ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ನಿಶ್ಚಿತಾರ್ಥ ಸಂಭ್ರಮ; ಸುಂದರ ಕ್ಷಣಗಳು

Aishwarya Engagement: ಅರ್ಜುನ್ ಸರ್ಜಾ ಅವರು ತಮ್ಮ ಮಗಳ ನಿಶ್ಚಿತಾರ್ಥವನ್ನು ಅಕ್ಟೋಬರ್ 22ರಂದು ಚೆನ್ನೈಯಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಸೇರಿದಂತೆ ಅರ್ಜುನ್ ಸರ್ಜಾ ಅವರ ಕುಟುಂಬ ಸದಸ್ಯರೆಲ್ಲರೂ ಭಾಗಿಯಾಗಿದ್ದರು. ಅರ್ಜುನ್ ಸರ್ಜಾ ಅವರು ಬಹಳ ವರ್ಷಗಳ ಹಿಂದೆ ಚೆನ್ನೈನಲ್ಲಿ ಒಂದು ಆಂಜನೇಯ ದೇವಸ್ಥಾನವನ್ನ ನಿರ್ಮಿಸಿದ್ದಾರೆ. ಅದೇ ದೇವಸ್ಥಾನದಲ್ಲಿ ಮಗಳು ಹಾಗೂ ಭಾವಿ ಅಳಿಯ ಉಂಗುರವನ್ನು ಬದಲಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಅಳಿಯ ಬೇರಾರು ಅಲ್ಲ, ತಮಿಳು ಚಿತ್ರರಂಗದ ಹಾಸ್ಯ ನಟ ಮತ್ತು ಪೋಷಕ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ. ಐಶ್ವರ್ಯ ಸರ್ಜಾ ಹಾಗೂ ಉಮಾಪತಿ ರಾಮಯ್ಯ ಅವರು ಬಾಲ್ಯದಿಂದಲೇ ಸ್ನೇಹಿತರಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿ, ಈಗ ತಾನೆ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಐಶ್ವರ್ಯ ಹಾಗೂ ಉಮಾಪತಿ ಜೋಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

WhatsApp Group Join Now
Telegram Group Join Now

ಐಶ್ವರ್ಯ ಹಾಗೂ ಉಮಾಪತಿ ರಾಮಯ್ಯ ಅವರು ಬಾಲ್ಯದಲ್ಲಿ ಇರುವಾಗಲೇ ಉತ್ತಮ ಸ್ನೇಹಿತರಾಗಿದ್ದು ನಂತರ ಪ್ರೀತಿಗೆ ತಿರುಗಿ ಈಗ ವಿವಾಹದತ್ತ ಹೆಜ್ಜೆಯನ್ನು ಇಟ್ಟಿದ್ದಾರೆ. ಇವರ ಮದುವೆಗೆ ಎರಡು ಕುಟುಂಬ ಸದಸ್ಯರು ಕೂಡ ಒಪ್ಪಿಗೆಯನ್ನ ಸೂಚಿಸಿದ್ದು ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವರು ನಿರ್ಮಾಣ ಮಾಡಿದ ಆಂಜನೇಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ನೆರವೇರಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅದ್ದೂರಿಯಾಗಿ ನಡೆಯಿತು ಐಶ್ವರ್ಯ ಹಾಗೂ ಉಮಾಪತಿ ಎಂಗೇಜ್ಮೆಂಟ್

ಅಕ್ಟೋಬರ್ 27ರಂದು ಐಶ್ವರ್ಯ ಸರ್ಜಾ ಅವರ ಎಂಗೇಜ್ಮೆಂಟ್ ನಡೆದಿದ್ದು, ಅರ್ಜುನ್ ಸರ್ಜಾ ಅವರು ಖುಷಿಯಿಂದ ಗುಲಾಬಿ ದಳದ ಡೆಕೋರೇಷನ್ ಮಾಡಿ ಮಗಳು ಅಳಿಯನಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಕುಟುಂಬದ ಸದಸ್ಯರೆಲ್ಲರ ಆಶೀರ್ವಾದವೂ ಕೂಡ ದೊರೆತಿದೆ. ಅಷ್ಟೇ ಅಲ್ಲದೆ ಈಗಷ್ಟೇ ಗಂಡು ಮಗುವಿನ ತಂದೆಯಾಗಿರುವ ಧ್ರುವ ಸರ್ಜಾ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆದರೆ ಈ ಸಮಯದಲ್ಲಿ ಮೇಘನಾ ರಾಜ್ ಅಲ್ಲೆಲ್ಲೂ ಕಾಣಿಸಿಕೊಳ್ಳಲಿಲ್ಲ. ಮೇಘನಾ ರಾಜ್ ಪ್ರತಿಯೊಂದು ಸುಖ ದುಃಖಗಳಲ್ಲಿಯೂ ಬೆನ್ನೆಲುಬಾಗಿ ನಿಂತ ಅರ್ಜುನ್ ಸರ್ಜಾ ಅವರ ಮಗಳ ನಿಶ್ಚಿತಾರ್ಥಕ್ಕೆ ಮೇಘನ ರಾಜ್ ಯಾಕೆ ಬರಲಿಲ್ಲ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆದರೆ ಅಸಲಿ ಕಥೆ ಏನು ಅಂದರೆ ಮೇಘನಾ ರಾಜ್ ಅವರು ಇತ್ತೀಚಿಗಷ್ಟೇ ತಮಿಳು ಚಿತ್ರದ ಶೂಟಿಂಗ್ ಮುಗಿಸಿದ್ದು, ಸಿನಿಮಾದ ಪ್ರಮೋಷನ್ ಗೆ ಅಂತ ಹೋಗಿದ್ದಾರೆ. ಆದ್ದರಿಂದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಅದೇನೆ ಇದ್ದರೂ ಕೂಡ ಐಶ್ವರ್ಯ ಹಾಗೂ ಉಮಾಪತಿ ಇಬ್ಬರು ಅದ್ದೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಮದುವೆಯ ದಿನವನ್ನ ಎಣಿಸುವುದರಲ್ಲಿ ನಿರತರಾಗಿದ್ದಾರೆ. ಮದುವೆಯ ಡೇಟ್ ಯಾವಾಗ ಎಂದು ನಿಗದಿಯಾಗಿಲ್ಲವಾದ್ದರಿಂದ, ಐಶ್ವರ್ಯ ಅವರ ಅಭಿಮಾನಿಗಳೆಲ್ಲರಿಗೂ ಮದುವೆ ಯಾವಾಗ ಎಂಬುದು ಪ್ರಶ್ನೆಯಾಗಿದೆ.

ಐಶ್ವರ್ಯ ಸರ್ಜಾ ಹಾಗೂ ಉಮಾಪತಿ ರಾಮಯ್ಯ ಅವರ ಮದುವೆ ದಿನಾಂಕವು ಸದ್ಯದಲ್ಲೇ ನಿಗದಿಯಾಗುವುದರಲ್ಲಿದ್ದು, ನಿಗದಿತ ದಿನಾಂಕವನ್ನು ತಿಳಿಸುವುದಾಗಿ ಅರ್ಜುನ್ ಸರ್ಜಾ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಈಗಷ್ಟೇ ನಿಶ್ಚಿತಾರ್ಥದ ಸಂಭ್ರಮವನ್ನು ಮುಗಿಸಿ ಮದುವೆಯ ದಿನವನ್ನು ಲೆಕ್ಕ ಹಾಕುವುದರಲ್ಲಿ ನಿರತರಾಗಿದ್ದಾರೆ. ಸದ್ಯದಲ್ಲೇ ಅಭಿಮಾನಿಗಳಿಗೆ ಮದುವೆಯ ಕರೆಯೋಲೆಯನ್ನ ಕಳಿಸುವುದಾಗಿ ಹೇಳಿದ್ದಾರೆ. ಅರ್ಜುನ್ ಸರ್ಜಾ ಅವರಂತೂ ಮಗಳ ಮದುವೆಯ ಸಂಭ್ರಮಕ್ಕಾಗಿ ಕಾಯುತ್ತಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ರೈತ ಸಂತೋಷ್; ಜೈಲಿನಿಂದ ಡೈರೆಕ್ಟ ಆಗಿ ಬಿಗ್ ಬಿ ಮನೆಗೆ ವರ್ತೂರ್ ಸಂತೋಷ್

ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram