Kavitha gowda sister marriage: ಅಂದುಕೊಂಡತೆ ಅದ್ದೂರಿಯಾಗಿ ತಂಗಿ ಮದುವೆ ಮಾಡಿದ ಕವಿತಾ ಗೌಡ

ಕಿರುತರೆಯ ಸ್ಟಾರ್ ಜೋಡಿ ಅಂತಲೆ  ಚಂದನ್ ಹಾಗೂ ಕವಿತಾ ಗೌಡ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.. ಹೌದು ತಂಗಿ ಮದುವೆಯ ಸಂಭ್ರಮ ದಲ್ಲಿ ನಟಿ ಕವಿತಾ ಗೌಡ ಇದ್ದಾರೆ.. ಜೀವನ ದಲ್ಲಿ ಅಂದುಕೊಂಡಿದ್ದನ್ನೆಲ್ಲ ಅಚ್ಚುಕಟ್ಟಾಗಿ ಪ್ಲಾನಿಂಗ್ ನಲ್ಲೆ ಮಾಡಿ ಯಶಸ್ಸನ್ನ ಸಂಪಾಡಿಸಿರುವ ಈ ಜೋಡಿ ಕಿರುತ್ತಾರೆಯಲ್ಲೇ ಸ್ಟಾರ್ ಜೋಡಿ ಅಂತಾನೆ ಕರೆಸಿಕೊಳ್ಳುತ್ತಾರೆ. ಶ್ರಮದ ಹಿಂದೆ ಯಶಸ್ಸು, ಯಶಸ್ಸಿನ ಹಿಂದೆ ಹಣ ಸಂತೋಷ ಒಟ್ಟಿನ್ನಲ್ಲಿ ಸಮೃದ್ಧಿಯ ಜೀವನ ಇವರದ್ದು ಅಂದ್ರೆ ತಪ್ಪಾಗಲ್ಲ.. ಇದೀಗ ಚಂದನ್ ಮತ್ತು ಕವಿತಾ ಜೋಡಿ ಮತ್ತೊಂದು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

WhatsApp Group Join Now
Telegram Group Join Now

ಹೌದು ಕನ್ನಡ ಕಿರುತೆರೆಯ ಖ್ಯಾತ ಜೋಡಿ ಎಂದರೆ ಅದು ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್ ಹಾಗೂ ಕವಿತಾ.‌ ಹೌದು ಆನ್ ಸ್ಕ್ರೀನ್ ನಲ್ಲಿ ಎಷ್ಟು ಪ್ರಖ್ಯಾತರಾದರೋ‌ ಅದೇ ರೀತಿ ನಿಜ ಜೀವನ ದಲ್ಲಿಯೂ ಅಷ್ಟೇ ಯಶಸ್ಸನ್ನ ಸಂಪಾದಿಸಿದ್ದಾರೆ. ಬಹಳಷ್ಟು ವರ್ಷಗ ಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಎಲ್ಲಿಯೂ ಕೂಡ ತಮ್ಮ ಪ್ರೀತಿಯ ಗುಟ್ಟನ್ನ ಬಿಟ್ಟುಕೊಟ್ಟಿರಲಿಲ್ಲ. ಆಗಾಗ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣ ದಲ್ಲಿ ನಿಮ್ಮ ಜೋಡಿ ಚೆನ್ನಾಗಿದೆ ನಿಜ ಜೀವನದಲ್ಲೂ ನೀವು ಸತಿಪತಿಗಳಾಗಿ ಅಂತ ಹೇಳ್ತಾನೆ ಬಂದಿದ್ರು. ಆದ್ರೂ ಮದುವೆಯ ಗುಟ್ಟನ್ನ ಬಿಟ್ಟು ಕೊಡದೆ ಕೋವಿಡ್ ಸಂದರ್ಭ ದಲ್ಲಿ ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆಯಾದ್ರೂ.

ಆದಾದ ನಂತರ ಇಬ್ರು ಒಟ್ಟಿಗೆ ಸೇರಿ ನಟನ ರಂಗದ ಜೊತೆಗೆ ಉದ್ಯಮದಲ್ಲೂ ಬೆಳೆಯುವ ಆಶೆ ಹೊಂದಿದ್ದ ಇಬ್ಬರು ತಮ್ಮ ಕನಸ್ಸನ್ನ ನನಸು ಮಾಡಲು ಶುರು ಮಾಡುದ್ರು.. ಮೊದಲಿಗೆ ಬೆಂಗಳೂರು – ಮೈಸೂರು ರಸ್ತೆಯಲ್ಲಿ ಚಂದನ್‌ – ಕವಿತಾ ಮಂಡಿಪೇಟೆ ಪಲಾವ್‌ ಎಂಬ ಹೊಸ ಬ್ಯುಸ್ನೆಸ್‌ ಆರಂಭಿಸುತ್ತಾರೆ. ಅಲ್ದೆ ಈ ಮೊದಲೇ ಚಂದನ್ 2 ವರ್ಷಗಳ ಹಿಂದಷ್ಟೇ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್‌ ತೆರೆದಿದ್ದರು. ನಂತರ ಪತ್ನಿ ಕವಿತಾ ಜೊತೆ ಸೇರಿ ಮತ್ತೊಂದು ಹೋಟೆಲ್‌ ಬ್ಯುಸ್ನೆಸ್‌ ಆರಂಭಿಸಿದ್ರು. ನಂತರ ಮಂಡಿ ಪೇಟೆ ಪಲಾವ್ ಹೋಟೆಲ್ ಉದ್ಯಮ ವನ್ನ ಮತ್ತಷ್ಟು ಕಡೆ ಬೆಳೆಸಲು ಪ್ರಯತ್ನಿಸಿ ಈಗ 3 ಬ್ರಾಂಚ್ ಗಳನ್ನ ಸಹ ಹೊಂದಿದ್ದಾರೆ.. ಈ ಹೋಟೆಲ್ ಗಳಲ್ಲಿ ಸ್ಪೆಷಲ್ ಏನಪ್ಪಾ ಅಂದ್ರೆ ಸೌದೆ ಒಲೆಯಲ್ಲಿ ಅಡುಗೆ ಮಾಡೋದು ಇಲ್ಲಿನ ವಿಶೇಷ.

ಉದ್ಯಮ ಆದ ನಂತರ ಜೀವನದ ಅಮೂಲ್ಯ ಕ್ಷಣ ಗಳಲ್ಲಿ ಸ್ವಂತ ಮನೆ ಖರೀದಿಸುವುದು ಸಹ ಒಂದಲ್ವಾ. ಸದ್ಯ ಈ ಜೋಡಿ ಆ ಕನಸನ್ನು ನನಸು ಮಾಡಿಕೊಂಡ್ರು. ಹೌದು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಮನೆ ಖರೀದಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಹೊಸ ಮನೆಯ ಗೃಹ ಪ್ರವೇಶವನ ಕೂಡ ಮಾಡಿ ಮುಗಿಸಿದ್ರು. ನಂತರ ಈ ಜೋಡಿ ತೆಲುಗು ಕಿರುತರೆಗೂ ಎಂಟ್ರಿ ಕೊಟ್ಟು ಅಲ್ಲಿಯೂ ಕೂಡ ಸಕ್ರಿಯರಾಗಿದ್ರು. ಅಲ್ಲಿಯೂ ಕೂಡ ಗುರುತಿಸಿಕೊಂಡು ನಂತರ ಕೆಲವೊಂದಿಷ್ಟು ಅಸಮಾಧಾನಗಳ ಹೊರತಾಗಿಯೂ ಉದ್ಯಮದ ಕಡೆ ಹೆಚ್ಚು ಗಮನ ಹರಿಸಲು ಚಂದನ್ ಕಿರುತರೆ ಯಿಂದ ದೂರ ಉಳಿಯುತ್ತಾರೆ.. ಉದ್ಯಮದಲ್ಲಿ ಒಲುವು ಹೊಂದಿರುವ ಚಂದನ್ ಇಲ್ಲಿಯೇ ಏನಾದ್ರೂ ಸಾಧಿಸಬೇಕು ಅನ್ನೋ ಛಲ ಹೊಂದಿದ್ದಾರೆ.

ಇದನ್ನೂ ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

ಮದುವೆ ಬಳಿಕ ಕವಿತಾ ಚಂದನ್ ರಿಯಲ್ ಲೈಫ್ ಹೇಗಿದೆ ಗೊತ್ತಾ!?

ಇನ್ನು ಕವಿತಾ ಅವ್ರು ಅಷ್ಟೇ ಕಿರುತರೆ, ಬೆಳ್ಳಿತೆರೆಯ ಜೊತೆ ಜೊತೆಗೆ ಪತಿಯ ಉದ್ಯಮಕ್ಕೂ ಪ್ರೋತ್ಸಾಹ ನೀಡಿ ಪತಿಯೊಟ್ಟಿಗೆ ನಿಂತಿದ್ದಾರೆ.. ಇದರ ಜೊತೆಗೆ ತಮ್ಮ ಆಸೆ ಕನಸು ಗಳಿಗೂ ಬೆಲೆ ಕೊಡುವ ಪತಿ ಸಿಕ್ಕಿರೋದು ನನ್ನ ಅದೃಷ್ಟ ಅಂತ ಸಾಕಷ್ಟು ಬಾರಿ ಹೇಳಿಕೊಂಡಿರುವ ಕವಿತಾ ಇತ್ತೀಚಿಗೆ ಮೇಕ್ ಓವರ್ ಸ್ಟುಡಿಯೋ ಒಂದನ್ನ ಆರಂಭಿಸಿದ್ದಾರೆ. ಕಿರುತರೆ ಹಾಗೂ ಬೆಳ್ಳಿತೆರೆಯ ನಂಟು ಇರಬೇಕು ಅನ್ನುವ ಉದ್ದೇಶ ದಿಂದ ಕವಿತಾ ಸ್ಟುಡಿಯೋ ಆರಂಭಿಸಿದ್ದು ಬಹಳ ಖುಷಿಯಾಗಿದ್ದಾರೆ. ಇನ್ನು ಕವಿತಾ ಹಾಗೂ ಚಂದನ್ ಇಬ್ರು ಒಂದಷ್ಟು ರಿಯಾಲಿಟಿ ಶೋ ಗಳಲ್ಲಿಯೂ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ರು. ಅಲ್ಲದೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನಂತರ ಇವರ ಬೇಡಿಕೆ ಹೆಚ್ಚಾಗಿದ್ದ ಕಾರಣ ಇಬ್ಬರು ಸಾಕಷ್ಟು ಬ್ಯುಸಿ ಆದ್ರೂ, ಇದು ಇವ್ರ ಯಶಸ್ಸಿಗೆ ಕಾರಣ ಅಂದ್ರೆ ತಪ್ಪಾಗಲ್ಲ.

ಯಶಸ್ಸಿನ ಉತ್ತುಂಗದಲ್ಲಿರುವ ಸ್ಟಾರ್ ಜೋಡಿಯ ಮತ್ತೊಂದು ಕನಸು ನನಸು

ಇನ್ನು ಉದ್ಯಮ ಆಯ್ತು, ಮನೆ ಆಯ್ತು, ಮೇಕ್ ಓವರ್ ಸ್ಟುಡಿಯೋ ಆಯ್ತು ಮಗು ಯಾವಾಗ ಅಂತ ಅಭಿಮಾನಿಗಳು ಕೇಳುತ್ತಲೆ ಬಂದಿದ್ರು ಆದ್ರೆ ಈ ಜೋಡಿ ಮತ್ತೊಂದು ಆಸೆ ಮತ್ತೆ ಜವಾಬ್ದಾರಿ ಇದೆ ಅದನ್ನ ಮುಗಿಸಿ ಆಮೇಲೆ ಯೋಚಿಸುತ್ತೇವೆ ಅಂತ ಹೇಳುತ್ತಾಳೆ ಬಂದಿದ್ರು.. ಇದೀಗ ಆ ಜವಾಬ್ದಾರಿಯನ್ನು ಕೂಡ ಪೂರೈಸಿದ್ದು.. ತಂಗಿಯನ್ನ ದಡ ಸೇರಿಸಿದ ಖುಷಿಯಲ್ಲಿ ಕವಿತಾ ಇದ್ದಾರೆ. ಹೌದು ಕವಿತಾ ಅವ್ರು ತಂಗಿ ಮೋನಿಕಾ ಮದುವೆಯನ್ನ ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ. ತಂಗಿಯೂ ಕೂಡ ಬಹಳ ಖುಷಿಯಿಂದ ಮದುವೆಯಾಗಿದ್ದು ಅಕ್ಕನಿಗೆ ನಾನು ಅಭಾರಿ ಅಂದಿದ್ದಾರೆ. ಚಂದನ್ ಕೂಡ ಮೋನಿಕಾ ಅವ್ರ ಮದುವೆಯಲ್ಲಿ ಖುಷಿಯಿಂದ ಬಹಳ ಸಂಭ್ರಮದಿಂದ ಓಡಾಡಿಕೊಂಡು ಮದುವೆ ಮಾಡಿ ಮುಗಿಸಿದ್ದಾರೆ.

ಕವಿತಾ ಗೌಡ ತಂಗಿಯ ಮದುವೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಕವಿತಾ ಬಹಳ ಒಳ್ಳೆಯ ಕಲಾವಿದೆ ಆದರೆ ಕವಿತಾ ಅವ್ರಿಗೆ ತಂದೆ ಇಲ್ಲ ಈಗಾಗಿ ಮನೆಯ ಹಿರಿಯ ಮಗಳಾಗಿ ಮನೆಯ ಜವಾಬ್ದಾರಿ ಆಕೆಯ ಮೇಲಿತ್ತು ಹೀಗಾಗಿ ಪ್ರತಿ ಯೊಂದು ಸಮಯ ಹಾಗೂ ಪ್ರತಿ ಯೊಂದು ವಿಚಾರದಲ್ಲೂ ಕೂಡ ಬಹಳ ತಾಳ್ಮೆ ಯಿಂದ ಯೋಚಿಸಿ ನಿರ್ಧಾರ ತೆಗೆದು ಕೊಂಡು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ತನ್ನ ಮದುವೆ ಆಯ್ತು ತವರು ಮನೆ ಜವಾಬ್ದಾರಿ ನಂಗ್ಯಾಕೆ ಅಂತ ಯೋಚಿಸದೆ ತಂಗಿ ಮೋನಿಕಾಗೆ ತುಂಬಾ ಕೂಡ ಹುಡುಕಿ ಸಂಬಂಧ ತಂದು ಇದೀಗ ಮದುವೇ ಮಾಡಿದ್ದಾರೆ.. ಮದುವೆ ಮಾತ್ರವಲ್ಲ ನಿಶ್ಚಿತಾರ್ಥ ವನ್ನು ಕೂಡ ಬಹಳ ಅದ್ದೂರಿಯಾಗಿ ಸಂಪ್ರದಾಯ ಬದ್ದವಾಗಿ ಮಾಡಿದ್ರು. ಇದೀಗ ತಂಗಿಯ ಮದುವೆಯನ್ನ ಕೂಡ ಬಹಳ ಅದ್ದೂರಿಯಾಗಿ ಶಾಸ್ತ್ರ ಬದ್ದವಾಗಿಯೇ ಮಾಡಿದ್ದಾರೆ. ಇದೆಲ್ಲವನ ಕಣ್ತುಂಬಿಕೊಂಡಿರುವ ಕವಿತಾ ಅವ್ರ ತಾಯಿ ಹೆಮ್ಮೆ ಪಡುತ್ತಿದ್ದಾರೆ.

ಒಟ್ಟಿನಲ್ಲಿ ಜೀವನ ದಲ್ಲಿ ಅಂದುಕೊಂಡಂತೆ ಎಲ್ಲವನ್ನ ಸಾದಿಸೋದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಶ್ರಮ, ತಾಳ್ಮೆ, ಶಿಸ್ತು, ಸಮಯ ಬೇಕು ಅದೆಲ್ಲವನ್ನು ಉತ್ತಮವಾಗಿ ಬಳಿಸಿ ಕೊಂಡಾಗ ಮಾತ್ರ ಯಶಸ್ವಿ ಜೀವನ ಸಾಧ್ಯ ಅನ್ನೋದಕ್ಕೆ ಕಿರುತರೆ ಜೋಡಿ ಚಂದನ್ ಹಾಗೂ ಕವಿತಾ ಅವ್ರೆ ಪ್ರತ್ಯಕ್ಷ ಸಾಕ್ಷಿ.

ಇದನ್ನೂ ಓದಿ: ಒಂದು ಸತ್ಯ ವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ- ಮಗನಿಗೆ ಧನ್ಯವಾದಗಳು. ಇದೇ ಥರಾ ಇನ್ನೊಂದು ಸತ್ಯವನ್ನು ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು ಟ್ವೀಟ್