Avinash: ಮಾಳವಿಕಾ-ಅವಿನಾಶ್ ಮನೆಯ ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ ಇಟ್ಟಿರುವುದು ಯಾಕೆ?

Avinash: ಈ ವಾರದ ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮ ದಲ್ಲಿ ಈ ವಾರದ ಅತಿಥಿಯಾಗಿ ನಟ ಅವಿನಾಶ್ ಅವ್ರು ಸಾಧಕರ ಕುರ್ಚಿಯನ್ನೆರಿದ್ರು. ಈ ಸಂಚಿಕೆ ತುಂಬಾ ಅದ್ಭುತವಾಗಿ ಮುಡಿಬಂದಿದೆ. ಹೌದು ಈ ಸಂಚಿಕೆ ಯಲ್ಲಿ ತಮ್ಮ ಜೀವನದ ಅನೇಕ ಸಂಗತಿಗಳನ್ನು ವೀಕ್ಷಕರ ಮುಂದಿಟ್ರು ಅದರಲ್ಲಿ ವಿಷ್ಣುದಾದಾ ಬಗೆಗಿನ ಇಂಟರ್ಸ್ಟ್ಟಿಂಗ್ ವಿಷಯ ಒಂದನ್ನ ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ವಿಷ್ಣುವರ್ಧನ್ ಅವ್ರು ಹಾಗೂ ಇವ್ರ ಕುಟುಂಬಕ್ಕೂ ಇರೋ ನಂಟಾದ್ರೂ ಏನು, ವಿಷ್ಣು ದಾದ ನಮ್ಮ ಪಾಲಿನ ದೇವ್ರು ಅಂದಿದ್ದೆಕೆ ನೋಡೋಣ ಬನ್ನಿ.

WhatsApp Group Join Now
Telegram Group Join Now

ಜನಪ್ರಿಯ ಪೋಷಕ ನಟ ಅವಿನಾಶ್ ಅವ್ರು ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ. ಬಹುತೇಕ ಎಲ್ಲ ಸ್ಟಾರ್ ನಟ ನಟಿಯರೊಂದಿಗೆ ಅವಿನಾಶ್ ಅವ್ರು ತೆರೆ ಹಂಚಿಕೊಂಡಿದ್ದಾರೆ. ಹೌದು ಅವಿನಾಶ್ ಅವ್ರು ನಟನ ಕ್ಷೇತ್ರಕ್ಕೆ ಕಾಲಿಟ್ಟು ನಟನೆ ಆರಂಭಿಸಿ ಮೂವತ್ತು ವರ್ಷಗಳಿಗೂ ಹೆಚ್ಚಾಗಿದೆ. ಈ ಮೂವತ್ತು ವರ್ಷಗಳಲ್ಲಿ ಹಲವು ನಾಯಕ ನಟರ ಜೊತೆ ಪೋಷಕ ಪಾತ್ರ ಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವಿನಾಶ್ ಈಗಲೂ ಬೇಡಿಕೆ ಯನ್ನು ಉಳಿಸಿಕೊಂಡಿದ್ದಾರೆ. ಕೈತುಂಬಾ ಅವಕಾಶಗಳು ಈಗಲೂ ಅವರ ಬಳಿ ಇವೆ. ಇಂಗ್ಲೀಷ್ ಉಪನ್ಯಾಸಕ ಆಗಿದ್ದ, ಕನ್ನಡ ಉಚ್ಛಾರಣೆಯೇ ಬಾರದಿದ್ದ ಅವಿನಾಶ್ ನಟನೆಯ ಕಡೆಗೆ ಹೊರಳಿದ್ದು ಹೇಗೆ? ಅವರು ಸಾಗಿ ಬಂದ ದಾರಿ ಎಂಥಹದ್ದು,ಇದರ ಜೊತೆಗೆ ವಿಷ್ಣುದಾದಾ ಬಗ್ಗೆ ಇವ್ರು ಬಿಚ್ಚಿಟ್ಟ ಒಂದು ಸತ್ಯ ಇದ್ಯಲ್ಲ ನಿಜಕ್ಕೂ ಅದು ಎಲ್ಲರಿಗೂ ಸ್ಫೂರ್ತಿದಾಯಕ. ಅವಿನಾಶ್ ಜೀವನದ ಕೆಲವೊಂದು ವಿಷಯಗಳು ಪ್ರೇಕ್ಷಕರ ಎದುರಿಗೆ ತೆರೆದಿಟ್ಟಿಕೊಂಡವು.

ಇಂಗ್ಲಿಷ್ ಉಪನ್ಯಾಸಕರಾಗಿದ ಅವಿನಾಶ್

ಹೌದು ವಯಸ್ಸು 63 ಆದರು ಈಗಲೂ ಪ್ರತಿದಿನ ಬಿಡದೇ ಅವಿನಾಶ್ ಅವ್ರು ಜಿಮ್ ಮಾಡುತ್ತಾರೆ. ಮಿತ ಆಹಾರ, ಸೇವನೆ ಮಾಡುತ್ತಾ ದೇಹದ ಅರೋಗ್ಯವನ್ನ ಸಮತೋಲನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಅವಿನಾಶ್ ಅವ್ರು. ಇನ್ನು ಯಾರೊಂದಿಗೂ ಭಿನ್ನಾಭಿಪ್ರಾಯಗಳಿಲ್ಲದೆ ಆತ್ಮೀಯವಾಗಿ ನಡೆದುಕೊಳ್ಳೋದ್ರಿಂದ ಇವ್ರು ಎಲ್ಲರ ನೆಚ್ಚಿನ ನಟನಾಗಿದ್ದಾರೆ.. ಹೌದು ಅದ್ಭುತ ಪ್ರತಿಭೆ ಅವಿನಾಶ್ ಮೂಲ ಹೆಸರು ವೈಎನ್ ರವೀಂದ್ರ ಅಂತ ಇವ್ರು ಹುಟ್ಟಿದ್ದು ಚಾಮರಾಜನಗರದ ಯಳಂದೂರಿನಲ್ಲಿ. ತಂದೆ ವಕೀಲರು ಜೊತೆಗೆ ರೈತರೂ ಸಹ ಹೌದು ಇನ್ನು ಅವಿನಾಶ್ ಬಾಲ್ಯ ದಲ್ಲಿ ಬಹಳ ತುಂಟರಾಗಿದ್ದ ಅವಿನಾಶ್, ಊರಿನಲ್ಲಿ ಎಲ್ಲರಿಗೂ ಇವ್ರು ಅಚ್ಚುಮೆಚ್ಚು. ಆದ್ರೆ ಪ್ರಾಥಮಿಕ ಶಿಕ್ಷಣದ ವೇಳೆ ಇಂಗ್ಲೀಷ್ ಸರಿಯಾಗಿ ಬರದೇ ಇದ್ದ ಕಾರಣ ಆ ಭಾಷೆಯ ಮೇಲೆ ಹಿಡಿತ ಸಾಧಿಸಲೇ ಬೇಕು ಎಂದು ಹಠತೊಟ್ಟು ಪದವಿ ಯಲ್ಲಿ ಹಾಗೂ ಎಂಎಯಲ್ಲಿ ಇಂಗ್ಲೀಷ್ ಅನ್ನೇ ಆರಿಸಿಕೊಂಡು ಇಂಗ್ಲೀಷ್ ಉಪನ್ಯಾಸಕರಾದರು.

ಮಾನಸ ಗಂಗೋತ್ರಿ ಯಲ್ಲಿ ಯು ಆರ್ ಅನಂತಮೂರ್ತಿ ಅಂಥಹಾ ಗುರುಗಳ ನೆರಳಲ್ಲಿ ವಿಚಾರಗಳನ್ನು ತಿದ್ದಿಕೊಂಡರು. ಜೊತೆಗೆ ಕಾಲೇಜು ಸಮಯ ದಲ್ಲಿ ಸಿನಿಮಾ ನೋಡುವುದು, ಕ್ರಿಕೆಟ್ ಆಡುವುದು ಇದರ ಜೊತೆ ಜೊತೆಗೆ ನಾಟಕದ ಬಗ್ಗೆ ದೊಡ್ಡ ಮಟ್ಟದ ಆಸಕ್ತಿ ಹೊಂದಿದ್ದ ಅವಿನಾಶ್​ ಒಮ್ಮೆ ಬ್ರಿಟನ್​ನಿಂದ ಬಂದ ನಾಟಕ ನಿರ್ದೇಶಕ ಮಾಡುತ್ತಿದ್ದ ವರ್ಕ್​ಶಾಪ್ ಆಡಿಷನ್​ಗೆ ಸುಮ್ಮನೆ ಹೋಗಿ ಆಯ್ಕೆ ಆಗಿಬಿಟ್ಟರು. ಆ ಒಂದು ತಿಂಗಳ ನಾಟಕ ಕಾರ್ಯಾಗಾರ ಅವರನ್ನು ನಾಟಕ ದತ್ತ ಸೆಳೆದುಬಿಟ್ಟಿತು. ಅದಾದ ಬಳಿಕ ಸ್ಪಂದನಾ ನಾಟಕ ತಂಡ ಸೇರಿಕೊಂಡು ಅಲ್ಲಿ ಹಲವು ನಾಟಕ ಗಳನ್ನು ಮಾಡಿದರು. ಹಲವು ಅತ್ಯದ್ಭುತ ನಿರ್ದೇಶಕರುಗಳ ನಾಟಕಗಳಲ್ಲಿ ಪಾತ್ರಗಳನ್ನು ಮಾಡಿದರು. ಅದೇ ಸ್ಪಂದನಾನಲ್ಲಿ ಅವಿನಾಶ್​ರ ಜೀವದ ಗೆಳೆಯ ಖ್ಯಾತ ನಟ ಡೈನಮಿಕ್ ಸ್ಟಾರ್ ದೇವರಾಜ್ ಪರಿಚಯವಾಗಿದ್ದು. ನಂತರ ಅವಿನಾಶ್ ಅವ್ರು ತಿರುಗಿ ನೋಡಿದ್ದೇ ಇಲ್ಲ. ಹೆಚ್ಚಾಗಿ ಪೋಷಕ ನಟನಾಗಿ ನಟಿಸಿದ್ರೂ ಜನರ ಪ್ರೀತಿ ವಿಶ್ವಾಸಗಳಿಸಿಕೊಂಡಿದ್ದಾರೆ.

ಇದನ್ನು ಓದಿ: ಸೀತಾರಾಮ ಧಾರಾವಾಹಿಯ ಶೂಟಿಂಗ್ ಸಮಯದ ಫೋಟೋಗಳನ್ನು ಹಂಚಿಕೊಂಡ ವೈಷ್ಣವಿ, ಯಾವಾಗ ಪ್ರಸಿರವಾಗುತ್ತೆ ಧಾರಾವಾಹಿ?

ಅವಿನಾಶ್ ಮಾಳವಿಕಾ ಅವರ ದಾಂಪತ್ಯ ಜೀವನ

ಇನ್ನು ನಟಿ ಮಾಳವಿಕ ಅವ್ರನ್ನ ಅವಿನಾಶ್ ಅವ್ರು ಮದುವೆಯಾಗಿದ್ದು ಇನ್ನು ಇಂಟರ್ಸ್ಟ್ರಿಂಗ್. ಯಾಕಂದ್ರೆ ನೋಡಿದವರಿಗೆಲ್ಲ ಇವರದ್ದು ಲವ್ ಮ್ಯಾರೇಜ್ ಇರಬಹುದು ಅನಿಸಿದರೂ, ಇವ್ರದ್ದು ಪಕ್ಕ ಅರೇಂಜ್ಡ್ ಮ್ಯಾರೇಜ್. ಹೌದು ಅವಿನಾಶ್ ಅವರ ನಟನೆ ಮೆಚ್ಚಿ ಹಲವು ಸಿನಿಮಾ ಅವಕಾಶಗಳು ಒಂದರ ಮೇಲೊಂದರಂತೆ ಸಿಗುತ್ತಲೇ ಹೋದವು. ಇದೆ ಸಂದರ್ಭದಲ್ಲಿ ಟಿ.ಎನ್.ಸೀತಾರಾಮ್ ನಿರ್ದೇಶನದ ಮಾಯಾಮೃಗ ಧಾರಾವಾಹಿಯಲ್ಲಿ ಅವಿನಾಶ್ ಅವ್ರಿಗೆ ಅವರ ನಟನೆ ಮೆಚ್ಚಿ ಹಲವು ಸಿನಿಮಾ ಅವಕಾಶಗಳು ಒಂದರ ಮೇಲೊಂದರಂತೆ ಸಿಗುತ್ತಲೇ ಹೋದವು. ಹೀಗಿದ್ದಾಗ ಟಿ.ಎನ್.ಸೀತಾರಾಮ್ ನಿರ್ದೇಶನದ ಮಾಯಾಮೃಗ ಧಾರಾವಾಹಿಯಲ್ಲಿ ಪಾತ್ರಕ್ಕೆ ಬಣ್ಣ ಹಚ್ಚಲು ಅವಿನಾಶ್ ಅವ್ರಿಗೆ ಅವಕಾಶ ಸಿಗುತ್ತೆ ಇನ್ನು ಅದೇ ಧಾರಾವಾಹಿಯಲ್ಲಿ ಮಾಳವಿಕಾ ಕೂಡ ನಟಿಸುತ್ತಿದ್ದರು. ಆಗ ಇಬ್ಬರ ನಡುವೆ ಒಳ್ಳೆಯ ಗೆಳೆತನವಿರುತ್ತೆ ಒಂದ್ಸಲ್ಲ ಮಾಳವಿಕಾ ಅವ್ರ ಮನೆಗೆ ಅವಿನಾಶ್ ಹೋಗಿದ್ದಾಗ ಮಾಳವಿಕಾ ತಾಯಿಯವರೇ ಮಾಳವಿಕಾ ಮದುವೆಯಾಗುತ್ತೀಯಾ? ಎಂದು ಕೇಳಿದ್ದರಂತೆ ಆಗ ಮಾಳವಿಕಾ ಅವರ ಮೇಲೆ ಅವಿನಾಶ್ ಅವ್ರಿಗೆ ಮೊದಲೇ ಪ್ರೀತಿ ಇದ್ದ ಕಾರಣ ಅವಿನಾಶ್ ಅವ್ರು,ತಮ್ಮ ಕುಟುಂಬದವರ ಜೊತೆ ಚರ್ಚಿಸಿ ಅವ್ರ ಒಪ್ಪಿಗೆ ಪಡೆದು ಮದುವೆಯಾದರು. ಆದ್ರೆ ಇದೆಲ್ಲದರ ಮಧ್ಯೆ ಒಂದು ದೊಡ್ಡ ದುರಂತ ಏನ್ ಗೊತ್ತಾ ಅವಿನಾಶ್ ದಂಪತಿಗಳಿಗೆ ಗಾಲವ್ ಹೆಸರಿನ ಮಗ ಇದ್ದಾನೆ ಆದರೆ ಅವ್ನು ವುಲ್ಫ್ ಹರ್ಷಾನ್ ಸಿಂಡ್ರೋಮ್ ಎಂಬ ಸಮಸ್ಯೆ ಯಿಂದ ಸಾಮಾನ್ಯನಂತಿಲ್ಲ. ಆ ನೋವಿನ ನಡುವೆಯೇ ಮಗನನ್ನು ಪ್ರೀತಿ ಯಿಂದ ನೋಡಿಕೊಂಡು ಹೋಗುತ್ತಿದ್ದಾರೆ.

“ದೇವರು ದೇವ್ರ ಮನೆಯಲ್ಲಿರೋದೇ ಸರಿ ಅಲ್ವಾ”

ಇನ್ನು ಅವಿನಾಶ್ ಹಾಗೂ ಮಾಳವಿಕಾ ದಂಪತಿಯ ಜೀವನದಲ್ಲಿ ದಿವಂಗತ ಸಾಹಸಸಿಂಹ ನಟ ವಿಷ್ಣುವರ್ಧನ್ ಅವ್ರ ಪಾತ್ರ ಮಹತ್ವದ್ದು, ಈ ಬಗ್ಗೆ ಅವಿನಾಶ್ ಹಾಗೂ ಮಾಳವಿಕ ದಂಪತಿ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ಹೌದು ವೇದಿಕೆಯ ಮೇಲೆ ನಟ ರಮೇಶ್, ನಿಮ್ಮ ಮನೆಯ ದೇವರ ಕೋಣೆ ಯಲ್ಲಿ ದಿವಂಗತ ವಿಷ್ಣುವರ್ಧನ್ ಅವ್ರ ಫೋಟೋ ಇದ್ಯಂತೆ ಅಂತ ಕೇಳ್ತಾರೆ ಆಗ ಮಾಳವಿಕ ಅವ್ರು ಮಾತನಾಡಲು ಶುರು ಮಾಡ್ತಾರೆ. ಅವ್ರು ನಮ್ಮ ಮನೆಯ ದೇವ್ರು ಸರ್, ದೇವ್ರು ದೇವರ ಮನೆಯಲ್ಲೇ ಇರಬೇಕು ಅಲ್ವಾ ಅಂತ ಕೇಳ್ತಾರೆ ಸಾಲ ದಕ್ಕೆ ನಾವು ಪ್ರತಿದಿನ ವಿಷ್ಣುವರ್ಧನ್ ಸರ್ ಗೆ ದೀಪಾ ಹಚ್ಚುತ್ತೀವಿ, ಅವ್ರು ಸತ್ತಿದ್ದಾರೆ ಅಂತ ನಾವು ಯಾವತ್ತೂ ಅಂದುಕೊಳಲ್ಲ. ವಿಷ್ಣುದಾದ ಚಿರಸ್ಥಯಿಯಾಗಿ ನಮ್ಮ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ ಅಂತ ಹೇಳ್ತಾ ಮಾಳವಿಕ ಕಣ್ಣು ತುಂಬಿಕೊಂದುಬಿಡುತ್ತೆ. ಅದಕ್ಕೆ ಕಾರಣವೂ ಇದೆ ಅದನ್ನ ಅವಿನಾಶ್ ಅವ್ರು ಬಿಚ್ಚಿಟ್ರು. ಹೌದು ಸರ್ ನಮ್ ಮೇಲೆ ವಿಷ್ಣುವರ್ಧನ್​ ಅವ್ರಿಗೆ ವಿಪರೀಪ ಪ್ರೇಮ ಇತ್ತು. ಅದರಲ್ಲೂ ಮಾಳವಿಕಾ ಅವರ ಕಂಡರೆ ವಿಷ್ಣುವರ್ಧನ್ ಅವರಿಗೆ ವಿಶೇಷ ಮಮತೆ, ಶೂಟಿಂಗ್ ಸೆಟ್ ನಲ್ಲಿ ಮಗು ಥರ ನೋಡ್ಕೊತ್ತಿದ್ರು. ಮಾಳವಿಕಗೆ ಅವ್ರು ಮತ್ತೊಬ್ಬ ತಾಯಿ ಸರ್ ಅದಕ್ಕೆ ಅವರು ಅಗಲಿದ ಬಳಿಕ ಅವರ ಫೋಟೊ ವನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಿದ್ದೀವಿ ಅಂತ ಹೇಳಿಕೊಂಡು ನೋವು ಪಟ್ಟಿದ್ದಾರೆ.

ಅದಕ್ಕೆ ಯಾವಾಗಲೂ ಹೇಳೋದು ಇದ್ದಾಗ ಮಾಡೋದು ಸಾಧನೆ ಅಲ್ಲ ನಾವು ಹೋದಮೇಲೆ ನಮ್ಮನ್ನ ನೆನಸಿಕೊಳ್ಳುವ ಹಾಗೆ ನಾವೇನಾದ್ರೂ ಮಾಡ್ತೀವಲ್ಲ ಅದು ನಿಜವಾದ ಸಾಧನೆ ಅಂತ.. ಇದು ಬಹುತೇಕ ನಮ್ಮ ಕನ್ನಡ ಚಿತ್ರರಂಗದ ತಾರೆಯರ ಜೀವನದಲ್ಲೂ ನಿಜವಾಗಿದೆ.. ತಾಮ್ಮೊಂದಿಗೆ ಇತರರನ್ನು ಬೆಳೆಸಿದ ನಟರು ಸಾಕಷ್ಟು ಜನರಿದ್ದಾರೆ. ಅದ್ರಲ್ಲಿ ವಿಷ್ಣುದಾದ ಕೂಡ ಒಬ್ಬರು ಅಲ್ವಾ.

ಇದನ್ನು ಓದಿ: ತನ್ನನ್ನು ಕಾಪಡಿದವನಿಗೆ ಈ ಪಕ್ಷಿ ತೋರಿದ್ದು ಎಂತಹ ಪ್ರೀತಿ ಗೊತ್ತಾ?