ಅಣ್ಣನ ಸಮಾಧಿ ಮುಂದೆ ಪ್ರೇರಣಾ ಸೀಮಂತ ಮಾಡಿದ ಧ್ರುವ ಸರ್ಜಾ; ಚಿರು ಫೋಟೋ ನೋಡಿದ ಧ್ರುವ ಪುತ್ರಿ ಏನ್ ಹೇಳಿದ್ಲು ಗೊತ್ತಾ?

ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ದಂಪತಿ 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗೆ ಧ್ರುವ ಪತ್ನಿ ಪ್ರೇರಣಾಗೆ ಸೀಮಂತ ಕಾರ್ಯಕ್ರಮ ಕೂಡ ನೆರವೇರಿದೆ. ಸದ್ಯ ಸೀಮಂತದ ಚೆಂದದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ಕಳೆದ ವರ್ಷ ಮುದ್ದು ಮಗಳನ್ನು ಸ್ವಾಗತಿಸಿದ್ದ ಧ್ರುವ ಸರ್ಜಾ, ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪ್ರೇರಣಾ ಇದೀಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಹೀಗಾಗಿ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆಯಿತು.

WhatsApp Group Join Now
Telegram Group Join Now

ಇನ್ನು ವಿಶೇಷ ಅಂದ್ರೆ ಅಣ್ಣ ಚಿರು ಸರ್ಜಾ ಸಮಾಧಿ ಇರುವ ತೋಟದಲ್ಲಿಯೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಹೌದು ಕನಕಪುರ ಸೋಮನಹಳ್ಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಪ್ರೇರಣಾ ಸೀಮಂತ ಕಾರ್ಯಕ್ರಮವೂ ನಡೆದಿದೆ. ಅದ್ದೂರಿಯಾಗಿ ನಡೆದ ಈ ಸೀಮಂತ ಕಾರ್ಯಕ್ರಮದಲ್ಲಿ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅಣ್ಣನ ಫೋಟೋ ಹಿಡಿದುಕೊಂಡು ಧ್ರುವ ಸರ್ಜಾ ಫ್ಯಾಮಿಲಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

 

View this post on Instagram

 

A post shared by Dhruva Sarja (@dhruva_sarjaa)

ಇದನ್ನೂ ಓದಿ: 35ರ ಮಹಿಳೆ ಜೊತೆ 75ರ ವೃದ್ಧನ ಮದುವೆ; ಮಡದಿಯನ್ನ ಕಳೆದುಕೊಂಡಿದ್ದ ವೃದ್ಧನ ಕೈ ಹಿಡಿದ ಮಹಿಳೆ

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಚಿರು ಫೋಟೋ ನೋಡಿ ದೊಡ್ಡಪ್ಪ ಎಂದ ಧ್ರುವ ಪುತ್ರಿ

ಹೌದು ಧ್ರುವ ಸರ್ಜಾ(Dhruva Sarja) ಮತ್ತು ಚಿರು ಸರ್ಜಾ ಅವರ ಬಾಂಧವ್ಯ ತುಂಬಾನೆ ಗಟ್ಟಿಯಾಗಿದೆ. ಹೀಗಾಗಿ ಅಣ್ಣನ ಸಮಾಧಿಯನ್ನ ತಮ್ಮ ತೋಟದಲ್ಲಿಯೇ ಮಾಡಿರೋ ಧ್ರುವ ಸರ್ಜಾ, ಮನೆಯಲ್ಲಿ ನಡೆಯೋ ಪ್ರತಿ ಕಾರ್ಯಕ್ರಮವನ್ನು ಅಣ್ಣನ ಸಮಾಧಿ ಇರೋ ತೋಟದ ಮನೆಯಲ್ಲಿಯೇ ಹೆಚ್ಚಾಗಿ ಮಾಡುತ್ತಾರೆ. ಚಿರು ಸಮಾಧಿ ಇರೋ ಈ ಒಂದು ಜಾಗದಲ್ಲಿಯೇ ಅದ್ಧೂರಿ ಮತ್ತು ಸುಂದರ ಕಾರ್ಯಕ್ರಮ ಪ್ಲಾನ್ ಆಗಿತ್ತು. ಆ ಒಂದು ಕ್ಷಣದ ವಿಡಿಯೋವನ್ನ ಸ್ವತಃ ಧ್ರುವ ಸರ್ಜಾ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೇರಣಾ ಮತ್ತು ಧ್ರುವ ಸರ್ಜಾ ತಮ್ಮ ಮಗಳಿಂದ ದೊಡ್ಪಪ್ಪ ಅಂತ ಚಿರು ಫೋಟೊ ತೋರಿಸಿ ಹೇಳಿದ್ದಾರೆ.  

ಹೌದು ಧ್ರುವ ಮತ್ತು ಪ್ರೇರಣಾ ತಮ್ಮ ಮಗಳಿಗೆ ಚಿರಂಜೀವಿ ಸರ್ಜಾ ಫೋಟೋ ತೋರಿಸಿದ್ದಾರೆ. ಆ ಫೋಟೋ ನೋಡುವ ಆ ಪುಟ್ಟಿ ದೊಡ್ಡಪ್ಪ ಅಂತಲೂ ಹೇಳುತ್ತದೆ. ಆ ಒಂದು ಕ್ಷಣ ನಿಜಕ್ಕೂ ಬಹಳ ಸ್ಪೆಷಲ್ ಅಂತಲೂ ಹೇಳಬಹುದು. ಇನ್ನು ಪತ್ನಿ ಪ್ರೇರಣಾ ಸೀಮಂತ ಸಂಭ್ರಮದ ವಿಡಿಯೋ ಹಾಗೂ ಫೋಟೋಗಳನ್ನು ನಟ ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದಾರೆ. ಲೈಟ್ ಗೋಲ್ಡನ್​ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಇನ್ನು ಮಗಳಿಗೂ ಹಸಿರು ಹಾಗೂ ಗೋಲ್ಡನ್ ಮಿಶ್ರಿತ ಲಂಗ ಬ್ಲೌಸ್ ಹಾಕಿದ್ದು, ಫುಲ್ ಫ್ಯಾಮಿಲಿ ಸಖತ್ ಫೋಸ್ ನೀಡಿದೆ.

ಇನ್ನು ಎಲ್ಲರಿಗೂ ಗೊತ್ತಿರುವಂತೆ ಧ್ರುವ ಅವರ ಪ್ರತಿ ಕ್ಷಣದಲ್ಲೂ ಚಿರು ಇರಬೇಕು ಅನ್ನೋದೇ ಇವ್ರ ಆಸೆ. ಹಾಗಾಗಿಯೇ ಧ್ರುವ ಸರ್ಜಾ ಎಂದೂ ಅಣ್ಣನ ಬಿಟ್ಟು ಏನೂ ಮಾಡೋದಿಲ್ಲ. ಅದೇ ರೀತಿ ತಮ್ಮ ಸಂತೋಷದ ಕ್ಷಣವನ್ನ ಹೀಗೆ ಅಣ್ಣ ಚಿರು ಇರೋ ಜಾಗದಲ್ಲಿಯೇ ಮಾಡಿದ್ದಾರೆ. ಇನ್ನು ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ನನಗೆ ಸ್ಪೆಷಲ್ ಎಂದ ಧ್ರುವ ಶ್ರೀಕೃಷ್ಣ ಜನ್ಮಾಷ್ಠಮಿ ದಿನವೇ ಈ ಒಂದು ಸೀಮಂತ ಕಾರ್ಯಕ್ರಮ ನಡೆಸಿದ್ದಾರೆ. ಇನ್ನು ಇಡೀ ಸೀಮಂತ ಕಾರ್ಯಕ್ರಮದಲ್ಲಿ ಕೃಷ್ಣ ಫೋಟೋ ಕೂಡ ರಾರಾಜಿಸುತ್ತಿವೆ. ಈ ಮೂಲಕ ಜೂನಿಯರ್ ಧ್ರುವ ಬರ್ತಾನೆ ಅನ್ನುವ ಸೂಚನೆ ಕೊಟ್ಟಂತೇನೂ ಕಾಣುತ್ತದೆ. ಆದರೆ ಎಲ್ಲಕ್ಕಿಂತ ವಿಶೇಷ ಅನ್ಸಿದ್ದು ಚಿರು ಸಮಾಧಿ ಮುಂದೆ ಸೀಮಂತ ಮಾಡಿದ್ದು ನಿಜಕ್ಕೂ ಗ್ರೇಟ್ ಅಂತ ಹೇಳಬಹುದು.

ಇದನ್ನೂ ಓದಿ: ಮದುವೆ ಬಗ್ಗೆ ಚುಚ್ಚು ಮಾತುಗಳು ಕಣ್ಣೀರಿಟ್ಟ ಸಂಜು ಬಸಯ್ಯ! ನಿಂದನೆಗಳ ಕೋಟೆಯನ್ನ ಮೆಟ್ಟಿ ಮದುವೆ ಆಗಿದ್ದು ಹೇಗೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram