ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಗರಂ; ಮಗು ಆಗಿದೆ ಅಂತ ಸುಳ್ಳು ಸುದ್ದಿ ಹಾಕಿದವರಿಗೆ ಕೊಟ್ರು ಟಾಂಗ್

ಅರುಳು ಹುರಿದಂತೆ ಫಟ ಫಟ್ ಅಂತ ಮಾತನಾಡುವ ಮುದ್ದು ಮುಖದ ಚೆಲುವೆ ನೇರ ಮಾತುಗಳಿಂದಲೇ ಸಾಕಷ್ಟು ಜನರ ಹೃದಯ ಕದ್ದು, ಜೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನ ಜನತೆಗೆ ಪರಿಚಯವಾದವರು ನಟಿ ನಯನಾ ಶರತ್. ಹೌದು ಸಿನಿಮಾ, ಸೀರಿಯಲ್‌ಗಳಲ್ಲಿಯೂ ಸಕ್ರಿಯವಾಗಿರುವ ಈ ನಟಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅದು ಎಲ್ಲರಿಗೂ ಗೊತ್ತು. ಈ ಖುಷಿಯಲ್ಲಿಯೇ ಸಿಹಿಕಹಿ ಚಂದ್ರು ಅವರಿಂದ ಸೀಮಂತ ಶಾಸ್ತ್ರವನ್ನೂ ನೆರವೇರಿಸಿಕೊಂಡು, ಬಸರಿ ಬಯಕೆ ಈಡೇರಿಸಿಕೊಂಡಿದ್ದರು. ನಯನಾ ಅವರಿಗೆ ವಿಶೇಷ ಸೀಮಂತ ಮತ್ತು ಬಸರಿ ಬಯಕೆಯನ್ನೂ ಈಡೇರಿಸಲಾಗಿತ್ತು, ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ನಟಿ ನಯನಾ ಶರತ್‌ ಅತಿಥಿಯಾಗಿ ಆಗಮಿಸಿದ್ದರು, ಬಸರಿ ಹೆಣ್ಣುಮಕ್ಕಳಿಗಾಗಿಯೇ ವಿವಿಧ ಬಗೆಯ ಖಾದ್ಯ ಮತ್ತು ಆರೋಗ್ಯ ಸಲಹೆಯನ್ನು ಬೊಂಬಾಟ್‌ ಭೋಜನ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ.

WhatsApp Group Join Now
Telegram Group Join Now

ಅದರಂತೆ, ನಟಿ ನಯನಾ ಸಹ ಬೊಂಬಾಟ್‌ ಭೋಜನಕ್ಕೆ ಆಗಮಿಸಿ, ಸಿಹಿ ಕಹಿ ಚಂದ್ರು ಮಾಡಿದ ಪಾನಿಪುರಿ ಸೇವಿಸಿ ಬಸರಿ ಬಯಕೆಯನ್ನು ಈಡೇರಿಸಿಕೊಂಡಿದ್ದರು, ಇದಷ್ಟೇ ಅಲ್ಲ, ಇದೇ ಕಾರ್ಯಕ್ರಮದಲ್ಲಿ ಸೀಮಂತ ಶಾಸ್ತ್ರವನ್ನೂ ನಯನ ಅವರಿಗೆ ಮಾಡಲಾಗಿತ್ತು, ಸೀರೆ, ಬಳೆ, ಅರಿಶಿಣ ಕುಂಕುಮವನ್ನು ಸ್ವತಃ ಸಿಹಿಕಹಿ ಚಂದ್ರು ನೀಡಿದ್ದರು, ಅಲ್ದೇ ಗರ್ಭಿಣಿ ಅನ್ನೋ ವಿಚಾರವನ್ನ ನಯನ ಅವ್ರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು ನಯನ ಅವ್ರ ತಾಯ್ತನದ ಖುಷಿಯ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನ ಮಾಡಿ ಶೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಹೀಗಾಗಿ ಅಂತವರಿಗೆ ಇದೀಗ ನಯನ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಹೌದು ಕನ್ನಡ ಕಿರುತೆರೆಯ ಖ್ಯಾತ ಹಾಸ್ಯ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ನಟಿ ನಯನಾ, ಕಾಮಿಡಿ ಕಿಲಾಡಿ ನಯನಾ ಎಂದೇ ಫೇಮಸ್‌. ತಮ್ಮ ಪಂಚಿಂಗ್‌ ಡೈಲಾಗ್‌, ನಟನೆ ಮೂಲಕವೇ ಎಲ್ಲರನ್ನು ನಗಿಸುತ್ತಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಸಿನಿಮಾ, ಕಿರುತೆರೆಯಲ್ಲಿಯೂ ಅಪಾರ ಜನಮೆಚ್ಚುಗೆ ಪಡೆದ ನಯನಾ, ಈಗಲೂ ಈ ಎರಡೂ ಕ್ಷೇತ್ರಗಳಲ್ಲಿ ಬಿಜಿಯಾಗಿದ್ದಾರೆ. ಹೌದು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಯಲ್ಲಮ್ಮನ ತಾಯಿ ದೇವಮ್ಮನ ಪಾತ್ರದಲ್ಲಿ ನಯನ ನಟಿಸುತ್ತಿದ್ದಾರೆ. ಈ ಸೀರಿಯಲ್‌ ಮೂಲಕವೂ ಅತ್ಯುತ್ತಮ ನಟನೆ ನೀಡುತ್ತಿರುವ ನಯನಾ ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಇನ್ನು ವೃತ್ತಿ ವೈಯಕ್ತಿಕ ಬದುಕು ಎರಡನ್ನು ಸರಿದೂಗಿಸಿಕೊಂಡು ಹೋಗ್ತಿರುವ ನಟಿ ನಯನಾ 2018ರ ಏಪ್ರಿಲ್‌ನಲ್ಲಿ ಧರ್ಮಸ್ಥಳದಲ್ಲಿ ಶರತ್‌ ಜತೆ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದರು. ನಂತರ ಆಪ್ತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದೀಗ ಐದು ವರ್ಷಗಳ ಬಳಿಕ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಇದನ್ನ ಖುಷಿಯಿಂದಲೇ ಹೇಳಿಕೊಂಡಿತ್ತು ಜೋಡಿ ಅದ್ರೆ ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವು ವೆಬ್ ಚಾನೆಲ್, ಯೂಟ್ಯೂಬ್ ಹಾಗೂ ಕೆಲವೊಂದು ಫೇಜ್ ಗಳು ನಯನ ಅವರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಅವಳಿ ಮಕ್ಕಳು ಅಂತೆಲ್ಲಾ ಸುದ್ದಿ ಮಾಡ್ತಿದ್ದಾರೆ ಇದೆಲ್ಲವನ್ನ ಗಮನಿಸಿದ ನಯನ ಅಂಥವರಿಗೆ ಸರಿಯಾಗಿಯೇ ವಿಧಿತೋ ಮಾಡಿ ಚಾಳಿ ಬಿಡಿಸಿದ್ದಾರೆ.

ಲೈವ್ ಬಂದು ನಯನ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಹೇಳಿದ್ದೇನು ಗೊತ್ತಾ?

ಹೌದು ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ತಮ್ಮ ಬಗ್ಗೆ ತಮ್ಮ ತಾಯಿತನದ ಬಗ್ಗೆ ಕೆಟ್ಟದಾಗಿ ಸುದ್ದಿಗಳನ್ನು ಮಾಡಿರತಕ್ಕಂತವರ ಚಳಿಯನ್ನು ಬಿಡಿಸಿದ್ದಾರೆ ಅಂತ ಹೇಳಬಹುದು. ಹೌದು ನಾನು ಗರ್ಭಿಣಿ, ನಾನು ಇಲ್ಲ ಅಂತ ಹೇಳುವುದಿಲ್ಲ. ಹಾಗಂದ ಮಾತ್ರಕ್ಕೆ ನಯನಾಗೆ ಎರಡು ಮಕ್ಕಳಾಗಿದ್ದಾರೆ, ಅವಳಿ ಜವಳಿ ಮಕ್ಕಳು, ನಯನ ಅವರು ಅವರ ಗಂಡನಿಂದ ಗರ್ಭಿಣಿಯಾಗಿದ್ದು ಮಕ್ಕಳಾಗಿವೆ. ಹೀಗೆಲ್ಲಾ ಸುದ್ದಿ ಮಾಡುವುದು ಸರಿಯಲ್ಲ ನನಗೆ ಮಕ್ಕಳಾದರೆ ಖಂಡಿತವಾಗಿಯೂ ಕರ್ನಾಟಕದ ಜನರಿಗೆ ನಾನೇ ತಿಳಿಸ್ತೀನಿ. ಅದನ್ನು ಬಿಟ್ಟು ಇನ್ನೊಬ್ಬರ ಖಾಸಗಿತನವನ್ನ ನೀವು ಬಂಡವಾಳವಾಗಿಸ್ಕೊಳ್ಳೋದು ಸರಿಯಲ್ಲ.

ಈ ರೀತಿಯ ಕಚಡ ಸುದ್ದಿಗಳನ್ನು ಮಾಡೋ ಕೀಳು ಮಟ್ಟದ ಮನಸ್ಥಿತಿಯವರಿಗೆ ಹೇಳ್ತಾ ಇದ್ದೀನಿ ಆ ಪೋಸ್ಟ್ಗಳನ್ನು ಕೂಡ ನಾನು ಶೇರ್ ಮಾಡ್ತಾ ಇದ್ದೀನಿ ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಡಿಲೀಟ್ ಮಾಡಿಬಿಡಿ ನಿಮ್ಮ ಕಮೆಂಟ್ಸ್ ಗೋಸ್ಕರ ನಿಮ್ಮ ಲೈಕ್ಸ್ ಗೋಸ್ಕರ ಇನ್ನೊಬ್ಬರ ಜೀವನವನ್ನ ಬಂಡವಾಳವಾಗಿಸಿಕೊಳ್ಳಬೇಡಿ ಅಂತ ಚೀಪ್ ಮೆಂಟಾಲಿಟಿ ಯಿಂದ ಹೊರಗಡೆ ಬನ್ನಿ, ಈ ರೀತಿಯಾಗಿ ಇನ್ನೊಬ್ಬರ ಜೀವನವನ್ನ ಬಂಡವಾಳವಾಗಿಸಿಕೊಳ್ಳತಕ್ಕಂತ ಕೆಟ್ಟ ಮನಸ್ಥಿತಿಯ ಜನರಿಗೆ ಮತ್ತೊಮ್ಮೆ ಹೇಳ್ತಾ ಇದೀನಿ ಅದೆಲ್ಲವನ್ನು ಡಿಲೀಟ್ ಮಾಡಿ ನನಗೆ ಮಗು ಆದರೆ ನಾನೇ ಕನ್ನಡಿಗರಿಗೆ ಸ್ವತಹ ತಿಳುಸ್ತೀನಿ ಅಂತ ನಯನ ಕೆಟ್ಟ ಸುದ್ದಿಗಳನ್ನು ಸುಳ್ಳು ಸುದ್ದಿಗಳನ್ನು ಹಬ್ಬಿಸುವವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ಧ್ರುವ ಸರ್ಜಾ ಮಗಳ ಮೊದಲ ವರ್ಷದ ಬರ್ತಡೇ ಸಂಭ್ರಮ; ಫೋಟೋ ಮತ್ತು ವಿಡಿಯೋ ಇಲ್ಲಿದೆ ನೋಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram