ದರ್ಶನ್ ಮಗು ಥರ ಆದ್ರೆ ಕೆಣಕುದ್ರೆ ಬೆಂಕಿ! ಸುಮ್ಮನಿದ್ರೆ ಅವನ ಪಾಡಿಗೆ ಅವ್ನು ಇರುತ್ತಾನೆ; ಡಿ. ಬಾಸ್ ಬಗ್ಗೆ ರವಿಚಂದ್ರನ್ ಅವ್ರು ಹೇಳಿದ್ದೇನು ಗೊತ್ತಾ?

ಕನ್ನಡ ಚಿತ್ರರಂಗದ ದಾಸ ಅಭಿಮಾನಿಗಳ ಡಿ. ಬಾಸ್, ಡಚ್ಚು, ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನೇರ ನಡೆ, ನೇರ ನುಡಿಯಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕಡ್ಡಿ ತುಂಡಾಗುವಂತೆ ಮಾತನಾಡುವ ದರ್ಶನ್, ಯಾರಿಗೂ ಜಗ್ಗಲ್ಲ, ಯಾರಿಗೂ ಬಗ್ಗಲ್ಲ, ಮತ್ತೊಬ್ಬರಿಗೆ ತಲೆ ಬಾಗಿ ನಡೆಯುವಂತದ್ದು ಇಲ್ಲ. ನಿಯತ್ತಾಗಿ ಇದ್ರೆ ಎಲ್ಲಿ ಬೇಕಾದ್ರೂ ಬದುಕಬಹುದು ಎನ್ನುತ್ತಾ, ಕೆಲವೊಮ್ಮೆ ತಮ್ಮ ನೇರ ನಡೆ ನುಡಿಯಿಂದಲೇ ವಿವಾದಗಳನ್ನು ಸೃಷ್ಟಿಸಿಕೊಂಡಿರೋದು ಇದೆ. ಆದರೆ ಅದಕ್ಕೆಲ್ಲಾ ತಲೆ ಕೆಡಸಿಕೊಳ್ಳದೇ ಚಾಲೆಂಜಿಂಗ್ ಸ್ಟಾರ್ ಮುನ್ನುಗ್ಗುತ್ತಿರುತ್ತಾರೆ. ಇದೀಗ ನಟ ದರ್ಶನ್‌ ಬಗ್ಗೆ ಹಿರಿಯ ನಟ ವಿ.ರವಿಚಂದ್ರನ್‌ ಆಡಿರುವ ಮಾತುಗಳು ಸದ್ಯ ಸಖತ್‌ ವೈರಲ್‌ ಆಗುತ್ತಿವೆ.

WhatsApp Group Join Now
Telegram Group Join Now

ಹೌದು ಹತ್ತಿರದಿಂದ ಬಲ್ಲವರಿಗೆ ಮಾತ್ರ ದರ್ಶನ್ ವ್ಯಕ್ತಿತ್ವ ಎಂಥದ್ದು ಎನ್ನುವುದು ಗೊತ್ತಿರುತ್ತೆ. ಇನ್ನು ಇದೀಗ ದರ್ಶನ್ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿರುವ ಮಾತುಗಳು ವೈರಲ್ ಆಗುತ್ತಿದೆ. ಹೌದು ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ತೀರ್ಪುಗಾರರಾಗಿ ರವಿಚಂದ್ರನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಈ ಒಂದು ಕಾರ್ಯಕ್ರಮಕ್ಕೆ ಜ್ಯೂನಿಯರ್ ದರ್ಶನ್ ಅಂತ ಗುರುತಿಸಿಕೊಂಡಿರೋ ಅವಿನಾಶ್ ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು. ಹೌದು ಥೇಟ್ ದಾಸನ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಈ ಸಂದರ್ಭದಲ್ಲಿ ದಾಸನ ಬಗ್ಗೆ ರವಿಚಂದ್ರನ್ ಅವ್ರು ಮನ ಬಿಚ್ಚಿ ಮಾತನಾಡಿದ್ದಾರೆ.

ಹೌದು ರಾಘು ಬಹಳ ಕಷ್ಟ ಪಟ್ಟು ಸಂಪಾದಿಸಿದ ಹಣದಿಂದ ತನ್ನ ಪಾಟ್ನರ್ ಗೆ ತಾವೇ ತಮ್ಮ ಕೈಯಾರೇ ಬಿಡಿಸಿದ ಚಿತ್ರವನ್ನ ಉಡುಗುರೆಯಾಗಿ ನೀಡುತ್ತಾರೆ. ತಮ್ಮ ಪಾಟ್ನರ್ ದರ್ಶನ್ ಜೊತೆಗಿರುವಂತೆ ಚಿತ್ರೀಸಲಾಗಿರುತ್ತೆ. ನಂತರ ಮತ್ತೊಂದು ಸರ್ಪ್ರೈ ಸ್ ಎಂಬಂತೆ ಜೂನಿಯರ್ ದರ್ಶನ್ ಎಂಟ್ರಿ ಕೊಡ್ತಾರೆ. ಹೌದು ಅವಿನಾಶ್‌ ಅವರ ಆಗಮನಕ್ಕೆ ಇಡೀ ಭರ್ಜರಿ ಬ್ಯಾಚುಲರ್ಸ್‌ ತಂಡವೇ ಬೆರಗಾಗಿತ್ತು. ಅವಿನಾಶ್ ಎಂಟ್ರಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈ ವೇಳೆ ತೀರ್ಪುಗಾರರಾದ ರವಿಚಂದ್ರನ್ ದರ್ಶನ್ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಶುರು ಮಾಡ್ತಾರೆ.

ಇದನ್ನೂ ಓದಿ: ಅತಿ ಶ್ರೀಘದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಸೀಸನ್ 10; ಸ್ಪರ್ಧಿಗಳ ಪಕ್ಕ ಲಿಸ್ಟ್ ಇಲ್ಲಿದೆ ನೋಡಿ

ರವಿಚಂದ್ರನ್ ಅವರ ಮಾತು ಈಗ ವೈರಲ್

“ದರ್ಶನ್ ಹೆಂಗೆ ಅಂದ್ರೆ ಸುಮ್ಮನಿದ್ದರೆ ಬಹಳ ವಿನಯದಿಂದ ಇರ್ತಾನೆ ಅವ್ನು. ಇಲ್ಲದಿದ್ದರೆ ಅದಕ್ಕೆ ವಿರುದ್ಧ ಅಷ್ಟೆ. ಸುಮ್ಮನೆ ಬಿಟ್ಟರೆ ಅವನ ಪಾಡಿಗೆ ಅವ್ನು ಅವನ ಕೆಲಸ ಮಾಡ್ಕೊಂಡು ಮಗು ತರ ಹೋಗ್ತಾ ಇರ್ತಾನೆ. ಅವನನ್ನು ಕೆದಕಬಾರದು. ಕೆಣಕಬಾರದು, ಆಗ ಒಳ್ಳೆ ವ್ಯಕ್ತಿ. ಹೌದು ದರ್ಶನ್‌ನ ಕೆಣಕಬಾರದು. ಕೆಣಕಿದರೆ ಫೈಯರ್ ಆಗುತ್ತದೆ ಅಷ್ಟೆ. ಅದು ನಾನು ಅವನನ್ನು ನೋಡಿ ಅರ್ಥ ಆಗಿರೋದು. ಯಾಕಂದರೆ 2 ಸಿನಿಮಾದಲ್ಲಿ ಅವನೊಟ್ಟಿಗೆ ನಟಿಸಿದ್ದೇನೆ. ನಾನು ಯಾವಾಗಲು ಹೇಳ್ತಿರ್ತೀನಿ. ನೀನು ಯಾವಾಗಲೂ ದುರ್ಯೋಧನ, ರಾವಣ ರೀತಿಯ ಪೌರಾಣಿಕ ಪಾತ್ರ ಮಾಡು ಅಂತ. ಸದ್ಯಕ್ಕೆ ನಿನ್ನ ಬಿಟ್ಟರೆ ಇಂತಹ ಪಾತ್ರ ಮಾಡಲು ಕರ್ನಾಟಕದಲ್ಲಿ ಯಾರು ಇಲ್ಲ ಅಂತ. ಡಾ. ರಾಜ್‌ಕುಮಾರ್ ಬಿಟ್ಟರೆ ಪೌರಾಣಿಕ ಪಾತ್ರಗಳಲ್ಲಿ ಬೇರೆ ಯಾರನ್ನು ನೋಡೋಕೆ ಆಗಲಿಲ್ಲ. ಮತ್ತೆ ಅಂತಹ ಪರ್ಸನಾಲಿಟಿ ಬೇಕು ಅಂದ್ರೆ ದರ್ಶನ್ ಒಬ್ನೆ ಇರೋದು” ಎಂದಿದ್ದಾರೆ.

ಹೌದು ಹಿಂದೆ ಮಜಾಭಾರತ ಕಾಮಿಡಿ ಶೋನಲ್ಲಿ ಜೂನಿಯರ್ ದರ್ಶನ್(Darshan) ಖ್ಯಾತಿಯ ಅವಿನಾಶ್ ಸ್ಪರ್ಧಿಯಾಗಿದ್ದರು. ಆಟೋ ಡ್ರೈವರ್ ಅವಿನಾಶ್ ಮೂಲತಃ ಚಿಕ್ಕಮಗಳೂರಿನವರು. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ರೀತಿ ಟಿಕ್‌ಟಾಕ್ ವಿಡಿಯೋಗಳನ್ನು ಮಾಡಿ ಗಮನ ಸೆಳೆದಿದ್ದರು. ಅವಿನಾಶ್ ನಡೆ, ಮಾತನಾಡುವ ಸ್ಟೈಲ್, ಬಾಡಿ ಲಾಂಗ್ವೇಜ್ ಎಲ್ಲವೂ ಚಾಲೆಂಜಿಂಗ್ ಸ್ಟಾರ್‌ನ ನೆನಪಿಸುತ್ತದೆ. ದರ್ಶನ್ ಜತೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ರಾಮ್ ಕೂಡ ಜ್ಯೂನಿಯರ್ ದರ್ಶನ್ ಅವಿನಾಶ್ ಸ್ಟೈಲ್ ನೋಡಿ ಬೆರಗಾಗಿದ್ದರು.

ಹೀಗಾಗಿ ರಾಘು ಕೂಡ ತನ್ನ ಪಾರ್ಟ್ನರ್ ಗೆ ಸರ್ಪ್ರೈಸ್ ಕೊಡಲು ಜೂನಿಯರ್ ದರ್ಶನ್ ಅವ್ರನ್ನ ಕರೆಸಿ ಎಲ್ಲರನ್ನ ಭರ್ಜರಿಯಾಗಿ ರಂಜಿಸಿದ್ದಾರೆ. ಈ ನಡುವೆ ದರ್ಶನ್ ಅವ್ರ ವಿಚಾರವಾಗಿ ಹಿರಿಯ ನಟ ಹಾಗೂ ಕಾರ್ಯಕ್ರಮದ ತೀರ್ಪುಗರಾರಾಗಿರುವ ರವಿಚಂದ್ರನ್ ಅವ್ರು ದರ್ಶನ್ ಅವ್ರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ದರ್ಶನ್ ಗುಣಗಳ ಕುರಿತು ವಿವರಿಸಿರುವ ರವಿಚಂದನ್ ದರ್ಶನ್ ಅವ್ರನ್ನ ಅಣ್ಣವರಿಗೆ ಹೋಲಿಸಿರೋದು ದರ್ಶನ್ ಅಭಿಮಾನಿಗಳಿಗೆ ಬಹಳಷ್ಟು ಖುಷಿಯಾಗಿದ್ದು ಅಭಿಮಾನಿಗಳಂತು ಸಖತ್ ಥ್ರಿಲ್ ಆಗಿದ್ದು ರವಿಚಂದ್ರನ್ ಅವ್ರು ಮಾತನಾಡಿರುವ ವಿಡಿಯೋವನ್ನ ಎಲ್ಲಾ ಕಡೆ ವೈರಲ್ ಮಾಡ್ತಿದ್ದಾರೆ.

ಇದನ್ನೂ ಓದಿ: ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ, ಇಂದು ಸ್ಟಾರ್ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram