Jyothi Rai: ಯುವ ನಿರ್ದೇಶಕನ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಜ್ಯೋತಿ ರೈ! ಗಂಡನಿಂದ ದೂರಾದ್ರಾ ನಟಿ?

Jyothi Rai: ಅಪ್ಪಟ ಕೊಡಗಿನ ಕುವರಿ ನಟಿ ಜ್ಯೋತಿ ರೈ ಹುಟ್ಟಿ ಬೆಳೆದಿದ್ದು ಅಲ್ಲಿಯೇ. ನಂತರ ನಟಿ ಜ್ಯೋತಿ ರೈ 8ನೇ ತರಗತಿ ಓದುವಾಗಲೇ ಆಕೆ ಅಪ್ಪನನ್ನು ಕಳೆದುಕೊಂಡರು. ಬಳಿಕ ಪದವಿ ಮುಗಿಸಿ ಕೇವಲ 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು. ಆದರೂ ಬಣ್ಣದ ಲೋಕದಲ್ಲಿ ಮಿಂಚಿದರು. ಹೌದು ಕನ್ನಡದಲ್ಲಿ ಜೋಗುಳ, ಕನ್ಯಾದಾನ, ಅನುರಾಗ ಸಂಗಮ, ಗೆಜ್ಜೆಪೂಜೆ, ಲವಲವಿಕೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ, ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಆದ್ರೆ ಇಂತಹ ಜನಪ್ರಿಯ ನಟಿ ಸದ್ಯ ವೈಯಕ್ತಿಕ ವಿಚಾರಗಳಿಂದಾಗಿ ಬಹಳ ಸುದ್ದಿಯಾಗಿದ್ದಾರೆ. 

WhatsApp Group Join Now
Telegram Group Join Now

ಹೌದು 20ನೇ ವಯಸ್ಸಿಗೆ ಮದುವೆಯಾದ ಇವರಿಗೆ ಓರ್ವ ಪುತ್ರ ಇದ್ದಾನೆ. ಆದ್ರೆ ಅವ್ರ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ ಈ ವಿಚಾರ ಸಖತ್‌ ಸುದ್ದಿಯಾಗಿತ್ತು. ಆದ್ರೆ ಇದೀಗ ಈ ನಟಿ ಕುರಿತು ಮತ್ತೊಂದು ವಿಚಾರ ಸಾಕಷ್ಟು ಸೌಂಡ್ ಮಾಡ್ತಿದೆ. ಹೌದು ಶುಕ್ರ, ಮಾತರಾನಿ ಮೌನಮಿದಿ, ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವಂತಹ ಟಾಕ್ಸ್ ಇದೀಗ ಹರಿದಾಡುತ್ತಿವೆ. ಅಲ್ದೇ ಸುರೇಶ್‌ ಜತೆಗಿರುವ ಫೋಟೊಗಳನ್ನು ನಟಿ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಿ ಇದೆಲ್ಲಾ ನಿಜ ಇರಬಹುದು ಅಂತ ಹೇಳಲಾಗ್ತಿದೆ.

ಹೌದು ಆರಂಭದಲ್ಲಿ ಮಾತ್ರ ಸಾಕಷ್ಟು ನೇಮ್ ಫೇಮ್ ಸಿಗೋವರ್ಗು ಕನ್ನಡದಲ್ಲೇ ನಟಿಸಿ ಸೈ ಅನಿಸಿಕೊಂಡವರು ಜ್ಯೋತಿ ರೈ. ನಂತರ ಕೇವಲ ಕನ್ನಡ ಕಿರುತೆರೆ ಮಾತ್ರವಲ್ಲ ಚಂದನವನದಲ್ಲೂ ಸೀತಾರಾಮ ಕಲ್ಯಾಣ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ ಜನಪ್ರಿಯರಾದ್ರು.ಇದಾದ ಬಳಿಕ ಕನ್ಯಾದಾನಂ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟು ಅಲ್ಲಿಯೂ ಪರಿಚಿತರಾದ್ದರು. ಹೌದು ಗುಪ್ಪೆಡಂತ ಮನಸು ಧಾರಾವಾಹಿಯಲ್ಲಿನ ಇವ್ರ ಪಾತ್ರ ಇವ್ರಿಗೆ ಒಳ್ಳೆ ಹೆಸರು ತಂದುಕೊಂಡಿತ್ತು. ಇದಾದ ಬಳಿಕ ಜ್ಯೋತಿ ರೈ ಈಗ ಪ್ರೆಟಿ ಗರ್ಲ್ ಎನ್ನುವ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದಾರೆ. ಅದರ ಪೋಸ್ಟರ್ ಇತ್ತೀಚಿಗೆ ರಿಲೀಸ್ ಕೂಡ ಆಗಿತ್ತು. ಅಲ್ದೇ ಶೀಘ್ರದಲ್ಲೇ ಆ ವೆಬ್‌ ಸಿರೀಸ್ ರಿಲೀಸ್ ಕೂಡ ಆಗಲಿದೆ. ಇದೆಲ್ಲಾ ಆದ ನಂತರ ತೀರ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಜ್ಯೋತಿಪುರ್ವಜ್ ಹ್ಯಾಷ್‌ಟ್ಯಾಗ್ ಹಾಕುತ್ತ ಜ್ಯೋತಿ ರೈ ಫೋಟೋಗಳನ್ನ ಶೇರ್ ಮಾಡ್ತಿದ್ದಾರೆ.

ಇದನ್ನೂ ಓದಿ: ಮದುವೆ ಕುಟುಂಬ ನಂಗೆ ಸರಿ ಹೋಗ್ತಿಲ್ಲ; ಸಾಂಸಾರಿಕ ಜೀವನದ ಮೇಲೆ ಸಿತಾರಗೆ ಯಾಕಿಷ್ಟು ಜಿಗುಪ್ಸೆ!

ಯುವ ನಿರ್ದೇಶಕನ ಜೊತೆ ನಟಿ ಜ್ಯೋತಿ ರೈ

ಹೌದು ಜ್ಯೋತಿ ರೈ(Jyothi Rai) ಹಾಗೂ ಸುರೇಶ್ ಕುಮಾರ್ ಆತ್ಮೀಯವಾಗಿರುವ ಫೋಟೊಗಳಿಗೆ ನೆಟ್ಟಿಗರು ಕಮೆಂಟ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಅಲ್ದೇ ಫೋಟೋಗಳನ್ನ ಗಮನಿಸಿದ ನೆಟ್ಟಿಗರು, ಇಬ್ಬರ ಮಧ್ಯೆ ಸಂಬಂಧ ಇರೋದು ಗ್ಯಾರೆಂಟಿ ಅಂತ ಹೇಳ್ತಿದ್ದಾರೆ. ಸದ್ಯ ಇದೇ ವಿಚಾರ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಯಾಕಂದ್ರೆ ಜ್ಯೋತಿ ರೈ ಅವರು ಇನ್‌ಸ್ಟಾಗ್ರಾಮ್‌ನಲ್ಲಿ Ask Me Anything Session ನಡೆಸಿದ್ದರು. ಆ ವೇಳೆ ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದರಲ್ಲಿ ಬಹಳ ಮುಖ್ಯವಾಗಿ ನೀವು ಸಿಂಗಲ್ ಹಾ??? ಅಂತ ನೆಟ್ಟಿಗರೊಬ್ರು ಪ್ರಶ್ನೆ ಮಾಡಿದ್ರು, ಅದಕ್ಕೆ ಜ್ಯೋತಿ ರೈ ಸುಕುಮಾರ್ ಪೂರ್ವಜ ಅವರನ್ನು ಕೇಳಿ ಅಂತ ಹೇಳಿದ್ರು. ಹೌದು ಈ ಸುಕುಮಾರ್ ಪೂರ್ವಜ ಅವರು ತೆಲುಗು ನಿರ್ದೇಶಕರು. ಎ ಮಾಸ್ಟರ್ ಪೀಸ್ ಎನ್ನುವ ಸಿರೀಸ್‌ನ್ನು ಸುಕುಮಾರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈಗ ಸುಕುಮಾರ್ ಜೊತೆಗಿನ ಫೋಟೋಗಳನ್ನೇ ಜ್ಯೋತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವುದು.

ಇನ್ನು ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ ಧಾರಾವಾಹಿ ಮೂಲಕ ಕಿರುತರೆ ಲೋಕಕ್ಕೆ ಕಾಲಿಟ್ಟ ಇವ್ರು ನಂತರ ಸಾಕಷ್ಟು ಜನಪ್ರಿಯರಾದ್ರು. ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ, ನಿರೂಪಕಿಯಾಗಿಯೂ ಗಮನ ಸೆಳೆದ ಇವ್ರು ತಮ್ಮ 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು. ಹೌದು ಜ್ಯೋತಿ ರೈ 20ನೇ ವಯಸ್ಸಿನಲ್ಲೇ ಮದುವೆ ಆಗಿದ್ದರು. ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎನ್ನುವವರ ಕೈ ಹಿಡಿದಿದ್ದರು. ಅಲ್ದೇ ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಹೌದು ಜ್ಯೋತಿ ರೈ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಮಗನಿಗೆ ಒಂದು ವರ್ಷ ತುಂಬಿದ ಬಳಿಕ ಆತ ಯಾರೊಂದಿಗೆ ಐ ಕಾಂಟ್ಯಾಕ್ಟ್‌ ಮಾಡಿ ಮಾತನಾಡಿಸುತ್ತಿರಲಿಲ್ಲ.

ಇಎನ್‌ಟಿ ಡಾಕ್ಟರ್‌ ಬಳಿ ಹೋದಾಗಲೂ ಯಾವುದೇ ಸಹಾಯವಾಗಲಿಲ್ಲ. ಬಳಿಕ ಥೆರಫಿ, ಶ್ಯಾಡೋ ಟೀಚರ್‌ ಮುಖಾಂತರ ಜ್ಯೋತಿ ರೈ ಪುತ್ರ ಬೆಳವಣಿಗೆಗೆ ಸಹಾಕಾರಿ ಆಗಿದೆ ಅಂತ ಹಿಂದೊಮ್ಮೆ ಜ್ಯೋತಿ ರೈ ಹೇಳಿಕೊಂಡಿದ್ರು. ಆದ್ರೆ ಇದೆಲ್ಲದರ ಮಧ್ಯೆ ನಟಿ ಜ್ಯೋತಿ ಹಂಚಿಕೊಳ್ಳುತ್ತಿರುವ ಫೋಟೋಗಳು ಕೊಡುತ್ತಿರುವ ಉತ್ತರಗಳು ಎಲ್ಲವು ಕೂಡ ಸಂದೇಹಕ್ಕೆ ಎಡೆ ಮಾಡಿಕೊಡುತ್ತಿದ್ದು, ನೆಟ್ಟಿಗರಂತೂ ಇವ್ರು ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಅಂತ ಫಿಕ್ಸ್ ಆಗಿದ್ದಾರೆ. ಆದ್ರೆ ನಟನೆಗೂ ಬರೋದಕ್ಕೂ ಮೊದಲೇ ಮದುವೆ ಆಗಿದ್ದ ಈ ನಟಿ ನಟನ ಲೋಕದಲ್ಲಿ ಸಾಕಷ್ಟು ಬೆಳೆದು ಮಿಂಚಿದ್ದಾರೆ. ಆದ್ರೆ ತಮ್ಮಗಿಂತ ಚಿಕ್ಕವರಾದ ಅದು ಒಬ್ಬ ಯುವ ನಿರ್ದೇಶಕನ ಜೊತೆಗೆ ರಿಲೇಷನ್ ಶಿಪ್ ನಲ್ಲಿರೋದು ಅಚ್ಚರಿ ಮೂಡಿಸಿದ್ದು, ಜ್ಯೋತಿ ರೈ ಗಂಡನಿಂದ ದೂರವಾಗಿದ್ದಾರಾ ಅಥವಾ ಬೇರೆ ಏನಾದ್ರು ಆಗಿದ್ಯಾ ಅನ್ನೋದು ಈಗ ಮುಂದಿರುವಂತ ಪ್ರಶ್ನೆ.

ಇದನ್ನೂ ಓದಿ: ಹೆಬ್ಬುಲಿ ಹೇರ್ ಕಟ್ ಮಾಡಿಸಿದ್ರೆ ಶಾಲೆಗೆ ಮಕ್ಕಳು ನೋ ಎಂಟ್ರಿ! ಕಟ್ಟಿಂಗ್ ಶಾಪ್ ನವರಿಗೆ ಮುಖ್ಯೋಪಾಧ್ಯಾಯರಿಂದ ಪತ್ರ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram