Divya shridhar: ಮುದ್ದಾದ ಮಗುವಿಗೆ ತಾಯಿಯಾದ ನಟಿ ದಿವ್ಯ ಶ್ರೀಧರ್

ಜೀವನ ಯಾವಾಗ ಹೇಗೆ ಎಲ್ಲಿ ಬದಲಾಗುತ್ತೆ ಅಂತಾನೆ ಹೇಳೋಕಾಗಲ್ಲ, ಇಷ್ಟ ಪಟ್ಟೋರನ್ನ ಮದುವೆ ಆಗೋಕೆ ಪುಣ್ಯ ಮಾಡಿರಬೇಕು ಅಂತಾರೆ ಆದ್ರೆ ಆ ಇಷ್ಟ ಪಟ್ಟೋರಿಂದಾನೆ ಕಷ್ಟ ಅಂದ್ರೆ ಎಂತವರಿಗೂ ಇದೊಂದು ದೊಡ್ಡ ಆಘಾತ. ಆಗ ಬದುಕೋಕೆ ಕಾರಣಾನೇ ಇಲ್ಲ ಅನ್ನೋವಾಗ ಗರ್ಭದಲ್ಲಿರೋ ಮತ್ತೊಂದು ಆತ್ಮ ನಾನಿದೀನಿ ಅಮ್ಮ ಅಂತ ಹೇಳುವಾಗ ಬದುಕುವ ಆಸೆ ಚಿಗುರುತ್ತೆ… ಆ ಆಸೆಯ ಚಿಗುರು ಕಿರುತೆರೆ ನಟಿ ಬಾಳಲ್ಲಿ ಈಗ ಜನ್ಮ ತಾಳಿದೆ.. ಹೌದು ಕಿರುತೆರೆ ನಟಿ ದೀಪಾ ಶ್ರೀಧರ್ ಅವ್ರ ಬಾಳಿಗೆ ಮಹಾಲಕ್ಷ್ಮಿ ಆಗಮನವಾಗಿದೆ…

WhatsApp Group Join Now
Telegram Group Join Now

ಮತಾಂತರ ಆಗಿದ್ದೆ ದಿವ್ಯಾ ಅವ್ರ ಜೀವನಕ್ಕೆ ಮುಳುವಾಯ್ತಾ?

ಆಕಾಶ ದೀಪ, ಅಮ್ಮಧಾರಾವಾಹಿ ನಟಿ ದಿವ್ಯಾ ಶ್ರೀಧರ್ ಕನ್ನಡದಲ್ಲಿ ಗುರುತಿಸಿಕೊಂಡಿದಕ್ಕಿಂತ ಹೆಚ್ಚಾಗಿ ತಮಿಳು ಕಿರುತೆರೆಯಲ್ಲಿ ಗಮನ ಸೆಳೆದಿದ್ದರು. ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ದಿವ್ಯ ಅವ್ರ ಬಾಳಲ್ಲಿ ಅರ್ನವ್ ಅಲಿಯಾಸ್ ಅಮ್ಜಾದ್ ಖಾನ್ ಅವ್ರ ಪರಿಚಯವಾಗುತ್ತೆ. ಪರಿಚಯ ಪ್ರೀತಿಗೆ ತಿರುಗಿ ನಂತರ ಮದುವೆಯಾಗ್ತಾರೆ… ಹೊಸತರಲ್ಲಿ ಎಲ್ಲವು ಚೆನ್ನಾಗಿಯೇ ನಡೆದುಕೊಂಡು ಹೋಗ್ತಾ ಇರುತ್ತೆ. ದಿವ್ಯಾ ಅವ್ರು ಗರ್ಭಿಣಿ ಕೂಡ ಆಗ್ತಾರೆ… ಎಲ್ಲವು ಚೆನ್ನಾಗಿಯೇ ಇರುತ್ತೆ… ಆದ್ರೆ ಇದ್ದಕ್ಕಿದ್ದಂತೆ ಒಂದು ದಿನ ದಿವ್ಯಾ ಚೆನ್ನೈ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಹೌದು ಪತಿ ಅಮ್ಜಾದ್ ಖಾನ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುತ್ತಾರೆ. ಆಗ
ದಿವ್ಯಾ ಶ್ರೀಧರ್ ಅವರು 4ತಿಂಗಳ ಗರ್ಭಿಣಿಯಾಗಿರುತ್ತಾರೆ. ಪತಿಯಿಂದ ಹಲ್ಲೆಯಾದ ನಂತರ ದಿವ್ಯಾ ಅವರು ಚೆನ್ನೈನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನಂತರ ಅರ್ನವ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು, ಅಲ್ಲದೆ ಮಾಧ್ಯಮದ ಮುಂದೆ ಬಂದು ಏನೇನಾಯ್ತು ಅಂತ ಎಳೆ ಎಳೆಯಾಗಿ ಎಲ್ಲವನ್ನು ಬಿಚ್ಚಿಡುತ್ತಾರೆ. ಹೌದು ಅರ್ನವ್ ಮದುವೆಯಾಗಲು ಹಿಂದು ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ನಾನು ಮತಾಂತರ ಆದೆ. ಇದನ್ನು ನನ್ನ ಅಪ್ಪ-ಅಮ್ಮ ಒಪ್ಪಲಿಲ್ಲ. ಯಾರೇ ಕಷ್ಟ ಅಂತ ಬಂದರೂ ಸಹಾಯ ಮಾಡುವ ಕುಟುಂಬ ನಮ್ಮದು. ಅರ್ನವ್‌ನನ್ನು ಪ್ರೀತಿ ಮಾಡಿ ಮದುವೆ ಆಗಿದ್ದಕ್ಕೆ ನಮ್ಮ ಮನೆಗೆ ಬರಬೇಡ, ನೀನು ಸತ್ತೆ ಅಂತ ಅಪ್ಪ ಹೇಳಿದ್ದರು.ನಾವಿಬ್ಬರೂ 5 ವರ್ಷ ಪ್ರೀತಿಸಿದ್ದೆವು. ಕುಟುಂಬಕ್ಕೆ ಆಮೇಲೆ ಹೇಳೋಣ, ಈಗ ಮದುವೆಯಾಗೋಣ ಎಂದು ಹೇಳಿದ್ದ, ಆಹ್ವಾನ ಪತ್ರಿಕೆಯಲ್ಲಿ ಯಾರೂ ಫೋಟೋ, ವಿಡಿಯೋ ತೆಗೆಯಬಾರದು ಎಂದು ಹಾಕಿದ್ದ. 3 ವರ್ಷ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ನಾವಿಬ್ಬರೂ ಮದುವೆಯಾದೆವು, ಆಮೇಲೆ ನಾನು ಗರ್ಭಿಣಿಯಾದೆ. ಇದಾದ ನಂತರದಲ್ಲಿ ಅರ್ನವ್ ವಾಟ್ಸಾಪ್ ಸೇರಿ ಎಲ್ಲದರಲ್ಲಿಯೂ ಬ್ಲಾಕ್ ಮಾಡಿದ” ನಂತರ ನಂಗೆ ಹಿಂಸೆ ಕೊಡಲು ಶುರು ಮಾಡಿದ.. ಅಲ್ಲದೆ ಗರ್ಭಿಣಿ ಅನ್ನೋದನ್ನ ನೋಡದೆ ನನ್ನ ಮೇಲೆ ಹಲ್ಲೆ ನಡೆಸ್ತಿದ್ದ ಅಂತ ಹೇಳಿಕೊಂಡು ಕಣ್ಣೀರಿಟ್ಟಿದ್ರು. ಅದಾದ ನಂತರ
ಪೊಲೀಸರು ಆರ್ನವ್ ನನ್ನ ಬಂಧಿಸಿದ್ದರು.

ಗರ್ಭಿಣಿಯಾಗಿದ್ರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದೆ

ಇದೀಗ ತಾನು ಒಬ್ಬಂಟಿಯಾಗಿ ಸಿಂಗಲ್ ಪೇರೆಂಟ್ಸ್ ಆಗಿ ತಾವೇ ತಮ್ಮನ್ನ ನೋಡಿಕೊಂಡು, ಗರ್ಭಿಣಿಯಗಿದ್ರು ಶೂಟಿಂಗ್ ಗಳಲ್ಲಿ ಭಾಗವಹಿಸಿ ತಮ್ಮ ನೋವು ಕಷ್ಟಗಳನ್ನೆಲ್ಲಾ ಸಹಿಸಿಕೊಂಡು ಇದೀಗ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.. ಹೌದು ತನ್ನ ಕಷ್ಟ ಸಂದರ್ಭದಲ್ಲಿ ತನ್ನ ಜೊತೆ ನಿಂತು ಸೀಮಂತ ಮಾಡಿ ಆರೈಕೆ ಮಾಡಿ ಇಲ್ಲಿಯವರೆಗೂ ಜೊತೇಲಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿ ಮಗುವಿನ ಮುದ್ದಾದ ಕೈ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಗುವಿನ ಫೋಟೋ ಹಂಚಿಕೊಂಡ ದಿವ್ಯ ಶ್ರೀಧರ್

ಒಟ್ಟಿನಲ್ಲಿ ಕಷ್ಟ ಯಾವಾಗ ಬೇಕಾದ್ರೂ ಬರಬಹುದು, ಜೀವನ ನೀರಿನ ಮೇಲಿನ ಗುಳ್ಳೆಯಂತೆ ಹೇಗ್ ಬೇಕಾದ್ರೂ ಬದಲಾಗಬಹುದು ಅನ್ನೋದಕ್ಕೆ ದಿವ್ಯಾ ಅವ್ರೆ ನೈಜ ಉದಾಹರಣೆ. ಏನೇ ಇರಲಿ ದಿವ್ಯಾ ಹಾಗೂ ಜಗತ್ತಿಗೆ ಈಗ ತಾನೇ ಕಾಲಿಟ್ಟಿರುವ ಮುದ್ದು ಕಂದನ ಜೀವನ ಚೆನ್ನಾಗಿರಲಿ ಅಂತ ಶುಭಾ ಆರೈಸೋಣ..

ಇದನ್ನು ಓದಿ : ವಿಚಿತ್ರವಾಗಿ ಮೇಕಪ್ ಮಾಡಿಕೊಳ್ಳಬೇಡಿ,ನೀವು ನಿವಾಗಿಯೇ ಇರಿ ಅಂಕಿತಾ ಕುಂಡುಗೆ ಅಭಿಮಾನಿಗಳ ಮನವಿ