ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ! ಅಪ್ಪ ಇಹಲೋಕ, ಅಮ್ಮ ಜೈಲು ಪಾಲು, ಮಕ್ಕಳ ಪಾಡು ಅಯ್ಯೋ ಪಾಪ!

ಆತ ಜನಪದ ಗೀತೆಗಳ ಹಾಡುಗಾರ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷರಾಗಿದ್ರು ಅಲ್ಲದೇ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ಹೌದು ತನ್ನ ಗಾಯನದ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ರು ಸಂಸಾರದ ಕಲೆ ಗೆಲ್ಲುವಲ್ಲಿ ವಿಫಲನಾಗಿದ್ದ. ಆದ್ರೆ ಮಡದಿಯೇ ಆತನನ್ನ ಮಸಣ ಸೇರಿಸುತ್ತಾಳೆ ಅಂತ ಆತ ಕನಸ್ಸು ಮನಸ್ಸಿನಲ್ಲೂ ಎಣಿಸಿರಲಿಲ್ಲ, ಆದ್ರೂ ಪತ್ನಿಯ ಅಕ್ರಮ ಸಂಬಂಧಕ್ಕೆ ಮುಗ್ದ ಪತಿ ಹೆಂಡತಿಯ ಪ್ರಿಯಕರನ್ನಿಂದಲೇ ಹತ್ಯೆಗಿದ್ದಾಗಿರೋದು ನಿಜಕ್ಕೂ ದುರದೃಷ್ಟಕರ. ಹೌದು ತನ್ನ ಪತ್ನಿಗಿದ್ದ ಅಕ್ರಮ ಸಂಬಂಧ ಗೊತ್ತಿದ್ರು ತನ್ನ ಮಕ್ಕಳಿಗಾಗಿ ಎಲ್ಲವನ್ನ ಸಹಿಸಿಕೊಂಡಿದ್ದವ ಈಗ ಪತ್ನಿಯ ಪ್ರಿಯಕರನಿಂದಲೆ ಕೊಲೆಯಾಗಿದ್ದಾನೆ. ಎಲ್ಲಾ ಮಾಯ ನಾಳೆ ನಾವು ಮಾಯ ಎಂದು ಹಾಡುತ್ತಿರುವ ಹಾಡುಗಾರ, ಇಂದು ಪತ್ನಿಯ ಅಕ್ರಮ ಸಂಬಂಧಕ್ಕೆ, ಪ್ರಿಯಕರನ ಮೇಲಿನ ವ್ಯಾಮೋಹಕ್ಕೆ ಇಂದು ಕಲಾವಿದನು ಕೂಡ ಮಾಯವಾಗಿಬಿಟ್ಟಿದ್ದಾನೆ. ಹೌದು ತನ್ನ ಗ್ರಾಮದ ಬಳಿಯೇ ಪತ್ನಿಯ ಪ್ರಿಯಕರನಿಂದಲೆ ಕೊಲೆಯಾಗಿ ಬಿದ್ದಿರುವ ಜನಪದ ಕಲಾವಿದನನ್ನ ಇಲ್ಲಿವಯಸ್ಸಿನಲ್ಲಿ ಪುಟ್ಟ ಮಕ್ಕಳೊಂದಿಗೆ ಮಗನನ್ನ ಕಳೆದುಕೊಂಡ ಆ ನತದೃಷ್ಟೇ ತಾಯಿ ಕಣ್ಣೀರಾಕುತ್ತಿರೋದನ್ನ ನೋಡುದಾಗ ಒಮ್ಮೆಲೇ ದುಃಖ ಹುಮ್ಮಳಿಸಿ ಬರುವಂತಿತ್ತು.

WhatsApp Group Join Now
Telegram Group Join Now

ಅಕ್ರಮ ಸಂಬಂಧಕ್ಕೆ ತೆಗೆದ್ಲು ಗಂಡನ ಪ್ರಾಣ

ಹೌದು ಪ್ರಿಯಕರನೊಂದಿಗೆ ಸೇರಿ ಪತಿಯನ್ನೆ ಕೊಂದು ಬೈಕ್ ಅಪಘಾತ ಅಂತ ಪತ್ನಿಯೇ ಬಿಂಬಿಸಿದ ಧಾರುಣ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲ್ಲೂಕಿನ ಜನ್ನಘಟ್ಟ ಬಳಿ ಮೊನ್ನೆ ರಾತ್ರಿ 8 ಗಂಟೆ ಸುಮಾರಿಗೆ ಜನ್ನಘಟ್ಟ ಗ್ರಾಮದ ಕಲಾವಿದ 45 ವರ್ಷದ ಕೃಷ್ಣಮೂರ್ತಿ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆ ಅಂತ ಎಲ್ಲೆಡೆ ಸುದ್ದಿ ಹರಡಿತ್ತು. ಅದರಂತೆ ಜಿಲ್ಲೆಯ ಕಲಾವಿದರು, ವಿವಿಧ ಸಂಘಟನೆಗಳ ಮುಖಂಡರು ಕಲಾವಿದನಾ ಸಾವಿಗೆ ಕಂಬನಿ ಮಿಡಿದು ಸಂತಾಪ ಸೂಚಿಸಿದ್ರು. ಒಬ್ಬ ಕಲಾವಿದ ಬೈಕ್ ಆಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಎಲ್ಲರಲ್ಲೂ ಒಂದು ಕ್ಷಣ ಎಲ್ಲರಿಗೂ ಆಘಾತವಾಗುವಂತೆ ಮಾಡಿದ್ರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಇದು ಅಪಘಾತ ಅಲ್ಲಾ ಕೊಲೆ ಅನ್ನೋ ಸುದ್ದಿ ಹರಿದಾಡಿ ಎಲ್ಲರಿಗೂ ಅಚ್ಚರಿ ಉಂಟುಮಾಡುವಂತೆ ಆಗಿದ್ದು ಸುದ್ದಿ ಕೇಳಿದ ಪ್ರತಿಯೊಬ್ಬರೂ ಶಾಕ್ ಆಗಿದ್ರು.

ಹೌದು ಕೊಲೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಲಾಗಿತ್ತು ಅನ್ನೋ ಸುದ್ದಿ ರಾತ್ರಿ ಕಳೆಯೋದ್ರೊಳಗೆ ಜೋರಾಗಿಯೇ ಹರಡಿತ್ತು. ಇದಕ್ಕೆ ಕಾರಣವೂ ಇತ್ತು ಅದೇನಂದ್ರೆ ಸಂಬಂಧಿಕರು ಸೇರಿದಂತೆ ಇಡೀ ಗ್ರಾಮಕ್ಕೆ ಗೊತ್ತಿದ್ದಂತೆ ಮೃತ ಕೃಷ್ಣಮೂರ್ತಿ ಪತ್ನಿಗೆ ಅಕ್ರಮ ಸಂಬಂಧ ಇದ್ದು ಆಕೆಯೆ ಕೊಲೆ ಮಾಡಿಸಿರುವ ಅನುಮಾನ ಎಲ್ಲೆಡೆ ಇತ್ತು. ಅಲ್ಲದೆ ಪ್ರತಿನಿತ್ಯ ಗಲಾಟೆ, ನ್ಯಾಯಾ ಪಂಚಾಯತಿ ನೋಡಿದ್ದವರು, ಇದು ಬೈಕ್ ಅಪಘಾತವಲ್ಲ,ಇದೊಂದು ಕೊಲೆ ಅಂತ ಅನುಮಾನ ವ್ಯಕ್ತಪಡಿಸಿದ್ರು. ಸಾಲದಕ್ಕೆ ಮೃತನ ಪತ್ನಿ ಒಂದು ವರ್ಷದ ಹಿಂದೆ ಗಂಡ ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದಳು ಆಗ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿದ್ರು. ಆದ್ರೂ ಸಹ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾ ಇದ್ದ ಪತ್ನಿ ಸೌಮ್ಯ ಗಂಡನೊಂದಿಗೆ ಒಂದಿಲ್ಲೊಂದು ವಿಚಾರಕ್ಕೆ ತಗಾದೆ ತೆಗೆಯುತ್ತಲೆ ಇದ್ದಳು. ಆದ್ರೆ ಎಲ್ಲವನ್ನೂ ತನ್ನ ಮೂರು ಜನ ಮಕ್ಕಳಿಗಾಗಿ ಸಹಿಸಿಕೊಂಡ ಕಲಾವಿದ ತನ್ನ ಸಂಸಾರದಲ್ಲಿದ್ದ ಕಲಹಕ್ಕೆ ಬಲಿಯಾಗಿದ್ದಾನೆ ಅಂತ ಎಲ್ಲರು ಮಾತನಾಡಿಕೊಳ್ಳಲು ಶುರು ಮಾಡ್ತಾರೆ.

ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಟದಿದ್ದರೆ ಮುಲಾಜಿಲ್ಲದೆ ‘ಕನೆಕ್ಷನ್ ಕಟ್’ ಇಂಧನ ಇಲಾಖೆಯಿಂದ ಆದೇಶ, ಕರೆಂಟ್ ಬಿಲ್ ಕಟ್ಟದವರಿಗೆ ಶಾಕ್

ಮೂವರು ಮಕ್ಕಳು ಅನಾಥ

ಇನ್ನೂ ಕೃಷ್ಣಮೂರ್ತಿ, ಸೌಮ್ಯಾಳ 10 ವರ್ಷಗಳ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಗಣೇಶ್ ಮೂರ್ತಿ ಎಂಬ ಮಗ ಜ್ಞಾನಶ್ರೀ ಹಾಗೂ ದತ್ತಾಶ್ರೀ ಎಂಬ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಇದ್ದಾರೆ. ಪುಟ್ಟ ಮಕ್ಕಳಿಗಾಗಿ ಕೃಷ್ಣಮೂರ್ತಿ ಸಂಬಂಧಿಕರ ಮಾತು ಕೇಳಿ ಹಲವು ಬಾರಿ ನ್ಯಾಯ ಪಂಚಾಯತಿ ಮಾಡಿ ಎಲ್ಲವನ್ನ ಸಹಿಸಿಕೊಂಡಿದ್ದ, ಆದ್ರೆ ಹಳೆ ಚಾಳಿ ಬಿಡದ ಸೌಮ್ಯ ತನ್ನ ಗಂಡ ಇಲ್ಲದ ವೇಳೆ ತನ್ನ ಪ್ರಿಯಕರನನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳಂತೆ. ಅಲ್ಲದೆ ಇತ್ತೀಚೆಗೆ ಆತನೊಂದಿಗೆ ಸುತ್ತಾಡುತ್ತಾ ಹಲವು ಬಾರಿ ಗಂಡನಿಗೆ ಹೊಡೆಯೋದು, ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಳಂತೆ.ಹೌದು ಇತ್ತೀಚೆಗೆ ಚಿನ್ನ ಹಾಗೂ ಮೊಬೈಲ್ ಸಹ ಗಂಡನಿಂದ ಪಡೆದಿರುವ ಸೌಮ್ಯ ಗಂಡನೊಂದಿಗೆ ಅಷ್ಟಕಷ್ಟೆ. ಇತ್ತೀಚೆಗೆ ಕೊಲೆ ಮಾಡುವ ಬೆದರಿಕೆ ಸಹ ಹಾಕಿದ್ದು ನಿನ್ನೆ ಸಂಜೆ ಒನ್ ಟು ಒನ್ ಫೊನ್ ನಲ್ಲಿ ಎಲ್ಲಿ ಬರ್‍ತಾ ಇದ್ದೀರ ಎಂದು ಎಲ್ಲವೂ ಮಾಹಿತಿ ಪಡೆದಿದ್ದಾಳೆ. ಅದರಂತೆ ತನ್ನ ಪ್ರಿಯಕರನಿಗೆ ತಿಳಿಸಿ ಗ್ರಾಮದ ಹೊರ ಹೊಲಯದಲ್ಲಿರುವ ರೈಲ್ವೇ ಅಂಡರ್ ಪಾಸ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಕೃಷ್ಣಮೂರ್ತಿಯ ಗಾಡಿ ನಿಲ್ಲಿಸಿದ್ದಾರೆ. ಈ ವೇಳೆ ಆತನ ಮೇಲೆ ರಾಡ್ ನಿಂದ ಹೊಡೆದು ಕೊಲೆ ಮಾಡಿ ಬೈಕ್ ನಿಂದ ಬಿದ್ದು ಮೃತಪಟ್ಟಿರುವಂತೆ ಗ್ರಾಮದಲ್ಲೆಲ್ಲಾ ಈಕೆಯೆ ಹಬ್ಬಿಸಿದ್ದಾಳೆ. ಆದ್ರೆ ಕೃಷ್ಣಮೂರ್ತಿಗೆ ಆಗಿದ್ದ ಗಾಯಗಳನ್ನು ಗಮನಿಸಿದ ಡಾಕ್ಟರ್ ಇದು ಅಪಘಾತದಿಂದ ಆಗಿರುವ ಸಾವು ಅಲ್ಲ ಅಂತ ಅನಿಸುತ್ತಿದೆ, ಬಲವಾಗಿ ಗಾಯಗಳ ಗುರುತುಗಳು ತಲೆ ಹಾಗೂ ಮುಖದ ಭಾಗದಲ್ಲಿ ಕಂಡು ಬರ್ತಿದೆ ಅಂತ ಪೊಲೀಸರಿಗೆ ತಿಳಿಸುತ್ತಾರೆ.

ಇದರ ಜೊತೆ ಸಂಬಂಧಿಕರು ಸಹ ಇದೊಂದು ಕೊಲೆ ಅನ್ನೋ ಅನುಮಾನವನ್ನ ಪೊಲೀಸರ ಬಳಿ ವ್ಯಕ್ತಪಡಿಸಿದ್ದಾರೆ. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಕಲಾವಿದ ಕೃಷ್ಣಮೂರ್ತಿ ಪತ್ನಿ ಸೌಮ್ಯ ಖತರ್ನಾಕ್ ಕೊಲೆ ಮಾಡಿಸಿರುವ ವಿಷಯ ಅವಳೇ ಬಾಯಿಬಿಟ್ಟಿದ್ದಾಳೆ. ಹೌದು ಪ್ರಿಯಕರ ಶ್ರೀನಿವಾಸಪುರ ತಾಲ್ಲೂಕಿನ ಚೊಕ್ಕರೆಡ್ಡಪಲ್ಲಿ ಶ್ರೀಧರ್, ತನ್ನ ಮತ್ತೊಬ್ಬ ಸ್ನೇಹಿತ ಶ್ರೀಧರ್‌ನೊಂದಿಗೆ ಸೇರಿ ಕೃಷ್ಣಮೂರ್ತಿಯನ್ನ ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದಿದೆ. ಅದರಂತೆ ಸಧ್ಯ ಮೂರು ಜನರನ್ನ ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಏನೇ ಆಗ್ಲಿ ಪತ್ನಿಯ ಅಕ್ರಮ ಸಂಬಂಧ ಗೊತ್ತಿದ್ರು ತನ್ನ ಮಕ್ಕಳಿಗಾಗಿ ಎಲ್ಲವನ್ನ ಸಹಿಸಿಕೊಂಡು ತ್ಯಾಗ ಮಾಡಿದ್ದ ಕಲಾವಿದ ಇಂದು ಕೊಲೆಯಾಗಿದ್ದಾನೆ. ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದಾಕೆ ಜೈಲು ಸೇರಿದ್ದಾಳೆ, ಆದ್ರೆ ಮೂರು ಜನ ಪುಟ್ಟ ಮಕ್ಕಳು ಮಾತ್ರ ಅನಾಥವಾಗಿದ್ದು, ಕಲಾವಿದನ ಸಂಸಾರ ನಾವಿಕನಿಲ್ಲದ ನೌಕೆಯಂತ್ತಾಗಿರೋದು ಮಾತ್ರ ಸುಳ್ಳಲ್ಲ. ಅದಿಕ್ಕೆ ಹೇಳೋದು ಹೆಣ್ಣು ಸರಿ ದಾರಿಯಲ್ಲಿರೋವರೆಗೂ ಮಾತ್ರ ಸಂಸಾರ ಇಲ್ಲವಾದ್ರೆ ಅದು ಸ್ಮಶಾನ ಅಂತ.

ಇದನ್ನೂ ಓದಿ: ಮೊದಲ ಬಾರಿಗೆ ಕಾಣಿಸಿಕೊಂಡ ಜೈ ಜಗದೀಶ್ ಮೊದಲು ಪತ್ನಿ ಮಗಳು!ಮೊದಲ ಪತ್ನಿ ಜೊತೆಗೆ ವಿಜಯಲಕ್ಷ್ಮಿ ಒಡನಾಟ ಇರೋದು ನಿಜಾನಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram