ಚಿರು ಸಮಾಧಿ ಪಕ್ಕದಲ್ಲಿ ಮಲಗಿದ್ದ ಧ್ರುವ, ಪ್ರತಿ ವಾರವು ಅಣ್ಣನ ಪಕ್ಕದಲ್ಲೇ ಮಲಗ್ತಾರೆ; ಆದ್ರೆ ಧ್ರುವ ಸರ್ಜಾ ಹೀಗ್ ಮಾಡೋಕೆ ಕಾರಣ ಏನ್ ಗೊತ್ತಾ?

ಸ್ಯಾಂಡಲ್ವುಡ್ ನ ರಾಮ ಲಕ್ಷ್ಮಣ ಯಾರು ಅಂದ್ರೆ ಎಲ್ರು ಚಿರು ಮತ್ತೆ ಧ್ರುವ ಅಂತಿದ್ರು. ಒಬ್ಬರನೊಬ್ಬರು ಪ್ರಾಣಕ್ಕಿಂತ ಹಚ್ಚಿಕೊಂಡಿದ್ರು, ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ, ಆದ್ರೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಚಿರು ಇನ್ನಿಲ್ಲವಾಗಿ ಹೋದ್ರು. ಹೌದು ಚಿರು ಮತ್ತು ಧ್ರುವ ಸರ್ಜಾ(Dhruva Sarja ) ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಅಭಿಮಾನಿಗಳಿಗೆ ಸಹೋರತ್ವದ ಪಾಠ ಕಲಿಸಿಕೊಟ್ಟಿದ್ದವು. ಹಣ ಆಸ್ತಿ ಇನ್ನೇನೇನೋ ವಿಚಾರಗಳಿಗೆ ಅಣ್ಣನ ಕಂಡ್ರೆ ತಮ್ಮನಿಗಾಗಲ್ಲ ತಮ್ಮನನ್ನ ಕಂಡ್ರೆ ಅಣ್ಣನಿಗೆ ಆಗಲ್ಲ, ಆಸ್ತಿ ಅಂತಸ್ತು ಹಣಕ್ಕೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಈ ಕಾಲದಲ್ಲಿ ಸಹೋದರರಂದ್ರೆ ಹೇಗಿರಬೇಕು ಅನ್ನೋದನ್ನ ಧ್ರುವ ಚಿರು ತೋರಿಸಿಕೊಟ್ಟಿದ್ರು.

WhatsApp Group Join Now
Telegram Group Join Now

ಒಬ್ರು ಬಿದ್ದಾಗ ಮತ್ತೊಬ್ಬರು ಮೇಲೆತ್ತಿ, ಸೋತಾಗ ಬೆನ್ನು ತಟ್ಟಿ ಜೊತೆಯಲ್ಲೇ ಇರುತ್ತಿದ್ದರೆ ಈ ಅಣ್ಣ ತಮ್ಮಂದಿರು ಎಷ್ಟೋ ಜನಕ್ಕೆ ಸ್ಫೂರ್ತಿ ದಾರಿ ದೀಪಾವಗಿದ್ರು. ಆದ್ರೆ ಆ ವಿಧಿಗೂ ಇದನ್ನ ಸಹಿಸಲಾಗಿಲ್ಲ ಅನಿಸುತ್ತೆ ಚಿರುವನ್ನ ಕಿತ್ತುಕೊಂಡು ಧ್ರುವ ಅವ್ರನ್ನ ಹೊರಬರಲಾಗದ ದುಃಖಕ್ಕೆ ದುಡಿಬಿಟ್ಟ. ಈಗಲೂ ಆ ದುಃಖ ನೋವು ಯಾವತ್ತಿಗೂ ಕಡಿಮೆ ಆಗಲ್ಲ ಅನ್ನೋದಕ್ಕೆ, ಧ್ರುವ ಪ್ರತಿ ವಾರ ಚಿರು ಸಮಾಧಿ ಪಕ್ಕದಲ್ಲೇ ಮಲಗಿ ಬರೋ ಈ ಘಟನೆಯೇ ಸಾಕ್ಷಿ.

ಹೌದು ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಅಗಲಿ ಮೂರು ವರ್ಷ ಕಳೆದಿವೆ. ಜೂನ್ 7, 2020 ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯೆಜಿಸಿದರು. ಇಂದಿಗೂ ಅವರಿಲ್ಲ ಎನ್ನವು ನೆನಪು ಅಗಾಧವಾಗಿ ಅವರ ಅಭಿಮಾನಿಗಳನ್ನ ಕಾಡುತ್ತಲೇ ಇದೆ. ಅಷ್ಟೇ ಅಲ್ಲ ಇಂದಿಗೂ ಅಣ್ಣನ ಅಗಲಿಕೆಯನ್ನು ಅರಗಿಸಿಕೊಳ್ಳದ ಧ್ರುವ ಸರ್ಜಾ ಅವರ ನೆನಪಿನಲ್ಲೇ ದಿನ ಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಧ್ರುವ, ಚಿರು ಸಮಾಧಿ ಹತ್ತಿರ ಮಲಗಿದ್ದ ವಿಡಿಯೋ ಒಂದು ವೈರಲ್‌ ಆಗಿದ್ದು, ಅರಿಯದೆ ಕಣ್ಣಂಚಿನಲ್ಲಿ ನೀರು ಬರುವಂತಿದೆ.

ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ದ್ರುವ ದಂಪತಿ; ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಪ್ರೇರಣಾ

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಪ್ರತಿ ವಾರವೂ ಅಣ್ಣನ ಸಮಾಧಿ ಪಕ್ಕದಲ್ಲೇ ಮಲಗುವ ಧ್ರುವ

ಹೌದು ಚಿರು ಮತ್ತು ಧ್ರುವ ಸರ್ಜಾ(Dhruva Sarja) ಆಗಲೇ ಹೇಳಿದಂತೆ ಕಲಿಯುಗದ ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಅಭಿಮಾನಿಗಳಿಗೆ ಸಹೋರತ್ವದ ಪಾಠ ಕಲಿಸಿಕೊಟ್ಟಿದ್ದವು. ಆದ್ರೆ ಚಿರು ಇನ್ನಿಲ್ಲವಾಗಿದ್ದು ಮಾತ್ರ ಘನಘೋರ, ಸಧ್ಯ ಅಣ್ಣನ ಅಗಲಿಕೆಯನ್ನು ಧೃವ ಅರಗಿಸಿಕೊಂಡಿಲ್ಲ. ವರ್ಷಗಳು ಉರುಳಿದರೂ ಸಹ ಚಿರು ನೆನಪು ಚಿರಂಜೀವಿಯಾಗಿವೆ ಅನ್ನೋದಕ್ಕೆ ಈ ವಿಡಿಯೋ ಸರಿ ಹೇಳ್ತಿದೆ.

ಹೌದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಕನಕಪುರದ ಫಾರ್ಮ್‌ಹೌಸ್‌ನಲ್ಲಿ ಅಣ್ಣ ಚಿರಂಜೀವಿ ಸರ್ಜಾ ಸಮಾಧಿಯನ್ನು ಅದ್ಧೂರಿಯಾಗಿ ಕಟ್ಟಿಸಿದ್ದಾರೆ. ಸಮಾಧಿ ಎದುರು ಚಿರು ಎಂದು ಇಂಗ್ಲಿಷ್‌ನಲ್ಲಿ ಬರೆಸಿದ್ದಾರೆ. ಇನ್ನು ವರ್ಷದ ಕಾರ್ಯ ಮತ್ತು ಚಿರು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅಲ್ದೇ ಬಿಡುವಿನ ಸಮಯದಲ್ಲಿ ಎಲ್ಲು ಹೋಗದೆ ಅಣ್ಣನ ಸಮಾಧಿಗೆ ಭೇಟಿ ನೀಡುತ್ತಾರೆ. ಜೊತೆಗೆ ಕೆಲವು ದಿನಗಳ ಹಿಂದೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವ ಧ್ರುವ ಯಾರಿಗೂ ಹೇಳದ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿರುವ ಜಾಗದಲ್ಲಿ ದಿಂಬು ಬೆಡ್‌ಶೀಟ್‌ ಹಾಕಿಕೊಂಡು ಮಲಗಿದ್ದಾರೆ. ಆಗ ಧ್ರುವ ಎಲ್ಲಿ ಅಂತ ಮನೆಯವರು ಹುಡುಕಿದಾಗ ಅಣ್ಣನ ಸಮಾಧಿ ಬಳಿ ಮಲಗಿದ್ದರು. ಈ ಸಂದರ್ಭದಲ್ಲಿ ಧ್ರುವ ಸರ್ಜಾಗೆ ತಿಳಿಯದ ಹಾಗೆ ಆಪ್ತರು ವಿಡಿಯೋ ಸೆರೆ ಹಿಡಿದಿದ್ದಾರೆ. ಈಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್‌ ಮಾಡಿಕೊಂಡಿರುವ ಧ್ರುವ ಅಭಿಮಾನಿಗಳು ‘ಪರಪಂಚ ನೀನೇ ನನ್ನ ಪರಪಂಚ ನೀನೇ….ನೀನೇ ಎಲ್ಲಾ ಬೇರೇನೂ ಇಲ್ಲ ಪರಪಂಚ ನೀನೇ’ ಎನ್ನುವ ಹಾಡು ಹಾಕಿದ್ದು, ಇದೀಗ ಎಲ್ಲ ಕಡೆ ವೈರಲ್ ಆಗಿ, ಸಾಕಷ್ಟು ಜನ ಚಿರು ಅವ್ರನ್ನ ನೆನೆದು ಭಾವುಕರಾದ್ರೆ ಮತ್ತು ಕೆಲವರು ಧ್ರುವ ಸ್ಥಿತಿ ನೋಡಿ ಬೇಸರಗೊಂಡಿದ್ದಾರೆ.

ಇದನ್ನೂ ಓದಿ: ಕೆಲಸಕ್ಕೆಂದು ವಿದೇಶಕ್ಕೆ ಹೋದವರ ಪಾಡು ಏನಾಯ್ತು ಗೊತ್ತಾ? ಕಂಪನಿಯಲ್ಲಿ ಕೆಲಸಕ್ಕೆಂದು ಕರೆಸಿ ಅಲ್ಲಿ ಏನೆಲ್ಲಾ ಮಾಡಿಸ್ತಾರೆ ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram