ಕಿಚ್ಚನ ಜೊತೆ ಮೊದಲ ವಾರದ ಪಂಚಾಯಿತಿ; ತುಕಾಲಿ ಸಂತುಗೆ ಬಿಸಿ ಮುಟ್ಟಿಸಿದ ಕಿಚ್ಚ..

ಸ್ನೇಹಿತರೆ ಬಿಗ್ ಬಾಸ್ ಕನ್ನಡ 10(Big Boss Season 10) ಈ ಬಾರಿ ಸಾಕಷ್ಟು ವಿಭಿನ್ನತೆಗಳೊಂದಿಗೆ ಆರಂಭವಾಗಿ ಒಂದು ವಾರ ಕಳೆಯುತ್ತಿದೆ ಕಿಚ್ಚನ ಪಂಚಾಯಿತಿ ಕೂಡ ಸುಲಭವಾಗಿ ಇರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ… ಮನೆಯಲ್ಲಿ ನಡೆಯೋ ಪ್ರತಿಯೊಂದು ವಿಚಾರವನ್ನ ಗಂಭೀರವಾಗಿ ಗಮನಿಸುವ ಕಿಚ್ಚನ ತಪ್ಪು ಮಾಡಿದವರಿಗೆ ಯಾವುದೇ ಮುಲಾಜಿಲ್ಲದ ಕಿಚ್ಚ ಬಿಸಿ ಮುಟ್ಟಿಸದೆ ಬಿಡಲ್ಲ.. ಹೌದು ಇಂದು ಕೂಡ ತುಕಾಲಿ ಸಂತು ಮಾಡಿರೋ ತುಕಾಲಿ ಕೆಲಸ ಮುನ್ನಲೆಗೆ ಬಂದಿದ್ದ ತುಕಾಲಿ ಸಂತುಗೆ ಚಾಳಿ ಬಿಡಿಸಿದ್ದಾರೆ ಕಿಚ್ಚ.. ಹೌದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎರಡನೇ ಅತಿಥಿಯಾಗಿ ಬಿಗ್ ಬಾಸ್ ಕನ್ನಡ 4 ವಿನ್ನರ್ ಪ್ರಥಮ್ ಆಗಮಿಸಿದ್ದರು. ಎಲ್ಲಾ ಸ್ಪರ್ಧಿಗಳಿಗೂ ತಮ್ಮದೇ ಶೈಲಿಯಲ್ಲಿ ಪ್ರಥಮ್ ಕಿವಿಮಾತು ಹೇಳಿದರು. ವೀಕ್ಷಕರ ಅಭಿಪ್ರಾಯವನ್ನ ಸ್ಪರ್ಧಿಗಳ ಮುಂದಿಟ್ಟರು. ಅದನ್ನ ಅಳವಡಿಸಿಕೊಳ್ಳುವುದು, ಬಿಡುವುದು ಸ್ಪರ್ಧಿಗಳಿಗೆ ಬಿಟ್ಟ ವಿಚಾರ.

WhatsApp Group Join Now
Telegram Group Join Now

ಇನ್ನೂ, ಡ್ರೋನ್ ಪ್ರತಾಪ್(Drone Prathap) ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳಿಗೆ ಅದರಲ್ಲೂ ತುಕಾಲಿ ಸಂತುಗೆ ಪ್ರಥಮ್ ಬುದ್ಧಿ ಮಾತು ಹೇಳಿದರು. ವೈಯಕ್ತಿಕ ತೇಜೋವಧೆ ಬೇಡ. ಹೊರಗಿನ ವಿಚಾರದ ಬಗ್ಗೆ ಇಲ್ಲಿ ಚರ್ಚೆ ಬೇಡ. ಸಮರ್ಥನೆ ಮಾಡಿಕೊಳ್ಳಲು ಇಲ್ಲಿ ಅವರಿಗೆ ದಾರಿ ಇಲ್ಲ ಅಂತ ಪ್ರಥಮ್ ವಿವರಿಸಿದ್ದರು. ಆದ್ರೆ ಇಷ್ಟು ಹೇಳಿದ್ಮೇಲೂ, ತುಕಾಲಿ ಸಂತು ಮಾತ್ರ ಡ್ರೋನ್ ಪ್ರತಾಪ್ ಬೆನ್ನ ಹಿಂದೆ ಆಡಿಕೊಂಡು ನಗುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಇಂದಿನ ಪಂಚಾಯಿತಿಯಲ್ಲಿ ಕಿಚ್ಚ, ತುಕಾಲಿ ಸಂತುಗೆ ಸರಿಯಾಗಿಯೇ ಬೆವರಿಳಿಸಿದ್ದಾರೆ.

Images Credit: Colors Kannada

ಹೌದು ಬಿಗ್ ಬಾಸ್ ಮನೆಗೆ ಬಂದ ಪ್ರಥಮ್ ಎಲ್ಲರಿಗೂ ತಮ್ಮದೇ ರೀತಿಯಲ್ಲಿ ಬುದ್ದಿ ಹೇಳಿದ್ರು. ಅದರಂತೆ ತುಕಾಲಿ ಸಂತು ಅವರೇ.. ಪ್ರತಾಪ್ ಎಂಬ ಸೈಲೆಂಟ್ ಆಗಿರುವ ವ್ಯಕ್ತಿಯನ್ನ ನಗಿಸುವ ಪ್ರಯತ್ನ ಮಾಡ್ತಿದ್ದೀರಾ. ಅದಕ್ಕೆ ಅಭಿನಂದನೆಗಳು. ಆದರೆ, ಇಲ್ಲಿ ಪ್ರತಾಪ್ ಟಾಸ್ಕ್ ಮಾಡಿಲ್ಲ ಅಂದ್ರೆ ಶಿಕ್ಷಿಸಿ. ಆದರೆ, ಹಿಂದಿನ ಹೇಳಿಕೆಯನ್ನ ಈ ಪಬ್ಲಿಕ್ ಪ್ಲಾಟ್‌ಫಾರ್ಮ್‌ನಲ್ಲಿ ತರಬೇಡಿ. ಇಲ್ಲಿ ಇಲ್ಲಿನ ವಿಚಾರಗಳ ಬಗ್ಗೆ ಚರ್ಚೆ ಆಗಲಿ. ಯಾಕಂದ್ರೆ, ಅವರಿಗೆ ಸಮರ್ಥಿಸಿಕೊಳ್ಳೋಕೆ ದಾರಿ ಇರೋದಿಲ್ಲ. ಅವರಿಗೆ ನೋವಾಗುತ್ತೆ. ಇಲ್ಲಿ ಯಾವುದೇ ತಪ್ಪು ಮಾಡಿದರೆ, ಶಿಕ್ಷೆ ಕೊಡಿ. ಆದರೆ, ಹಿಂದಿನ ವಿಷಯಗಳ ಬಗ್ಗೆ ಮಾತನಾಡಿದರೆ, ಭಾವನೆಗಳಿಗೆ ನೋವಾಗುತ್ತೆ.

ಇಲ್ಲಿ ಅವರು ಬೆರೆಯೋಕೆ ರೆಡಿ ಇದ್ದಾರೆ. ಹಳೇ ವಿಚಾರ ತೆಗೆದರೆ ನೋವಾಗುತ್ತೆ. ವೈಯಕ್ತಿಕ ತೇಜೋವಧೆ ಬೇಡ ಎಂದು ತುಕಾಲಿ ಸಂತುಗೆ ಪ್ರಥಮ್ ಹೇಳಿದ್ದರು. ಹೌದು ಈ ಹಿಂದೆ ತುಕಾಲಿ ಸಂತು ನನ್ನ ಡ್ರೋನ್ ಹೇಗೆ ಉಡಾವಣೆ ಆಗುತ್ತೆ ಹೇಳು? ಗ್ಯಾಸ್‌ ಹಚ್ಚಿದ ತಕ್ಷಣ ಹಾರುತ್ತೆ. ನನ್ನ ಡ್ರೋನ್ ಹಾರೋಕೆ ಮ್ಯಾಚ್ ಬ್ಯಾಕ್ಸ್ ಇಟ್ಟುಕೊಂಡಿರಬೇಕು. ನನ್ನ ಡ್ರೋನ್‌ನಲ್ಲಿ ಬತ್ತಿ ಇರುತ್ತೆ. ಹಚ್ಚಿದರೆ ಮೇಲೆ ಹೋಗಿ ಔಷಧಿ ಒಡ್ಕೊಂಡು ಬರುತ್ತೆ ಅಂತೆಲ್ಲಾ ಆಡಿಕೊಂಡಿದ್ರು ಈ ವಿಚಾರವಾಗಿಯೇ ಪ್ರಥಮ್ ಬುದ್ದಿ ಹೇಳಿದ್ರು ಆದ್ರೂ ಸಂತು ಮಾತ್ರ ತನ್ನ ಬುದ್ದಿ ಬಿಡ್ಲೇ ಇಲ್ಲ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹೊಟ್ಟೆ ತುಂಬಿಸಿದವರನ್ನೇ ಮರೆಯಬಹುದಾ ಅಂದಿದ್ದೇಕೆ ಗೊತ್ತಾ?

ಹೌದು ಪ್ರಥಮ್ ಖುದ್ದಾಗಿ ಬಂದು ಹೊರಗಡೆ ಏನು ನಡೆದಿದೆ ಅಂತ ಹೇಳಿ, ಇನ್ಮುಂದೆ ಈ ರೀತಿ ಮಾಡಬೇಡಿ ಅಂತ ಹೇಳಿದ್ರು ಆದ್ರೆ ತುಕಾಲಿ ಸಂತು ತನ್ನ ಬುದ್ಧಿಯನ್ನು ಬಿಡಲೇ ಇಲ್ಲ ಮತ್ತೊಮ್ಮೆ ಮಗದೊಮ್ಮೆ ಎಂಬಂತೆ ಡ್ರೋನ್ ಪ್ರತಾಪ್ ಅವರನ್ನ ಆಡಿಕೊಂಡು ನಗಾಡಿದ್ರು ಇನ್ನು ಊಟದ ವಿಷಯಕ್ಕೂ ಕೂಡ ಜಗಳವಾಗಿತ್ತು ಆಗ ಡ್ರೋನ್ ಪ್ರತಾಪ್ ಊಟದ ಕೋಣೆಯಲ್ಲಿ ಒಬ್ಬರೇ ಕೂತು ಸಿಕ್ಕಾಪಟ್ಟೆ ಬೇಜಾರ್ ಮಾಡಿಕೊಂಡಿದ್ರು. ಹೌದು ಈ ವಿಚಾರ ಸಕ್ಕತ್ ಟ್ರೋಲ್ ಕೂಡ ಆಯ್ತು ಎಲ್ಲರೂ ತುಕಾಲಿ ಸಂತು ಅವರಿಗೆ ಛೀ ಮಾರಿ ಹಾಕಿದ್ರು ಜಾಸ್ತಿ ದಿನ ಬಿಗ್ ಬಾಸ್ ಮನೆಯಲ್ಲಿ ಉಳ್ಕೊಳ್ಳಬೇಕು ಅಂತ ನಾಟ್ಕ ಆಡ್ತಿದ್ದಾನೆ ಆದರೆ ಅದು ಆಗಲ್ಲ ಯಾವತ್ತಿದ್ರೂ ತುಕಾಲಿ ಹೊರಗಡೆ ಬರಲೇಬೇಕು ನೆಕ್ಸ್ಟ್ ವೀಕ್ ಕನ್ಫರ್ಮ್ ಅಂತಲ್ಲ ಜನರು ಕಮೆಂಟ್ಸ್ ಮಾಡೋಕೆ ಶುರು ಮಾಡ್ಕೊಂಡ್ರು.

ಇನ್ನು ಪಂಚಾಯಿತಿಗೆ ಈ ವಿಷಯವನ್ನ ತೆಗೆದುಕೊಂಡು ಬರಲಾಗಿದ್ದು ಕಿಚ್ಚ ಸರಿಯಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಒಬ್ಬರ ಊಟದ ವಿಚಾರವಾಗಿ ಮಾತಾಡೋದು ಸರಿ ಅಲ್ಲ, ಇನ್ನೊಬ್ಬರನ್ನ ಆಡಿಕೊಂಡು ಅದರಲ್ಲಿ ಮಜಾ ತೆಗೆದುಕೊಳ್ಳೋರನ್ನ ಏನ್ ಅನ್ಬೇಕು ನಿಮಗೆ ಆ ರೈಟ್ಸ್ ಕೊಟ್ಟೋರು ಯಾರು, ಅವ್ರನ್ನ ಹೀಯಾಳಿಸಿ ನೀವು ಖುಷಿ ಪಡೋದು ಸರಿ ಅಲ್ಲ ಅಂತವರನ್ನ ಏನ್ ಅಂತ ಕರಿಯಬೇಕು ಹೇಳಿ ಅಂತೆಲ್ಲಾ ಸರಿಯಾಗಿ ಚಳಿ ಬಿಡಿಸಿದ್ದಾರೆ. ಸದ್ಯ ಆ ಪ್ರೋಮೊ ರಿಲೀಸ್ ಆಗಿದ್ದು ಇಂದು ನಾಳಿನ ಪಂಚಾಯಿತಿಯಲ್ಲಿ ಏನ್ ಆಗುತ್ತೆ ಅಂತ ಮುಂದೆ ತಿಳಿಯಲಿದೆ. ಎಲ್ಲರ ಕಿಚ್ಚನ ಪಂಚಾಯಿತಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Jio 5G Unlimited Data ಪಡೆಯುವುದು ಹೇಗೆ? ಒಳ್ಳೆ ಆಫರ್ ಈಗಾಲೇ ಬಳಸಿಕೊಳ್ಳಿ

ಇದನ್ನೂ ಓದಿ: ಕೈಕೊಟ್ಟ ಮುಂಗಾರಿನಿಂದಾಗಿ ರೈತರು ಕಂಗಾಲಾಗಿದ್ದಾರೆ, ಹಾಗಾದ್ರೆ ಹಿಂಗಾರು ಮಳೆ ರೈತರ ಕೈ ಹಿಡಿಯುತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram