ಚಿತ್ಕಳಾ ಬಿರಾದಾರ್ ಅವರು ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕೆಲವರು ಅಮ್ಮಮ್ಮನ ರಿಯಲ್ ಮಗನ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದರು. ಈಗ ಅಮ್ಮಮ್ಮನ ಮಗನ ಮದುವೆ ಯಶಸ್ವಿಯಾಗಿ ನಡೆದಿದೆ. ಹೌದು ‘ಕನ್ನಡತಿ’ ಧಾರಾವಾಹಿ ನಟಿ ಚಿತ್ಕಳಾ ಬಿರಾದಾರ್ ಅವರ ಹಿರಿಯ ಮಗನ ಮದುವೆ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆಯ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು, ನನ್ನ ಮಗನ ಮದುವೆ ಮೊನ್ನೆ ನಡೆಯಿತು.. ಸೌರಭ ದೇವಾಂಶಿ ವಧುವರರಾಗಿ ಹಿರಿಯರ ಆಶೀರ್ವಾದ ಪಡೆದರು. ಅವರ ಮುಂದಿನ ಬಾಳಿಗೆ ನಿಮ್ಮ ಹಾರೈಕೆಯಿರಲಿ ಅಂತ ಬರೆದು ಚಿತ್ಕಳಾ ಬಿರಾದಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಚಿತ್ಕಲ ಅವ್ರ ಮಗನ ಮದುವೆ ಸಂಭ್ರಮಕ್ಕೆ ಕನ್ನಡತಿ ಕುಟುಂಬ ಕೂಡ ಸಾಕ್ಷಿಯಾಗಿದ್ದು, ಇವ್ರ ಫೋಟೋಗಳು ಕೂಡ ಸಾಕಷ್ಟು ವೈರಲ್ ಆಗ್ತಿವೆ. ಹೌದು ಈ ಮದುವೆ ಕಾರ್ಯಕ್ರಮಕ್ಕೆ ಕನ್ನಡತಿ ಸೀರಿಯಲ್ ನಟ ನಟಿಯರು ಆಗಮಿಸಿ ನವ ವಧುವರರಿಗೆ ಶುಭಾ ಆರೈಸಿ ಶುಭಾಶಯಗಳನ್ನ ತಿಳಿಸಿದ್ದಾರೆ.
ಇದನ್ನೂ ಓದಿ: ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ತಯಾರಿ ಮಾಡಿದ್ದ ಅಪ್ಪ ಆದರೆ ಮದುವೆ ಒಂದು ದಿನ ಮುಂಚೆ ಅಪಘಾತದಲ್ಲಿ ಸಾವು!
ಮದುವೆ ಮನೆಯಲ್ಲಿ ಮಿಂಚಿದ ಕನ್ನಡತಿ ನಟ ನಟಿಯರು
ಇನ್ನು ಚಿತ್ಕಳಾ ಬಿರಾದಾರ್ ಅವರ ಹಿರಿಯ ಪುತ್ರ ಸೌರಭ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಚಿತ್ಕಳಾ ಅವರು ವಿದೇಶಕ್ಕೆ ತೆರಳಿ ಮಗನ ಜೊತೆ ಒಂದಷ್ಟು ದಿನಗಳನ್ನು ಕಳೆದು ಬಂದಿದ್ದರು. ಆಗ ಅಮೆರಿಕ ಪ್ರವಾಸದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗಲೇ ಸಾಕಷ್ಟು ಜನ ನಿಮ್ಮ ರಿಯಲ್ ಮಗನ ಮದುವೆ ಯಾವಾಗ ನಮಗೆ ಯಾವಾಗ ಸಿಹಿ ಸುದ್ದಿ ಕೊಡ್ತೀರಾ ಅಂತೆಲ್ಲಾ ಕಮೆಂಟ್ಸ್ ಮಾಡಿದ್ರು, ಇದೀಗ ಅಮ್ಮಮನ ರಿಯಲ್ ಮಗನ ಮದುವೆ ನಡೆದಿದೆ, ಆದ್ರೆ ಮಗನ ಮದುವೆ ಎಲ್ಲಿ ನಡೆದಿದೆ? ಹುಡುಗಿ ಯಾರು ಎಂಬ ಬಗ್ಗೆ ಚಿತ್ಕಳಾ ಬಿರಾದಾರ್ ಅವರು ಇನ್ನೂ ಮಾಹಿತಿ ನೀಡಿಲ್ಲ. ಆದ್ರೂ ಕೂಡ ಚಿತ್ಕಳಾ ಬಿರಾದಾರ್ ಅವರ ಪುತ್ರನ ಮದುವೆಗೆ ಕುಟುಂಬಸ್ಥರು, ಆತ್ಮೀಯರ ಜೊತೆಗೆ ಕನ್ನಡತಿ ಸೀರಿಯಲ್ ನ ಕಲಾವಿದರು ಕೂಡ ಆಗಮಿಸಿದ್ದರು. ಕೇವಲ ಆಪ್ತರಿಗಷ್ಟೇ ಈ ಮದುವೆ ಸೀಮಿತವಾಗಿದ್ದರಿಂದ ಖಾಸಗಿಯಾಗಿ ಮದುವೆ ಕಾರ್ಯಕ್ರಮ ನಡೆದಿದೆ. ಹೌದು ಈ ಮದುವೆಗೆ ಹರ್ಷ ಪಾತ್ರಧಾರಿ ಕಿರಣ್ ರಾಜ್, ಸಾನಿಯ ಪಾತ್ರಧಾರಿ, ಹರ್ಷನ ಚಿಕ್ಕಮ್ಮನಾ ಪಾತ್ರಧಾರಿ ಸೇರಿದಂತೆ ಸಾಕಷ್ಟು ಕಲಾವಿದರು ಬಂದು ನವ ವಧು ವಾರರಿಗೆ ಆಶಿರ್ವಾದ ಮಾಡಿದ್ದಾರೆ.
ಇನ್ನು ಈ ಫೋಟೋಗಳು ವೈರಲ್ ಆಗ್ತಿದ್ದಂತೆ ಸಾಕಷ್ಟು ಜನ ಭುವನೇಶ್ವರಿ ಎಲ್ಲಿ ಅಂತ ಕೇಳ್ತಿದಾರೆ, ಹೌದು ಭುವನೇಶ್ವರಿ ಪಾತ್ರಧಾರಿ ರಂಜನಿ ರಾಘವನ್ ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ, ಇವ್ರು ಮದುವೆಗೆ ಬಂದಿದರೋ ಇಲ್ವೋ ಅನ್ನೋದು ಕೂಡ ಖಚಿತವಾಗಿಲ್ಲ. ಆದ್ರೂ ಒಂದಷ್ಟು ಜನ ನೆಟ್ಟಿಗರು ಹಾಗೂ ಅಭಿಮಾನಿಗಳು ಹೊಸ ಜೋಡಿಯನ್ನ ಹಾಡಿ ಹೊಗಳಿದ್ದು, ಚಂದದ ಮುದ್ದಾದ ಜೋಡಿ. ಹರ್ಷನ ಮದುವೆ ಜೊತೆ ಸ್ವಂತ ಮಗನ ಮದ್ವೆನೂ ಮಾಡಿಸಿ ಆಯ್ತು ಅಂತ ಕೆಲವರು ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಇನ್ನು ಕೆಲವರು ನವ ವಧು ವರರಿಗೆ ಶುಭಹಾರೈಕೆಗಳು. ನಮ್ಮ ಅಮ್ಮಮ್ಮ ದಂಪತಿಗಳು ಸಹ ಬಹಳ ಚೆಂದವಾಗಿದ್ದೀರಿ, ನೀವು ಎಂದಿನಂತೆ ಲಕ್ಷಣವಾಗಿ ಮುದ್ದಾಗಿ ಕಾಣಿಸುತ್ತಿದ್ದೀರಿ . ಯಾರ ಕೆಟ್ಟ ದೃಷ್ಟಿನೂ ತಾಗದಿರಲಿ. ನಿಮಗೂ ನಿಮ್ಮ ಕುಟುಂಬದ ಎಲ್ಲರಿಗೂ ಭಗವಂತನ ಆಶೀರ್ವಾದ ಸದಾ ಇರಲಿ ಅಂತ ನೆಟ್ಟಿಗರೊಬ್ಬರು ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ದಿಢೀರ್ ಚಿನ್ನದ ಬೆಲೆಯಲ್ಲಿ 3000 ರೂಪಾಯಿ ಇಳಿಕೆ! ಚಿನ್ನ ಖರೀದಿಸುವವರಿಗೆ ಸುವರ್ಣಾವಕಾಶ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram