ನನ್ನ ಮಗನ ಮೇಲೆ ಆರೋಪ ಬಂದಿದೆ ಸುಮ್ನೆ ಇರಲ್ಲ! ದೊಡ್ಮನೆನೆ ಹೆಡ್ ಅಫೀಸ್! ನಾನು ಲೀಡರ್ ಅಲ್ಲ ವಿಲ್ಲನ್ -ವಿ. ರವಿಚಂದ್ರನ್

ನಟ ಕಿಚ್ಚ ಸುದೀಪ್ ಅವರ ವಿರುದ್ಧ ನಿರ್ಮಾಪಕ ಎಂ ಎನ್ ಕುಮಾರ್ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಅತ್ತ ಕುಮಾರ್ ವಿರುದ್ಧ ಸುದೀಪ್‌ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಈ ವಿಚಾರ ಎಲ್ಲಿಗೆ ಹೋಗಿ ನಿಲ್ಲುತ್ತೋ ಅಂತ ಚಿತ್ರರಂಗದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಈ ವಿಚಾರವೀಗ ನಟ ರವಿಚಂದ್ರನ್ ಅವರ ಬಳಿ ಹೋಗಿದೆ. ಹೌದು ಸ್ಯಾಂಡಲ್‌ವುಡ್‌ನ ಕೆಲ ನಿರ್ಮಾಪಕರು ಸದ್ಯ ರವಿಚಂದ್ರನ್ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮಾತನಾಡಿದ್ದಾರೆ. ಮಾತುಕತೆಯ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ರವಿಚಂದ್ರನ್, ನನ್ನ ಮಗನ ಮೇಲೆ ಆರೋಪ ಬಂದಿದೆ, ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ, ಮೊದಲು ಎಲ್ಲರೂ ಕೂಲ್ ಆಗಬೇಕು. ಇದು ಗಂಡ-ಹೆಂಡತಿ ಜಗಳ ಇದ್ದಂಗೆ. ಮೂರನೆಯವರಿಗೆ ಗೊತ್ತಾಗಬಾರದಿತ್ತು, ಆದ್ರೆ ಬೀದಿಗೆ ಬಂದು ಬಿಟ್ಟಿದೆ ಏನು ಮಾಡೋಕಾಗಲ್ಲ. 

WhatsApp Group Join Now
Telegram Group Join Now

ಪರಿಸ್ಥಿತಿ ಸರಿ ಇಲ್ಲದೇ ಇರುವಾಗ ಮನಸ್ಥಿತಿಯೂ ಸರಿ ಇರಲ್ಲ. ಅವೆರಡನ್ನೂ ಬ್ಯಾಲೆನ್ಸ್ ಮಾಡುವುದೇ ಜೀವನ, ಪರಿಸ್ಥಿತಿ ಚೆನ್ನಾಗಿಲ್ಲ ಅಂದಾಗ ಮನಸು ಏನೇನೋ ಆಲೋಚನೆ ಮಾಡುತ್ತೆ ಅಂತ ರವಿಚಂದ್ರನ್ ಅವರು ಹೇಳಿದ್ದಾರೆ. ಸದ್ಯ ಎಲ್ಲರೂ ತಣ್ಣಗಾಗಬೇಕು. ನಮಗೆ ಇದರ ಬಗ್ಗೆ ಪೂರ್ತಿ ಸ್ಟೋರಿ ಗೊತ್ತಿಲ್ಲ, ಆದರೆ ಸುದೀಪ್‌ಗೆ ಬೇಸರವಾಗಿರುವುದು ನಿಜ. ಬರೀ ಇಬ್ಬರ ಮಾತುಗಳನ್ನು ಕೇಳಿಕೊಂಡು ಯಾವ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ನಮ್ಮವರೆ, ನಮ್ಮ ಮನೆಯವರೇ. ಈಗ ನಿರ್ಮಾಪಕರು ನನ್ನ ಬಳಿ ಬಂದಿದ್ದಾರೆ. ಮೊದಲು ಎಲ್ಲರೂ ಕೂಲ್ ಆಗಬೇಕು. ಆಮೇಲೆ ನಾನು ಯೋಚನೆ ಮಾಡಬಹುದು. ನಾನು ಮಾತುಗಳನ್ನು ನಂಬುವುದಿಲ್ಲ. ದಾಖಲೆಗಳು ಬೇಕು ಅಂತ ರವಿಚಂದ್ರನ್‌ ಹೇಳಿದ್ದಾರೆ.

ಇದನ್ನೂ ಓದಿ: ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ತಮ್ಮನಿಗೆ ಮೊದಲ ವರ್ಷದ ಬರ್ತಡೇ; ವಿಶೇಷವಾಗಿ ಫೋಟೋಶೂಟ್ ಮಾಡಿಸಿದ ಅಮೃತ ನಾಯ್ಡು

ನಾನು ಹೇಳಿದ್ ಮೇಲೆ ಕುಮಾರ್ ಕೇಳ್ತಾನೆ!

ಇನ್ನು ನನಗಿಂತಲೂ ಮೊದಲು ಸುದೀಪ್‌ಗೆ ಹೆಚ್ಚು ಆಪ್ತರಾಗಿರುವುದು ಕುಮಾರ್. ಇಬ್ಬರು ಜೊತೆಗೆ ಸಿನಿಮಾಗಳನ್ನು ಮಾಡಿದ್ದಾರೆ. ಜೊತೆ ಕೂತು ಊಟ ಮಾಡಿದ್ದಾರೆ. ಇದು ಒಂದು ರೀತಿ ಗಂಡ-ಹೆಂಡತಿ ಜಗಳ ಇದ್ದಂಗೆ. ಇದರಲ್ಲಿ ಮೂರನೇಯವರು ಬಂದಾಗ ಏನಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಈಗ ಬೀದಿಗೆ ಬಂದಿರುವುದರಿಂದ ಏನೂ ಮಾಡೋಕಾಗಲ್ಲ. ಈ ವಿಷಯದಲ್ಲಿ ಎಂಟ್ರಿಯಾಗೋದು ಬೇಡ ಎಂದು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಆದರೆ ಇವರೆಲ್ಲ ಬಂದಿದ್ದಾರೆ ಅದಕ್ಕೆ ಈಗ ಬಂದಿದೀನಿ. ನನಗೆ ಇಂಡಸ್ಟ್ರೀ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇದನ್ನು ಸರಿ ಮಾಡಲು ಸಾಧ್ಯವಾದರೆ, ಅದಕ್ಕಿಂತ ಖುಷಿಯಾದ ವಿಚಾರ ಇನ್ನೊಂದಿಲ್ಲ. ರವಿಚಂದ್ರನ್ ಮನೆಗೆ ಸುದೀಪ್‌ ಕೂಡ ಬರ್ತಾರೆ, ಕುಮಾರ್ ಕೂಡ ಬರ್ತಾರೆ. ಆಗಂತ ಎಲ್ಲವು ನಿಜ ಆಗೋದಿಲ್ಲ.

ಮೊದಲು ಎಲ್ಲರನ್ನೂ ಕೂಲ್ ಮಾಡೋಣ. ಆಮೇಲೆ ನಾನು ದಾಖಲೆಗಳನ್ನು ನೋಡಿದ ಮೇಲೆ, ಅದರಲ್ಲಿ ಎಷ್ಟು ಸತ್ಯ ಇದೆ? ಏನೆಲ್ಲ ಮಾತುಕತೆ ಆಗಿದೆ ಎಂಬುದುನ್ನು ನಾನು ಪರಿಶೀಲಿಸಬೇಕು. ನಿರ್ಧಾರವನ್ನು ನನ್ನ ತಿಳುವಳಿಕೆಗೆ ಬಿಡಬೇಕು. ಇವರು ನನಗೆ ನೀಡುವ ದಾಖಲೆಗಳು ಮೇಲೆ ನಾನು ಸುದೀಪ್‌ ಬಳಿ ಮಾತನಾಡಬೇಕಾ? ಬೇಡ್ವಾ ಅಂತ ನಾನು ತೀರ್ಮಾನ ಮಾಡ್ತಿನಿ. ಅದಕ್ಕೂ ಮೊದಲು ನಾನು ಹೇಳುವುದೇನೆಂದರೆ ಕುಮಾರ್‌ ಧರಣಿಯನ್ನು ನಿಲ್ಲಿಸಬೇಕು, ನಾನು ಹೇಳಿದ ಮೇಲೆ ಕುಮಾರ್ ಧರಣಿಯನ್ನ ನಿಲ್ಲಿಸೇ ನಿಲ್ಲಿಸುತ್ತಾನೆ ಅಂತ ರವಿಚಂದ್ರನ್ ಹೇಳಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ರಾಜ್ ಕುಮಾರ್ ಫ್ಯಾಮಿಲಿನೇ ಫಸ್ಟ್

ಈ ವಿವಾದದ ಮಧ್ಯೆ ಮಧ್ಯಮದವರು ಕೇಳಿದ ಚಿತ್ರರಂಗದ ಲೀಡರ್ ಯಾರು ಅನ್ನೋ ಪ್ರಶ್ನೆಗೂ ರವಿಚಂದ್ರನ್ ಖಡಕ್ ಉತ್ತರ ಕೊಟ್ಟಿದ್ದಾರೆ. ಹೌದು ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್ ಫ್ಯಾಮಿಲಿನೇ ಫಸ್ಟ್‌. ಮೊದಲು ಶಿವರಾಜ್‌ಕುಮಾರ್ ಬಳಿಯೇ ಹೋಗಬೇಕು. ನಾನು ಯಾವತ್ತಿದ್ದರೂ ನೆಕ್ಸ್ಟ್‌ ಅಂತ ಬಹಳ ಖಡಕ್ ಆಗಿಯೇ ರವಿಚಂದ್ರನ್ ಹೇಳಿದ್ದು, ನಾನು ಲೀಡರ್ ಆಗೋದಿಲ್ಲ. ನನಗೆ ನನ್ನದೇ ಆದ ಸಾಕಷ್ಟು ಕೆಲಸಗಳಿವೆ. ಲೀಡರ್‌ ಆಗಬೇಕು ಎಂದರೆ ನಂದೇ ಆದ ದಾರಿ ಇದೆ. ನಾನೀಗ ಸಿನಿಮಾಗಳಲ್ಲಿ ಹೀರೋ ಆಗಿ ಪಾತ್ರ ಮಾಡುತ್ತಿದ್ದೇನೆ. ನಾನು ಲೀಡರ್ ಆದ್ರೆ ಎಲ್ಲರಿಗೂ ವಿಲನ್ ಆಗಿಬಿಡುತ್ತೇನೆ. ನಾನು ರೂಲ್ಸ್‌ನ ತುಂಬ ಸ್ಟ್ರಿಕ್ಟ್‌ ಆಗಿ ಹಾಕುತ್ತೇನೆ.

ಒಂದು ಸಂಘ ಹೇಗಿರಬೇಕು ಅಂತ ನಾನು 30 ವರ್ಷದ ಹಿಂದೆಯೇ ಪುಸ್ತಕ ಬರೆದುಕೊಟ್ಟಿದ್ದೆ. ಅದನ್ನು ಯಾರೂ ನೋಡಲಿಲ್ಲ, ಯಾರೂ ಓದಲಿಲ್ಲ. ಅವತ್ತೇ ನಾನು ನಿರ್ಧಾರ ಮಾಡಿದೆ. ಇದು ನಮಗೆ ಬೇಡ ಅಂತ, ಈಗಲೂ ಅಷ್ಟೆ ಶಿವಣ್ಣನೇ ಫಸ್ಟ್, ಕರ್ನಾಟಕಕ್ಕೆ ರಾಜ್‌ಕುಮಾರ್ ಫ್ಯಾಮಿಲಿನೇ ಫಸ್ಟ್‌. ನಾನು ಕೂಡ ಮೊದಲು ಶಿವರಾಜ್‌ಕುಮಾರ್ ಅವರಿಗೇ ಲೆಟರ್ ಕೊಡುವುದಕ್ಕೆ ಹೇಳಿದ್ದೆ. ನಮಗೆ ದೊಡ್ಮನೆಯೇ ಹೆಡ್‌ ಆಫೀಸ್‌. ಅವರ ಹೆಸರು ಹೇಳಿದ್ರೆನೇ ಅರ್ಧ ಸಮಸ್ಯೆಗಳು ಬಗೆಹರಿಯುತ್ತವೆ. ಯಾವುದಕ್ಕೂ ಅವಸರ ಪಡೋದುಬೇಡ, ಪ್ರಯತ್ನ ಮಾಡೋಣ. ಇದು ಇಬ್ಬರು ಸ್ನೇಹಿತರ ಮಧ್ಯೆ ಆಗಿರೋ ಜಗಳ ಅದನ್ನು ಬಗೆಹರಿಸೋಣ ಅಂತ ರವಿಚಂದ್ರನ್‌ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೊಂದು ಮದುವೆ ಬಗ್ಗೆ ಮೇಘನಾ ಹೇಳಿದ್ದೇನು? ಮುಂದಿನ ಜೀವನದ ಬಗ್ಗೆ ಮನೆ ಬಿಚ್ಚಿ ಮಾತನಾಡಿದ ಮೇಘನಾ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram