ಅಮ್ಮ ಅಪ್ಪನಿಗೆ ಇನ್ನೂ ಹೂ ಹಾಕ್ಬೇಕು ಮೇಘನಾ ರಾಜ್ ಮತ್ತು ಮಗನ ಭಾವುಕ ಕ್ಷಣ..ನಿಜಕ್ಕೂ ಮನಕಲಕುವ ವಿಡಿಯೋ

2020ರ ಜೂನ್7 ರಂದು ಇಡಿ ಚಂದನವನಕ್ಕೆ ಶಾಕಿಂಗ್ ಸುದ್ದಿಯೊಂದು ಸಿಡಿಲಿನಂತೆ ಬಂದೇರಗಿತ್ತು. ಹೌದು ಸ್ಯಾಂಡಲ್ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನಿಲ್ಲ ಅನ್ನುವ ಸುದ್ದಿ ಎಲ್ಲರಿಗೂ ಎಷ್ಟು ನೋವುಂಟು ಮಾಡಿತ್ತೊ ಅಷ್ಟೇ ಆಘಾತವಾಗುವಂತೆ ಮಾಡ್ತು. ಕೇವಲ 36ವರ್ಷಕ್ಕೆ ಚಿರುಗೆ ಹೃದಯಾಘಾತವಾಯಿತು ಅಂದ್ರೆ ಯಾರು ಕೂಡ ನಂಬಲು ಸಿದ್ದರಿರಲಿಲ್ಲ ಆದ್ರೂ ಚಿರುಗೆ ಹೃದಯಾಘಾತವಾಗಿ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಾಲಯಿತು. ಆದರೆ, ಅವರು ಬದುಕುಳಿಯಲೇ ಇಲ್ಲ ಅನ್ನೋದು ಅಕ್ಷರಶಃ ಸತ್ಯವಾಗಿತ್ತು, ಅಲ್ಲದೇ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಎಲ್ಲರೂ ಶಾಕ್​ಗೆ ಒಳಗಾದರು. ಕಾರಣ ಚಿರು ಸಾವು ಒಂದು ಕಡೆಯಾದ್ರೆ ಮೇಘನಾ 5ತಿಂಗಳ ಗರ್ಭಿಣಿಯಾಗಿದ್ರು. ಚಿರು ಸಾವಿನಿಂದ ಹೊರಬರಲಾಗದೆ ಅನೇಕ ತಿಂಗಳ ಕಾಲ ಮೇಘನಾ ರಾಜ್ ಅವರು ಕಣ್ಣೀರಲ್ಲಿ ಕೈ ತೊಳೆದರು.

WhatsApp Group Join Now
Telegram Group Join Now

ನಂತರ ಚಿರು ಮೃತಪಟ್ಟ 4ತಿಂಗಳ ಬಳಿಕ ಮೇಘನಾ ಬಾಳಿಗೆ ನಂದಾ ದೀಪದಂತೆ ಕಳೆದುಕೊಂಡ ಚಿರು ಮತ್ತೆ ಮಗುವಿನ ರೂಪದಲ್ಲಿ ಮೇಘನಾ ಮಡಿಲು ಸೇರಿದ್ರು ಹೌದು ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ರು. ಆದ್ರೆ ಎಷ್ಟೇ ವರ್ಷ ಕಳೆದರೂ ಪತಿಯ ಕಳೆದುಕೊಂಡ ನೋವು ಅವರನ್ನು ಬಿಟ್ಟು ಹೋಗುತ್ತಿಲ್ಲ. ಕಾರಣ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಬಹಳ ವರ್ಷಗಳ ಕಾಲ ಪ್ರೀತಿಸಿ ಮದುವೆ ಆದವರು. ಆದರೆ ವಿಧಿಯ ಕೈವಾಡ ಚಿರು ಸರ್ಜಾ ಮೇಘನಾ ಜೊತೆ ಸಂಪೂರ್ಣ ಜೀವನ ಕಳೆಯಲೇ ಇಲ್ಲ ಮದುವೆಯಾದ ಕೆಲ ವರ್ಷಕ್ಕೆ ಇನ್ನಿಲ್ಲವಾಗಿಬಿಟ್ರು. ಹೌದು ಇಂದಿಗೆ ಚಿರಂಜೀವಿ ಸರ್ಜಾ ಮೃತಪಟ್ಟು ಮೂರು ವರ್ಷಗಳು ಕಳೆದಿವೆ. ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್​​ಹೌಸ್​ನಲ್ಲಿರುವ ಚಿರು ಸಮಾಧಿಗೆ ಇಡೀ ಕುಟುಂಬ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿದೆ. ಸಮಾಧಿಗಳನ್ನು ಭೇಟಿಗೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಪೋಸ್ಟ್ ಒಂದನ್ನು ಕೂಡ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮಿಡಿಯಾದಲ್ಲಿ ಚಿರು ಫೋಟೋ ಹಂಚಿಕೊಂಡ ಭಾವನಾತ್ಮಕ ಸಾಲು ಬರೆದ ಮೇಘನಾ

ಹೌದು ಮೇಘನಾ ಹಾಗೂ ಚಿರುವಿನ ಸಂಬಂಧ ಅಳಿಸಲಾಗದ ಬಂಧ ಚಿರು ದೈಹಿಕವಾಗಿ ಮೇಘನಾ ಅವ್ರ ಜೊತೆಗಿಲ್ಲವಾದ್ರೂ ಮೇಘನಾ ಅವ್ರ ನಂಬಿಕೆಯಲ್ಲಿ ಚಿರು ಇಂದಿಗೂ ಜೀವಂತ ಹೀಗಾಗಿ ಚಿರಂಜೀವಿ ಜನ್ಮದಿನ ಇರಲಿ ಪುಣ್ಯತಿಥಿ ಇರಲಿ ಮೇಘನಾ ರಾಜ್ ಅವರು ಪತಿಯ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಾರೆ. ತಮ್ಮ ಮನಸ್ಸಿಗೆ ಅನಿಸಿದ ಕೆಲವೊಂದು ಸಾಲುಗಳನ್ನ ಚಿರುಗಾಗಿ ಬರೆಯುತ್ತಾರೆ. ಅದೇ ರೀತಿ ಮೇಘನಾ ಅವರು ಇಂದು ಕೂಡ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋದಲ್ಲಿ ಚಿರು ನಿಂತಿದ್ದಾರೆ. ಅವರ ಹಿಂದೆ ಮೇಘನಾ ನಿಂತಿದ್ದಾರೆ. ಇಬ್ಬರ ಮುಖದಲ್ಲೂ ನಗು ಇದೆ. ಈ ಫೋಟೋಗೆ ಮೇಘನಾ, ‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡಿಕೊಂಡ ಒಂದು ಗಂಟೆಯಲ್ಲಿ ಸಾವಿರಾರು ಲೈಕ್ಸ್ ಸೇರಿ ಅಭಿಮಾನಿಗಳು ಕಮೆಂಟ್ ಬಾಕ್ಸ್​​ನಲ್ಲಿ ‘ಮಿಸ್​ ಯೂ ಚಿರು ಸರ್ಜಾ’ ಅಂತ ಕಮೆಂಟ್ಸ್ ಮಾಡುತ್ತಿದ್ದಾರೆ. ಫೋಟೋ ಶೇರ್ ಮಾಡಿದ ನಂತರ ಮೇಘನಾ ರಾಜ್, ಧ್ರುವ ಸರ್ಜಾ, ರಾಯನ್ ರಾಜ್ ಸರ್ಜಾ ಪ್ರಮೀಳಾ ಜೋಶಾಯಿ ಸುಂದರ್ ರಾಜ್ ಎಲ್ಲರು ಕೂಡ ಕುಟುಂಬ ಸಮೇತರಾಗಿ ಚಿರು ಸಮಾಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಚಿರು ಸಮಾಧಿಗೆ ಪೂಜೆ ಮಾಡಲಾಯಿತು. ಆಗ ಇಡೀ ಕುಟುಂಬ ಚಿರು ಅವ್ರನ್ನ ನೆನೆದು ಭಾವುಕರಾದ್ರು.

ಇದನ್ನೂ ಓದಿ: ಅಭಿಷೇಕ್ ಮದುವೆಗೆ ದರ್ಶನ್ ಯಾಕೆ ಬರಲಿಲ್ಲ!? ತಮ್ಮನ ಮದುವೆಗೆ ಅಣ್ಣನೇ ಬರಲಿಲ್ಲ ಯಾಕ್ ಗೊತ್ತಾ?

ವಿ ಮಿಸ್ ಯು ಪಪ್ಪ ಎಂದ ಚಿರು ಪುತ್ರ!

ಇನ್ನು ಪ್ರಮೀಳಾ ಜೋಶಾಯಿ ಅವ್ರ ಜೊತೆ ಬಂದಂತಹ ರಾಯನ್ ರಾಜ್ ಸರ್ಜಾ ಅಪ್ಪನಿಗೆ ಪುಷ್ಪ ನಮನವನ್ನು ಸಲ್ಲಿಸುತ್ತಾನೆ. ಆಗ ಪ್ರಮೀಳಾ ಜೋಶಾಯಿ ಅವರೇ ಮಗುವನ್ನ ಎತ್ತಿ ಕೊಂಡಿರುತ್ತಾರೆ. ಅಪ್ಪನಿಗೆ ಹೂವು ಹಾಕಿ ನಮಸ್ಕಾರ ಮಾಡು ಅಂತ ಪ್ರಮೀಳಾ ಹೇಳ್ತಾರೆ ರಾಯನ್ ಕೂಡ ಆಗೇ ಮಾಡ್ತಾನೆ ಅಲ್ದೇ ವಿ ಮಿಸ್ ಯು ಅಪ್ಪ ವಿ ಮಿಸ್ ಯು ಪಪ್ಪ ವಿ ಮಿಸ್ ಯು ಅಂತ ತುಂಬಾ ಸಲ ಅವ್ನ ತೊದಲು ಮಾತುಗಳಲ್ಲಿ ಹೇಳ್ತಾನೆ ಇರ್ತಾನೆ. ಆಗ ಮೇಘನಾ ಅವರಿಗೆ ತುಂಬಾ ನೋವಾಗುತ್ತೆ ಪತಿಯ ಫೋಟೋದಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಮೇಘನಾ ಮಗನ ಬಳಿ ಬರ್ತಾರೆ ನಂತರ ತಾಯಿ ಜೊತೆಗಿದ್ದ ರಾಯನ್ ತಾವು ಎತ್ತಿಕೊಳ್ಳುತ್ತಾರೆ. ಆಗ ರಾಯನ್ ಬಿಡು ನಾನು ಹೂ ಹಾಕ್ತೀನಿ ವಾವ್ ಬ್ಯೂಟಿಫುಲ್ ಅಂತಿಲ್ಲ ಮಾತಾಡ್ತಾ ಇರ್ತಾನೆ. ಆಗ ಮೇಘನಾ ಅವರು ಭಾವುಕರಾಗ್ತಾರೆ, ಆಗೇ ಸುಮ್ಮನೆ ನಿಂತುಬಿಡ್ತಾರೆ. ಆದ್ರೆ ಜೊತೆಗೆ ಪಕ್ಕದಲ್ಲಿ ನಿಂತಿದ್ದ ಪ್ರಮೀಳಾ ಕಣ್ಣೀರು ಹಾಕ್ತಾರೆ. ನಿಜಕ್ಕೂ ಕೂಡ ಇಂತಹ ಸ್ಥಿತಿ ಯಾರಿಗೂ ಬರಬಾರದು ಇಷ್ಟು ಬೇಗ ಪತಿಯನ್ನ ಕಳೆದುಕೊಂಡು ಒಂಟಿ ಜೀವನವನ್ನ ನಡೆಸುತ್ತೇನೆ ಅಂತ ಮೇಘನಾ ಅವರು ಕೂಡ ಯಾವತ್ತಿಗೂ ಅಂದುಕೊಂಡಿರಲಿಲ್ಲ. ಆದರೆ ವಿಧಿಯ ಆಟದ ಮುಂದೆ ಎಲ್ಲವೂ ಕೂಡ ಶೂನ್ಯ ಅನ್ನೋದು ಚಿರಂಜೀವಿ ಸರ್ಜಾ ಅವರ ಸಾವಿನಿಂದ ಅರ್ಥವಾಗ್ತಿದೆ.

ಇದನ್ನೂ ಓದಿ: ಅಭಿ ಹಾಗೂ ಅವಿವಾ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಮಾವನಿಂದ ಅಭಿಷೇಕ್ ಗೆ ಸಿಕ್ತು ಭರ್ಜರಿ ಗಿಫ್ಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram