Darshan: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ದರ್ಶನ್ ಅವರು ಯಾಕೆ ಬಂದಿಲ್ಲ? ಕಾರಣ ತಿಳಿಸಿದ ರಕ್ಷಕ್ ಬುಲೆಟ್!

Darshan: ಬುಲೆಟ್ ಪ್ರಕಾಶ್ ಅವ್ರ ಮಗಳ ಮದುವೆ ನಿಶ್ಚಯವಾಗಿದ್ದು, ಅಕ್ಕನ ಮದುವೆಗೆ ತಮ್ಮ ರಕ್ಷಕ್ ತುಂಬಾನೇ ಓಡಾಡಿಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು, ಎಲ್ಲ ಸೆಲಬ್ರೆಟಿಗಳ ಮನೆಗೆ ಹೋಗಿ ಅಹ್ವಾನ ಪತ್ರಿಕೆಯನ್ನ ಕೊಟ್ಟು ಬಂದಿದ್ರು. ಅಲ್ಲದೆ ಆಹ್ವಾನ ಪತ್ರಿಕೆ ಕೊಟ್ಟ ಸಂದರ್ಭದಲ್ಲಿ ಫೋಟೋಗಳನ್ನ ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳುತ್ತಿದ್ದಾರೆ. ಅಲ್ಲದೆ ಅಕ್ಕನ ಮದುವೆಗೆ ಸಂಬಂದಿಸಿದ ಪ್ರತಿಯೊಂದು ಶಾಸ್ತ್ರದ ಫೋಟೊಗಳನ್ನ ಹಂಚಿಕೊಂಡು, ಅಕ್ಕನ ಮದುವೆಯ ಅಪ್ಡೇಟ್ಸ್ ನ್ನ ಕೊಡ್ತಲೆ ಇದ್ರೂ, ಇದೀಗ ಫೈನಲಿ ಅಕ್ಕನ ಮದುವೆಯ ಸಂಭ್ರಮ ಮುಗಿದಿದೆ, ಅಂದರೆ ಅಕ್ಕನ ಧಾರೆಯೆರೆದು ಕೊಟ್ಟು ಗಂಡನ ಮನೆಯನ್ನ ಸೇರಿಸಿ ರಕ್ಷಕ್ ಇದೀಗ ಜವಾಬ್ದಾರಿ ಮುಕ್ತರಾಗಿದ್ದಾರೆ. ಆದರೂ ಕೂಡ ಇದೀಗ ಮತ್ತೊಂದು ವಿಷಯ ಮುನ್ನಲೆಗೆ ಬರುತ್ತಿದೆ ಅದೇನಂದ್ರೆ ಮದುವೆಗೆ ನಟ ದರ್ಶನ್ ಯಾಕೆ ಬರಲಿಲ್ಲ ಅನ್ನೋದು? ಹಾಗದ್ರೆ ನಟ ದರ್ಶನ್ ಯಾಕೆ ಮದುವೆಗೆ ಬರಲಿಲ್ಲ, ಇದರ ಬಗ್ಗೆ ನಟ ರಕ್ಷಕ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿರೋದೇನು ಎಲ್ಲವನ್ನ ನೋಡೋನ ಬನ್ನಿ.

WhatsApp Group Join Now
Telegram Group Join Now

ಹೌದು ನಟ ರಕ್ಷಕ್ ಗುರುಶಿಷ್ಯರು ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ರು ಮೊದಲ ಸಿನಿಮಾದಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಸಂಪಾದಿಸಿದ ರಕ್ಷಕ್ ಇದೀಗ ತನ್ನ ಹೆಗಲ ಮೇಲಿದ್ದ ದೊಡ್ಡ ಜವಾಬ್ದಾರಿಯನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಅದೇ ರಕ್ಷಕ್ ಅಕ್ಕ ವರ್ಷಿಣಿ ಮೋನಿಕಾ ಅವ್ರ ಮದುವೆ. ಹೌದು ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವ್ರ ಬಹುದೊಡ್ಡ ಆಸೆ ಕನಸಾಗಿದ್ದ ವರ್ಷಿಣಿ ಮೋನಿಕಾ ಅವ್ರ ಮದುವೆಯನ್ನ ನಟ ರಕ್ಷಕ್ ಅವ್ರು ಅಪ್ಪನ ಆಸೆಯಂತೆ ಮಾಡಿ ಮುಗಿಸಿದ್ದಾರೆ. ಅಲ್ಲದೆ ಚಿತ್ರರಂಗದಲ್ಲಿ ಭದ್ರಾವಾಗಿ ನೆಲೆಯೂರುವ ಕನಸ್ಸನ್ನು ಕೂಡ ನಟ ರಕ್ಷಕ್ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಇಷ್ಟೆಲ್ಲ ಆಸೆಗಳ ನಡುವೆ ಅಕ್ಕನ ಮದುವೆ ಮಾಡಿ ಮುಗಿಸಿರುವ ನಟ ರಕ್ಷಕ್ ಒಂದು ಯಡವಟ್ಟು ಮಾಡಿಕೊಂಡಿದ್ದು ಇದೀಗ ಎಲ್ಲೆಡೆ ಆ ಸುದ್ದಿ ಸಾಕಷ್ಟು ವೈರಲ್ ಆಗ್ತಿದೆ. ಹೌದು ಬುಲೆಟ್ ಪ್ರಕಾಶ್ ಅವ್ರಿಗೆ ಸಾಕಷ್ಟು ಆಪ್ತರೆನಿಸಿಕೊಂಡಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರೆ ಬುಲೆಟ್ ಪ್ರಕಾಶ್ ಅವ್ರ ಮಗಳು ವರ್ಷಿಣಿ ಮೋನಿಕಾ ಅವರ ಮದುವೆಗೆ ಬಂದಿಲ್ಲ ಇದೀಗ ಈ ವಿಷಯ ಸಾಕಷ್ಟು ವೈರಲ್ ಆಗ್ತಿದ್ದು, ಸಂದರ್ಶನ ಒಂದರಲ್ಲಿ ನಟ ರಕ್ಷಕ್ ನೀಡಿರುವ ಹೇಳಿಕೆಯು ಇದೀಗ ಕೆಲವರ ಕೋಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬುಲೆಟ್ ಪ್ರಕಾಶ್ ಮಗಳು.. ಯಾರೆಲ್ಲ ಬಂದಿದ್ರು?

ನಟ ರಕ್ಷಕ್ ಆಮಂತ್ರಣ ಕೊಡದಿರಲು ಕಾರಣ ಏನ್ ಗೊತ್ತಾ?

ನಿಮ್ಮೆಲ್ಲರಿಗೂ ಗೊತ್ತಿರುವಂತೆ ನಟ ರಕ್ಷಕ್ ಅವ್ರು ಅಕ್ಕನ ಮದುವೆಗೆ ಒಂದೆರೆಡು ವಾರವಿರುವಾಗಲೇ ಎಲ್ಲಾ ಸ್ಟಾರ್ ನಟ ನಟಿಯರಿಗೆ ತಾವೇ ಖುದ್ದಾಗಿ ಅವ್ರ ಮನೆಗಳಿಗೆ ಹೋಗಿ ಆಮಂತ್ರಣ ಪತ್ರಿಕೆಯನ್ನ ಕೊಟ್ಟು ಬಂದು, ಆ ಸಮಯದಲ್ಲಿ ತೆಗೆದುಕೊಂಡು ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ರು, ಅದರಂತೆ ಅವ್ರು ಕರೆದಂತಹ ಎಲ್ಲಾ ನಟ ನಟಿಯರು, ಕಲಾವಿದರುಗಳು ಅವ್ರ ಅಕ್ಕನ ಮದುವೆ ಬಂದು ಆಶಿರ್ವಾದ ಮಾಡಿ ಶುಭಾಶಯಗಳನ್ನ ತಿಳಿಸಿದ್ದಾರೆ. ಆದ್ರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದುವೆ ಬಾರದೇ ಇರೋದು ಇದೀಗ ದೊಡ್ಡ ಸುದ್ದಿಯಾಗಿದೆ. ಹೌದು ನಟ ರಕ್ಷಕ್ ಈ ಹಿಂದೆ ಆಮಂತ್ರಣ ಪತ್ರಿಕೆಗಳನ್ನ ಹಂಚುವಾಗಲೂ ಕೂಡ ಸಾಕಷ್ಟು ಜನರು ಕೇಳಿದ್ರು ಡಿ. ಬಾಸ್ ದರ್ಶನ್ ಮನೆಗೆ ಹೋಗಿ ದರ್ಶನ್ ಅವ್ರನ್ನ ಮದುವೆಗೆ ಕರೆಯಿರಿ ಅವ್ರ ಜೊತೆ ಫೋಟೋ ತೆಗೆದು ಹಾಕಿ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ರು ಕೂಡ ರಕ್ಷಕ್ ಅವ್ರು ಒಂದು ಸೌಜನ್ಯಕ್ಕಾದ್ರೂ ಕೂಡ ಯಾರಿಗೂ ಉತ್ತರಿಸಿರಲಿಲ್ಲ.. ಆಗ ಎಲ್ಲರು ಕೂಡ ಮದುವೆ ಬ್ಯುಸಿ ಅದಕ್ಕೆ ಅಂದುಕೊಂಡು ಮದುವೆ ಡಿ. ಬಾಸ್ ಬಂದೆ ಬರ್ತಾರೆ ಅಂತ ಸುಮ್ಮನಾಗಿದ್ರು. ಇದೀಗ ದರ್ಶನ್ ಅವ್ರು ಮದುವೆಗೆ ಬರದೇ ಇರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಎಲ್ಲರು ಕೂಡ ರಕ್ಷಕ್ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದಾರೆ.

ಡಿ. ಬಾಸ್ ಬರದಿರಲು ಕಾರಣವನ್ನ ಬಿಚ್ಚಿಟ್ಟ ರಕ್ಷಕ್

ಹೌದು ಈ ವಿಚಾರವಾಗಿ ಸಂದರ್ಶಕರೊಬ್ಬರು ರಕ್ಷಕ್ ಅವ್ರನ್ನ ಮಾತಾನಾಡಿಸಿದಾಗ ಸ್ಟಾರ್ ನಟರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದಾರಲ್ಲ ಅವ್ರಿಗೆ ಅಂತ ಬೇರೆ ಪಾರ್ಟಿ ಅರೇಂಜ್ ಮಾಡ್ತೀರಾ ಅಂದಿದ್ದಕ್ಕೆ ಇಲ್ಲ ಇಲ್ಲ ಎಲ್ಲಾ ಮುಗಿದಿದೆ, ಸಾಧ್ಯವಾದ್ರೆ ಅವ್ರ ಮನೆಗೆ ಅಕ್ಕನನ್ನ ಕರ್ಕೊಂಡು ಹೋಗಿ ಬರುತ್ತೀನಿ ಅಂತಾರೆ. ದರ್ಶನ್ ಅವ್ರು ಬರ್ಲಿಲ್ಲ ಅಂದಿದ್ದಕ್ಕೆ, ಅದೇ ನೀವೇ ಹೇಳುದ್ರಲ್ಲ, ಕಾರ್ಡ್ ಕೊಡಬೇಕಿತ್ತು ಕೊಡೋಕಾಗಿಲ್ಲ, ಚುನಾವಣೆ ಬ್ಯುಸಿ ಅಂತ ಹೇಳಿ ತುಂಬಾ ಹಾರಿಕೆಯ ಉತ್ತರ ನೀಡಿ ಸುಮ್ಮನಾಗಿದ್ದಾರೆ. ಇದನ್ನ ನೋಡಿದ ಕೆಲವ್ರು ತುಂಬಾ ಕೊಬ್ಬಿದೆ ಇವ್ನಿಗೆ, ಕರೆಯೋದು ಇವ್ನ ಜವಾಬ್ದಾರಿ, ಬರೋದು ಬಿಡೋದು ಅವ್ರಿಗೆ ಬಿಟ್ಟಿದ್ದು, ಕರ್ದಿದ್ರೆ ಡಿ. ಬಾಸ್ ಪಕ್ಕ ಬರ್ತಿದ್ರು ಅಂತ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ದರ್ಶನ್ ಹಾಗೂ ರಕ್ಷಕ್ ಮಧ್ಯೆ ಏನಾಗಿದ್ಯೋ ಯಾರಿಗೂ ಕೂಡ ತಿಳಿಯುತ್ತಿಲ್ಲ. ಅಷ್ಟು ಜನರಿಗೆ ಆಮಂತ್ರಣ ತಲುಪಿಸಿದ ಹುಡುಗ ದರ್ಶನ್ ಅವ್ರಿಗೆ ಆಮಂತ್ರಣ ಕೊಡದೆ ಇರೋಕೆ ಕಾರಣ ಏನು ಅಂತ ಎಲ್ಲರಿಗೂ ಪ್ರಶ್ನೆ ಮೂಡ್ತಿದೆ. ವರ್ಷಿಣಿ ಮೋನಿಕಾ ಅವ್ರ ಸಂಪೂರ್ಣ ಜವಾಬ್ದಾರಿ ನಂದೇ ಅಂತ ಹೇಳಿದ ನಟ ದರ್ಶನ್ ಅವ್ರು ಮದುವೆಗೆ ಯಾಕ್ ಬರಲಿಲ್ಲ ಅನ್ನೋದು ಇನ್ನೊಂದಷ್ಟು ಜನರ ಪ್ರಶ್ನೆ ಆಗಿದೆ.

ಒಟ್ಟಿನಲ್ಲಿ ಇದರಲ್ಲಿ ತಪ್ಪು ಯಾರದ್ದು ಸರಿ ಯಾರದ್ದು, ಯಾರು ಯಾರ ಮೇಲೆ ಮುನಿಸಿಕೊಂಡಿದ್ದಾರೆ ಕಾರಣ ಏನು ಎಂಬುದು ದರ್ಶನ್ ಅವ್ರು ಮನ ಬಿಚ್ಚಿ ಮಾತನಾಡಿದ್ದಾಗ್ಲೇ ಗೊತ್ತಾಗಲಿದೆ. ಯಾಕಂದ್ರೆ ನಟ ರಕ್ಷಕ್ ಬಹಳ ಸಲೀಸಾಗಿ ಜಾರಿಕೊಂಡು ಎಲ್ಲವನ್ನ ಕೂಡ ತಮ್ಮೊಳಗೆ ಮುಚ್ಚಿಟ್ಟಿದ್ದಾರೆ. ಏನೇ ಆಗ್ಲಿ ವರ್ಷಿಣಿ ಮೋನಿಕಾ ಅವ್ರ ಮುಂದಿನ ಜೀವನ ಸುಖಮಾಯವಾಗಿರಲಿ ಅಂತ ನಾವು ನೀವು ಶುಭ ಆರೈಸೋಣ.

ಇದನ್ನೂ ಓದಿ: ವಿಧಾನಸಭಾ ಚುನಾವಣೆ ಹಿನ್ನೆಲೆ ಮಧ್ಯಪ್ರಿಯರಿಗೆ ಶಾಕ್! ಎಣ್ಣೆ ಪ್ರೇಮಿಗಳಿಗೆ ಸಿಗಲ್ಲ ಎಣ್ಣೆ, ಬಂದ್ ಆಗಲಿವೆ ಎಣ್ಣೆ ಅಂಗಡಿಗಳು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram