ಯುವನಿಧಿ ಯೋಜನೆ ಜಾರಿಗೆ ವೇದಿಕೆ ಸಜ್ಜು; ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..

Yuvanidi Yojana: ರಾಜ್ಯ ಸರ್ಕಾರದ ಯೋಜನೆಯದ ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿಗಳು ಮಾಸಿಕ ಭತ್ಯೆಯನ್ನು ಪಡೆಯಬಹುದು ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಆದರೆ ಫಲಾನುಭವಿಗಳು ಯಾವ ಯಾವ ದಾಖಲೆಗಳನ್ನ ಒಪ್ಪಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಈ ಯೋಜನೆಯಲ್ಲಿ ಆಗಸ್ಟೇ ಓದು ಮುಗಿಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ಮಾಸಿಕ ವೇತನವನ್ನು ನೀಡಲಾಗುತ್ತೆ. ಓದು ಮುಗಿದ ನಂತರ ಕೆಲಸ ಸಿಕ್ಕದೆ ಇದ್ದ ಪಕ್ಷದಲ್ಲಿ ಈ ವೇತನವನ್ನು ನೀಡಲಾಗುತ್ತದೆ. ನೀವು ಉದ್ಯೋಗ ಪಡೆಯುವವರೆಗೂ ಕನಿಷ್ಠ ಎರಡು ವರ್ಷಗಳ ಕಾಲ ಯೋಜನೆಯ ಲಾಭವನ್ನು ಪಡೆಯಬಹುದು ಒಂದು ವೇಳೆ ಎರಡು ವರ್ಷದ ಒಳಗಡೆ ನಿಮಗೆ ಉದ್ಯೋಗ ಸಿಕ್ಕಿದಲ್ಲಿ ಈ ವೇತನವನ್ನು ನಿಲ್ಲಿಸಲಾಗುತ್ತದೆ. 

WhatsApp Group Join Now
Telegram Group Join Now

ಈ ಯೋಜನೆಯ ಉದ್ದೇಶ ಏನೆಂದರೆ ಓದು ಮುಗಿಸಿ ಮನೆಯಲ್ಲೇ ಕುಳಿತಿರುವ ಅಭ್ಯರ್ಥಿಗಳಿಗೆ ಬೆಂಬಲಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ 2023ರ ಈ ಅವಧಿಯಲ್ಲಿ ಶಿಕ್ಷಣವನ್ನು ಮುಗಿಸಿ ಮನೆಯಲ್ಲಿ ಕುಳಿತಿರುವ ಅಭ್ಯರ್ಥಿಗಳು ಈ ಯೋಜನೆಯ ಫಲಾನುಭವಿಗಳು ಆಗಿರುತ್ತಾರೆ. ಈ ಯೋಜನೆಯ ಫಲವನ್ನು ಪದವಿ ಹಾಗೂ ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳು ಮಾಸಿಕ ವೇತನ ತಲಾ ಮೂರು ಸಾವಿರ ರೂಪಾಯಿಗಳು ಹಾಗೂ ತಲಾ ಒಂದು ಸಾವಿರ ರೂಪಾಯಿಗಳನ್ನು ಕ್ರಮವಾಗಿ ಪಡೆಯಬಹುದಾಗಿದೆ. ಪ್ರತಿ ತಿಂಗಳು ಮೊತ್ತವು ಡೈರೆಕ್ಟ್ ಬ್ಯಾಂಕ್ ಖಾತೆಗೆ (Bank Account) ಜಮಾ ಆಗುತ್ತದೆ.

ಒಂದು ವೇಳೆ ನಿಮಗೆ ಎರಡು ವರ್ಷದ ಒಳಗಡೆ ಉದ್ಯೋಗ (job) ದೊರೆತಲ್ಲಿ ಸರಕಾರಕ್ಕೆ ನೀವು ಮನವಿ ಮಾಡಬೇಕಾಗುತ್ತದೆ ಒಂದು ವೇಳೆ ಯಾವುದೇ ಸೂಚನೆಯನ್ನು ಕೂಡ ಸರಕಾರಕ್ಕೆ ನೀಡದೆ ಇದ್ದ ಪಕ್ಷದಲ್ಲಿ ನಿಮಗೆ ದಂಡವನ್ನು ವಿಧಿಸಲಾಗುವುದು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಯುವನಿಧಿ ಯೋಜನೆ(Yuvanidi Yojana) ಫಲಾನುಭವಿಗಳ ಅರ್ಹತೆಗಳು

  • ನೀವು ಕರ್ನಾಟಕದ ನಿವಾಸಿ ಆಗಿರಬೇಕು.
  • ನೀವು ಯಾವುದೇ ಹುದ್ದೆಯಲ್ಲಿದ್ದು, ಇವನಿಗೆ ಯೋಜನೆಗೆ ಅರ್ಜಿ ಸಲ್ಲಿಸಿದ್ದೆ ಆದರೆ ಭಾರಿ ಪ್ರಮಾಣದ ದಂಡವನ್ನು ತರಬೇಕಾಗುತ್ತದೆ.
    ಫಲಾನುಭವಿಗಳು ಎರಡು ವರ್ಷದ ಒಳಗಡೆ ಕೆಲಸವನ್ನು ಹುಡುಕಿಕೊಳ್ಳಬೇಕು ಎರಡು ವರ್ಷಕ್ಕಿಂತ ಮೇಲ್ಪಟ್ಟು ಇವನಿಗೆ ಯೋಜನೆಯ ಹಣವು ದೊರಕುವುದಿಲ್ಲ.
  • ಈ ಯೋಜನೆಯ ಫಲವನ್ನು ಪಡೆದುಕೊಳ್ಳಲು 2022 ಹಾಗೂ 2023ರ ವರ್ಷದಲ್ಲಿ ಶಿಕ್ಷಣವನ್ನು ಮುಗಿಸಿರಬೇಕು. ಇವರಷ್ಟೇ ಈ ಯೋಜನೆಯ ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಈ ಯೋಜನೆಗೆ ಬೇಕಾದ ದಾಖಲಾತಿಗಳು

ನಿಮ್ಮ ಫೋಟೋ ಬೇಕಾಗುತ್ತದೆ, ನಿಮ್ಮ ಮೊಬೈಲ್ ಸಂಖ್ಯೆ ಹಾಗೂ E-mail ID, ಬ್ಯಾಂಕ್ ಖಾತೆಯ ವಿವರಗಳು, ಆದಾಯ ಪ್ರಮಾಣ ಪತ್ರ ಹಾಗೂ ನಿಮ್ಮ ಶಿಕ್ಷಣ ಸಂಸ್ಥೆಯ ಪ್ರಮಾಣ ಪತ್ರ, ಬಹು ಮುಖ್ಯವಾಗಿ ಆಧಾರ ಕಾರ್ಡ್ ಬೇಕಾಗುತ್ತದೆ. ಜೊತೆಗೆ ನೀವು ಪದವಿ ಅಥವಾ ಡಿಪ್ಲೋಮಾ ಮುಗಿಸಿದ ಅಂಕಪಟ್ಟಿಗಳು ಬೇಕಾಗುತ್ತವೆ. ಇವಿಷ್ಟು ದಾಖಲಾತಿಗಳನ್ನು ನೀವು ಹೊಂದಿದ್ದರೆ ಮಾತ್ರ ಈ ಯೋಜನೆಗೆ ಅವಶ್ಯವಾಗಿ ಅರ್ಜಿಯನ್ನು ಸಲ್ಲಿಸಬಹುದು. ಈ ಬಗ್ಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರಕಿಲ್ಲ ಸದ್ಯದಲ್ಲೇ ಸರ್ಕಾರ ಇದರ ಬಗ್ಗೆಯೂ ಕೂಡ ಮಾಹಿತಿಯನ್ನು ಹೊರಹಾಕಲಿದೆ. ಡಿಸೆಂಬರ್ ತಿಂಗಳಿನ ಕೊನೆಯ ಒಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಯಲ್ಲಿ ಓಡಿಸ್ಸಿ ಕಂಪನಿಯ ಹೊಸ ಸ್ಕೂಟರ್ ಲಭ್ಯವಾಗುತ್ತಿದೆ ಇದರ ಬೆಲೆ ಕೇವಲ 59,800 ರೂ.ಗಳು. ಮಾತ್ರ. 

ಇದನ್ನೂ ಓದಿ: ಟಾಟಾ ಮತ್ತು ಮಹಿಂದ್ರ ಕಂಪನಿಯನ್ನು ಹಿಂದಿಕ್ಕುವ ಮಾರುತಿ ಸುಜುಕಿ EVX ನ ಮೊದಲ ಫೋಟೋವನ್ನು ಬಿಡುಗಡೆ ಮಾಡಿದೆ.