Jagappa And Sushmitha Engagement: ಗಿಚ್ಚಿ ಗಿಲಿಗಿಲಿ ಫಿನಾಲೆ ವೇದಿಕೆ ಮೇಲೆ ಎಂಗೇಜ್ಮೆಂಟ್ ಮಾಡಿಕೊಂಡ ಜಗಪ್ಪ ಹಾಗೂ ಸುಶ್ಮಿತಾ

Jagappa And Sushmitha Engagement: ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಫಿನಾಲೆ ವೇದಿಕೆಯಲ್ಲೇ ಮತ್ತೊಂದು ಕಾಮಿಡಿ ಜೋಡಿ ಒಂದಾಗಿದೆ. ನಟಿ ಶೃತಿ ಹಾಗೂ ನಟ ಸಾಧುಕೋಕಿಲ ಅವ್ರನ್ನ ಸಾಕ್ಷಿಯಾಗಿಟ್ಟುಕೊಂಡು ಹಸೆಮಣೆ ಏರಲು ಉಂಗುರದ ಮುದ್ರೆಯನ್ನ ಕಾಮಿಡಿ ಜೋಡಿಗಳು ಒತ್ತಿದ್ದಾರೆ. ಎಲ್ಲರಿಗೂ ಆಶ್ಚರ್ಯವಾದ್ರೂ ಕೂಡ ಬಹಳಷ್ಟು ಜನ ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ, ನೀವಿಬ್ರು ಮದುವೆಯಾದ್ರೆ ತುಂಬಾ ಚೆನ್ನಾಗಿರುತ್ತೆ ಅಂತ ಹೇಳಿದ್ರು ಅಲ್ಲದೇ ಕೆಲವೊಂದು ಟ್ರೋಲ್ ಫೇಜ್ ಗಳು ಕೂಡ ಒಳ್ಳೊಳ್ಳೆ ವಿಡಿಯೋಗಳನ್ನ ಮಾಡಿ ನಿಜ ಜೀವನದಲ್ಲೂ ಈ ಜೋಡಿ ಒಂದಾಗ್ಲಿ ಅಂತ ಸಕತ್ ಟ್ರೋಲ್ ಮಾಡಿದ್ರು, ಆ ವಿಡಿಯೋಗಳು ವೈರಲ್ ಅದಾಗ್ಲೇಲ್ಲಾ ಅಭಿಮಾನಿಗಳು ಹಾಗೂ ಆಪ್ತರು ಕೂಡ ಯಾಕೆ ನೀವಿಬ್ರು ಮದುವೆಯಾಗಬಾರದು ಅಂತ ಕೇಳಿದಾಗ ಎಲ್ಲಿಯೂ ಕೂಡ ಒಂಚೂರು ಸಣ್ಣ ಸುಳಿವನ್ನ ಬಿಟ್ಟುಕೊಡದೆ, ನಾವಿಬ್ಬರು ಸ್ನೇಹಿತರು ಮಾತ್ರ ಅಂತ ಹೇಳ್ತಲೆ ಇದೀಗ ಫಿನಾಲೆ ವೇದಿಕೆಯ ಮೇಲಿಯೇ ತಾಮ್ಮಿಬ್ಬರ ಪ್ರೀತಿಯನ್ನ ವ್ಯಕ್ತಪಡಿಸಿ ಉಂಗುರ ಬದಲಾಯಿಸಿಕೊಂಡಿದ್ದಾರೆ ಈ ಜೋಡಿ. ಆ ಜೋಡಿ ಬೇರೆ ಯಾರು ಅಲ್ಲಾ ಮಜಾಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋನ ಸ್ಪರ್ಧೆಗಳಾಗಿದ್ದ ಕಾಮಿಡಿ ಕಲಾವಿದರಾದ ಸುಶ್ಮಿತಾ ಹಾಗೂ ಜಗ್ಗಪ್ಪ.

WhatsApp Group Join Now
Telegram Group Join Now

ಇದನ್ನೂ ಓದಿ: ಮುರಿದು ಬಿದ್ದ ಮದುವೆ ಬಗ್ಗೆ ನಟಿ ವೈಷ್ಣವಿ ಹೇಳಿದ್ದೇನು ಗೊತ್ತಾ? ಆಗೋದೆಲ್ಲ ಒಳ್ಳೆದಕ್ಕೆ, ನಾನು ಮುಂದೆ ಚೆನ್ನಾಗಿರುತ್ತೇನೆ

ಫಿನಾಲೆ ವೇದಿಕೆಯಲ್ಲೇ ಉಂಗುರ ಬದಲಿಸಿಕೊಂಡ ಕಲಾವಿದರು

ಹೌದು ಇದೀಗ ಗಿಚ್ಚಿ ಗಿಲಿ ಗಿಲಿ ಫಿನಾಲೆ ಕಾರ್ಯಕ್ರದ ವೇದಿಕಯ ಮೇಲೆಯೇ ಜಗ್ಗಪ್ಪ ಹಾಗೂ ಸುಶ್ಮಿತಾ ಉಂಗುರ ಬದಲಿಸಿಕೊಂಡಿದ್ದಾರೆ. ಮೊದಲಿಗೆ ಸುಶ್ಮಿತಾ ತಮ್ಮ ಪ್ರೀತಿಯನ್ನ ಹೇಳಿಕೊಳ್ಳಲು ಮುಂದಾಗುತ್ತಾರೆ. ಹೌದು ಶೃತಿ ಮ್ಯಾಮ್ ಹಾಗೂ ಸಾಧು ಕೋಕಿಲ ಸರ್ ಸಾಕ್ಷಿಯಾಗಿ ನಾನಿವತ್ತು ನನ್ನ ಪ್ರೀತಿಯನ್ನ ಅವ್ರಿಗೆ ಹೇಳ್ಕೊತ್ತಿದ್ದೀನಿ ಐ ಲವ್ ಯು ಸೋ ಮಚ್ ನಂಗೆ ನೀವಂದ್ರೆ ತುಂಬಾ ಇಷ್ಟ ನಾನು ನಿಮ್ಮನ್ನ ಪ್ರೀತಿ ಮಾಡ್ತಿದ್ದೀನಿ ಅಂತ ಸುಶ್ಮಿತಾ ತಮ್ಮ ಪ್ರೀತಿಯನ್ನ ಜಗ್ಗಪ್ಪ ಅವ್ರಿಗೆ ಹೇಳಿಕೊಂಡು ಉಂಗುರವಣ್ಣ ಕೂಡ ತೊಡಿಸುತ್ತಾರೆ. ನಂತರ ಜಗ್ಗಪ್ಪ ಕೂಡ ಸುಶ್ಮಿತಾಗೆ ಉಂಗುರ ತೊಡಿಸಿರೋ ಒಂದು ಸಣ್ಣ ವಿಡಿಯೋ ಝಲಕ್ ಇದೀಗ ಎಲ್ಲ ಕಡೆ ವೈರಲ್ ಆಗಿದೆ. ಹೌದು ನಟಿ ಶೃತಿ ಹಾಗೂ ನಟ ಸಾಧುಕೋಕಿಲ ಇದನ್ನ ಕೇಳಿದ ತಕ್ಷಣ ಖುಷಿ ಪಟ್ಟಿದ್ದು ಇಬ್ಬರಿಗೂ ಕೂಡ ಶುಭಾಶಯಗಳು ಆರೈಸಿದ್ದಾರೆ. ಒಂದು ರೀತಿಯಲ್ಲಿ ಯಾರು ಕೂಡ ಇದನ್ನ ಊಹೆ ಮಾಡಿರಲಿಲ್ಲ ಯಾಕಂದ್ರೆ ಎಲ್ಲರು ಕೇಳಿದಾಗ ಪ್ರತಿ ಸಲ ತಾವಿಬ್ಬರು ಸ್ನೇಹಿತರಷ್ಟೇ ಅಂತಾಲೆ ಹೇಳಿಕೊಳ್ಳುತ್ತಿದ್ದ ಸುಶ್ಮಿತಾ ಹಾಗೂ ಜಗ್ಗಪ್ಪ ಒಂದೇ ಸಲ ವೇದಿಕೆಯ ಮೇಲೆಯೇ ಒಬ್ಬರಿಗೊಬ್ಬರು ಪ್ರೀತಿ ಹಂಚಿಕೊಂಡು ಉಂಗುರ ಬದಲಾಯಿಸಿಕೊಂಡು ತಾವಿಬ್ಬರು ಮದುವೆ ಆಗ್ತಿರೋದಾಗಿ ತಿಳಿಸಿದ್ದು ನಿಜಕ್ಕೂ ಎಲ್ಲರಿಗೂ ಖುಷಿ ತಂದಿತ್ತು, ಅಭಿಮಾನಿಗಳಂತು ಫುಲ್ ಖುಷಿಯಾಗಿದ್ದು, ವಿಭಿನ್ನವಾಗಿ ಕಮೆಂಟ್ಸ್ ಮಾಡ್ತಿದ್ದಾರೆ.

ಇನ್ನು ಜಗ್ಗಪ್ಪ ಹಳ್ಳಿಯಿಂದ ಬಂದವರಾಗಿದ್ದು, ರೈತನ ಮಗ ಹೀಗಾಗಿ ಅವ್ರ ಅಪ್ಪನಿಗೆ ಇಷ್ಟವಿಲ್ಲದಿದ್ರೂ ಅಮ್ಮನ ಆಸೆಯಂತೆ ಕಲಾವಿದ ಆಗ್ಲೇ ಬೇಕು ಅಂತ ಬರೀಗೈ ನಲ್ಲಿ ಬಂದು ಬೆಂಗಳೂರು ಸೇರಿದಾಗ ಅವ್ರು ಒತ್ತ ಕಷ್ಟ ನಂತರ ಸುಶ್ಮಿತಾ ಹಾಗೂ ತಂದೆಯಿಂದ ಸಿಕ್ಕಾಪಟ್ಟೆ ಸಹಾಯ, ಸ್ನೇಹಿತರ ಸಹಕಾರ ಇವತ್ತು ನನ್ನನ್ನ ಇಲ್ಲಿ ನಿಲ್ಲಿಸಿದೆ. ನನ್ನ ಪ್ರತಿ ಕ್ಷಣದಲ್ಲೂ ಸುಶ್ಮಿತಾ ನನ್ನ ಜೊತೆಗಿದ್ರು, ನಂಗೆ ಬಟ್ಟೆ ಕೊಡಿಸಿದ್ರು, ಕಷ್ಟ ಅಂದಾಗ ಸುಶ್ಮಿತಾ ಹಾಗೂ ಅವ್ರ ತಂದೆ ನನ್ನ ಕೈ ಹಿಡಿದಿದ್ದಾರೆ ಅವ್ರನ್ನ ಸಾಯುವ ತನಕ ನಾನು ಮರೆಯೋಲ್ಲ. ಸುಶ್ಮಿತಾ ನನಗೆ ಒಳ್ಳೆಯ ಸ್ನೇಹಿತೆ ಅಂತಲೇ ಹೇಳ್ತಿದ್ದ ಜಗಪ್ಪ, ಅದೇ ರೀತಿ ತಾನು ಮಾಡಿದ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದೆ ಪ್ರತಿ ಹಂತದಲ್ಲೂ ಜಗಪ್ಪ ಅವ್ರ ಒಟ್ಟಿಗೆ ನಿಲ್ಲುತ್ತಿದ್ದ ಸುಶ್ಮಿತಾ ಕೂಡ ತಾವಿಬ್ಬರು ಸ್ನೇಹಿತರು ಮಾತ್ರ ಅಂತಲೇ ಹೇಳುತ್ತಿದ್ರು ಆದ್ರೆ ಇದೀಗ ಇಬ್ಬರು ಮದುವೆ ಸಿದ್ದವಾಗಿರೋದು ಎಲ್ಲರ ಹುಬ್ಬರಿಸುವಂತೆ ಮಾಡಿದೆ. ಒಟ್ಟಿನಲ್ಲಿ ಈ ಜೋಡಿ ಹಾಲು ಜೇನಿನಂತೆ ಬೆರೆತು ನೆಮ್ಮದಿಯಾಗಿ ಜೀವನ ಸಾಗಿಸಲಿ ಅನ್ನೋದು ಎಲ್ಲರ ಆಶಯ.

ಇದನ್ನೂ ಓದಿ: ಯುವನಿಧಿ ಯೋಜನೆ ಜಾರಿಗೆ ಅಧಿಕೃತ ಆದೇಶ- ಯಾರ್ಯಾರು ಅರ್ಹರು? ಯಾರಿಗೆಲ್ಲ ಅನ್ವಯವಾಗುತ್ತೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram