Deepak Gowda: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ! ಸಮರ್ಥ್ ಪಾತ್ರಕ್ಕೆ ಹೊಸ ನಟ ಎಂಟ್ರಿ

Deepak Gowda: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯು ಯಾವಾಗಲೂ ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿರುತ್ತದೆ ಅದರಲ್ಲೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನದಲ್ಲಿ ಜೀ ಕನ್ನಡ ವಾಹಿನಿ ಯಾವಾಗಲೂ ಸದಾ ಮುಂದೆ ಇರುತ್ತೆ. ಹೌದು ಹೊಸ ಹೊಸ ಧಾರಾವಾಹಿಗಳ ಮೂಲಕ ವಿಭಿನ್ನ ಕಥೆಗಳಿಂದ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಕೌಟುಂಬಿಕ, ಸಾಮಾಜಿಕ ಹಾಗೆ ಪೌರಾಣಿಕ ಕಥೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಥೆಗಳನ್ನು ನೀಡುವಲ್ಲಿ ಜೀ ಕನ್ನಡ ವಾಹಿನಿಯು ಯಶಸ್ವಿಯಾಗಿದೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭ ಮಸ್ತು ಧಾರಾವಾಹಿ ಈಗಾಗ್ಲೇ ಎಲ್ಲರ ಮನ ಗೆದ್ದಿದೆ. ಅದರಲ್ಲೂ ಚಂದನವನದ ಸುಂದರಿ. ಡಾ.ಸುಧಾರಾಣಿಯವರು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ಸಾಕಷ್ಟು ಖುಷಿಯನ್ನ ಕೊಟ್ಟಿದೆ. ಯಾಕಂದ್ರೆ ತಮ್ಮ ಅದ್ಬುತ ನಟನೆಯಿಂದ ಇವರು ದಶಕಗಳಿಂದ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅದನ್ನ ಕಿರುತೆರೆಯಲ್ಲೂ ಗಳಿಸುವತ್ತ ಗಮನಹರಿಸಿ. ಈ ಧಾರವಾಹಿಯಲ್ಲಿ ನಾಯಕನ ಅಮ್ಮನ ಪಾತ್ರ ನಿಭಾಯಿಸುತ್ತಿದ್ದಾರೆ. ಆದ್ರೆ ಇದೀಗ ನಾಯಕ ಸಮರ್ಥ್ ಪಾತ್ರಧಾರಿಯ ಬದಲಾವಣೆ ಧಾರವಾಹಿ ವೀಕ್ಷಕರಿಗೆ ಬೇಸರ ಮೂಡಿಸಿದೆ. ಹಾಗಾದ್ರೆ ಮುಂದೆ ಸಮರ್ಥ್ ಪಾತ್ರವನ್ನ ಯಾರು ನಿಭಾಯಿಸುತ್ತಾರೆ, ದೀಪಕ್ ಗೌಡ ಧಾರವಾಹಿಯಿಂದ ಹೊರನಡೆಯಲು ಕಾರಣವಾದ್ರೂ ಏನು ನೋಡೋಣ ಬನ್ನಿ.

WhatsApp Group Join Now
Telegram Group Join Now

ಹೌದು ಈ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಮ್ಮನೆ ಯುವರಾಣಿ ಖ್ಯಾತಿಯ ಅನಿಕೇತ್ ಅಲಿಯಾಸ್ ದೀಪಕ್ ಬಿ.ಆರ್ ಗೌಡ(Deepak Gowda) ಅವರು ಅಭಿನಯಿಸುತ್ತಿದ್ದರು. ನಮ್ಮನೆ ಯುವರಣಿ ತಂಡದಿಂದ ಹೊರ ಬಂದ ಬಳಿಕ ಇದು ಅವರ ಮೊದಲ ಪ್ರಾಜೆಕ್ಟ್ ಎನ್ನುವುದು ವಿಶೇಷವಾಗಿತ್ತು. ಇನ್ನು ಹೊರಗಿನ ಪ್ರಪಂಚವನ್ನು ಮರೆತು ತನ್ನ ಕುಟುಂಬವೇ ಒಂದು ಪ್ರಪಂಚ ಎಂದು ಬದುಕುತ್ತಿರುವ ಹೆಣ್ಣು ಮಕ್ಕಳ ಜೀವನದ ಬಗ್ಗೆ ಈ ಧಾರಾವಾಹಿಯ ಕಥೆ ಸುತ್ತುವರಿಯುತ್ತದೆ ಇದರಲ್ಲಿ ಅಂತದ್ದೇನು ಪಾತ್ರ ನಿಭಾಯಿಸುವ ತಾಯಿಯ ಮುದ್ದು ಮಗನಾಗಿ ದೀಪಕ್ ಗೌಡ ಕಾಣಿಸಿಕೊಂಡಿದ್ದದ್ದು ಅವ್ರ ಅಭಿಮಾನಿಗಳಿಗಂತೂ ಸಾಕಷ್ಟು ಖುಷಿ ತಂದುಕೊಟ್ಟಿತ್ತು. ಈ ಹಿಂದೆಯೂ ಸಹ ಜವಾಬ್ದಾರಿಯುತ ಪಾತ್ರಕ್ಕೆ ದೀಪಕ್ ಬಣ್ಣ ಹಚ್ಚಿದ್ರು, ಅದಕ್ಕಾಗಿಯೇ ಸಮರ್ಥ್ ಪಾತ್ರ ಕೂಡ ಇವರಿಗಾಗಿಯೇ ಮಾಡಿದ್ದರೇನೋ ಅನುವಷ್ಟರ ಮಟ್ಟಿಗೆ ತುಂಬಾ ಪ್ರಬುದ್ಧತೆಯಿಂದ ನಟಿಸುತ್ತಿದ್ರು. ಸಾಕಷ್ಟು ಜನರು ದೀಪಕ್ ಗೌಡ ಅವರಿಗಾಗಿಯೇ ಸೀರಿಯಲ್ ನೋಡ್ತಿದ್ರು. ಒಂದಷ್ಟು ಜನರು ಸುಧಾರಾಣಿ ಸೀರಿಯಲ್ ನಲ್ಲಿದ್ದಾರೆ, ಅವ್ರು ನಿಭಾಯಿಸುವ ಪಾತ್ರ ನಮಗೆ ಬಹಳ ಹತ್ತಿರವಾಗುತ್ತೆ ಅನ್ನೋ ಕಾರಣಕ್ಕೆ ಸೀರಿಯಲ್ ನೋಡ್ತಿದ್ರೆ ಮತ್ತೊಂದಷ್ಟು ಜನ ದೀಪಕ್ ಗೌಡ ಸಮರ್ಥ್ ಪಾತ್ರ ನಿಭಾಯಿಸೋದನ್ನ ನೋಡೋಕೆ ಅಂತನೇ ಟಿವಿ ಮುಂದೆ ಕೂರುತ್ತಿದ್ರು. ಇದೀಗ ಸಮರ್ಥ್ ಪಾತ್ರಕ್ಕೆ ಹೊಸ ಮುಖ ಎಂಟ್ರಿ ಕೊಟ್ಟು ಆಗಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಖ್ಯಾತಿಯ ನಟಿ ಯಶಸ್ವಿನಿ ರವೀಂದ್ರ.. ಹುಡುಗ ಯಾರು ಗೊತ್ತಾ?

ಬದಲಾದ ಸಮರ್ಥ್ ಪಾತ್ರಧಾರಿ,ಪಾತ್ರಕ್ಕೆ ದರ್ಶಿತ್ ಗೌಡ ಎಂಟ್ರಿ

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಹೆಸರನ್ನು ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲರೂ ಕೇಳಿರುತ್ತಾರೆ. ಶ್ರೀ ಮಹದೇವ್, ಶ್ವೇತಾ ಆರ್ ಪ್ರಸಾದ್, ಸ್ವಾತಿ, ಸುಧಾ ಬೆಳವಾಡಿ, ಮಾಲತಿ ಸರ್‌ದೇಶಪಾಂಡೆಯಂತಹ ದಿಗ್ಗಜರು ನಟಿಸಿದ್ದ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ದೊಡ್ಡ ಹಿಟ್ ಆಗಿತ್ತು. ಈಗ ಅದೇ ಶೀರ್ಷಿಕೆಗೆ ಬೇರೆ ಕಲಾವಿದರು ಬಣ್ಣ ಹಚ್ಚಿದ್ರು, ಈ ಪ್ರಯತ್ನವು ಕೂಡ ಯಶಶ್ವಿ ಹಾದಿಯಲ್ಲಿಯೇ ಸಾಗುತ್ತಿತ್ತು. ಆದರೆ ಇದೀಗ ಧಾರವಾಹಿ ನಾಯಕನ ಪಾತ್ರಧಾರಿಯನ್ನ ಕೆಲವೇ ತಿಂಗಳಿಗೆ ಬದಲಾಯಿಸಿರುವುದು ಧಾರವಾಹಿಗೆ ದೊಡ್ಡ ಹೊಡೆತವಾಗಲಿದೆ ಅಂತ ಸೀರಿಯಲ್ ಪ್ರಿಯರು ಹೇಳ್ತಿದ್ದಾರೆ. ಯಾಕಂದ್ರೆ ಸಮರ್ಥ್ ಪಾತ್ರಧಾರಿ ದೀಪಕ್ ಗೌಡ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿಬಿಟ್ಟಿದ್ರು, ಇದೀಗ ಅವ್ರು ಧಾರವಾಹಿಯಿಂದ ಹೊರನಡೆದಿದ್ದಾರೆ. ಆದ್ರೆ ಕಾರಣ ಏನು ಎಂಬುದು ಇನ್ನು ಕೂಡ ರಿವಿಲ್ ಆಗಿಲ್ಲ. ಆದ್ರೆ ಸಮರ್ಥ್ ಪಾತ್ರವನ್ನ ಇನ್ನುಮುಂದೆ ದರ್ಶಿತ್ ಗೌಡ ನಿಭಾಯಿಸಿಕೊಂಡು ಹೋಗುತ್ತಾರೆ ಅನ್ನುವ ಸುದ್ದಿ ಎಲ್ಲ ಕಡೆ ವೈರಲ್ ಆಗ್ತಿದೆ. ಇನ್ನು ದರ್ಶಿತ್ ಗೌಡ ಕೂಡ ಈ ಹಿಂದೆ ದೊರೆಸಾನಿ ಸೀರಿಯಲ್ ನಲ್ಲಿ ನಾಯಕನ ಸ್ನೇಹಿತನ ಪಾತ್ರ ನಿಭಾಯಿಸಿ ಇದೀಗ ನಾಯಕನ್ನ ಪಾತ್ರಕ್ಕೆ ಬಣ್ಣ ಹಚ್ಚಲು ಸಿದ್ದವಾಗಿದ್ದಾರೆ. ಕೆಲವೊಂದಷ್ಟು ಆಲ್ಬಮ್ ಸಂಗ್ ನಲ್ಲೂ ಕೂಡ ದರ್ಶಿತ್ ಕಾಣಿಸಿಕೊಂಡಿದ್ದಾರೆ. ಸಮರ್ಥ್ ಪಾತ್ರಧಾರಿಯ ಬದಲಾವಣೆ ಬಗ್ಗೆ ನೀವೇನ್ ಹೇಳ್ತೀರಾ ಕಮೆಂಟ್ಸ್ ಮಾಡಿ.

ಇದನ್ನೂ ಓದಿ: ದುಬಾರಿಯಾಗಳಿವೆ ಎಲೆಕ್ಟ್ರಿಕಲ್ ವೆಹಿಕಲ್! ಜೂನ್ ನಿಂದಲೇ ಕಡಿತಾವಾಗಲಿದೆ ಸಬ್ಸಿಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram