ದರ್ಶನ್ ಬಗ್ಗೆ ಮನ ಬಿಚ್ಚಿ ಸುದೀಪ್ ಮಾತಾನಾಡಿದ್ದೇನು ಗೊತ್ತಾ? ನೀವಿಬ್ಬರು ಒಂದಾಗಿ ಅಂತ ಹೇಳಿದೋರಿಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ಸುದೀಪ್(Kiccha sudeep) ಮತ್ತು ದರ್ಶನ್ (Darshan) ಯಾವ ಕಾರಣಕ್ಕೆ ದೂರವಾದರು ಎನ್ನುವುದು ಈಗಲೂ ಯಕ್ಷ ಪ್ರಶ್ನೆ. ಆದರೂ, ದರ್ಶನ್ ಬಗ್ಗೆ ಸುದೀಪ್ ಅವರಿಗೆ ಈಗಲೂ ಅದೇ ಸ್ನೇಹವಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋವಿದೆ. ಇದರ ಜೊತೆಗೆ ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ ಯಾವಾಗ ಈಡೇರುತ್ತೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಇವ್ರ ಸ್ನೇಹದ ವಿಚಾರವಾಗಿ ಹಲವು ವರ್ಷಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ ದೂರವಾಗಿರುವ ವಿಚಾರ ಗುಟ್ಟಿನದ್ದೇನಲ್ಲ. ಆದರೂ, ಇಬ್ಬರು ಮತ್ತೆ ಒಂದಾಗುತ್ತಾರೆ, ಮತ್ತೆ ಮೊದಲಿನಂತೆ ಸ್ನೇಹಿತರಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾಯುವಿಕೆ ಇಬ್ಬರ ಅಭಿಮಾನಿಗಳಲ್ಲೂ ಇದೆ. ಮೊನ್ನೆ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತು. ಆದರೂ, ಇಬ್ಬರೂ ಮಾತಾಡಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇತ್ತು. ಸದ್ಯ ಈ ಕುರಿತು ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

WhatsApp Group Join Now
Telegram Group Join Now

ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸುಮಲತಾ ಅವರು 60ನೇ ವರ್ಷದ ಹುಟ್ಟುಹಬ್ಬವನ್ನು ತುಂಬಾ ಸಂಭ್ರಮದ ಆಚರಣೆಯಿಂದ ಆಚರಿಸಿಕೊಂಡ್ರು. ಈ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಸುದೀಪ್ ಅವರು ಆರು ವರ್ಷಗಳಿಂದ ಉಂಟಾಗಿದ್ದ ದ್ವೇಷವನ್ನ ಬಿಟ್ಟು ಒಂದೇ ವೇದಿಕೆಯಲ್ಲಿ ಇಬ್ಬರು ಜೊತೆಗೆ ಇರುವುದನ್ನು ನಾವು ಗಮನಿಸಿದ್ದೇವೆ. ಹಾಗೆಯೇ ಸುಮಲತಾ ಅವರ ಹುಟ್ಟು ಹಬ್ಬದಲ್ಲಿ ಇವರಿಬ್ಬರು ಒಟ್ಟಿಗೆ ಭಾಗವಹಿಸಿದ್ದು ಬಹಳ ವಿಶೇಷವಾಗಿತ್ತು. ಇನ್ನು ಸುಮಲತಾ ಅವರು ದರ್ಶನ್ ಮತ್ತು ಸುದೀಪ್ ಇಬ್ಬರಿಗೂ ಕೂಡ ಕೇಕ್ ಅನ್ನು ತಿನಿಸಿದ್ದರು. ಅಲ್ದೇ ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಸಿನಿಮಾ ವನ್ನ ಮಾಡುತ್ತಾರೆ ಅಂತ ಸುಮಲತಾ ಅವರು ಹೇಳಿದ್ದರು.

ಇನ್ನು ಅದಕ್ಕಿಂತ ಹೆಚ್ಚಾಗಿ ದರ್ಶನ್ ಮತ್ತು ಸುದೀಪ್ ಅವರು ತುಂಬಾ ಕುಚಿಕು ಜೀವಿಯಂತೆ ಇದ್ದವರು. ವಿಷ್ಣುವರ್ಧನ್ ಮತ್ತು ಅಂಬರೀಶ್ ದಿಗ್ಗಜರಂತೆಗೆ ಇವರಿಬ್ಬರೂ ಕೂಡ ತುಂಬಾ ಕುಚಿಕು ಜೀವಿಗಳು ಎಂದು ಹೇಳುತ್ತಾ ಇದ್ದರು. ಆದ್ರೆ ಇದಕ್ಕಿದ್ದಂತೆ ಇವ್ರ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಇಬ್ಬರು ಒಬ್ಬರೊಂನ್ನೊಬ್ಬರು ನೋಡದಷ್ಟು ದೂರವಾಗಿ ಹೋದ್ರು. ಸದ್ಯ ಇವರಿಬ್ಬರು ಒಂದಾಗೋ ಕಾಲ ಬಂದಿದ್ದು ಹಂತ ಹಂತವಾಗಿ ಎಲ್ಲವು ಸರಿ ಹೋಗುವಂತೆ ಕಾಣುತ್ತಿದೆ. ಯಾಕಂದ್ರೆ ತಮ್ಮ ಹುಟ್ಟಿದ ಹಬ್ಬದ ದಿನವೇ ಸುದೀಪ್, ದರ್ಶನ್ ಮತ್ತು ಅವ್ರ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ: ಡಿಕೆಡಿ ಶೋಗೆ ವಾಪಸ್ ಎಂಟ್ರಿ ಕೊಟ್ಟ ರಾಘು! ಶೋಗೆ ಬಂದ ರಾಘು ನ ನೋಡಿ ಶಿವಣ್ಣ ಹೇಳಿದ್ದೇನು?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹುಟ್ಟುಹಬ್ಬದ ದಿನ ದಚ್ಚು ಬಗ್ಗೆ ಕಿಚ್ಚ ಹೇಳಿದ್ದೇನು?

ಹೌದು ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಮಧ್ಯಮದವರ ಜೊತೆಗೆ ಮಾತನಾಡಿರುವ ಕಿಚ್ಚ, ತಮ್ಮ ಸ್ನೇಹ ಹಾಗೂ ಸ್ನೇಹಿತನ ಬಗ್ಗೆ ಮನಬಿಚ್ಚಿ ಎಲ್ಕವನ್ನ ಮಾತನಾಡಿದ್ದಾರೆ. ಹೌದು ದರ್ಶನ್ ಕುರಿತಾಗಿ ಮಾತನಾಡಿದ ಕಿಚ್ಚ, ‘ನಾನು ಸುಮಲತಾ ಅವರ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದೆ. ಮುಂಚೆನೇ ದರ್ಶನ್ ಇರ್ತಾರೆ ಅಂತ ನಂಗೂ ಗೊತ್ತಿತ್ತು. ಆದ್ರೂ ನಾನು ಹೋದೆ ಕಾರಣ ಸುಮಲತಾ ಅವ್ರನ್ನ ಚಿಕ್ಕವನಿದ್ದಾಗಿದ್ದ ನೋಡಿದೀನಿ, ಅವ್ರು ವಿಭಿನ್ನ ನನಗೆ ತುಂಬಾ ಆಪ್ತರು ಬೇಕಾದವರು ಅದಿಕ್ಕೇ ಹೋಗಿದ್ದೆ.

ಇನ್ನು ನಾನು ದರ್ಶನ್ ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನೋದು ಕಲ್ಪನೆ. ಇನ್ನು ಮಧ್ಯೆ ಇರೋ ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು ಅಂತ ಮರ್ಮಿಕವಾಗಿ ಕಿಚ್ಚ(Kiccha sudeep) ಮಾತನಾಡಲು ಶುರು ಮಾಡಿದ್ರು. ಇನ್ನು ನನ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ. ಅಲ್ದೇ ಪ್ರಶ್ನೆಗಳು ಬರ್ತಾವೆ, ಅದ್ರಲ್ಲಿ ಒಳ್ಳೇದು, ಕೆಟ್ಟದು ಇರ್ತಾವೆ. ಇನ್ನು ಶೇಕ್ ಹ್ಯಾಂಡ್ ಮಾಡಬಹುದಿತ್ತು ಅಂತ ಕೇಳ್ತೀರಲ್ಲ ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ. ಇಬ್ರು ಮೆಚ್ಯೂರ್ಡ್ ಇದೀವಿ. ಎಲ್ಲವೂ ಸರಿ ಹೋಗ್ಬೇಕು, ಅಂದಾಗ ಸರಿ ಹೋಗುತ್ತೆ, ಆದ್ರೆ ಅದಕ್ಕೆ ಅದರದ್ದೇ ಸಮಯ ಬೇಕಾಗುತ್ತೆ ಅಂದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಬಂದಿಲ್ವ; ಮರೆಯದೆ ಮೊದಲು ಈ ಕೆಲಸ ಮಾಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram