ಊಟದಲ್ಲಿ ವಿಷ ಹಾಕಿ ಅಂದಿದ್ರಂತೆ ಪ್ರತಾಪ್ ಸಂಬಂಧಿಕರು! ತಾರಾ ಮುಂದೆ ಕಣ್ಣೀರಿಟ್ಟ ಡ್ರೋನ್ ಪ್ರತಾಪ್

ಬಿಗ್‌ಬಾಸ್ ಕನ್ನಡ ಸೀಸನ್ 10 ಶೋ 3ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮನೆಯಿಂದ ಸ್ನೇಕ್ ಶ್ಯಾಮ್ ಹಾಗೂ ಗೌರೀಶ್ ಅಕ್ಕಿ ಹೊರಬಂದಿದ್ದಾರೆ. ಇನ್ನು ಹುಲಿ ಉಗುರು ಹೊಂದಿರುವ ಆರೋಪದಲ್ಲಿ ವರ್ತೂರು ಸಂತೋಷ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೆಲ್ಲದರ ನಡುವೆ ಬಿಗ್‌ಬಾಸ್ ಆಟ ಮುಂದುವರೆದಿದೆ. 2ನೇ ವಾರದಲ್ಲಿ ಸ್ವಲ್ಪ ಚಿಗುರಿಕೊಂಡಿದ್ದ ಡ್ರೋನ್​ ಪ್ರತಾಪ್(Drone Prathap)​ ಅವರು ಮೂರನೇ ವಾರದಲ್ಲಿ ಮತ್ತೆ ಕುಗ್ಗಿದಂತಿದೆ. ಮನೆಯ ಸದಸ್ಯರೆಲ್ಲರೂ ಸೇರಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ನೇರವಾಗಿ ಕೇಳಿದ್ದಾರೆ. ಆದರೆ ಅವುಗಳಿಗೆ ಉತ್ತರಿಸುವ ಸಮಯದಲ್ಲಿ ಪ್ರತಾಪ್​ ಕಣ್ಣೀರು ಹಾಕಿದ್ದಾರೆ. ಇನ್ನು ಡ್ರೋನ್​ ಪ್ರತಾಪ್​ ಅವರು ಬಿಗ್​ ಬಾಸ್ ಮನೆಯಲ್ಲಿ ಟಾರ್ಗೆಟ್​ ಆಗಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಅವರನ್ನು ಮೊದಲ ವಾರದಲ್ಲೇ ಕೆಲವರು ಲೇವಡಿ ಮಾಡಿದ್ದರು. ಅದನ್ನು ಕಿಚ್ಚ ಸುದೀಪ್​ ಖಂಡಿಸಿದ್ದರು. ಆ ಬಳಿಕ ಪ್ರತಾಪ್​ ಕೊಂಚ ಧೈರ್ಯ ತಂದುಕೊಂಡಿದ್ದರು. ಆದರೆ ಮೂರನೇ ವಾರದಲ್ಲಿ ಅವರು ಮತ್ತೆ ಕುಗ್ಗಿದಂತಿದೆ.

WhatsApp Group Join Now
Telegram Group Join Now

ಅದೃಷ್ಟ ಪರೀಕ್ಷೆ ಹೆಸರಿನಲ್ಲಿ ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ದೊಡ್ಮನೆಯ ಸದಸ್ಯರೆಲ್ಲರೂ ಸೇರಿ ವಿನಯ್​ ಗೌಡ ಮತ್ತು ಪ್ರತಾಪ್​ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಪ್ರತಾಪ್ ಸುಮ್ಮನಾದ್ರು ಇದಾದ ನಂತರ ವಿನಯ್ ಸೇಫ್ ಆಗ್ತಾರೆ. ಬಳಿಕ ವಿಜಯ ದಶಮಿ ಪ್ರಯುಕ್ತ ಮನೆಗೆ ತಾರ ಅನುರಾಧ ಅವ್ರ ಎಂಟ್ರಿ ಆಗಿದೆ, ಮೊದಲೇ ನೊಂದಿದ್ದ ಪ್ರತಾಪ್ ತಾರಾ ಅವ್ರ ಬಳಿ ನೋವನ್ನೆಲ್ಲ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

Images Credit: Colors Kannada

ದಸರಾ ಹಬ್ಬದ ಸಂಭ್ರಮ ಬಿಗ್‌ ಬಾಸ್‌ ಮನೆಯಲ್ಲೂ ಕಳೆಗಟ್ಟಿದೆ. ನಟಿ ತಾರಾ ದೊಡ್ಮನೆ ಒಳಗೆ ಪ್ರವೇಶಿಸಿ ಸ್ಪರ್ಧಿಗಳೊಂದಿಗೆ ಹಬ್ಬಕ್ಕೆ ಮೆರುಗು ತಂದಿದ್ದಾರೆ. ಹೌದು ಬಿಗ್‌ ಬಾಸ್‌ ಸೀಸನ್‌ 10 ಮೂರನೇ ವಾರ ಪ್ರವೇಶ ಮಾಡಿದೆ. ಬಿಗ್ ಬಾಸ್ ಮನೆಗೆ ಚಿತ್ರ ನಟಿ ತಾರಾ ಆಗಮಿಸಿ ಅಲ್ಲಿನ ವಾತಾವರಣವನ್ನು ತಿಳಿಗೊಳಿಸಿದರು. ಆದರೆ, ಇದೇ ದಿನ ನಡೆದ ಕೋರ್ಟ್‌ ವಿಚಾರಣೆಯಂಥ ಟಾಸ್ಕ್ ನಲ್ಲಿ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಹಾಗೂ ವಿನಯ್ ಗೌಡ ಅದೃಷ್ಟ ಪರೀಕ್ಷೆಗೆ ಇಳಿದರು. ಹೌದು ಡ್ರೋನ್‌ ಪ್ರತಾಪ್‌ ಮತ್ತು ವಿನಯ್‌ ಗೌಡ ಅವರನ್ನು ಎದುರಿನಲ್ಲಿ ಕೂರಿಸಿ ಸಹಸ್ಪರ್ಧಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಡ್ರೋನ್‌ ಪ್ರತಾಪ್‌ ಒಳಗೊಂದು ಹೊರಗೊಂದು ಎಂಬಂತೆ ದೂಷಿಸುತ್ತಾರೆ. ಗ್ರೂಪ್‌ ಟಾಸ್ಕ್‌ ಮುಗಿದ ಮೇಲೂ, ಕ್ಯಾಪ್ಟನ್‌ಷಿಪ್‌ ಡಿಸೈಡ್ ಅದ ಮೇಲೂ ನೀವ್ಯಾಕೆ ನಿಮ್ಮದೇ ಗ್ರೂಪನ್ನು ಉಳಿಸಿಕೊಂಡಿದ್ದೀರಿ ಎಂದು ತನಿಷಾ ವಿನಯ್‌ನನ್ನು ಪ್ರಶ್ನೆ ಮಾಡುತ್ತಾರೆ.

ಇತ್ತ ಕಡೆ ಅದೇ ವೇಳೆ, ನೀವು ಕ್ಯಾರೆಕ್ಟರನ್ನೇ ಬದಲಿಸಿಕೊಂಡಿದ್ದೀರಿ ಎಂದು ನಮ್ರತಾ ಡ್ರೋನ್‌(Drone Prathap) ಪ್ರತಾಪ್‌ನನ್ನು ಪ್ರಶ್ನೆ ಮಾಡುತ್ತಾರೆ. ಆಗ ಸಹಸ್ಪರ್ಧಿಗಳ ಪ್ರಶ್ನಾ ದಾಳಿಯಿಂದ ಕಂಗೆಟ್ಟ ಡ್ರೋನ್‌ ಪ್ರತಾಪ್‌ ಸರಿಯಾಗಿ ಉತ್ತರವನ್ನ ನೀಡೋದೇ ಇಲ್ಲ. ಹೀಗಾಗಿ ವಿನಯ್ ಗೌಡ ಸೇಫ್ ಆಗ್ತಾರೆ. ಈ ನಡುವೆ, ಮನೆಗೆ ಬಂದ ಚಿತ್ರ ನಟಿ ತಾರಾ ಅವರು ಡ್ರೋನ್‌ ಪ್ರತಾಪ್‌ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಮಾಧಾನ ಹೇಳ್ತಾರೆ. ಅವರು ಡ್ರೋನ್‌ ಪ್ರತಾಪ್‌ ಅವರನ್ನು ಸಮಾಧಾನ ಮಾಡುತ್ತಾರೆ. ಹೌದು ಯಾರ ಬಳಿಯೂ ಮನಬಿಚ್ಚಿ ಮಾತನಾಡದ ಡ್ರೋನ್ ಪ್ರತಾಪ್ ತಾರ ಅವ್ರ ಬಳಿ ಎಲ್ಲವನ್ನ ಹೇಳಿಕೊಂಡು ಮಗುವಿನಂತೆ ಅತ್ತಿದ್ದಾರೆ.

ತಾರ ಅನುರಾಧ ಅವ್ರ ಮುಂದೆ ಮನಬಿಚ್ಚಿ ಮಾತನಾಡಿದರೆ ಡ್ರೋನ್

ಹೌದು ಬಿಗ್ ಬಾಸ್ ಮನೆಗೆ ಬಂದ ತಾರ ಅನುರಾಧ ಹಬ್ಬದ ವಾತಾವರಣವನ್ನು ಸೃಷ್ಟಿಸುವುದರ ಜೊತೆಗೆ ಮನೆಯಲ್ಲಿ ಇನ್ನು ಓಪನ್ ಆಗದೆ ಇದ್ದ ಪ್ರತಾಪ್ ಜೊತೆ ಮನ ಬಿಚ್ಚಿ ಮಾತನಾಡಿದ್ದಾರೆ. ಹೌದು ಪ್ರತಾಪ್ ನ ಕರೆದು ತಾರಾ ಅವರು ಪ್ರತಾಪ್ ಅವರ ಜೊತೆ ಬಹಳ ಅನ್ಯೂನ್ಯವಾಗಿ ಮಾತನಾಡುತ್ತಾರೆ ನೀನು ನನ್ನ ಮಗ ಇದ್ದಂಗೆ, ಅಲ್ಲ ಕಣೋ, ನೀನ್ ತಪ್ಪು ಮಾಡಿರಬಹುದು ಬಿಡು ಅದನ್ನು ತಿದ್ದುಕೊಳಕ್ಕೆ ವೇದಿಕೆ ಅಲ್ವೇನೋ, ಅದನ್ನ ನೀನ್ ಯಾಕ್ ಬಳಸಿಕೊಳ್ಳುತ್ತಿಲ್ಲ ಬಿಗ್ ಬಾಸ್ ನಿನಗೆ ಅವಕಾಶ ಕೊಟ್ಟಿದಾರೆ ನೀನು ಏನು ಅಂತ ತೋರಿಸಿಕೊಳ್ಳೋ ಅವಕಾಶನಾ ನೀನು ಯಾಕೆ ಸರಿಯಾಗ್ ಬಳಸಿಕೊಳ್ಳುತ್ತಿಲ್ಲ ನೀನ್ ಯಾಕೆ ಇನ್ನು ಓಪನ್ ಆಗಿಲ್ಲ ಅಂತ ಕೇಳ್ತಾರೆ. ಆಗ ಪ್ರತಾಪ್ ಕಣ್ತುಂಬಿ ಕೊಳ್ಳುತ್ತಾರೆ, ನಾನು ಟಾಯ್ಲೆಟ್ ಗೆ ಹೋಗಿ ಬರ್ತೀನಿ ಅಂತ ಹೇಳುತ್ತಾರೆ. ಅದಾದ ನಂತರ ಡ್ರೋನ್ ಪ್ರತಾಪ್ ಮಗುವಿನಂತೆ ಅತ್ತು ಬಿಡ್ತಾರೆ.

ಇಷ್ಟು ದಿನ ಯಾರ ಜೊತೆಗೂ ತಮ್ಮ ನೋವನ್ನು ಹೇಳಿಕೊಳ್ಳದ ಡ್ರೋನ್ ಪ್ರತಾಪ್(Drone Prathap) ತಾರಾ ಅವರ ಬಳಿ ಎಲ್ಲವನ್ನು ಹೇಳಿಕೊಳ್ಳುತ್ತಾರೆ. ನಾನು ನನ್ನಪ್ಪ ನಂಬರ್ ನ ಬ್ಲಾಕ್ ಮಾಡಿದೀನಿ ಅಮ್ಮ, ತಂಗಿ ಎಲ್ಲರ ನಂಬರ್ ನ ಬ್ಲಾಕ್ ಮಾಡಿದೀನಿ ಎಲ್ಲರನ್ನ ದೂರ ಇಟ್ಟಿದ್ದೀನಿ ಅಂತ ಹೇಳ್ತಾರೆ ಆಗ ತಾರ ಯಾಕೆ ಅಂತ ಕೇಳ್ತಾರೆ ನಾನು ಏನೋ ಹಣ ಮಾಡಿಬಿಟ್ಟಿದ್ದೀನಿ ಅಂತ ಎಲ್ಲರತ್ರ ದುಡ್ಡು ಇಸ್ಕೊಂಡಿದಿನಂತೆ ಹೀಗೆಲ್ಲ ಮಾತಾಡಿದ್ದಾರೆ ಅಲ್ದೆ ನಮ್ಮಪ್ಪನ ಹತ್ರ ಹೋಗ್ಬಿಟ್ಟು ನಿನ್ ಮಗನಿಗೆ ತಿನ್ನೋದ್ರಲ್ಲಿ ವಿಷ ಕೊಟ್ಟುಬಿಡು ಅಂತ ಹೇಳಿದ್ದಾರೆ. ಅದಿಕ್ಕೆ ಅವರಿಗ್ ತೊಂದ್ರೆ ಆಗ್ಬಾರ್ದು ಅಂತ ನಾನೆ ದೂರ ಇದ್ದೀನಿ. ಬಿಗ್ ಬಾಸ್ ಗೆ ಹೋಗೋದು ಬೇಡ ಅಂತ ನಮ್ ಮಾವ ಅವರತ್ರ ಹೇಳಿಸಿದ್ರು ಆದರೆ ನನ್ನವರು ಮಾತನ್ನ ಮೀರಿ ಬಂದಿದ್ದೀನಿ.

ನನಗೆ ನನ್ನ ಅಪ್ಪ ಅಮ್ಮನ ತಂಗಿನ ನೋಡ್ಬೇಕು ಅನ್ನಿಸ್ತಿದೆ, ಊರಲ್ಲಿ ಮನೆ ಕಟ್ಟಿದ್ದಾರೆ ಆದರೆ ನಾನು ಗೃಹಪ್ರವೇಶಕ್ಕೆ ಹೋಗಿಲ್ಲ ಗೊತ್ತಾ. ಮದುವೆ ಆಗಬೇಕಾಗಿರುವ ನನ್ನ ತಂಗಿ ಇದ್ದಾಳೆ ಅವಳಿಗೆ ಏನು ಸಮಸ್ಯೆ ಆಗಬಾರದು ಹೀಗಾಗಿ ಎಲ್ಲರಿಂದ ದೂರ ಆಗಿದ್ದೀನಿ ಅಂತ ಹೇಳುತ್ತಾರೆ. ತಾರ ಅವರು ಬಿಗ್ ಬಾಸ್ ಇವರ ಅಪ್ಪ ಅಮ್ಮ ತಂಗಿನ ಒಂದ್ಸಲ ಕರ್ಸಿ ಬಿಗ್ ಬಾಸ್ ನನಗೋಸ್ಕರ ಅಂತ ಬಿಗ್ ಬಾಸ್ ಗೆ ಹೇಳ್ತಾರೆ ಅದಾದ ನಂತರ ನೀನು ಓಪನ್ ಅಪ್ ಆಗ್ಬೇಕು, ತಪ್ಪು ಮಾಡಿಲ್ಲ ಅಂತ ತೋರಿಸಿ ಕೊಳಕ್ಕೆ ನಿನಗೆ ವೇದಿಕೆ ಸಿಕ್ಕಿದೆ ಅದನ್ನ ಬಳಸ್ಕೊ ಅಂತ ಹೇಳಿ ತಮ್ಮ ತೊಡೆಯ ಮೇಲೆ ಮಲಗಿಸ್ಕೊಂಡು ಬಹಳ ಮುಗ್ದವಾಗಿ ಸಮಾಧಾನ ಮಾಡಿದ್ದಾರೆ. ಅದಾದ ನಂತರ ಪ್ರತಾಪ್ ಮೊದಲಿನಂತೆ ಓಡಾಡಿಕೊಂಡಿದ್ದಾರೆ ಆದ್ರೆ ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಭಾಗ್ಯಲಕ್ಷ್ಮಿ ಖ್ಯಾತಿಯ ನಟಿ ಗೌತಮಿ ಗೌಡ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram