5 ತಪ್ಪು ಮಾಡಿದ್ರೆ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರುವುದಿಲ್ಲ.

PM Kisan scheme money

ಕಿಸಾನ್ ಸಮ್ಮಾನ್ ಎನ್ನುವುದು ರೈತರಿಗೆ ಕೇಂದ್ರ ಸರ್ಕಾರ ಪ್ರತಿ ವರುಷ 6,000 ರೂಪಾಯಿ ಸಹಾಯ ಧನ ನೀಡುವ ಯೋಜನೆ ಆಗಿದೆ. ಈಗಾಗಲೇ 15 ಕಂತಿನ ಹಣ ಬಿಡುಗಡೆ ಆಗಿದೆ. ಇನ್ನೇನು ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇದ್ದು ಈಗ ಚುನಾವಣೆಗೂ ಮೊದಲು ಇನ್ನೊಂದು ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ ಈಗಾಗಲೇ ಕೆಲವು ಸುಳ್ಳು ಮಾಹಿತಿ ನೀಡಿ ಕಿಸಾನ್ ಹಣ ಪಡೆದವರ ಪಟ್ಟಿ ಗುರುತಿಸಿ ಅವರನ್ನು ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗೆ ಇಡಲಾಗಿದೆ. ಸುಳ್ಳು ಮಾಹಿತಿಯ ಪತ್ತೆಗಾಗಿ ರೈತರಿಗೆ E-kyc ಮಾಡಿಸಲು ಸೂಚನೆ ನೀಡಿತ್ತು. ಆದರೆ ಕೆಲವು ರೈತರು ಈಗಲೂ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿ ಯೋಜನೆಯ ಫಲಾನುಭವಿ ಪಟ್ಟಿಯಿಂದ ದೂರ ಉಳಿದಿದ್ದಾರೆ. ಹಾಗಾದರೆ ಯಾವ ಯಾವ ತಪ್ಪುಗಳಿಂದ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ಆಗಲೂ ಸಾಧ್ಯವಿಲ್ಲ ಎಂಬುದನ್ನು ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಈ ಐದು ತಪ್ಪು ಮಾಡಿದ್ರೆ ನಿಮಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರುವುದಿಲ್ಲ:-

  1. ತಪ್ಪು ಬ್ಯಾಂಕ್ ಖಾತೆಯ ನೀಡುವುದು: ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ತಪ್ಪಾಗಿ ಭರ್ತಿ ಮಾಡಿದ್ದಾರೆ ನಿಮಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣವೂ ಬರುವುದಿಲ್ಲ. ಉದಾಹರಣೆಗೆ ನಿಮ್ಮ ಬ್ಯಾಂಕ್ ಖಾತೆಯ ಹೆಸರು ಹಾಗೂ ನಿಮ್ಮ ಆಧಾರ್ ಹೆಸರು ಬೇರೆ ಇದ್ದರೆ ಅಥವಾ ಬ್ಯಾಂಕ್ ಖಾತೆಯಲ್ಲಿ ಇರುವ ವಿಳಾಸ ನೀವು ನೀಡಿದ್ದ ನಿಮ್ಮ ಅಧಿಕೃತ ವಿಳಾಸವು ಬೇರೆ ಬೇರೆ ಇದ್ದರೆ ಅದು ತಪ್ಪು ಬ್ಯಾಂಕ್ ಮಾಹಿತಿ ಎಂದು ಅಪ್ಲಿಕೇಶನ್ ರಿಜೆಕ್ಟ್ ಆಗುತ್ತದೆ.
  2. ಆಧಾರ್ ಲಿಂಕ್ ಇಲ್ಲದೆ ಇರುವುದು:- ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯಬೇಕು ಎಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಲೇಬೇಕು. ಈಗ ನೀವು ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರಲು ನೀಡಿದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮಗೆ ಮುಂದಿನ ಕಂತಿನ ಹಣ ಬರುವುದಿಲ್ಲ.
  3. E-kyc ಮಾಡಿಸದೆ ಇದ್ದಲ್ಲಿ:- ಈಗಾಗಲೇ ಸರ್ಕಾರದಿಂದ ಬ್ಯಾಂಕ್ ಖಾತೆಗೆ E-kyc ಮಾಡಿಸಬೇಕು ಎಂಬ ಆದೇಶ ಹೊರಡಿಸಿದೆ. ಆದರೆ ಅದನ್ನು ಕಡೆಗಣಿಸಿ E-kyc ಮಾಡಿಸದೆ ಇದ್ದಲ್ಲಿ ಮುಂದಿನ ಕಂತಿನ ಹಣ ಬಾರದೆ ಇರಬಹುದು.
  4. ನೀಡಿದ ಮಾಹಿತಿಯಲ್ಲಿ ತಪ್ಪಿದ್ದರೆ:- ನಿಮ್ಮ ಕೃಷಿಯ ಬಗ್ಗೆ ನೀವು ನೀಡಿದ ಯಾವುದೇ ಮಾಹಿತಿ ತಪ್ಪಿದ್ದರೆ ಅಥವಾ ನಿಮ್ಮ ಹೆಸರು ನಿಮ್ಮ ಬ್ಯಾಂಕ್ ಖಾತೆ ಹೆಸರು ಹಾಗೂ ಆಧಾರ್ ಕಾರ್ಡನಲ್ಲಿ ಇರುವ ಹೆಸರುಗಳು ಬೇರೆ ಬೇರೆ ಆಗಿದ್ದರೆ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಲಿಸ್ಟ್ ಗೆ ಹೋಗಬಹುದು.
  5. ಮಾಹಿತಿಯೂ ಸುಳ್ಳು ಎಂದು ತಿಳಿದಲ್ಲಿ:- ಈಗಾಗಲೇ ಸುಳ್ಳು ಮಾಹಿತಿ ನೀಡಿದವರಿಗೆ ಹಣ ಬರದಂತೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. 16ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಮೊದಲು ಮತ್ತೊಮ್ಮೆ ಪರಿಶೀಲನೆ ಮಾಡಿ ಸುಳ್ಳು ಮಾಹಿತಿ ನೀಡಿದ ಅರ್ಜಿಗಳನ್ನು ಪತ್ತೆಹಚ್ಚಿ ಅಂತಹವರ ಖಾತೆಗೆ ಹಣ ನೀಡುವುದನ್ನು ತಡೆಯಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನೀವು ಸಲ್ಲಿಸಿದ ಮಾಹಿತಿಯನ್ನು ಅಥವಾ ನಿಮ್ಮ ಕಿಸಾನ್ ಸಮ್ಮಾನ್ ಯೋಜನೆಯ ಸ್ಥಿತಿಯನ್ನು ನೋಡಲು ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ. ವೆಬ್ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಭಾರತದ UPI ಪೇಮೆಂಟ್ ಯಾವ ಯಾವ ದೇಶದಲ್ಲಿ ಬಳಸಬಹುದು. 

ಇದನ್ನೂ ಓದಿ: ದೇಶದ ಜನರಿಗೆ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ನೀಡುತ್ತಿದೆ ಭಾರತ್ ದಾಲ್ ಮತ್ತು ಭಾರತ್ ಅಟ್ಟಾ…