Meghana Raj: ಸರ್ಜಾ ಫ್ಯಾಮಿಲಿ ಮತ್ತೆ ನಿಮಗೆ ಮನಸ್ತಾಪ ಇರೋದು ನಿಜಾನಾ? ಕುಟುಂಬದ ನಡುವಿನ ವಿಚಾರಗಳ ಬಗ್ಗೆ ಮೇಘನಾ ಹೇಳಿದ್ದೇನು?

Meghana Raj: ಸ್ನೇಹಿತರೆ ಚಂದನವನದ ಭರವಸೆಯ ನಟ ಚಿರಂಜೀವಿ ಅವ್ರ ಸಾವು ಎಲ್ಲರಿಗೂ ಒಂದುರೀತಿಯ ಅಘಾತ ಅಂತನೇ ಹೇಳಬಹುದು ಯಾರು ಊಹಿಸದ ರೀತಿಯಲ್ಲಿ ನಟ ಚಿರಂಜೀವಿ ಸರ್ಜಾ ಇಹಲೋಕವನ್ನ ತ್ಯಜಿಸಿಬಿಟ್ರು. ಗರ್ಭಿಣಿ ಆಗಿದ್ದ ಮೇಘನಾಗೆ ಒಂದು ಕ್ಷಣ ನಿಂತ ನೆಲವೇ ಕುಸಿದಂತೆ ಆಗಿತ್ತು, ಬದುಕೇ ಬೇಡ ಅಂದುಕೊಂಡವರಿಗೆ ಹೊಟ್ಟೆಯಲ್ಲಿದ್ದ ಮಗು ನಿರ್ಧಾರ ಬದಲಿಸಿಕೋ ಅಮ್ಮ ನನಗೆ ಬದುಕು ಅಂತ ಸಾರಿ ಸಾರಿ ಹೇಳಿತ್ತಿತ್ತು. ಹೌದು ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ, ಮೇಘನಾ ಒಂಟಿಯಾಗಿದ್ರು ಆದ್ರೆ ಚಿರು ಪ್ರತಿ ರೂಪ ರಾಯನ್ ರಾಜ್ ಸರ್ಜಾ ಮೇಘನಾ ಬಾಳಿಗೆ ಹೊಸ ಭರವಸೆ ತಂದ. ಸದ್ಯ ಮೇಘನಾ ರಾಜ್ ಚಿರು ನೆನಪಲ್ಲೇ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಮಗನ ಸಂಪೂರ್ಣ ಜವಾಬ್ದಾರಿ ಹೊತ್ತು, ರಾಯನ್ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ. 

WhatsApp Group Join Now
Telegram Group Join Now

ಅಲ್ದೇ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕೆಲವು ಸಿನಿಮಾಗಳ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಸಮಯ ಸಿಕ್ಕಾಗೆಲ್ಲ ಪುತ್ರ ರಾಯನ್ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ. ಅಲ್ದೇ ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರಲಿ ಅಂತ ಮೇಘನಾ ರಾಜ್ ಅವರು ಟ್ಯಾಟೋ ಕೂಡ ಹಾಕಿಸಿಕೊಂಡಿದ್ದಾರೆ. ಚಿರು ನೆನಪಲ್ಲೇ ಈಗಲೂ ಒಂಟಿಯಾಗಿರುವ ಮೇಘನಾ ಹಾಗೂ ಸರ್ಜಾ ಕುಟುಂಬದಲ್ಲಿ ಏನು ಸರಿಯಾಗಿಲ್ಲ, ಭಿನ್ನಾಭಿಪ್ರಾಯ ಇದೆ ಅಂತೆಲ್ಲಾ ಚಿರು ಸಾವಿನ ನಂತರ ಸಾಕಷ್ಟು ವಿಚಾರಗಳು ಹರಿದಾಡಿದ್ವು. ಸದ್ಯ ಇದಕ್ಕೆ ಮೇಘನಾ ರಾಜ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಉತ್ತರವನ್ನ ಮುಟ್ಟಿ ನೋಡಿಕೊಳ್ಳುವ ಆಗೆಯೇ ಕೊಟ್ಟಿದ್ದಾರೆ.

ಹೌದು ನಟಿ ಮೇಘನ ತತ್ಸಮ ತದ್ಭವ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಸಿನಿಮಾ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿರುವ ಮೇಘನ ರಾಜ್, ಮಗ ರಾಯನ್ ರಾಜ್ ಸರ್ಜಾ ಹಾರೈಕೆಯಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಸಿನಿಮಾ ಕುರಿತಾದ ಸಂದರ್ಶನ ಒಂದರಲ್ಲಿ ಭಾಗಿಯಾಗಿರತಕ್ಕಂತಹ ಮೇಘನ ತಮ್ಮ ಕುಟುಂಬದ ಬಗ್ಗೆಯೂ ಕೂಡ ಮನ ಬಿಚ್ಚಿ ಮಾತನಾಡಿದ್ದಾರೆ. ಹೌದು ಈ ಸಂದರ್ಶನದಲ್ಲಿ ನಿರೂಪಕ ನಿಮಗೂ ಹಾಗೂ ಸರ್ಜಾ ಕುಟುಂಬಕ್ಕೂ ಏನು ಸರಿ ಇಲ್ವಂತೆ ಅಂತ ಕುಟುಂಬದ ಬಗ್ಗೆ ನೇರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ ಆಗ ಮೇಘನಾ ಇದಕ್ಕೆ ಸರಿಯಾಗಿ ಉತ್ತರವನ್ನು ಕೊಟ್ಟಿದ್ದಾರೆ. ಹೌದು ನಿಮ್ಮ ಕುಟುಂಬಕ್ಕೂ ಹಾಗೂ ಸರ್ಜಾ ಕುಟುಂಬಕ್ಕೂ ಭಿನ್ನಾಭಿಪ್ರಾಯವಿದ್ಯಂತೆ. ಮಗನ ನಾಮಕರಣದ ಸಮಯದಲ್ಲಿ ಕೆಲವು ವಿಚಾರದಲ್ಲಿ ವಿವಾದಗಳು ಆಗಿದ್ಯಂತಲ್ಲ, ಇದರ ಬಗ್ಗೆ ನೀವೇನ್ ಹೇಳ್ತೀರಾ ಅಂತ ಮೇಘನಾ ಅವರನ್ನ ಸಂದರ್ಶಕ ಕೇಳ್ದಾಗ ಮೇಘನ ಇದಕ್ಕೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರವನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: ನಿರ್ದೇಶಕನ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಜ್ಯೋತಿ ರೈ! ಗಂಡನಿಂದ ದೂರಾದ್ರಾ ನಟಿ?

ಧ್ರುವ ಸರ್ಜಾ ಬಗ್ಗೆ ಮಾನ ಬಿಚ್ಚಿ ಮಾತನಾಡಿದ ಮೇಘನಾ

ನಮ್ಮ ಕುಟುಂಬಕ್ಕೂ ಸರ್ಜಾ ಕುಟುಂಬಕ್ಕೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎರಡು ಕುಟುಂಬಗಳು ಸಂಕಷ್ಟದಲ್ಲಿ ತೀರಾ ಕೆಳಮಟ್ಟದಲ್ಲಿದ್ದಾಗ ಕೆಲವೊಂದು ಅಷ್ಟು ಜನರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಂದಿಟ್ಟಿದ್ದು ನಿಜ ಎರಡು ಕುಟುಂಬದ ಮಧ್ಯೆ ಹುಳಿ ಹಿಂಡಿದ್ದು ಸತ್ಯ ಆದ್ರೆ ಅದ್ಯಾವುದು ಸಾಧ್ಯವಾಗಿಲ್ಲ ಪಾಪ ಅಂತವರಿಗೆ ನಿರಾಸೆ ಆಯ್ತು ಅನ್ಸುತ್ತೆ. ಇನ್ನು ನನ್ನ ಹಾಗೂ ಧ್ರುವ ಮಧ್ಯೆ ಇರ್ತಕ್ಕಂತ ಬಾಂಡಿಂಗ್ ಬಗ್ಗೆ ವಿಶೇಷವಾಗಿ ಎಲ್ಲಿಯೂ ಹೇಳಿಕೊಳ್ಳುವ ಅವಶ್ಯಕತೆ ನನಗಿಲ್ಲ. ನಮ್ಮಿಬ್ಬರ ನಡುವಿನ ವಿಶೇಷವಾದ ಸಂಬಂಧದ ಬಗ್ಗೆ ಹೇಳ್ಕೊಳ್ಳೋಕೆ ಪದಗಳು ಕೂಡ ಇಲ್ಲ ಅಂತ ಮೈದುನ ಧ್ರುವ ಸರ್ಜಾನನ್ನ ತಮ್ಮ ಅಂತ ಇದೀಗ ಮೇಘನ ಹೇಳಿದ್ದು ಬಹಳ ವಿಶೇಷವಾಗಿತ್ತು.

ಫ್ಯಾಮಿಲಿ ಅನ್ನೋದು ನನ್ನ ವೈಯಕ್ತಿಕ ವಿಚಾರ. ಅದರ ಬಗ್ಗೆ ಕ್ಲಾರಿಟಿಯನ್ನು ಕೊಡುವ ಅವಶ್ಯಕತೆ ನನಗಿಲ್ಲ. ಎಲ್ಲರ ಬಳಿ ಹೋಗಿ ನನ್ನ ಫ್ಯಾಮಿಲಿ ಹಿಂಗೆ, ನನ್ ಫ್ಯಾಮಿಲಿಯಲ್ಲಿ ಇರೋರು ಹಂಗೆ, ಅಂತ ಹೇಳ್ಕೊಳೋ ಅವಶ್ಯಕತೆ ನನಗಿಲ್ಲ. ಯಾಕಂದ್ರೆ ಅದು ನನ್ನ ವೈಯಕ್ತಿಕ ವಿಚಾರ, ಅದನ್ನ ಜಗತ್ ಜಾಹಿರಾ ಮಾಡೋದು ಸರಿ ಅಲ್ಲ, ಅಂತ ಹೇಳಿದ್ದಾರೆ. ನಮ್ಮ ಬಗ್ಗೆ ನಮಗೆ ಗೊತ್ತು. ನಮ್ಮ ಕುಟುಂಬದವರ ಬಗ್ಗೆಯೂ ಕೂಡ ನಮಗೆ ಗೊತ್ತಿರುತ್ತೆ. ಅದನ್ನ ಹೋಗ್ಬಿಟ್ಟು ಇನ್ಸ್ಟಾಗ್ರಾಮ್ ನಲ್ಲಿ Facebook ನಲ್ಲಿ ಸ್ಟೋರಿ ಹಾಕ್ಕೊಳೋಕೆ ಬರೋದಿಲ್ಲ.

ಧ್ರುವ ಸರ್ಜಾ ಹಾಗೂ ನನ್ನ ನಡುವಿನ ಬಾಂಡಿಂಗ್ ತುಂಬಾ ಉತ್ತಮವಾಗಿದೆ, ಅವನು ನನಗೆ ತಮ್ಮ ಇದ್ದಂತೆ. ಒಂದು ದಿನ ಜಗಳ ಆಡ್ಕೊಂತೀವಿ, ಮತ್ತೊಂದು ದಿನ ತುಂಬಾ ಚೆನ್ನಾಗಿರ್ತಿವಿ, ಹಾಗಂತ ಪ್ರತಿಯೊಂದನ್ನು ಎಲ್ಲರ ಮುಂದೆ ಹೇಳ್ಕೊಳಕ್ಕೆ ಆಗುತ್ತಾ? ನಮ್ಮಮ್ಮ ಬೈದ್ರು ಅಂತ ಹೇಳ್ಬಿಟ್ಟು ನಾನು Instagram ಅಲ್ಲಿ ಬಂದು ಸ್ಟೋರಿ ಹಾಕೊಳಕ್ಕೆ ಆಗುತ್ತಾ, ಅಂತ ಇದೀಗ ಆಡಿಕೊಳ್ಳುವವರ ವಿರುದ್ಧ, ಹಾಗೂ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದಲ್ಲಿ ಏನು ಸರಿಯಿಲ್ಲ ಭಿನ್ನಾಭಿಪ್ರಾಯ ಇದೆ ಅನ್ನೋರಿಗೆ ಮೇಘನಾ(Meghana Raj) ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಯಾರ್ ಬೇಕಾದ್ರು ಹೋಗಬಹುದಾ? ಮನೆ ಯಜಮಾನಿಯೇ ಹೋಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ವಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram