ಮುನಿಸು ಮರೆತು ಒಂದಾದ್ರ ದಚ್ಚು-ಕಿಚ್ಚ; ಇವರಿಬ್ಬರನ್ನ ಒಂದು ಮಾಡಲು ರಾಕ್ ಲೈನ್ ವೆಂಕಟೇಶ್ ಮಾಡಿದ್ದೇನು?

ನಮ್ಮ ಚಂದನವನದಲ್ಲಿ ಕುಚಿಕು ಅಂದ್ರೆ ಅದು ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ಸಾಹಸಿಂಹ ವಿಷ್ಣುವರ್ಧನ್ ಅಂತ ಹೇಳ್ತಿದ್ರು. ಅವ್ರ ನಂತರ ಸ್ಯಾಂಡಲ್‌ವುಡ್ ಬೆಸ್ಟ್ ಫ್ರೆಂಡ್ಸ್ ಯಾರು ಅಂತ ಹೇಳಿದ್ರೆ, ಒಂದು ಕ್ಷಣನು ಯೋಚ್ನೆ ಮಾಡ್ದೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಹೆಸರು ಹೇಳುತ್ತಿದ್ದರು ಕನ್ನಡಿಗರು. ಆದರೆ, ಇದ್ದಕ್ಕಿದ್ದ ಹಾಗೇ ದರ್ಶನ್ “ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ” ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವಿನ ಅಂತರ ಬೆಳೆಯುತ್ತಲೇ ಹೋಯ್ತು. ದರ್ಶನ್ ಹಾಗೂ ಸುದೀಪ್ ಒಬ್ಬರಿಗೊಬ್ಬರು ಆಗದಷ್ಟು ದೂರ ಹೋಗಿದ್ದರು. ಯಾಕಿಗಾಯ್ತು ಏನಾಯ್ತು ಅಂತ ಒಬ್ಬರಿಗೂ ಗೊತ್ತಾಗದಂತೆ ಅಯ್ತು.

WhatsApp Group Join Now
Telegram Group Join Now

ಹೌದು ಇಬ್ಬರ ನಡುವಿನ ಮನಸ್ತಾಪ ಏನು ಅದಕ್ಕೆ ಕಾರಣ ಅಂತ ಗೊತ್ತಾಗ್ದೇ ಅಭಿಮಾನಿಗಳಂತು ಸಖತ್ ಬೇಜಾರಾದ್ರೂ. ಅಲ್ದೇ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಇಬ್ಬರೂ ಒಂದಾಗಲಿ ಅಂತ ಬಯಸಿದ್ದರು ಸಾಲದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಅದೆಷ್ಟೋ ಬಾರಿ ತಮ್ಮ ಆಸೆಯನ್ನು ವ್ಯಕ್ತಪಡಿಸಿ, ನೀವಿಬ್ರು ಒಂದಾಗಿ ಅಂತ ಪದೇ ಪದೇ ಕೇಳಿಕೊಳ್ಳುತ್ತಿದ್ರು ಆಗಲೂ ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುವ ಬಗ್ಗೆ ಮಾತಾಡಿರಲಿಲ್ಲ. ತಮ್ಮ ಮಧ್ಯೆ ಆಗಿದ್ದೇನು ಅನ್ನೋದನ್ನು ಹೇಳಲಿಲ್ಲ.. ಆದ್ರೆ ಈಗ ದಚ್ಚು ಕಿಚ್ಚ ಒಂದಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೌದು ಇವರಿಬ್ಬರ ಅಭಿಮಾನಿಗಳು ಅಂದು ಬಹಳ ಕೆಟ್ಟ ದಿನ ಅಂತ ಹೇಳಬಹುದು. 2017ರಲ್ಲಿ ಅಂದರೆ, ಆರು ವರ್ಷಗಳ ಹಿಂದೆ ದರ್ಶನ್ ಟ್ವೀಟ್ ಮಾಡಿ, ಇನ್ಮುಂದೆ ನಾನು ಹಾಗೂ ಕಿಚ್ಚ ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುವ ಸಹ ಕಲಾವಿದರು ಅಷ್ಟೇ. ಬೇರೆ ಊಹಾ ಪೋಹಗಳು ಬೇಡ” ಅಂತ ದರ್ಶನ್ ಬರೆದಿದ್ರು. ಅಲ್ಲಿಂದ ಇಲ್ಲಿವರೆಗೂ ದರ್ಶನ್ ಹಾಗೂ ಸುದೀಪ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದ್ರೆ ಇಬ್ಬರೂ ಮತ್ತೆ ಒಂದಾಗಬಹುದು ಅನ್ನೋ ಖುಷಿಯಲ್ಲಿ ಕಾತುರದಲ್ಲಿದ್ದ ಇಬ್ಬರ ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್.

ಇದನ್ನೂ ಓದಿ: ಧೋನಿಗೆ ಧನಸಹಾಯ ನೀಡಿದ್ದ ಕಲಿಯುಗದ ಕರ್ಣ ಅಂಬರೀಶ್! ಹಳೆ ಫೋಟೋ ಹಂಚಿಕೊಂಡು ಸುಮಲತಾ ಹೇಳಿದ್ದೇನು?

ಸುಮಲತಾ ಬರ್ತ್ಡೇ ಡೇ ಪಾರ್ಟಿಯಲ್ಲಿ ಆಗಿದ್ದೇನು ಗೊತ್ತಾ?

ಹೌದು ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಮುಖಾ ಮುಖಿಯಾಗಿದ್ದಾರೆ. ಬೇರೆಯಾದಲ್ಲಿಂದ ಇವರಿಬ್ಬರು ಒಟ್ಟಿಗೆ ಒಂದೇ ವೇದಿಕೆ ಹಂಚಿಕೊಂಡಿರಲೇ ಇಲ್ಲ. ಆದ್ರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಗಸ್ಟ್ 27ರಂದು 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಆತ್ಮೀಯರಿಗೆ ಹಾಗೂ ಗಣ್ಯರಿಗೆ ಖಾಸಗಿ ಐಶಾರಾಮಿ ಹೋಟೆಲ್‌ನಲ್ಲಿ ಪಾರ್ಟಿಯನ್ನು ಆಯೋಜನೆ ಮಾಡಲಾಗಿದೆ. ಈ ಪಾರ್ಟಿಗೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರಿಗೂ ಆಹ್ವಾನ ನೀಡಲಾಗಿದೆ. ಈ ಪಾರ್ಟಿಯಲ್ಲಿ ಇಬ್ಬರೂ ಮುಖ ಮುಖಿಯಾಗಿದ್ದಾರೆ.

ಹೌದು ಬರ್ತ್ಡೇ ಗೆ ಬಂದ ಇಬ್ಬರು ಒಬ್ಬರೊಂನ್ನೊಬ್ಬರು ನೋಡಿಲ್ಲ ಮಾತಾಡಿಸಿಲ್ಲ. ಆದ್ರೂ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರನ್ನೂ ಮತ್ತೆ ಒಂದು ಮಾಡಬೇಕು ಅಂತ ಸ್ಯಾಂಡಲ್‌ವುಡ್‌ನ ಅದೆಷ್ಟೋ ಮಂದಿ ಪ್ರಯತ್ನ ಪಟ್ಟಿದ್ದರು. ಆದರೆ, ಇವರಿಬ್ಬರನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಈಗ ಸುಮಲತಾ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇಬ್ಬರ ಪ್ರಯತ್ನದಿಂದ ಖಾಸಗಿ ಹೋಟೆಲ್‌ನಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರ ಮನವೊಲಿಸಲಾಗಿದೆ. ಹೀಗಾಗಿ ಇಬ್ಬರೂ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ಸುಮಲತಾ ಅಂಬರೀಶ್ ಅವರು ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ ವೇದಿಕೆ ಮೇಲೆ ಸುದೀಪ್ ಮತ್ತು ದರ್ಶನ್ ಇಬ್ಬರೂ ಇದ್ದರು. ಇಬ್ಬರು ಕೂಡ ಸುಮಲತಾ ಅವರಿಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಆಗ ಸುಮಲತಾ ಕೂಡ ಒಂದೇ ಸ್ಪೂನ್ ನಿಂದ ಇಬ್ಬರಿಗೂ ಕೇಕ್ ತಿನಿಸಿರುವ ವಿಡಿಯೋ ಕೂಡ ಈಗ ಫುಲ್ ವೈರಲ್ ಆಗಿದ್ದು ಕುಚಿಕು ಸಾಂಗ್ ಈ ಪಾರ್ಟಿಯಲ್ಲಿ ಸದ್ದು ಮಾಡಿರೋದು ಇವರಿಬ್ಬರ ನಡುವೆ ಸಂಧಾನ ಮಾಡಿ, ಈ ದೋಸ್ತಿಗಳ ಸ್ನೇಹ ಮುಂದುವರಿಯುವಂತೆ ಸುಮಲತಾ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಮಾಡಿದ್ದಾರೆ ಅನ್ನೋದು ಗಾಂಧಿ ನಗರದ ಗಳ್ಳಿಯಲ್ಲಿ ಹರಿದಾದುತ್ತಿರೋ ಮಾತು. ಆದ್ರೆ ಇದಕ್ಕೆ ಸ್ಪಷ್ಠಿಕರಣ ಯಾವಾಗ ಸಿಗುತ್ತೋ ಕಾದು ನೋಡಬೇಕು.

 

View this post on Instagram

 

A post shared by dboss_trends (@boss_._trends)

ಇದನ್ನೂ ಓದಿ: ಅಮೇರಿಕಾದಲ್ಲಿ ಮೃತಪಟ್ಟವರ ಮೃತ ದೇಹ ಕರ್ನಾಟಕಕ್ಕೆ ಬರ್ಲೆ ಇಲ್ಲ; ಕುಟುಂಬದವರಿಗೆ ಅಂತಿಮ ದರ್ಶನವು ಸಿಗಲಿಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram