“ಕಾವೇರಿ ಕನ್ನಡ ಮೀಡಿಯಂ” ಧಾರವಾಹಿ ಮೂಲಕ ನಾಯಕಿಯಾದ ಪ್ರಿಯಾ ಆಚಾರ್! ಹಾಗಾದರೆ ಮುಂದೆ ಗಟ್ಟಿಮೇಳಕ್ಕೆ ಗುಡ್ ಬೈ ಹೇಳಿದ್ರಾ ಪ್ರಿಯಾ!?

Kaveri Kannada Medium: ಸ್ಟಾರ್ ಸುವರ್ಣ ವಾಹಿನಿ ಹೊಸ ಹೊಸ ಧಾರವಾಹಿಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದು. ‘ನಮ್ಮ ಲಚ್ಚಿ’, ‘ನೀನಾದೆ ನಾ’, ‘ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ’ ಧಾರಾವಾಹಿಗಳು ಟಿ ಆರ್ ಪಿ ರೇಸ್ ನಲ್ಲೂ ಸಹ ಮುಂದಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿ ಹೆಮ್ಮೆಯಿಂದ ಅರ್ಪಿಸುತ್ತಿರುವ ‘ಕಾವೇರಿ ಕನ್ನಡ ಮೀಡಿಯಂ’ ಧಾರವಾಹಿಯೂ ಅತಿ ಶೀಘ್ರದಲ್ಲೇ ಪ್ರಸಾರವಾಗುತ್ತಿದ್ದು ಈಗ ಈ ಧಾರಾವಾಹಿಯ ಪ್ರೋಮೊ ಕೂಡ ಬಿಟ್ಟಿದು ಪ್ರೋಮೊ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now

ಮಾತೃಭಾಷೆಯನ್ನೇ ತನ್ನ ಉಸಿರಾಗಿಸಿಕೊಂಡವಳ ಕಥೆ “ಕಾವೇರಿ ಕನ್ನಡ ಮೀಡಿಯಂ” ಎಂದು ಸಾಲು ಬರೆದು ಪ್ರೋಮೊ ವನ್ನು ವಾಹಿನಿ ಹಂಚಿಕೊಂಡಿದ್ದು “ಕನ್ನಡ ನಮ್ಮ ಭಾಷೆಯಲ್ಲ ಬದುಕು ಅಂತ ನಂಬಿರೋ ಜನ ಇರೋ ನಮ್ಮೂರು ಮಲೆನಾಡಿನ ಮೂಲೆಯಲ್ಲಿರುವ ಚಿಕ್ಕ ಹಳ್ಳಿ” ಅಂತ ಪ್ರೊಮೋ ಶುರುವಾಗುತ್ತೆ ಧಾರಾವಾಹಿಯಲ್ಲಿ ನಾಯಕಿ ಕಾವೇರಿ ಪಾತ್ರ ಮಾಡುತ್ತಿರುವವರು ಪ್ರಿಯಾ ಆಚಾರ್ ಗಟ್ಟಿಮೇಳ ಧಾರವಾಹಿ ಮೂಲಕ ಖ್ಯಾತಿ ಪಡೆದಿದ್ದ ಪ್ರಿಯಾ ಕಾವೇರಿ ಕನ್ನಡ ಮೀಡಿಯಂ(Kaveri Kannada Medium) ನಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Image Credit: Star Suvarna

ಧಾರಾವಾಹಿಯಲ್ಲಿ “ಕಾವೇರಿ ಬಿಎಸ್ಸಿ ಬಿಎಡ್ ಇನ್ ಕನ್ನಡ ಮೀಡಿಯಂ ಓದಿದ್ದಾಳೆ. ಅಪ್ಪ ಕಟ್ಟಿಸಿರುವ ಕನ್ನಡ ಶಾಲೆ ಹೆಚ್ಚು ಕಡಿಮೆ ಕನ್ನಡ ಶಾಲೆಗಳಗೆ ಸೌಕರ್ಯಗಳಿಲ್ಲದೆ ಅನಾಥವಾಗಿದೆ ನಮ್ಮ ಶಾಲೆಗೂ ಒಂದು ಭರವಸೆಯ ಬೆಳಕು ಬರುತ್ತದೆ ಎಂದು ನಾವು ಎಲ್ಲರೂ ಕನಸು ಕಾಣುತ್ತಿದ್ದೇವೆ” ಎಂದು ಪ್ರೊಮೋ ದಲ್ಲಿ ಕಾವೇರಿ ಹೇಳುತ್ತಾಳೆ. “ಬರೀ ಕನಸು ಕಾಣುತ್ತಾ ಬದುಕಿರುವವರು ಫೂಲ್ಸ್, ಲೈಫ್ ನಲ್ಲಿ ಸಕ್ಸಸ್ ಆಗುವುದಕ್ಕೆ goals ಇಂಪಾರ್ಟೆಂಟ್” ಎಂದು ಡೈಲಾಗ್ ಹೊಡೆಯುತ್ತಾ ನಾಯಕ ಅಗಸ್ತ್ಯಾನ ಎಂಟ್ರಿ ಆಗುತ್ತೆ. ಶಾಲೆಯನ್ನ ಸರಿ ಮಾಡಲು ಹೀರೋ ಮಾಡಿದ ಚಾಲೆಂಜ್ ಗೆ ಕಾವೇರಿ ಒಪ್ಪಿ ಅಗಸ್ತ್ಯಾನ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆರು ತಿಂಗಳು ಕಾವೇರಿ ಬಂದು ಪಾಠ ಮಾಡಬೇಕು.

ಇದನ್ನೂ ಓದಿ: ಮದುವೆ ಕುಟುಂಬ ನಂಗೆ ಸರಿ ಹೋಗ್ತಿಲ್ಲ..! ಸಾಂಸಾರಿಕ ಜೀವನದ ಮೇಲೆ ಸಿತಾರಗೆ ಯಾಕಿಷ್ಟು ಜಿಗುಪ್ಸೆ!

ಹೊಸ ಧಾರಾವಾಹಿ ನಾಯಕಿಯಾದ ಪ್ರಿಯಾ ಮುಂದೆ ಗಟ್ಟಿಮೇಳಕ್ಕೆ ಬೈ ಬೈ ಹೇಳ್ತಾರಾ!?

ಗಟ್ಟಿಮೇಳದಲ್ಲಿ ಅದಿತಿ ಪಾತ್ರದಲ್ಲಿ ನಟಿಸುತ್ತಿರುವ ಪ್ರಿಯಾ. ಕಳೆದ ತಿಂಗಳಷ್ಟೇ ಧ್ರುವ ಮತ್ತು ಅದಿತಿ ಮದುವೆಯ ಎಪಿಸೋಡ್ ಗಳು ಕೂಡ ಮೂಡಿ ಬಂದಿತ್ತು. ವಿಕ್ರಾಂತ್ ಸಾವಿನ ಬಳಿಕ ಧಾರಾವಾಹಿಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಅದಿತಿ ಪಾತ್ರ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕು. ಅದಿತಿ ಪಾತ್ರದಿಂದ ಪ್ರಿಯಾ ಆಚಾರ್ ಹೊರಬಂದರೆ ಆ ಪಾತ್ರಕ್ಕೆ ಬೇರೆ ಯಾವ ನಟಿ ಬರುತ್ತಾರೆ ಎಂದು ಕುತೂಹಲವಿದೆ ಅಥವಾ ಗಟ್ಟಿಮೇಳ ಅಂತ್ಯವಾಗುವ ಹೊರಗೆ ಪ್ರಿಯಾ ಅವರೇ ಅದಿತಿ ಪಾತ್ರವನ್ನು ಮುಂದುವರಿಸುತ್ತಾರೆ ಎಂದು ಇದೀಗ ಗಟ್ಟಿಮೇಳ ವೀಕ್ಷಕರಿಗೆ ಇರುವ ಪ್ರಶ್ನೆಯಾಗಿದೆ. ಏನೇ ಆಗಲಿ ಪ್ರಿಯಾ ಆಚಾರ್ ಹೊಸ ಧಾರಾವಾಹಿ ಗೆ ಒಳ್ಳೆಯದಾಗಲಿ ಎಂದು ನಾವು ನೀವು ಆಶಿಸೋಣ.

ಇದನ್ನೂ ಓದಿ: ಹಲವು ವರ್ಷಗಳ ಬಳಿಕ ಶಬರಿಮಲೆಯಲ್ಲಿ ಕಾಣಿಸಿಕೊಂಡ ನಟಿ ಸಿತಾರ!

ಇದನ್ನೂ ಓದಿ: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram