Gattimela: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ

Gattimela: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಶುರುವಾಗುತ್ತೆ ಕೆಲವೊಂದು ಧಾರವಾಹಿಗಳು ಕೊನೆಯಗುತ್ತೆ. ಆದ್ರೆ ಧಾರವಾಹಿಯಲ್ಲಿರೋ ಪಾತ್ರಧಾರಿಗಳು ಅದ್ರಲ್ಲೂ ಸಾವಿರಕ್ಕೂ ಹೆಚ್ಚು ಎಪಿಸೋಡ್ ನಲ್ಲಿ ಕಾಣಿಸಿಕೊಂಡ ಪಾತ್ರಧಾರಿಯನ್ನ ಪಾತ್ರದ ಮೂಲಕ ಅಂತ್ಯ ಮಾಡೋದು ತುಂಬಾ ಕಡಿಮೆ ಆದ್ರೆ ಅಂತದ್ದೇ ಒಂದು ನಿರ್ಧಾರವನ್ನ ಗಟ್ಟಿಮೇಳ ನಿರ್ದೇಶಕರು ಮಾಡಿದ್ದು, ವಿಕ್ರಾಂತ್ ಪಾತ್ರಕ್ಕೆ ತಿಲಾಂಜಲಿ ಆಡಿದ್ದಾರೆ. ಹೌದು ಗಟ್ಟಿಮೇಳ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಪ್ರತಿ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರವಾಹಿ ಸಾಕಷ್ಟು ವಿಷಯಗಳಿಂದ ಜನರಿಗೆ ಹತ್ತಿರವಾಗುತ್ತೆ. 

WhatsApp Group Join Now
Telegram Group Join Now

ಹೌದು ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕತೆಯ ಸುತ್ತ ಇಡೀ ಗಟ್ಟಿಮೇಳ ಧಾರಾವಾಹಿ ಸಾಗುತ್ತಾ ಹೋಗುತ್ತೆ .ಇದೀಗ ಧಾರವಾಹಿಯಲ್ಲಿ ನಾಯಕ ವೇದಾಂತ್ ತಮ್ಮ ವಿಕ್ರಾಂತ್ ಕೂಡ ಅಭಿಮಾನಿಗಳಿಗೆ ತುಂಬಾ ಇಷ್ಟ. ಅಗ್ರಜ, ಅಗ್ರಜ ಅಂತ ಸದಾ ಓಡಾಡ್ತಾ ಇರ್ತಿದ್ದ ವಿಕ್ರಾಂತ್ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳಿದ್ದಾರೆ. ಹೌದು ಗಟ್ಟಿಮೇಳದಲ್ಲಿ ವಿಕ್ರಾಂತ್ ವಸಿಷ್ಠನ ಕೊನೆಯ ಶೂಟಿಂಗ್ ದಿನ ಎಂದು ನಾನು ಹೇಗೆ ಹೇಳಲಿ ಅಂತ ಹೇಳ್ತ ಇದೀಗ ಭಾವುಕಾರಾಗಿದ್ದಾರೆ. ಹೌದು ನನ್ನ ಧಾರಾವಾಹಿಯ ಕೊನೆಯ ದಿನದ ಅನುಭವ ಇಲ್ಲಿದೆ ಎಂದು ನಟ ಅಭಿಷೇಕ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದ್ರಲ್ಲಿ ಕೊನೆ ದಿನದ ಶೂಟಿಂಗ್‍ನಲ್ಲಿ ಏನ್ ಆಯ್ತು ಅನ್ನೋದನ್ನೆಲ್ಲ ತೋರಿಸಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್.. ಹುಡುಗಿ ಯಾರು ನೋಡಿ?

ವಿಕ್ರಾಂತ್ ಸಾವಿನ ಮೂಲಕ ಪಾತ್ರ ಅಂತ್ಯ!

ಹೌದು ಗಟ್ಟಿಮೇಳ(Gattimela) ನಂಬರ್ ಒನ್ ಧಾರಾವಾಹಿ, ರಾಜ್ಯದಾದ್ಯಂತ ಇನ್ನೂ ಟ್ರೆಂಡಿಂಗ್ ಉಳಿಸಿಕೊಂಡಿದೆ. 1100+ ಸಂಚಿಕೆಗಳು ಆಗಿದ್ರು ಇನ್ನೂ ಅಗ್ರಸ್ಥಾನದಲ್ಲಿದೆ. ಆದ್ರೆ ಈಗ ಧಾರಾವಾಹಿಯಲ್ಲಿ ನಾನು ಸಾಯುವುದನ್ನು ನೋಡುವುದು ನಿಮಗೆಲ್ಲರಿಗೂ ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ ಅಲ್ಲದೇ ನನಗೆ ವಿದಾಯ ಹೇಳುವುದು ಅಂದ್ರೆ ನನ್ನ ಪಾತ್ರಕ್ಕೆ ವಿದಾಯ ಹೇಳೋದನ್ನ ನೋಡೋದು ತುಂಬಾ ಕಷ್ಟಕರವಾಗಿತ್ತು ಅಂತ ನಟ ಅಭಿಷೇಕ್ ಬರೆದುಕೊಂಡಿದ್ದಾರೆ. ಇನ್ನು ನಟ ಅಭಿಷೇಕ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಅದಕ್ಕೆ ಹಿರಿತೆರೆಯಲ್ಲಿ ತಮ್ಮ ಮುಂಬರುವ ಕನಸುಗಳಿಗೆ ನಿಮ್ಮ ಬೆಂಬಲ ಮತ್ತಷ್ಟು ಅಗತ್ಯವಿದೆ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ. ಜೊತೆಗೆ ಧಾರಾವಾಹಿಯಲ್ಲಿ ವಿಕ್ರಾಂತ್ ಪಾತ್ರ ಯಾವ ರೀತಿ ಮುಕ್ತಾಯ ಆಯ್ತು ಅನ್ನೋ ಕುತೂಹಲ ಎಲ್ಲರಿಗೂ ಇರುತ್ತೆ.

ಹೌದು ಕೊನೆಯ ಸಂಚಿಕೆ ಅಂದ್ರೆ ವಿಕ್ರಾಂತ್ ಅವ್ರ ಕೊನೆಯ ಸಂಚಿಕೆಯಲ್ಲಿ, ವಿಕ್ರಾಂತ್‍ಗೆ ತನ್ನ ಅಮ್ಮ ಯಾರೆಂದು ಗೊತ್ತಾಗಿದೆ. ಅದನ್ನು ಹೇಳಲು ಕಾರಿನಲ್ಲಿ ಮನೆಗೆ ಬರುತ್ತಿರುವಾಗ ಅಪಘಾತವಾಗುತ್ತೆ. ಆಗ ವೇದಾಂತ್‍ಗೆ ಪೊಲೀಸರು ಫೋನ್ ಮಾಡಿದ್ದಾರೆ. ವೇದಾಂತ್ ಆಸ್ಪತ್ರೆಗೆ ಬರುತ್ತಾನೆ. ಆದ್ರೆ ವಿಕ್ರಾಂತ್‍ ಸಾವನ್ನಪ್ಪಿದ್ದಾನೆ ಅನ್ನೋದು ಗೊತ್ತಾಗುತ್ತೆ. ವೇದಾಂತ್‍ಗೆ ಅದನ್ನು ಸಹಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾನೆ. ಒಬ್ಬನೇ ಕೂತು ಅಳುತ್ತಿದ್ದಾನೆ. ಹೀಗೆ ಧಾರವಾಹಿಯಲ್ಲಿ ಸಾವನ್ನಪ್ಪುವದರ ಮೂಲಕ ವಿಕ್ರಾಂತ್ ಪಾತ್ರವನ್ನು ಎಂಡ್ ಮಾಡ್ತಿದ್ದಾರೆ. ಹೀಗಾಗಿ ನಟ ಅಭಿಷೇಕ್ ಬಾರದ ಮನಸ್ಸಿಂದಲೇ ವಿಕ್ರಾಂತ್ ಪಾತ್ರಕ್ಕೆ ಗುಡ್ ಬೈ ಹೇಳಿ ಬಂದಿದ್ದಾರೆ.

ಹೌದು ಅಭಿಷೇಕ್ ತಮ್ಮ ಕೊನೆಯ ದಿನದ ಗಟ್ಟಿಮೇಳ(Gattimela) ಧಾರವಾಹಿಯ ಶೂಟಿಂಗ್ ಹೇಗಿರುತ್ತೆ ಅನ್ನೋದನ್ನ ತಾವು ಬೆಳ್ಳಿಗ್ಗೆ ಎದ್ದು ವರ್ಕೌಟ್ ಮಾಡೋದ್ರಿಂದ ಹಿಡಿದು ತಾವು ರೆಡಿ ಆಗಿ ಶೂಟಿಂಗ್ ಸೆಟ್ ಗೆ ಹೋಗಿ ಅಲ್ಲಿ ಕೊನೆಯ ದಿನದ ಶೂಟಿಂಗ್ ಹೇಗಿತ್ತು, ತಮ್ಮ ಪಾತ್ರ ಯಾವ ರೀತಿ ಕೊನೆಯಗುತ್ತೆ, ತಾವು ಯಾಕಷ್ಟು ಭಾವುಕಾರಾಗಿದ್ದು, ಕೊನೆಗೆ ಕೇಕ್ ಕಟ್ ಮಾಡಿ ಎಲ್ಲರಿಗೂ ಒಲ್ಲದ ಮನಸ್ಸಿಂದಲ್ಲೇ ಗುಡ್ ಬೈ ಹೇಳಿದ್ದು ಎಲ್ಲವನ್ನು ತೋರಿಸಿದ್ದಾರೆ. ಹೌದು ಅಭಿಷೇಕ್ ಅವ್ರು ಬಹಳ ಅದ್ಭುತ ನಟ ಆದ್ರೆ ಪಾತ್ರವನ್ನ ಕೊನೆ ಮಾಡುವ ದಿನ ಬಂದಾಗ ಮಾಡಲೇಬೇಕು, ನನ್ನ ಸ್ಟಾಪ್ ಬಂದಾಗ ನಾನು ಇಳುದುಕೊಳ್ಳಲೆ ಬೇಕಿತ್ತು ಮುಂದೆ ಏನು ಯಾವ ಪ್ರಾಜೆಕ್ಟ್ ಅಂತ ಗೊತ್ತಿಲ್ಲ ಆದ್ರೆ ಆದಷ್ಟು ಬೇಗ ನಿಮ್ಮ ಮುಂದೆ ಬರ್ತೀನಿ ಅಂತ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊನೆಯ ದಿಂದ ಶೂಟಿಂಗ್ ನಲ್ಲಿ ಅಭಿ ಮಗುವಿನಂತೆ ಅತ್ತಿದ್ದು ಪ್ರತಿಯೊಬ್ಬರೂ ಕೂಡ ಭಾವುಕಾರಾಗಿದ್ದಾರೆ.

 

View this post on Instagram

 

A post shared by Abhishek Ramdas (@abhidassss)

ಇದನ್ನೂ ಓದಿ: ಬೆಂಗಳೂರು ಚಿಕ್ಕಪೇಟೆಯಲ್ಲಿ ಫೇಮಸ್ ವಿದೇಶಿ ಯೂಟ್ಯೂಬ್ ಮೇಲೆ ಹಲ್ಲೆ! ಪೂರ್ತಿ ವಿಡಿಯೋ ಇಲ್ಲಿದೆ ನೋಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram