ಕಾಮಿಡಿ ಕಿಲಾಡಿ ನಯನಾ ಅದ್ದೂರಿ ಸೀಮಂತ; ವಿಭಿನ್ನ ಥೀಮ್ ನಲ್ಲಿ ಸೀಮಂತ ಕಾರ್ಯ!ಯಾರೆಲ್ಲ ಬಂದಿದ್ರು ಗೊತ್ತಾ?

ಮೊನ್ನೆಯಷ್ಟೇ ತಾವು ತಾಯಿಯಾಗುತ್ತಿರುವ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದ ನಟಿ ನಯನಾ ಇದೀಗ ಅದ್ದೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ. ಹೌದು ಕಾಮಿಡಿ ಕಿಲಾಡಿಗಳು ನಯನಾ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಗರ್ಭಿಣಿಯಾದ ನಂತರವೂ ಕೂಡ ಅವರು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಅಲ್ಲಿಯೂ ಕೂಡ ಅಂದ್ರೆ ಕೆಲವೊಂದು ರಿಯಾಲಿಟಿ ಶೋ ವೇದಿಕೆಯಲ್ಲಿಯೂ ನಯನಾ ಅವ್ರಿಗೆ ವಿಶೇಷವಾಗಿ ಸೀಮಂತ ಕಾರ್ಯ ಮಾಡಲಾಗಿತ್ತು. ಇದೀಗ ಅವರು ಕುಟುಂಬ, ಸ್ನೇಹಿತರ ಜೊತೆ ಸೇರಿ ಸೀಮಂತ ಮಾಡಿಕೊಂಡಿದ್ದಾರೆ. ಹೌದು ಹಸಿರು ಬಣ್ಣದ ಸೀರೆ ಉಟ್ಟು ನಯನಾ ಅವರು ಸೀಮಂತ ಮಾಡಿಸಿಕೊಂಡಿದ್ದಾರೆ. ಅದ್ದೂರಿಯಾಗಿ ವಿಭಿನ್ನ ಥೀಮ್ ನಲ್ಲಿ ಈ ಸೀಮಂತ ಕಾರ್ಯಕ್ರಮ ನಡೆದಿದೆ.

WhatsApp Group Join Now
Telegram Group Join Now

ಇನ್ನು ಇದೆ ಸಂದರ್ಭದಲ್ಲಿ ಪತಿಯ ಜೊತೆ ಸೇರಿ ಅವರು ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಗಿಚ್ಚಿ ಗಿಲಿಗಿಲಿ, ಕಾಮಿಡಿ ಕಿಲಾಡಿಗಳು, ರಿಯಾಲಿಟಿ ಶೋ ಸ್ಪರ್ಧಿಗಳು ಈ ಸೀಮಂತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ನಯನಾ ಅವ್ರಿಗೆ ಶುಭಾಶಯ ಕೋರಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಅನೇಕರು ನಯನಾ ಅವರಿಗೆ ಶುಭ ಹಾರೈಸಿದ್ದಾರೆ. ಕಾಮಿಡಿ ಕಿಲಾಡಿಗಳು, ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಉತ್ತರ ಕರ್ನಾಟಕದ ಈ ಬೆಡಗಿ ಈಗ ಕನ್ನಡದ ಅನೇಕ ರಿಯಾಲಿಟಿ ಶೋಗಳು, ಧಾರಾವಾಹಿ, ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಪ್ರತಿಯೊಂದು ಕ್ಷಣವನ್ನು ಕೂಡ ಎಂಜಾಯ್ ಮಾಡ್ತಿದ್ದಾರೆ.

ಹೌದು ಕಾಮಿಡಿ ಕಿಲಾಡಿಗಳು ಮೂಲಕ ನಾಡಿನ ಮನೆಮನಗಳಿಗೂ ಹತ್ತಿರವಾದವರು ನಟಿ ನಯನಾ. ಅಲ್ಲಿನ ಖ್ಯಾತಿಯಿಂದಲೇ ಕನ್ನಡದ ಕಿರುತೆರೆ, ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಕೆಲವು ತಿಂಗಳುಗಳ ಕಾಲ ನಟನೆಯಿಂದ ಕೊಂಚ ದೂರ ಉಳಿದಿದ್ದಾರೆ. ಸ್ಟಾರ್‌ ಸುವರ್ಣದಲ್ಲಿ ಮೂಡಿಬರುತ್ತಿದ್ದ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್‌ನಿಂದಲೂ ಅವರು ಹೊರಬಂದಿದ್ದಾರೆ ಹೌದು ನಯನಾ ಈಗ ತುಂಬು ಗರ್ಭಿಣಿ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಯನ ಸದ್ಯ ಸೀಮಂತ ಶಾಸ್ತ್ರವನ್ನ ಬಹಳ ಶಾಸ್ತ್ರ ಬದ್ಧವಾಗಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ಅಂದ್ರೆ ಕೆಲ ದಿನಗಳ ಹಿಂದೆ ಕಾಮಿಡಿ ಕಿಲಾಡಿಗಳು ಸ್ನೇಹ ಬಳಗ ಸೇರಿ ಸೀಮಂತ ನೆರವೇರಿಸಿದ್ದರು. ಶೀಘ್ರದಲ್ಲಿ ನಯನಾ ಮಡಿಲಿಗೆ ಮಗುವಿನ ಆಗಮನವಾಗಲಿದೆ. ಈ ಹಿನ್ನಲೆಯಲ್ಲಿ ನಯನಾ ಸ್ನೇಹಿತರಿಂದ ಸೀಮಂತ ಶಾಸ್ತ್ರ ನೆರವೇರಿಸಿದ್ರು. ಕಾಮಿಡಿ ಕಿಲಾಡಿಗಳು ಮೂಲಕ ಜತೆಯಾದ ಸ್ನೇಹ ಬಳಗವೇ ವಿಶೇಷ ಸೀಮಂತ ಕಾರ್ಯ ನೆರವೇರಿಸಿತ್ತು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸೀಮಂತದ ಜೊತೆಗೆ ಬೇಬಿ ಬಂಪ್ ಫೋಟೋಶೂಟ್

ಹೌದು ಮಂಗಳೂರು ಮೂಲದ ಸ್ನೇಹಿತರೇ ನಯನಾ ಮನೆಗೆ ತೆರೆಳಿ, ಬಗೆಬಗೆ ಖಾದ್ಯಗಳನ್ನು ಮಾಡಿ ಬಡಿಸಿದ್ರು. ಮಂಗಳೂರು ಶೈಲಿಯ ಕುಚಲಕ್ಕಿ ಅನ್ನ, ಮೀನೂಟ, ಬಂಗುಡೆ ಫಿಶ್‌ ಫ್ರೈ, ಚಿಕನ್‌ ಸುಕ್ಕಾ, ಸೀಗಡಿ ಮೀನಿನ ಬಗೆಬಗೆ ಖಾದ್ಯವನ್ನೇ ಮಾಡಿ, ಎಲ್ಲರೂ ಒಂದೊಂದು ತುತ್ತನ್ನು ನಯನಾಗೆ ತಿನ್ನಿಸಿದ್ದರು. ಈ ಸಂಭ್ರಮದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಶೇರ್‌ ಮಾಡಿದ್ದರು ನಟ ಅನೀಶ್. ಇನ್ನು ಇದಷ್ಟೇ ಅಲ್ಲ ಊಟಕ್ಕೂ ಮುನ್ನ ಈ ಜೋಡಿ ಒಟ್ಟಿಗೆ ಸೇರಿ ಹಲವು ರೀಲ್ಸ್‌ಗಳಿಗೆ ಹೆಜ್ಜೆ ಹಾಕಿದ್ರು, ಬಳಿಕ ಸೀಮಂತ ಶಾಸ್ತ್ರದಲ್ಲಿ ನೀಡುವ ಸೀರೆ, ಅರಿಶಿನ, ಕುಂಕುಮ ನೀಡಿ ಶುಭಾಶಯಗಳನ್ನು ತಿಳಿಸಿದ್ರು. ಈ ವಿಶೇಷ ಸಂಭ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಸ್ನೇಹ ಎಂದರೆ ಇದು, ಬೆಲೆಕಟ್ಟಲಾಗದ ಸ್ನೇಹವಿದು ಎಂದು ಹರಸಿ ಹಾರೈಸಿದ್ದರು. ಇದೀಗ ಮತ್ತೊಮ್ಮೆ ಸ್ನೇಹಿತರು ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿದ್ದು ವಿಶೇಷ ಎನ್ನಬಹುದು.

ಇನ್ನು ನಟಿ ನಯನಾ 2018ರ ಏಪ್ರಿಲ್‌ನಲ್ಲಿ ಧರ್ಮಸ್ಥಳದಲ್ಲಿ ಶರತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಆಪ್ತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸದ್ಯ ಇದೀಗ ಐದು ವರ್ಷಗಳ ಬಳಿಕ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಹೌದು ನಟಿ ನಯನಾ ಶರತ್‌ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಯನಾ ಅವರಿಗೆ ವಿಶೇಷ ಸೀಮಂತ ಕಾರ್ಯವನ್ನ ಮಾಡಿದ್ದು, ಪ್ರಗೆಂನ್ಸಿ ಜರ್ನಿಯನ್ನ ಎಂಜಾಯ್ ಮಾಡ್ತಿರೋ ನಯನಾ ನಮ್ಮ ಫ್ಯಾಮಿಲಿಗೆ ಹೊಸ ವ್ಯಕ್ತಿ ಬರಲಿದ್ದಾರೆ. ನಮ್ಮ ಯಜಮಾನರಿಗೆ ಹೆಣ್ಣು ಮಕ್ಕಳು ತುಂಬಾನೇ ಇಷ್ಟ ಹೀಗಾಗಿ ಮೊದಲು ಮನೆಗೆ ಲಕ್ಷ್ಮಿ ಸರಸ್ವತಿ ಬರಲಿ ಎನ್ನುತ್ತಿದ್ದಾರೆ. ಹೆಣ್ಣು ಮಗು ಹುಟ್ಟರೆ ಕಲಾ ಸರಸ್ವತಿ ಬರಲಿ ಗಂಡು ಹುಟ್ಟಿದರೆ ದೇಶಕ್ಕೊಬ್ಬ ಸೈನಿಕ ಬರಲಿ. ಪ್ರೆಗ್ನೆನ್ಸಿ ಸಮಯದಲ್ಲಿ ಹಾಡುಗಳು ಮತ್ತು ಕವನಗಳ ಮೇಲೆ ಒಲವು ಹೆಚ್ಚಾಗಿದೆ. ಅಚ್ಯುತಮ್ ಕೇಶವಂ ಕೃಷ್ಣ ದಾಮೋದರಂ ಹಾಡು ಹೇಳಿ ಮಗುವನ್ನು ಮಲಗಿಸಬೇಕು ಅಂದುಕೊಂಡಿರುವೆ ಕಾಮಿಡಿ ಕಿಲಾಡಿಗಳು ನಯನಾ ಹೇಳಿಕೊಂಡಿದ್ರು. ಹೀಗಾಗಿ ನೆಟ್ಟಿಗರು ಹೆಣ್ಣಾಗಲಿ ಗಂಡಾಗಲಿ ಒಟ್ಟಿನಲ್ಲಿ ಮುದ್ದಾದ ಅರೋಗ್ಯತವಾದ ಮಗು ನಿಮ್ಮ ಮಡಿಲು ಸೇರಿ ತಾಯಿ ಮಗು ಇಬ್ಬರು ಸೌಖ್ಯವಾಗಿರಿ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ 2ನೇ ಕಂತಿನ ಹಣ ಯಾರಿಗೆಲ್ಲ ಬಂದಿದೆ ಗೊತ್ತಾ? ಹಣ ಬಿಡುಗಡೆ ಆದ್ರೂ ಖಾತೆಗೆ ಯಾಕೆ ಬರುತ್ತಿಲ್ಲ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram