D BOSS: ನಿರ್ಮಾಪಕ ಉಮಾಪತಿಗೆ ಪಬ್ಲಿಕ್ ಲ್ಲೆ ಕ್ಲಾರಿಟಿ ಕೊಟ್ಟ ಡಿ.ಬಾಸ್! ಯಾವ ನಿರ್ಮಾಪಕರು ನನ್ನ ಬೆಳಸಿಲ್ಲ

D BOSS: ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ವಿವಾದ ಜೋರಾಗಿ ಸದ್ದು ಮಾಡಿತ್ತು, ಹೌದು ಸಹೋದರರಂತೆ, ಅದಕ್ಕಿಂತ ಹೆಚ್ಚಾಗಿ ಉತ್ತಮ ಸ್ನೇಹಿತರಂತೆ ಇದ್ದ ದರ್ಶನ್ ಮತ್ತು ಉಮಾಪತಿಯ ನಡುವೆ ಇದ್ದಕ್ಕಿದ್ದ ಹಾಗೆ ಬಿರುಗಾಳಿ ಸೃಷ್ಟಿಯಾಯಿತು. ಹಣದ ವಿಚಾರವಾಗಿ ದರ್ಶನ್ ಮತ್ತು ಉಮಾಪತಿಯ ನಡುವೆ ವೈಮನಸ್ಸು ಬೆಳೆಯಿತು. ಅಷ್ಟೆ ಅಲ್ದೇ ಈ ವಿವಾದ ಜೋರಾಗಿ ವಾರಗಟ್ಟಲೆ ಸದ್ದು ಮಾಡಿತ್ತು. ಇದನ್ನ ನೋಡಿದ ಕೆಲವರು ದರ್ಶನ್ ಮತ್ತು ಉಮಾಪತಿ ನಡುವೆ ಯಾರೋ ಹುಳಿ ಹಿಂಡಲು ಈ ರೀತಿ ಮಾಡಿದ್ದಾರೆ ಅಂತಲೂ ಮಾತನಾಡಿಕೊಂಡಿದ್ದರು. ಈ ವಿವಾದದ ತಣ್ಣಗಾದ ಬಳಿಕ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ದೂರ ಆದರು. ಆದ್ರೆ ಇದೀಗ ಇವರಿಬ್ಬರ ನಡುವೆ ರಾಜಕೀಯ ವಿಚಾರವಾಗಿ ಮತ್ತೆ ವೈಮನಸ್ಸು ಶುರುವಾಗಿದ್ದು, ಒಬ್ಬರು ನೇರವಾಗಿ ಮತ್ತೊಬ್ಬರು ಪರೋಕ್ಷವಾಗಿ ಮಾತಿನ ದಾಳಿಗಿಳಿದಿದ್ದರೆ. ಚುನಾವಣಾ ಕಣದಲ್ಲಿ ನಿರ್ದೇಶಕ ಉಮಾಪತಿ ಶ್ರೀನಿವಾಸ್ ಗೌಡ ಗುರುತಿಸಿಕೊಂಡಾಗ ಕೆಲವೊಂದಿಷ್ಟು ಜನ ನಟ ದರ್ಶನ್, ಉಮಾಪತಿ ಪರ ಮತಯಾಚನೆ ಮಾಡ್ತಾರೆ ಇಬ್ಬರು ಮತ್ತೆ ಒಂದಾಗ್ತಾರೆ ಅಂತ ಹೇಳಿದ್ರು. ಆದ್ರೆ ಈಗ ಇದೆಲ್ಲವೂ ಉಲ್ಟಾ ಹೊಡೆದಿದ್ದು, ನಟ ದರ್ಶನ್ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲು ಅಖಾಡಕ್ಕಿಳಿಯುತ್ತಾರೆ. ಇದರಿಂದ ಉಮಾಪತಿ ಅವ್ರಿಗೆ ಕೊಂಚ ಇರಿಸು ಮುರಿಸು ಆಗಿರಬಹುದು ಈಗಾಗಿ ಮಾತಿನ ಭರದಲ್ಲಿ ಅವ್ರು ಆಡಿದ ಒಂದು ಮಾತು ಇದೀಗ ಇಬ್ಬರ ನಡುವೆ ವೈಮನಸ್ಸಿನ ಹೋಗೆ ಆಡುವಂತೆ ಮಾಡಿಬಿಟ್ಟಿದೆ. ಹಾಗಾದ್ರೆ ಇವರಿಬ್ಬರ ಮಧ್ಯೆ ಮತ್ತೆ ಜಗಳ ಶುರುವಾಯ್ತ ಏನಾಗಿದೆ ಎಲ್ಲವನ್ನ ನೋಡೋಣ ಬನ್ನಿ.

WhatsApp Group Join Now
Telegram Group Join Now

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಇದೀಗ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಫೈಟ್ ಇದೆ. ಈ ಹಿಂದೆ ಇದ್ದಂತೆ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಅವ್ರಿಗೆ ಗೆಲುವು ಅಷ್ಟು ಸುಲಭವಲ್ಲ, ಕಾರಣ ಕಾಂಗ್ರೇಸ್ ಅಭ್ಯರ್ಥಿಯಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ರಾಜಕೀಯ ಕಾಣದಲ್ಲಿದ್ದಾರೆ. ಉಮಾಪತಿ ಶ್ರೀನಿವಾಸ್ ಕ್ಷೇತ್ರದಲ್ಲಿ ಮಾಡ್ತಿರೋ ಒಂದಷ್ಟು ಕೆಲಸಗಳು, ಯುವಕರನ್ನ ಸಂಘಟಿಸುವ ರೀತಿಯನ್ನ ನೋಡ್ತಿದ್ರೆ ಕಾಂಗ್ರೆಸ್ ಮತ್ತೆ ಬಿಜೆಪಿ ಮಧ್ಯೆ ಈ ಭಾರಿ ದೊಡ್ಡ ಕಾದಟವೆ ಆಗುವ ಸಾಧ್ಯತೆ ಹೆಚ್ಚು ಇದೆ. ಒಂದು ಕಾರಣಕ್ಕೆ ಇದು ಹಾಯ್ಲೆಟ್ ಆದ್ರೆ ಮತ್ತೊಂದೆಡೆ ನಟ ದರ್ಶನ್ ಅವ್ರಿಗೆ ಇಬ್ಬರು ಕೂಡ ಸ್ನೇಹಿತರೆ ಹಾಗಿದ್ರೆ ಯಾರ ಪರ ಮತಯಾಚನೆ ಮಾಡ್ತಾರೆ ಅನ್ನುವಂತಹ ವಿಷಯ ಕೂಡ ಚರ್ಚೆಯಲ್ಲಿತ್ತು ಇದೀಗ ನಟ ಯಾವುದೇ ಪಕ್ಷದ ಪರ ಅಲ್ಲಾ ತಮ್ಮ ಆಪ್ತ ಸತೀಶ್ ರೆಡ್ಡಿ ಪರ ಇದೀಗ ಚುನಾವಣಾ ಪ್ರಚಾರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಕೂಡ ಇದರ ಬಗ್ಗೆ ಯಾರು ಮಾತನಾಡಿರಲಿಲ್ಲ ಇದೆಲ್ಲಿಯೂ ಚರ್ಚೆ ಕೂಡ ಆಗಿರಲಿಲ್ಲ. ಆದ್ರೆ ಯಾವಾಗ ನಿರ್ಮಾಪಕ ಉಮಾಪತಿ ಮಾತಿನ ಚಾಟಿ ಮೂಲಕ ದರ್ಶನ್ ಅವ್ರನ್ನ ಕೆಣಕುತ್ತಾರೋ ಆಗ ಶುರುವಾಗುತೆ ನಿಜವಾದ ಸಮರ. ಹೌದು ನಿರ್ಮಾಪಕ ಉಮಾಪತಿ ಮಾತಿನ ಭರದಲ್ಲಿ ಯಾವ ಹೀರೋಗಳು ನಿರ್ಮಾಪಕರಿಲ್ಲದೆ ಹೋಗಿದ್ರೆ ಹೀರೊ ಆಗೋಕೆ ಆಗ್ತಿರಲಿಲ್ಲ, ಅವ್ರು ಬೆಳೆಯೋಕು ಆಗ್ತಿರಲಿಲ್ಲ ಅಂತ ಹೇಳಿಬಿಟ್ಟಿದ್ದಾರೆ. ಆದರೆ ಇಷ್ಟು ದಿನ ಎಲ್ಲಿಯೂ ಇದರ ಬಗ್ಗೆ ಮಾತಾನಾಡದೆ ಸುಮ್ಮನಿದ್ದ ನಟ ದರ್ಶನ್ ಇದೀಗ ಬಹಿರಂಗ ಪ್ರಚಾರದಲ್ಲಿಯೇ ನಿರ್ಮಾಪಕ ಉಮಾಪತಿ ವಿರುದ್ಧ ಕಿಡಿಕಾರಿದ್ದಾರೆ.

ಕಲಾವಿದರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ಇರಲಿ

ಹೌದು ನಟ ದರ್ಶನ್ ಸತೀಶ್ ರೆಡ್ಡಿ ಪರ ಮಾತಯಾಚನೆ ಮಾಡುವಾಗ ನಿರ್ಮಾಪಕ ಉಮಾಪತಿ ಮಾತಿಗೆ ಸರಿಯಾಗಿಯೇ ಚಾಟಿ ಬೀಸಿದ್ದಾರೆ. ಯಾವ ನಿರ್ಮಾಪಕನು ನನ್ನನ್ನ ಬೆಳೆಸಿಲ್ಲ, ನಾನು ನನ್ನ ಸ್ವಂತ ಪರಿಶ್ರಮದಿಂದಷ್ಟೇ ಬೆಳದಿರೋದು, ಅಭಿಮಾನಿಗಳ ಆಶಿರ್ವಾದಿಂದ ನಾನು ಇಷ್ಟು ದೂರ ಬಂದಿದೀನಿ ಹೊರತು ಯಾವನು ನನ್ನನ್ನ ಬೆಳಸಿಲ್ಲ ಆ ರೀತಿ ಹೇಳಿಕೊಳ್ಳುವ ಯೋಗ್ಯತೆ ಕೂಡ ಅವ್ರಿಗಿಲ್ಲ, ಕಲಾವಿದರನ್ನು ಬಗ್ಗೆ ಮಾತನಾಡುವಾಗ ಗಮನ ಇರಲಿ, ನನ್ನ ಬೆಳಸಿದ್ದಾರೆ ಅಂದ್ರೆ ಅದು ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರೊಬ್ಬರೇ ಅದುಬಿಟ್ಟು ಮತ್ಯಾರು ನನ್ನನ್ನ ಬೆಳೆಸಿಲ್ಲ. ಯಾರು ಯಾರನ್ನು ಬೆಳಸಲ್ಲ ಅಂತ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಹೌದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಯಾವ ಪಕ್ಷದ ಪರವಾಗಿ ಎಲ್ಲಿಯೂ ಗುರುತಿಸಿಕೊಂಡಿರಲಿಲ್ಲ, ಬದಲಿಗೆ ಸ್ನೇಹಿತ ಬಿಜೆಪಿ ಪಕ್ಷದ ಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡುತ್ತಿದ್ರು. ಎಲ್ಲಿಯೂ ಕೂಡ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಪರ ಮಾತನಾಡಿರಲಿಲ್ಲ. ಆದ್ರೆ ಉಮಾಪತಿ ಅವ್ರೆ ಸುಮ್ಮನೆ ಇರದೇ ದರ್ಶನ್ ಅವ್ರ ಹೆಸರನ್ನ ಬಳಸದೆ ತುಂಬಾ ಹಗುರವಾಗಿ ಮಾತನಾಡಿದ್ರು, ಹೀಗಾಗಿ ಇಷ್ಟು ದಿನ ಸುಮ್ಮನಿದ್ದ ನಟ ದರ್ಶನ್ ಇದೀಗ ಬಹಿರಂಗವಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಗಳು ಸೇರಿದಂತೆ ಕೆಲವೊಂದಿಷ್ಟು ಜನರು ಆಗಾಗ ಹೇಳ್ತಿರುತ್ತಾರೆ ಚಿತ್ರರಂಗದವರು ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಡಿ, ಯಾರ ಪರವಾಗಿ ಅಥವಾ ವಿರೋಧವಾಗಿ ಎಲ್ಲಿಯೂ ಗುರುತಿಸಿಕೊಳ್ಳಬೇಡಿ ಅಂತ ಆದರೂ ಕೆಲವೊಮ್ಮೆ ಈ ರೀತಿಯ ಸಂಗತಿಗಳು ವೈಯಕ್ತಿಕ ವಿಚಾರದವರೆಗೂ ಹೋಗಿ ಈ ರೀತಿಯ ಬೆಳವಣಿಗೆಗಳು ಆಗುತ್ತೆ ಅನ್ನೋದಕ್ಕೆ ಈ ವಿಚಾರವೇ ಸಾಕ್ಷಿ. ಯಾಕಂದ್ರೆ ಒಂದು ಕಾಲದಲ್ಲಿ ಅಣ್ಣ ತಮ್ಮಂದಿರಂತೆ ಪರಮಾಪ್ತ ಗೆಳೆಯರಾಗಿದ್ದ ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ಅವ್ರು ಹಣದ ವಿಚಾರವಾಗಿ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿ ನಂತರ ಕೆಲವು ದಿನಗಳ ಬಳಿಕ ಇಬ್ಬರು ಕೂಡ ಒಂದು ರೀತಿ ಇವರಿಬ್ಬರ ಗಲಾಟೆಯ ವಿಚಾರ ನಟ ದರ್ಶನ್ ಅವ್ರನ್ನ ಮಾಧ್ಯಮದವರು ಬ್ಯಾನ್ ಮಾಡುವಂತೆ ಮಾಡುತ್ತೆ. ಇದೆಲ್ಲವನ ದಾಟಿಯು ದರ್ಶನ್ ಅವ್ರು ಎಲ್ಲಿಯೂ ಯಾರ ಬಗ್ಗೆಯೂ ಮಾತನಾಡೋದಕ್ಕೆ ಹೋಗೋದಿಲ್ಲ.. ಆದರೆ ಚುನಾವಣೆ ಹಿನ್ನಲೆ ಇದೀಗ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿ ಎಲ್ಲೋ ಒಂದು ಕಡೆ ಉಮಾಪತಿ ಅವ್ರ ಕೆಂಗಣ್ಣಿಗೆ ಗುರಿಯಾಗುತ್ತಾರೆ ಅನ್ಸುತ್ತೆ ಇದೀಗ ಉಮಾಪತಿ ಕೂಡ ಸುಮ್ಮನ್ನಿರದೆ ಮಾತನಾಡಿ ನಾಲಿಗೆ ಹರಿಬಿಟ್ಟು, ಉಣ್ಣಿನ ಮೇಲೆ ಬರೆ ಎಳೆಯುವ ಕೆಲಸ ಮಾಡಿ ಈಗ ಮತ್ತೆ ವೈಮನಸ್ಸು ಹೆಚ್ಚಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿ ಪೋಸ್ಟ್ ಗೆ ಶಿವಣ್ಣ ಖಡಕ್ ಎಚ್ಚರಿಕೆ.!

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ದರ್ಶನ್ ಅವರು ಯಾಕೆ ಬಂದಿಲ್ಲ? ಕಾರಣ ತಿಳಿಸಿದ ರಕ್ಷಕ್ ಬುಲೆಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram