D.K Shivakumar: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಎಂಟ್ರಿ, 100ನೇ ಅತಿಥಿಯಾಗಿ ಸಾಧಕರ ಖುರ್ಚಿ ಏರಳಿದ್ದಾರೆ ಡಿಕೆಶಿ

D.K Shivakumar: ಕನಕಪುರದ ಬಂಡೆ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ನಮ್ಮ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊನೆಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವಾರದ ವೀಕೆಂಡ್ ಕಾರ್ಯಕ್ರಮದ 100ನೇ ಅತಿಥಿಯಾಗಿ ಸಾಧಕರ ಖುರ್ಚಿಯ ರಾಜ್ಯದ ಡಿಸಿಎಂ ಡಿಕೆಶಿ ಕೂತಿದ್ದಾರೆ. ಹೌದು ನಟ ರಮೇಶ್ ಅರವಿಂದ್ ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರ ಸರದಿ. ಹೌದು ಸಾಧಕರ ಸೀಟ್ ಮೇಲೆ ಡಿಕೆಶಿ ಕೂತು ಅವರ ಕಥೆ ಕೇಳಿದ್ದಾರೆ. ಡಿಕೆಶಿ ಕಥೆಯನ್ನು ಆಪ್ತರಿಂದ ಹೇಳಿಸಿದ್ದಾರೆ. ಇನ್ನು ಭಾನುವಾರ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಡಿಕೆಶಿ ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈಗಾಗಿ ಈ ವೀಕೆಂಡ್ ಗೋಸ್ಕರ ಕರ್ನಾಟಕದ ಮಂದಿ ಕಾಯುತ್ತಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಫಿನಾಲೆ ವೇದಿಕೆ ಮೇಲೆ ಎಂಗೇಜ್ಮೆಂಟ್ ಮಾಡಿಕೊಂಡ ಜಗಪ್ಪ ಹಾಗೂ ಸುಶ್ಮಿತಾ

ವೀಕೆಂಡ್ ನಲ್ಲಿ ಅನಾವರಣವಾಗಲಿದೆ ಕನಕಪುರ ಬಂಡೆಯ ಯಶೋಗಾಧೆ

ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕೇವಲ ಸಿನಿಮಾ ರಂಗದ ಸೆಲೆಬ್ರೆಟಿಗಳು ಮಾತ್ರವಲ್ಲ ನಾನಾ ಕ್ಷೇತ್ರಗಳ ಸಾಧಕರು ಕೂಡ ಸಾಧಕರ ಕುರ್ಚಿ ಏರಿದ್ದಾರೆ. ಹಾಗೇ ಕೆಲ ರಾಜಕಾರಣಿಗಳು ಕೂಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಹೌದು ವೀಕೆಂಡ್ ಟೆಂಟ್ ಗೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಸಿದ್ದರಾಮಯ್ಯ ಕೂಡ ವೀಕೆಂಡ್ ವಿತ್​ ರಮೇಶ್ ಕಾರ್ಯಕ್ರಮದಲ್ಲಿ ಸಾಧಕ ಕುರ್ಚಿಯಲ್ಲಿ ಕುಳಿತು ತಮ್ಮ ಏಳು ಬೀಳುಗಳನ್ನು ಹಂಚಿಕೊಂಡಿದ್ರು. ಹೌದು ಹಲವು ಸೀಸನ್ ಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಅವರ ಸಾಲಿಗೆ ಇದೀಗ ಡಿ.ಕೆ ಶಿವಕುಮಾರ್ ಸೇರಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್(D.K Shivakumar) ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ ಅಂತ ಹೇಳಲಾಗ್ತಿದೆ.

ಡಿಕೆ ಶಿವಕುಮಾರ್ ಅಪಾರ ಕಾರ್ಯಕರ್ತರನ್ನು ಹೊಂದಿದ್ದಾರೆ. ಈಗಾಗಿಯೇ ಈ ಸಂಚಿಕೆ ಎಲ್ಲ ಸಂಚಿಕೆಗಳ ಟಿ ಆರ್ ಪಿ ಯನ್ನ ಧೂಳಿಪಟ ಮಾಡುತ್ತೆ ಅನ್ನೋದು ಹಲವರ ಮಾತು. ಇನ್ನು ಡಿಸಿಎಂ ಡಿಕೆಶಿ ತಮ್ಮ ಚಾಕ ಚಕ್ಯತೆಯಿಂದಲೇ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ರಾಜಕೀಯದಲ್ಲಿ ಕನಕಪುರ ಬಂಡೇ ಎಂದೇ ಕರೆಸಿಕೊಳ್ಳು ಡಿ.ಕೆ ಶಿವಕುಮಾರ್ ಈ ವಾರ ವೀಕೆಂಡ್​ ವಿತ್ ಶೋನಲ್ಲಿ ಕಾಣಿಸಿಕೊಳ್ತಿರೋದು ಇದೀಗ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದ್ದು, ಯಾವ್ಯಾವ ಸಂಗತಿಗಳು ಅನವರಣವಾಗಬಹುದು ಅಂತ ಕೆಲವರು ಕಾಯುತ್ತಿದ್ದರೆ ಇನ್ನು ಹಲವರು ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ಡಿಕೆಶಿ ಬೆಳೆದು ಬಂದ ಹಾದಿಯ ಬಗ್ಗೆ ತಿಳಿಯಲು ತುಂಬಾ ಉತ್ಸುಕಾರಾಗಿದ್ದಾರೆ. ಇನ್ನು ಈ ವಾರಾಂತ್ಯದಲ್ಲಿ ಅಂದ್ರೆ ಇದೆ ಶನಿವಾರ ಮತ್ತು ಭಾನುವಾರ ಡಿಕೆಶಿ ಅವರ ಎಪಿಸೋಡ್ ನ್ನು ಪ್ರಸಾರ ಮಾಡಲಾಗುತ್ತದೆ ಅಂತ ಹೇಳಲಾಗುತ್ತಿದ್ದೂ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಡಿಕೆಶಿ ಅವ್ರ ಕುರಿತಾದ ಎಪಿಸೋಡ್ ಗಳನ್ನ ನೋಡಬಹುದು ಅನ್ನೋ ಮಾಹಿತಿ ಲಭ್ಯವಾಗಿದೆ. ಒಟ್ನಲ್ಲಿ ಡಿಕೆಶಿ ಅವರ ರಾಜಕೀಯ ಸಾಧನೆಯ ಕಥೆ ಕೇಳೋದ್ದಕ್ಕೆ ಡಿಕೆ ಫ್ಯಾನ್ಸ್ ಎದುರು ನೋಡ್ತಿರೋದಂತೂ ಸುಳಲ್ಲ.

ಇದನ್ನೂ ಓದಿ: ಉಚಿತ ಪ್ರಯಾಣಕ್ಕೂ ಟಿಕೆಟ್ ತಗೊಳ್ಳೆಬೇಕು! ಉಚಿತ ಬಸ್ ಪ್ರಯಾಣದ ಟಿಕೆಟ್ ಹೀಗಿರುತ್ತೆ ನೋಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram