಯಿಂದ ನರಕ ಅನುಭವಿಸುತ್ತಿರ ಈ ರೀಲ್ ಆರಾಧನಾ ರಿಯಲ್ ಆಗಿ ಯಾರು ಅವ್ರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳೋಣ.

ಹೌದು ಉದ್ಯಮಿಯಾಗಬೇಕು ಅಂತ ಕನಸು ಕಾಣುವ ಮಧ್ಯಮ ವರ್ಗದ ಸ್ವಾಭಿಮಾನಿ ಹೆಣ್ಣುಮಗಳು ಆರಾಧನಾ ಇತ್ತ ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ, ತಲೇಲಿ ನೂರಾರು ಐಡಿಯಾಗಳಿದ್ದರೂ, ಜೀವನದಲ್ಲಿ ಕ್ಲಾರಿಟಿಯೇ ಇಲ್ಲದ ಸುಶಾಂತ್ ರಾಜ್ ಪ್ರಧಾನ್ ನಡುವಿನ ಕಥೆಯೇ ಅಂತರಪಟ. ಇದರ ಮಧ್ಯೆ ಅಪ್ಪನ ಪ್ರೀತಿ ಕಾಣ ಬಯಸಿದ ಮಗಳೇ, ಅಪ್ಪನ ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ. ಅಪ್ಪ ಕುಡಿದು, ಕುಡಿದು ಹೆಚ್ಚು ಸಾಲ ಮಾಡಿ, ಮನೆ ಬಳಿಯೇ ಸಾಲಗಾರರು ಬರುತ್ತಿರುತ್ತಾರೆ ಇದೆಲ್ಲವನ್ನ ಧಾರಾವಾಹಿಯ ನಾಯಕಿ ಪಾತ್ರಧಾರಿ ಆರಾಧನಾ ನಿಭಾಯಿಸಿಕೊಂಡು ಹೇಗೆ ತನ್ನ ಗುರಿ ತಲುಪುತ್ತಾಳೆ ಅನ್ನೋದನ್ನ ಬಹಳ ಸುಂದರವಾಗಿ ಕಟ್ಟಿಕೊಡಲಾಗುತ್ತಿದ್ದೂ, ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವ ಆರಾಧನಾ ಪಾತ್ರಧಾರಿಯ ನಿಜವಾದ ಹೆಸರು ತನ್ವಿ ಬಾಲರಾಜ್. ಇವರು ಕಿರುತೆರೆಗೆ ಹೊಸಬರಾದ್ರು ಕೂಡ ಕೆಲವೊಂದು ಶೋಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ನಟಿಸಿದ್ದಾರೆ.

ಇದನ್ನೂ ಓದಿ: ಸಂಜು ಬಸಯ್ಯ ಮತ್ತು ಪಲ್ಲವಿ ಮದುವೆ ವೈಬ್ಸ್; ಅದ್ದೂರಿಯಾಗಿ ನಡೀತು ಸಂಜು ವೇಡ್ಸ್ ಪಲ್ಲವಿ ಮದುವೆ

ಮಧ್ಯಾರಾತ್ರಿಲಿ ಒಬ್ಬಳೇ ಹೊರಗೆ ಬಂದಿದ್ದನ್ನ ಮರೆಯೋಕಾಗಲ್ಲ ಎಂದ ಆರಾಧನಾ!

ಇವ್ರು ವೃತ್ತಿಯಲ್ಲಿ ಬಹಳ ವರ್ಷಗಳಿಂದಲೂ ಡ್ಯಾನ್ಸರ್. ಇನ್ನು ಅಂತರಪಟ ಇವ್ರಿಗೆ ಮೊದಲ ಧಾರಾವಾಹಿ. ತನ್ವಿ ಅವರು ಮೂಲತಃ ಮಂಡ್ಯದ ಹುಡುಗಿ. ಇವರಿಗೆ ಬಾಲ್ಯದಿಂದಲೂ ನಟಿಯಾಗಬೇಕೆಂಬ ಆಸೆಯಂತೆ, ಆ ಆಸೆ ಇದೀಗ ಅಂತರಪಟ ಮೂಲಕ ನೆರವೇರಿದೆ. ತನ್ವಿ ಬಾಲರಾಜ್ ಡ್ಯಾನ್ಸರ್ ಆಗಿರೋದ್ರಿಂದ ಇನ್‍ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್ಸ್ ಮಾಡುವ ಮೂಲಕ ಈಗಾಗಲೇ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗ ಧಾರಾವಾಹಿಯಲ್ಲೂ ಖ್ಯಾತಿ ಪಡೆಯುತ್ತಿದ್ದಾರೆ. ಇನ್ನು ಸಾಗೋ ದಾರಿಯಲ್ಲಿ ನಿಲ್ಲೋದಕ್ಕೆ ಸಾವಿರ ಕಾರಣ ಸಿಗ್ತಾವೆ. ಅದೆಲ್ಲಾ ದಾಟಿ ಮುಂದೆ ಹೋಗೋದಕ್ಕೆ ಒಂದು ಕನಸು ಸಾಕು ಅನ್ನೋ ಆರಾಧನಾ ನಿಜ ಜೀವನದಲ್ಲೂ ಸಾಕಷ್ಟು ನೋವು ಅವಮಾನಗಳನ್ನ ಎದುರಿಸಿದ್ದಾರೆ.

ಇದೀಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಆರಾಧನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಹೌದು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ತನ್ವಿಗೆ ಚಿಕ್ಕಂದಿನಿಂದಲೂ ನೃತ್ಯ ಅಂದ್ರೆ ಹುಚ್ಚು ಪ್ರೀತಿ. ಓದುವುದರ ಜೊತೆ ಜೊತೆಗೆ ನೃತ್ಯ ಕಲಿತು ಶೋಗಳನ್ನ ಮಾಡಿಕೊಳ್ಳುತ್ತಾ ಜೀವನವನ್ನ ಬಹಳ ಕಷ್ಟದಿಂದಲೇ ಕಳೆದಿದ್ದರೆ. ಅಲ್ದೇ ಅಪ್ಪನ ವಿರೋಧದ ಮಧ್ಯೆಯು ಡಾನ್ಸ್ ಬಿಡದ ತನ್ವಿ ಅದರಲ್ಲೇ ಮುಂದುವರೆದು ಕೆಲ ಸಮಯ ಅಪ್ಪ ಅಮ್ಮನಿಗಾಗಿ ಖಾಸಗಿ ಕಂಪನಿಯೊಂದರಲ್ಲೂ ಕೆಲಸ ಮಾಡಿ ನಂತರ ಡಾನ್ಸ್ ಬಿಡಲಾಗದೆ ಕೆಲಸವನ್ನೇ ಬಿಟ್ಟು ಮತ್ತೆ ಡ್ಯಾನ್ಸ್ ಶೋ ಗಳನ್ನ ಮಾಡಲು ಶುರು ಮಾಡ್ತಾರೆ ಈ ಮಧ್ಯೆ ಕಿರುತೆರೆ ನಂಟು ಬೆಳೆದು ಅಂತರಪಟ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ. ಆದ್ರೆ ಇಲ್ಲಿಯವರೆಗೂ ಅವ್ರು ನಡೆದು ಬಂದಿರುವ ಹಾದಿ ಅಷ್ಟು ಸುಲಭದಲ್ಲ. ಸಾಕಷ್ಟು ನೋವು ಅವಮಾನ ಅನುಭವಿಸಿದ್ದಾರೆ. ಅಲ್ದೇ ತನ್ನವರು ಅಂದುಕೊಂಡಿದ್ದವರೇ ನಡುದಾರಿಯಲ್ಲಿ ಹೇಗೆ ಕೈ ಬಿಟ್ರು ಆಗ ಅವ್ರು ಪಟ್ಟ ಕಷ್ಟ ಎಲ್ಲವನ್ನು ಕೂಡ ಹೇಳಿಕೊಂಡಿದ್ದಾರೆ.

ಆರಾಧನಾ ಅವ್ರಿಗೆ ಇಬ್ಬರು ಅಕ್ಕಂದಿರು ಅದ್ರಲ್ಲಿ ಎರಡನೆ ಅಕ್ಕನ ಜೊತೆಗೆ ಬೆಂಗಳೂರಿನಲ್ಲಿ ಆರಾಧನಾ ಇರ್ತಾರೆ ಆದ್ರೆ ಅದು ಅವ್ರ ಅಕ್ಕನ ಗಂಡನಿಂಗೆ ಇಷ್ಟವಿರೋದಿಲ್ಲ. ಹಾಗಂತ ಆರಾಧನ ಮುಂದೆ ಏನನ್ನು ಕೂಡ ಮಾತಾಡೋದಿಲ್ಲ ಅವ್ರ ಅಕ್ಕನ ಬಳಿ ಹೇಳ್ತಾರುತ್ತರಂತೆ. ಹೀಗೆ ಒಮ್ಮೆ ಕುಡಿದು ಬಂದು ಮನೆಯಿಂದ ಆಚೆ ಹೋಗುವಂತೆ ಗಲಾಟೆ ಮಾಡಿ ಬಹಳ ಕೆಟ್ಟದಾಗಿ ಮಾತನಾಡಿ ಬಹಳ ಹಿಂಸೆ ಕೊಡುತ್ತಾರಂತೆ ಆಗ ಮಧ್ಯಾರಾತ್ರಿ ಅಂತಲೂ ನೋಡದೆ ಆರಾಧನಾ ಮನೆಯಿಂದ ಆಚೆ ಬಂದುಬಿಡುತ್ತಾರೆ. ಇದೆಲ್ಲಾವನ್ನ ಹೇಳಿಕೊಂಡು ನನ್ನನ್ನ ಈ ಹಂತದಲ್ಲಿ ನೋಡಿ ಕೆಲವ್ರು ಖುಷಿ ಪಟ್ಟು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಆದ್ರೆ ಇನ್ನು ಕೆಲವರು ಇವಳ ಆಗೇ ಹೀಗೆ ಮಾತಾಡ್ತಾರೆ ಬಹಳ ಕೆಟ್ಟದಾಗೇ ಮಾತಾಡ್ತಾರೆ ಆದ್ರೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ನನ್ನಮ್ಮ ಈಗಲೂ ಕೂಡ ಹೂವು ಮಾರಿಯೇ ಬದುಕುತ್ತಿದ್ದಾರೆ. ಇದರ ಬಗ್ಗೆ ನನಗೆ ಹೆಮ್ಮೆಯಿಂದೆ ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲ್ಲ ಎಂದ ದುನಿಯಾ ವಿಜಯ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram