ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾಗೆ ನಾಯಕಿಯಾಗಿ ಆಂಕರ್ ಜಾಹ್ನವಿ ಎಂಟ್ರಿ!

ಸ್ಯಾಂಡಲ್ವುಡ್ ನಲ್ಲಿ ಹೊಸಬರ ಅಲೆ ಜೋರಾಗಿದೆ. ಹೌದು ಹೊಸ ನಾಯಕ ನಾಯಕಿಯ ಜೊತೆಗೆ ಹಿರಿತೆರೆಗೆ ಹೊಸ ನಿರ್ದೇಶಕ ನಿರ್ಮಾಪಕರ ಹವಾ ಶುರುವಾಗಿದೆ ಅಂತ ಹೇಳಬಹುದು. ಹೊಸಬರಾದ್ರೂ ಮಾಡಿದ ಒಂದೇ ಚಿತ್ರದಲ್ಲಿ ಯಶಸ್ವಿಯಾಗಿ ಮುನ್ನುಗಿ ಸೈ ಅನಿಸಿಕೊಳ್ಳುತ್ತಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತ, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಜನ್ಮದಿನದಂದು ಅವರ ಹೊಸ ಸಿನಿಮಾಗೆ ಟೈಟಲ್ ಇಟ್ಟಿರುವ ವಿಚಾರ ರಿವಿಲ್ ಆಗಿತ್ತು, ಇದೀಗ ಸಿನಿಮಾ ನಾಯಕಿ ಯಾರು ಅನ್ನೋದು ಕೂಡ ವೈರಲ್ ಆಗಿದೆ. ರೂಪೇಶ್ ಅವ್ರ ಹೊಸ ಸಿನಿಮಾಗೆ ಅಧಿಪತ್ರ ಎಂಬ ಟೈಟಲ್ ಇಟ್ಟ ವಿಚಾರ ರಿವೀಲ್ ಆಗಿತ್ತು.

WhatsApp Group Join Now
Telegram Group Join Now

ಈಗಾಗಲೇ ಟೈಟಲ್ ಮೂಲಕವೇ ಸಿನಿಮಾ ಪ್ರಿಯರಿಗೆ ಕುತೂಹಲ ಮೂಡಿಸಿದ್ದ ಚಿತ್ರ ತಂಡ, ಈ ಸಿನಿಮಾದ ನಾಯಕಿಯ ಪರಿಚಯ ಮಾಡಿದ್ದಾರೆ. ಹೌದು ಅಧಿಪತ್ರ ಸಿನಿಮಾ ಮೂಲಕ ಕಿರುತೆರೆ ನಟಿ ಹಾಗೂ ಆಂಕರ್ ಜಾಹ್ನವಿ ಅವರು ಕನ್ನಡ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಖಾಸಗಿ ಸುದ್ದಿ ವಾಹಿನಿಗಳಲ್ಲಿ ನಿರೂಪಕಿಯಾಗಿದ್ದ ಜಾಹ್ನವಿ, ಗಿಚ್ಚಿ ಗಿಲಿಗಿಲಿ ಶೋ, ‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಭಾಗವಹಿಸಿದ್ದರು. ಈ ಮೂಲಕ ಸಾಕಾಷ್ಟು ಖ್ಯಾತಿ ಪಡೆದು ಇದೀಗ ಸ್ಯಾಂಡಲ್ವುಡ್ ನಲ್ಲಿ ಭರವಸೆ ಮೂಡಿಸಲು ಸಜ್ಜಗಿದ್ದಾರೆ.

ಇನ್ನು ಓಟಿಟಿ ಮೂಲಕ ಎಂಟ್ರಿ ಕೊಟ್ಟ ರೂಪೇಶ್ ಸಖತ್ ಫೇಮಸ್ ಆದ್ರೂ. ಆದ್ರೆ ಅದಕ್ಕೂ ಮೊದಲೇ ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ತುಳು ಸಿನಿಮಾ ‘ಸರ್ಕಸ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದ್ರೆ ರೂಪೇಶ್ ಹೆಸರು ಎಲ್ಲಿಯೂ ಸೌಂಡ್ ಮಾಡಿರಲಿಲ್ಲ. ಇನ್ನು ಈ ಹಿಂದೆ ರೂಪೇಶ್ ಶೆಟ್ಟಿ ಅವರು ‘ಗಿರ್‌ಗಿಟ್’ ಎನ್ನುವ ಸಿನಿಮಾ ಮಾಡಿದ್ದು, ಆ ಚಿತ್ರ ವಿದೇಶದಲ್ಲಿ ಕೂಡ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು.

ಜೊತೆಗೆ ಈ ಹಿಂದೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರೂಪೇಶ್ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಮುನ್ನುಡಿ ಎಂಬಂತೆ ಇದೀಗ ರೂಪೇಶ್ ಹಾಗೂ ಜಾಹ್ನವಿ ಜೋಡಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ಈ ಹಿಂದೆ ಕೂಡ ಜಾಹ್ನವಿ ಅವರಿಗೆ ಸಿನಿಮಾ, ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಬಂದಾಗಲೂ ಕೂಡ ಮನೆಯಲ್ಲಿ ಅನುಮತಿ ಇಲ್ಲ ಅಂತ ಹೇಳಿ ಎಲ್ಲ ಆಫರ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದ ಜಾಹ್ನವಿ ಈಗ ಅಧಿಪತ್ರ ಸಿನಿಮಾದಲ್ಲಿ ನಟಿಸಲು ಓಕೆ ಎಂದಿದ್ದಾರೆ ಅಂತ ಹೇಳಲಾಗ್ತಿದೆ.

ಅಧಿಪತ್ರ ಸಿನಿಮಾದ ಕಥೆ ಏನು?

ಇನ್ನು ಕೆಲವೊಂದು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ ಆರ್ ಸಿನಿ ಕಂಬೈನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ್ಯಂತೆ. ಇನ್ನು ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಅಂತ ಹೇಳಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಅಲ್ದೆ ಇದೇ ಆಗಸ್ಟ್ 23ರಂದು ಅಧಿಪತ್ರ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದೆ ಅಂತ ಚಿತ್ರತಂಡ ಹೇಳಿಕೊಂಡಿದೆ. ಇನ್ನು ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ತುಳು ಸಿನಿಮಾ ಸರ್ಕಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು ಇದೀಗ ರೂಪೇಶ್ ಹಾಗೂ ಜಾಹ್ನವಿ ಜೋಡಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದು ಸಿನೀ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: ಕೊನೆಗೂ ಸಿಕ್ಕಿದ್ರು “ಜಿಂಗಿಚಾಕ ಜಿಂಗಿಚಾಕ” ಹಾಡಿದ್ದ ಗಾಯಕ, ಇವರೇ ನೋಡಿ ಕನ್ನಡದ ಖ್ಯಾತ ನಟ

ಇದನ್ನೂ ಓದಿ: 8 ವರ್ಷಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಅದ ಪುಟ್ಟ ಪೋರ; ಶಿವಮೊಗ್ಗದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಬಾಲಕ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram