ಕಷ್ಟದಲ್ಲಿರುವವರಿಗೆ ಸದಾ ಮಿಡಿಯುತ್ತೆ ದಾಸನ ಹೃದಯ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಭಿಮಾನಿ ಕೈ ಹಿಡಿದ ದರ್ಶನ್‌

ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಅಂತ ಹೇಳ್ತಾರೆ ಆ ಮಾತು ನಮ್ಮ ಚಂದನವನದ ಸಾಕಷ್ಟು ನಟರಿಗೆ ಸೂಕ್ತ ಅಂತ ಹೇಳಿದ್ರೆ ತಪ್ಪಾಗಲ್ಲ. ಹೌದು ನಮ್ಮ ಸ್ಯಾಂಡಲ್ವುಡ್ ನಾ ಡಿ ಬಾಸ್, ಅಭಿಮಾನಿಗಳ ನೆಚ್ಚಿನ ದಾಸ ದರ್ಶನ್‌ ಅವ್ರಿಗೆ ಸೂಕ್ತ ಅಂತ ಹೇಳಬಹುದು. ಹೌದು ಡಿ. ಬಾಸ್ ತಮ್ಮ ಸಹಾಯಕ್ಕೆ ಎಂದಿಗೂ ಪ್ರಚಾರ ಬಯಸಿದವರಲ್ಲ. ಇದಕ್ಕೂ ಮುನ್ನ ಅನೇಕರಿಗೆ ಅವರು ಸಹಾಯ ಮಾಡಿದ್ದಾರೆ. ಇದಕ್ಕೆ ಕಾರಣ ಅವ್ರು ಕೂಡ ಕಷ್ಟದ ಬದುಕುನ್ನ ನೋಡಿಯೇ ಮೇಲೆ ಬಂದವರು. ಕಷ್ಟ ಏನೆಂದು ಗೊತ್ತು ಅಂತ ದರ್ಶನ್‌ ಅವ್ರೆ ಅನೇಕ ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಹೌದು ಖ್ಯಾತ ನಟನ ಮಗನಾದರೂ ಸಿನಿಮಾ ರಂಗದಲ್ಲಿ ಸ್ಟಾರ್‌ ನಟನಾಗಿ ಹೆಸರು ಪಡೆಯಲು ದರ್ಶನ್‌ ಎಷ್ಟೆಲ್ಲಾ ಕಷ್ಟ ಪಟ್ಟಿದ್ದರು. ಏನೆಲ್ಲಾ ಕೆಲಸ ಮಾಡಿದ್ದರು, ಎಷ್ಟು ಅವಮಾನ ಎದುರಿಸಿದ್ದರು ಎಂಬುದು ಸಾಕಷ್ಟು ಜನರಿಗೆ ಗೊತ್ತಿಲ್ಲ . ಈಗಾಗಿ ಕಷ್ಟ ಹಾದಿಯಲ್ಲಿ ಬೆಳೆದು ಬಂದಿರುವ ದರ್ಶನ ಅವ್ರು ಕಷ್ಟದಲ್ಲಿರೋರಿಗೆ ಬಹಳ ಬೇಗ ಸಹಾಯ ಹಸ್ತವನ್ನ ಚಾಚುತ್ತಾರೆ.

WhatsApp Group Join Now
Telegram Group Join Now

ಹೌದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ದರ್ಶನ್‌ ಹಣದ ಸಹಾಯ ಮಾಡಿದ್ದಾರೆ. ರಕ್ಷಾ ಬಂಧನದಂದು ಅಭಿಮಾನಿಯೊಬ್ಬರು ದರ್ಶನ್‌ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಕೂಡಲೇ ದರ್ಶನ್‌ ಆ ಅಭಿಮಾನಿಯನ್ನು ಭೇಟಿ ಮಾಡಿ ಆರ್ಥಿಕ ನೆರವು ನೀಡಿದ್ದಾರೆ. ದರ್ಶನ್‌ ಅವರಿಂದ ನೆರವು ಪಡೆದ ಆದರ್ಶ್‌ ದಾಸನ ಈ ಸಹಾಯಕ್ಕೆ ಸೋಷಿಯಲ್‌ ಮೀಡಿಯಾ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಚಿರು ಸಮಾಧಿ ಪಕ್ಕದಲ್ಲಿ ಮಲಗಿದ್ದ ಧ್ರುವ, ಪ್ರತಿ ವಾರವು ಅಣ್ಣನ ಪಕ್ಕದಲ್ಲೇ ಮಲಗ್ತಾರೆ; ಆದ್ರೆ ಧ್ರುವ ಸರ್ಜಾ ಹೀಗ್ ಮಾಡೋಕೆ ಕಾರಣ ಏನ್ ಗೊತ್ತಾ?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಆರ್ಥಿಕ ನೆರವು ನೀಡಿದ ಚಾಲೆಂಜಿಂಗ್ ಸ್ಟಾರ್, ವಿಡಿಯೋ ಹಂಚಿಕೊಂಡ ಅಭಿಮಾನಿ 

ಹೌದು ಅಭಿಮಾನಿಗಳ ಮೆಚ್ಚಿನ ಯಜಮಾನ ದರ್ಶನ್‌, ಸಿನಿಮಾಗಳಿಂದ ಮಾತ್ರವಲ್ಲ ಗುಣದಿಂದ ಕೂಡಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಭಿಮಾನಿಗಳೇ ನನ್ನ ಸೆಲೆಬ್ರಿಟಿಗಳು ಎಂದು ಹೇಳುತ್ತಾ ಬಂದಿರುವ ಚಾಲೆಂಜಿಂಗ್‌ ಸ್ಟಾರ್‌ ಕಷ್ಟದಲ್ಲಿರುವ ತಮ್ಮ ಅಭಿಮಾನಿಯೊಬ್ಬರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದರ ಬಗ್ಗೆ ಸಹಾಯ ಪಡೆದ ಆದರ್ಶ್, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ನನ್ನ ಹೆಸರು ಆದರ್ಶ್‌, ನಾನು ದರ್ಶನ್‌ ಅವರ ಅಭಿಮಾನಿ. ನನಗೆ ಎರಡೂ ಕಿಡ್ನಿ ಫೇಲ್ಯೂರ್‌ ಆಗಿತ್ತು. ನನಗೆ ಮೊದಲಿನಿಂದಲೂ ದರ್ಶನ್‌ ಸರ್‌ ಅವರನ್ನು ಭೇಟಿ ಮಾಡಬೇಕೆಂಬ ಆಸೆ ಇತ್ತು. ದರ್ಶನ್‌ ಆಪ್ತರಾದ ನಾಗರಾಜ್‌ ಅಣ್ಣನನ್ನು ಕೇಳಿಕೊಂಡೆ. ಅವರು ದರ್ಶನ್‌ ಅವರನ್ನು ಭೇಟಿ ಮಾಡಿಸಿದರು. ದರ್ಶನ್‌ ಸರ್‌ಗೂ ಗೋವಿಂದಣ್ಣನಿಗೂ ಬಹಳ ಥ್ಯಾಂಕ್ಸ್‌” ಎಂದು ಅಭಿಮಾನಿ ಆದರ್ಶ್‌ ವಿಡಿಯೋದಲ್ಲಿ ಮಾತನಾಡಿದ್ದಾರೆ. ಇನ್ನು ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟಿಜನ್ಸ್‌ ಕೂಡಾ ದರ್ಶನ್‌ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ದರ್ಶನ ಅವ್ರು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಅಭಿಮಾನಿಗಳಿಗೆ ಆಗಾಗ ಸಹಾಯ ಹಸ್ತ ಚಾಚುತ್ತಲೇ ಇರುತ್ತಾರೆ ಅದರಲ್ಲಿ ಕೆಲವು ಬೆಳಕಿಗೆ ಬಂದ್ರೆ ಮತ್ತು ಕೆಲವು ತೆರೆಮರೆಯಲ್ಲಿಯೇ ಉಳಿದುಕೊಳ್ಳುತ್ತವೆ. ಆದ್ರೂ ಕೂಡ ದರ್ಶನ್ ಎಂದಿಗೂ ಪ್ರಚಾರ ಬಯಸಿದವರಲ್ಲ ತಾವು ಮಾಡಿದ ಸಹಾಯದ ವಾಸನೆ ಯಾರಿಗೂ ತಲುಪಬಾರದು ಅಂತ ಹೇಳಿಯೇ ಸಹಾಯ ಮಾಡುವ ಅಭಿಮಾನಿಗಳ ಪಾಲಿನ ಯಜಮಾನ ಅಂತಲೇ ಹೇಳಬಹುದು. ಇನ್ನು ಸದ್ಯ ದರ್ಶನ್ ‘ಕಾಟೇರ’ ಸಿನಿಮ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ.

ಹೌದು ಈ ಸಿನಿಮಾ ಶೂಟಿಂಗ್‌ ಬಹುತೇಕ ಮುಗಿದಿದೆ ಅಂತಲೇ ಹೇಳಬಹುದು. ಇನ್ನು ಚಿತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ನಟಿಸುತ್ತಿದ್ದಾರೆ. ಚಿತ್ರವನ್ನು ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದು ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇನ್ನು ಚಿತ್ರದ ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ‘ರಾಬರ್ಟ್‌’ ಸಿನಿಮಾ ನಂತರ ಮತ್ತೆ ತರುಣ್ ಸುಧೀರ್‌ ಹಾಗೂ ದರ್ಶನ್‌ ಕಾಂಬಿನೇಶನ್‌ನಲ್ಲಿ ಕಾಟೇರ ಸಿನಿಮಾ ತಯಾರಾಗುತ್ತಿದ್ದು ಅಭಿಮಾನಿಗಳಂತು ಫುಲ್ ಎಗ್ಸ್ಯೈಟ್ ಆಗಿದ್ದಾರೆ.

ಇದನ್ನೂ ಓದಿ: ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ; ಪೂಜೆಯಲ್ಲಿ ಭಾಗಿಯಾಯ್ತು ನಮ್ಮ ಲಚ್ಚಿ ಸೀರಿಯಲ್ ತಂಡ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram