Chaya Singh: ಛಾಯಾಸಿಂಗ್ ಕನ್ನಡ ಸಿನಿರಂಗದಿಂದ ದೂರ ಉಳಿಯಲು ನಿರ್ದೇಶಕರೊಬ್ಬರು ಹಿಯಾಳಿಸಿದ್ದೆ ಕಾರಣವಂತೆ! ಇವರ ಪತಿ ಕೂಡ ಸ್ಟಾರ್ ನಟ..

Chaya Singh: ಛಾಯಾ ಸಿಂಗ್ ಒಂದು ಕಾಲದಲ್ಲಿ ಕೆಲ ನಾಯಕ ನಟರಿಗೆ ಇವ್ರೇ ಬೆಸ್ಟ್ ನಾಯಕಿ ಅಂತ ಹೇಳ್ತಿದ್ದಂತಹ ಅದ್ಭುತ ನಟಿ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವ್ರು ಆಗ ಚಿತ್ರರಂಗಕ್ಕೆ ಒಬ್ಬ ಪ್ರಮುಖ ನಟಿಯಾಗಿ ಗುರುತಿಸಿಕೊಂಡವರು. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ಕೂಡ ನಟಿ ಛಾಯಾಸಿಂಗ್ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ಛಾಯಾ ಬೆಂಗಳೂರಿನ ಲೌರ್ಡ್ಸ್ ಶಾಲೆಯಲ್ಲಿ ಓದದಿರು, ಆದರೆ ಇವ್ರ ಪೋಷಕರು ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ ರಜಪೂತರು. ಹೀಗಾಗಿ ಬೆಂಗಳೂರಿನಲ್ಲೆ ಹುಟ್ಟಿ ಬೆಳೆದಿದ್ದರಿಂದ ಛಾಯಾ ಅವ್ರಿಗೆ ಕನ್ನಡ ಅಷ್ಟವಾಗಲಿಲ್ಲ. ಚಟ ಪಾಠ ಅಂತ ಹರಳು ಹುರಿದಂಗೆ ಕನ್ನಡವನ್ನ ಬಹಳ ಸ್ಪಷ್ಟವಾಗಿ ಮಾತಾನಾಡುತ್ತಾರೆ. ಇನ್ನು ಛಾಯಾಸಿಂಗ್, ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ’ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡ್ತಾರೆ. ಆದರೆ ಕೆಲ ಸಿನಿಮಾ ನಂತರ ನಿರ್ದೇಶಕರೊಬ್ಬರು ಛಾಯಾ ಅವ್ರಿಗೆ ಸೆಟ್ ನಲ್ಲೆ ತುಂಬಾ ಅವಮಾನ ಮಾಡ್ತಾರಂತೆ. ನೀನು ಹೀರೋಹಿನ್ ಥರನ ಇದ್ಯಾ ನೀನು ಮುಖ ಕನ್ನಡಿಯಲ್ಲಿ ನೋಡ್ಕೊಂಡಿದ್ಯ ಅಂತೆಲ್ಲಾ ಅವಮಾನಿಸಿ ಮಾತನಾಡಿದ್ದರಂತೆ ಹೀಗಾಗಿ ಅಲ್ಲಿಂದ ಹೊರ ನಡೆದ ಛಾಯಾ ಕನ್ನಡ ಚಿತ್ರರಂಗವನ್ನು ತೊರೆದು ನಂತರ ತಮಿಳು ಚಿತ್ರರಂಗ ಪ್ರವೇಶಿಸಿ ಅಲ್ಲಿಯೂ ಒಳ್ಳೆ ಹೆಸರು ಗಳಿಸಿದರು. ಇವರು ಎಂ.ಜಿ.ಶ್ರೀನಿ ನಿರ್ದೇಶನದ `ಸಿಂಪ್ಲಿ ಕೈಲಾವಜಮ್’ ಡಾಕುಮೆಂಟರಿ ಚಿತ್ರದಲ್ಲಿ ನಾಲ್ಕು ಪಾತ್ರಗಳಲ್ಲಿ ನಟಿಸಿದ್ದು ವಿಶೇಷ. ಹಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ತೀರ್ಪುಗಾರರಾಗಿ ಯು ಕೂಡ ಛಾಯಾ ಕಾಣಿಸಿಕೊಂಡಿದ್ರು.

WhatsApp Group Join Now
Telegram Group Join Now

ಇದನ್ನೂ ಓದಿ: ನಟ ರಾಜೇಶ್ ನಟರಂಗ ಹೆಂಡತಿ ಮತ್ತು ಮಗಳು ಯಾರು ಹೇಗಿದ್ದಾರೆ? ಮಗಳು ಕೂಡ ಫೇಮಸ್ ನಟಿ

ಈಗ ಛಾಯಾ ವಯಸ್ಸೇಷ್ಟು? ಇವ್ರ ಪತಿ ಕೂಡ ಸ್ಟಾರ್ ನಟ ಗೊತ್ತಾ?

ಸದ್ಯ ಛಾಯಾ ಸಿಂಗ್(​Chaya Singh) ಅವ್ರಿಗೆ ಈಗ 43 ವರ್ಷ ವಯಸ್ಸು. ಮುನ್ನುಡಿ ನಂತರ ತುಂಟಾಟ ಸಿನಿಮಾದಲ್ಲಿ ನಟಿಸಿದ ಛಾಯಾ ಅವರಿಗೆ ಈ ಸಿನಿಮಾ ಹೆಸರು ತಂದು ಕೊಟ್ಟಿತು. ಮೂಲತಃ ಉತ್ತರ ಪ್ರದೇಶದವರಾದ ಛಾಯಾ ಅವರ ವಿದ್ಯಾಭ್ಯಾಸ ಆಗಿದ್ದೆಲ್ಲ ಕರ್ನಾಟಕದಲ್ಲೇ. ‘ತುಂಟಾಟ’ ಚಿತ್ರದ ನಂತರ ತಮಿಳಿನತ್ತ ಮುಖ ಮಾಡಿದರು ಛಾಯಾ ಸಿಂಗ್​. ಧನುಷ್‌ ಜೊತೆ ‘ತಿರುಡಾ ತಿರುಡಿ’ ಸಿನಿಮಾದಲ್ಲಿ ನಟಿಸಿದ ಛಾಯಾಗೆ ಈ ಚಿತ್ರ ದೊಡ್ಡ ಯಶಸ್ಸು ತಂದುಕೊಟ್ಟಿತು. ಬೇರೆ ಭಾಷೆಗಳಲ್ಲಿ ನಟಿಸಿದ ನಂತರ ಮತ್ತೆ ಕನ್ನಡಕ್ಕೆ ರೀ ಎಂಟ್ರಿ ನೀಡಿದ ಛಾಯಾ ಮಫ್ತಿ ಸಿನಿಮಾದಲ್ಲಿ ಶಿವಣ್ಣನಿಗೆ ತಂಗಿಯಾಗಿ ನಟಿಸಿದರು. ಅಲ್ಲಿಂದ ಮತ್ತೆ ಕನ್ನಡದ ನಂಟು ಬೆಸೆದುಕೊಂಡಿದ್ದು ಇದೀಗ ಕಿರುತೆರೆ ಮೂಲಕಾ ಮತ್ತೆ ಕನ್ನಡಲ್ಲಿ ಸಕ್ರಿಯರಾಗುತ್ತಿದ್ದಾರೆ. ಇನ್ನು ಛಾಯ ಕೇವಲ ನಟಿ ಮಾತ್ರವಲ್ಲ ಬಂಗಾಳಿ ಭಾಷೆಯಲ್ಲಿ ಕಿ ಕೋರ್ ಬೋಝಭೋ ತೊಮಾಕೆ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ 2012ರಲ್ಲಿ ಛಾಯಾ ತಮಿಳು ನಟ ಕೃಷ್ಣ ಅವರ ಜೊತೆ ಮದುವೆಯಾದರು. ಮದುವೆ ನಂತರವೂ ಅಭಿನಯವನ್ನು ಮುಂದುವರೆಸುತ್ತಿರುವ ಛಾಯಾ, ಕನ್ನಡದ ನಂದಿನಿ ಧಾರಾವಾಹಿ ಸೇರಿದಂತೆ ತಮಿಳಿನ ಕಿರುತೆರೆಯಲ್ಲೂ ಬ್ಯುಸಿಯಾಗಿದ್ರು, ಸಿನಿಮಾದಲ್ಲೂ ಕೂಡ ಆಗಾಗ ಕಾಣಿಸಿಕೊಳ್ಳುವ ನಟಿ ಛಾಯಾ ಕನ್ನಡದ ‘ಖಾಕಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಕಿರುತೆರೆ ವೀಕ್ಷಕರಿಗೆ ಗುಡ್ ನ್ಯೂಸ್ ಎಂಬಂತೆ ಕನ್ನಡದ ಅಮೃತಾಧಾರೆ ಸೀರಿಯಲ್ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಿರುತೆರೆ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ ನಟಿ ಛಾಯಾಸಿಂಗ್

ಹೌದು ಝೀ ಕನ್ನಡ ವಾಹಿನಿಯಲ್ಲಿ ‘ಅಮೃತಧಾರೆ’ ಹೆಸರಿನಲ್ಲಿ ಹೊಸ ಧಾರಾವಾಹಿ ಪ್ರಾಸಾರವಾಗಲಿದೆ. ಸದ್ಯ ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು ಇಂಟ್ರಸ್ಟಿಂಗ್ ಆಗಿದೆ. ವಿಶೇಷ ಎಂದರೆ ಈ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ರಾಜೇಶ್ ನಟರಂಗ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಬೈಕ್‌ ಏರಿ ಬರ್ತಿರುವ ಛಾಯಾ ಸಿಂಗ್(Chaya Singh) ಸಿಗ್ನಲ್‌ನಲ್ಲಿ ನಿಂತುಕೊಳ್ತಾರೆ. ಹಣೆಗೆ ಬೊಟ್ಟು ಇಡಲು ಕನ್ನಡಿ ಹುಡುಕ್ತಾ ಇರ್ತಾರೆ. ಅದೇ ಸಮಯಕ್ಕೆ ರಾಜೇಶ್ ಕಾರು ಪಕ್ಕದಲ್ಲಿ ಬಂದು ನಿಲ್ಲುತ್ತೆ. ಕಾರಿನ ಗ್ಲಾಸ್‌ನಲ್ಲಿ ಮುಖ ನೋಡಿಕೊಂಡು ಬೊಟ್ಟು ಇಟ್ಟುಕೊಳ್ತಾರೆ. ಆಗ ರಾಜೇಶ್ ನಂದೆ ಕಾರು ಬೇಕಾ ಎಂದು ಛಾಯಾ ಸಿಂಗ್ ಮೇಲೆ ರೇಗುತ್ತಾರೆ. ಹೀಗೆ ಇಬ್ಬರ ಕಿತ್ತಾಟದ ಪ್ರೋಮೋ ಸದ್ಯ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಂದಹಾಗೆ ಅಮೃತಧಾರೆ ಸೀರಿಯಲ್ ಹಿಂದಿಯ ಬಡೆ ಅಚ್ಚೆ ಲಗ್ತಾ ಧಾರಾವಾಹಿಯ ರಿಮೇಕ್ ಆಗಿದೆ ಎನ್ನಲಾಗ್ತಿದ್ದು, ಈ ಧಾರಾವಾಹಿಯಲ್ಲಿ ಛಾಯಾ ಸಿಂಗ್ ಭೂಮಿಕಾ ಎನ್ನುವ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಾಜೇಶ್ ಅವರು ಗೌತಮ್ ಎನ್ನುವ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಝೀ ಕನ್ನಡ ವಾಹಿನಿಯಲ್ಲಿ ಈಗಾಗಲೇ 3 ಹೊಸ ಧಾರಾವಾಹಿಗಳು ಎಂಟ್ರಿ ಕೊಡುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿತ್ತು. ಈಗಾಗಲೇ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸಾರ ಪ್ರಾಂಭಿಸಿದೆ. ಸದ್ಯ ಅಮೃತಧಾರೆ ಸೀರಿಯಲ್ ಪ್ರೋಮೊ ಕಿರುತೆರೆ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದ್ದು, ಛಾಯಾ ಸಿಂಗ್ ಅವ್ರನ್ನ ಮತ್ತೆ ಕಿರುತೆರೆಯಲ್ಲಿ ನೋಡಲಿಕ್ಕೆ ವೀಕ್ಷಕರಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಇದನ್ನೂ ಓದಿ: ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡ ತಿರುಪತಿ ದೇವಾಲಯ ಸಮತಿ. ಭಕ್ತಾಧಿಗಳಿಗೆ ಹೊಸ ರೂಲ್ಸ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram